ಭಾನುವಾರ, ಆಗಸ್ಟ್ 12, 2007

ಭತ್ತ ಮಾತ್ರ ತೆಗೆದಿರುವ ಕೆಂಪು ಅಕ್ಕಿ

ಭತ್ತ ಮಾತ್ರ ತೆಗೆದಿರುವ ಕೆಂಪು ಅಕ್ಕಿ

ಭತ್ತ ಮಾತ್ರ ತೆಗೆದಿರುವ ಕೆಂಪು ಅಕ್ಕಿಯನ್ನೇ ಯಾವಾಗಲೂ ಊಟಕ್ಕೆ ಉಪಯೋಗಿಸಿ ಆನಂದವನ್ನು ಪಡೆಯಿರಿ. ಈ ಅಕ್ಕಿಗೆ ಆಡು ಭಾಷೆಯಲ್ಲಿ ಕೆಂಪು ಮುಂಡಗ ಅಕ್ಕಿ ಅಥವಾ ಕಜ್ಜಾಯ ಅಕ್ಕಿ ಎಂದೂ ಕರೆಯುತ್ತಾರೆ. ಈ ಅಕ್ಕಿಯಲ್ಲಿ ಬೇಕಾದಷ್ಟು ಪೌಷ್ಟಿಕಾಂಶಗಳು ಇವೆ. ಹೊರಗಡೆ ಯಾವುದೇ ಅಂಗಡಿಯಲ್ಲಿ ಇದು ದೊರಕುವಂತಾದ್ದಲ್ಲ. ಕೋಟಿ ರೂಪಾಯಿಗಳನ್ನು ಕೊಟ್ಟರೂ ಸಿಗುವುದಿಲ್ಲ. ಊಟ ಮಾಡುತ್ತಿರುವಾಗಲೇ ಈ ಪೌಷ್ಟಿಕಾಂಶಗಳು ದೇಹದಲ್ಲಿರುವ ಎಲ್ಲ ಕಸಕಡ್ಡಿಗಳನ್ನೂ, ಅತಿಯಾದ ವಾತ ಪಿತ್ತ ಕಫಗಳನ್ನೂ, ಯಾವುದೇ ರೀತಿಯ ಬೆನ್ನುನೋವು, ತಲೆನೋವು, ಸೊಂಟನೋವು, ಕಾಲುನೋವು, ತಲೆಭಾರ, ನಿದ್ರೆ ಸರಿಯಾಗಿ ಬಾರದಿರುವುದು, ಕೊಲೆಸ್ಟರಾಲನ್ನು ಪೂರ್ತಿಯಾಗಿ ಕರಗಿಸುವುದು. ಮುಂದೆ ಎಂದೆಂದಿಗೂ ಕೊಲೆಸ್ಟರಾಲ್ ದೇಹದಲ್ಲಿ ಸೇರಲು ಅವಕಾಶ ಕೊಡುವುದಿಲ್ಲ, ಬ್ಲಡ್ ಶುಗರನ್ನು ೧೦೦ ಕ್ಕೆ ೧೦೦ ರಷ್ಟು ಕಡಿಮೆಮಾಡುವುದು. ಇದನ್ನೆಲ್ಲ ವಿಜ್ನಾನಿಗಳು ದೃಡಪಡಿಸಿದ್ದಾರೆ. ಮನೆಯಲ್ಲಿ ಪಿ.ಸಿ. ಇದ್ದು ಇಂಟರ್ನೆಟ್ ಹಾಕಿಸಿಕೊಂಡಿರುವವರು ಗೂಗಲ್ ನಲ್ಲಿ ಜಾಲಾಡಿನೋಡಿ. ಈ ಕಜ್ಜಾಯ ಅಕ್ಕಿಗೆ ೧೦೦ ಕ್ಕೆ ೧೦೦ ರಷ್ಟು ಕ್ಯಾನ್ಸರ್ ವಾಸಿಮಾಡುವ ಶಕ್ತಿ ಇದೆ.

ಇದಲ್ಲದೆ ಆಸಿಡಿಟಿ, ಗ್ಯಾಸ್ಟ್ರೈಟಿಸ್, ಬೊಜ್ಜು ಈ ಎಲ್ಲವೂ ೧೦೦% ವಾಸಿಯಾಗುತ್ತದೆ. ಇದಲ್ಲದೇ ಮುಖವೂ ಕಾಂತಿಯುಕ್ತವಾಗುತ್ತದೆ. ಕಣ್ಣುಗಳು ಮಿನುಗುತ್ತವೆ. ಚಟುವಟಿಕೆ ಜಾಸ್ತಿಯಾಗುತ್ತದೆ. ಊಟ ಮಾಡಿದ ತಕ್ಷಣ ಹೊಟ್ಟೆ ಭಾರವಾಗುವುದಿಲ್ಲ. ಬ್ಲೋಟಿಂಗ್ ಅನುಭವ ಇರುವುದಿಲ್ಲ. ಹೊಟ್ಟೆಯಲ್ಲಿ ಸಂಕಟವಾಗುವುದೂ ನಿಂತುಹೋಗುತ್ತದೆ. ಹೊಟ್ಟೆ ಯಾವಾಗಲೂ ತಂಪಾಗಿರುತ್ತದೆ. ಮಲಬದ್ದತೆ ನಿರ್ನಾಮವಾಗಿ ದೊಡ್ಡಕರುಳಿನಲ್ಲಿ ಕಟ್ಟಿಕೊಂಡಿರುವ ಅತ್ಯಂತ ಕಟ್ಟಕಡೆ ಪಾಚಿಯೂ ಸಹ ಕೊಚ್ಚಿಕೊಂಡು ಹೋಗುತ್ತದೆ. ಮಲವಿಸರ್ಜನೆಯ ಬಳಿಕ ದೇಹ ಮತ್ತು ಮನಸ್ಸು ಆನಂದಮಯವಾಗುತ್ತದೆ. ಪ್ರತಿದಿನ ಮಲವಿಸರ್ಜನೆಯ ನಂತರ ದೇಹ ಮತ್ತು ಮನಸ್ಸು ಹಗುರವಾಗಿ ಚಟುವಟಿಕೆಯಿಂದ ಕೂಡಿರುತ್ತದೆ. ಕೆಂಪು ಅಕ್ಕಿಯಲ್ಲಿರುವ ಅತ್ಯಂತ ಶಕ್ತಿ ಬೇರೆ ಯಾವುದೇ ಇಲ್ಲ ಎಂದು ಕಾಣಿಸುತ್ತದೆ. ಎಲ್ಲ ಧಾನ್ಯಗಳಿಗೂ ತನ್ನದೇ ಆದ ಶಕ್ತಿ ಇರುತ್ತದೆ. ಎಲ್ಲಾ ಕಾಲಕ್ಕೂ ಹೊಟ್ಟಿನಿಂದ ಕೂಡಿದ ಕೆಂಪು ಅಕ್ಕಿಯೇ ಸರ್ವಶ್ರೇಷ್ಟ ವಾದುದು.

ಬರೆದವರು : ಹೆಚ್.ಕೆ.ಸತ್ಯಪ್ರಕಾಶ್
೯೮೮೬೩ ೩೪೬೬೭

ಕೆಂಪು ಅಕ್ಕಿ(ಕಜ್ಜಾಯ ಅಕ್ಕಿ)

ಕೆಂಪು ಅಕ್ಕಿ(ಕಜ್ಜಾಯ ಅಕ್ಕಿ)

ಯಾವುದೇ ಔಷಧಿಗಳಿಂದ ವಾಸಿಯಾಗದ ಖಾಯಿಲೆಗಳು, ಹೊಟ್ಟಿನಿಂದ ಕೂಡಿದ ಕೆಂಪು ಅಕ್ಕಿಯಿಂದ ವಾಸಿಯಾಗುತ್ತದೆ, (ಅಂದರೆ ಭತ್ತ ಮಾತ್ರ ತೆಗೆದ ಕೆಂಪು ಅಕ್ಕಿ) ಅಲ್ಲದೆ ಅಧಿಕ ಪೌಷ್ಟಿಕಾಂಶಗಳೂ ದೊರೆತು ದೇಹ ಶಕ್ತಿಯುತವಾಗುತ್ತದೆ. ಕೆಂಪು ಅಕ್ಕಿಯ ವಿಶೇಷ ಏನೆಂದರೆ ನೀವು ಎಷ್ಟು ತಿನ್ನುತ್ತಿದ್ದರೂ ಹೊಟ್ಟೆ ತುಂಬುವುದೇ ಇಲ್ಲ. ತಿನ್ನಲು ತುಂಬಾ ತುಂಬಾ ರುಚಿಯಾಗಿರುತ್ತದೆ. ನಾವು ಊಟ ಮಾಡಿಯೇ ಇಲ್ಲವೇನೋ ಅನ್ನಿಸುತ್ತಿರುತ್ತದೆ. ಎಷ್ಟು ತಿಂದರೂ ಒಳಗಡೆ ಹೋಗುತ್ತಲೇ ಇರುತ್ತದೆ. ಹೊಟ್ಟೆ ಭಾರವೇ ಆಗುವುದಿಲ್ಲ. ಒಂದು ಸಲ ಊಟ ಮಾಡಿದರೆ ಸುಮಾರು ೬ ರಿಂದ ೮ ಗಂಟೆಗಳ ಕಾಲ ಆರಾಮವಾಗಿ ಇರಬಹುದು. ಏನೇನೂ ಸಂಕಟ ಆಗುವುದಿಲ್ಲ. ಹೊಟ್ಟೆ ತಂಪಾಗಿರುತ್ತದೆ. ಸುಸ್ತು ಕೂಡ ಆಗುವುದಿಲ್ಲ. ಇಡೀ ದಿನ ದೇಹ ಮತ್ತು ಮನಸ್ಸು ಆನಂದಮಯವಾಗಿರುವುದು. ಇದೇ ತಾನೆ ಎಲ್ಲ ಮನುಷ್ಯರಿಗೂ ಬೇಕಾಗಿರುವುದು. ದೇಹದಲ್ಲಿರುವ ಕೊಲೆಸ್ಟರಾಲ್ ಇರಲಿ, ಯಾವುದೇ ರೀತಿಯ ಕೊಬ್ಬು ಇರಲಿ, ಬೊಜ್ಜು, ವಾತ, ಪಿತ್ತ ಹಾಗೂ ಕಫದಿಂದ ಉಂಟಾದ ರೋಗಗಳನ್ನೂ, ಮೈ, ಕೈ ನೋವುಗಳು, ಬೆನ್ನು ನೋವು, ಸೊಂಟನೋವು, ತಲೆನೋವು, ತಲೆಭಾರ, ಮಾರ್ನಿಂಗ್ ಸಿಕ್ ನೆಸ್, ಹೊಟ್ಟೆ ಉರಿ ಇತ್ಯಾದಿ ಮತ್ತು ದೇಹದಲ್ಲಿರುವ ಎಲ್ಲಾ ರೀತಿಯ ವಿಷ ಪದಾರ್ಥಗಳನ್ನು ಹೊಡೆದೋಡಿಸುವ ಶಕ್ತಿ ಸಮೃದ್ದಿಯಾದ ಹೊಟ್ಟಿನಿಂದ ಕೂಡಿದ ಕೆಂಪು ಅಕ್ಕಿಗೆ ಮಾತ್ರ ಇದೆ. ಕೆಂಪು ಅಕ್ಕಿಯ ಅನ್ನವನ್ನು ತಿನ್ನುವುದರಿಂದ ಕ್ಯಾನ್ಸರ್ ಸಹಾ ವಾಸಿಯಾಗುವುದೆಂದು
ವಿಜ್ನಾನಿಗಳು ಇತ್ತೀಚೆಗೆ ಕಂಡುಹಿಡಿದಿದ್ದಾರೆ. ಚರ್ಮ ರೋಗಗಳೂ ಸಹ ವಾಸಿಯಾಗುವುದು. ನೀವೆಲ್ಲಾ ಕಬ್ಬಿನ ರಸವನ್ನು ಹೇಗೆ ತೆಗೆಯುತ್ತಾರೆಂಬುದನ್ನು ನೋಡಿದ್ದೀರಿ. ಅದೇ ರೀತಿ ಹೊಟ್ಟಿನಿಂದ ಕೂಡಿದ ಕೆಂಪು ಅಕ್ಕಿಯು ನಿಮ್ಮ ದೇಹದಲ್ಲಿರುವ ಎಲ್ಲ ತರಹದ ವಿಷ,ಕಫ,ಕೊಬ್ಬು,ಕೊಲೆಸ್ಟರಾಲ್ ಮತ್ತು ದೊಡ್ಡಕರುಳಿನಲ್ಲಿ ಕಟ್ಟಿಕೊಂಡಿರುವ ಎಲ್ಲ ಮಲಗಳು ಒಂದೇ ಹೊತ್ತಿನ ಊಟದಲ್ಲಿ ಹೋಗಿಬಿಡುತ್ತದೆ. ಅಥವ ಒಂದು ವಾರದ ಊಟದಲ್ಲಿ ಹೋಗಿಬಿಡುತ್ತದೆ. ಸ್ವರ್ಗ ಸಿಕ್ಕಿದಷ್ಟು ಸಂತೋಷವುಂಟುಮಾಡುತ್ತದೆ. ಇಂದೇ ಕೆಂಪು ಅಕ್ಕಿಯ ಅನ್ನವನ್ನು ಸೇವಿಸಲು ಆರಂಭಿಸಿರಿ ಮತ್ತು ರೋಗಗಳಿಂದ ಮುಕ್ತರಾಗಿರಿ. ಎಂದೆಂದಿಗೂ ಆನಂದಮಯವಾದ ಜೀವನವನ್ನು ನಡೆಸಿರಿ. ನಿರೋಗಿಗಳಾಗಿ ಬಾಳಿರಿ. ಬೇಕಾದ ಸಾಧನೆಗಳನ್ನು ಸಂತೋಷದಿಂದ ಮಾಡಿರಿ.
ಹೆಚ್.ಕೆ.ಸತ್ಯಪ್ರಕಾಶ್.
೯೮೮೬೩ ೩೪೬೬೭
೦೮೦-೨೬೭೫೫೨೯೯

ಅಪಾಯಕಾರಿ ಪಾಲೀಷ್ ಮಾಡಿದ ಅಕ್ಕಿ

ಅಪಾಯಕಾರಿ ಪಾಲೀಷ್ ಮಾಡಿದ ಅಕ್ಕಿ

ಪಾಲೀಷ್ ಮಾಡಿದ ಅಕ್ಕಿಯನ್ನು ಊಟಮಾಡಬೇಡಿ. ಅದರಲ್ಲಿ ಪ್ರತಿದಿನವೂ ನರಳುವ ರೋಗಗಳು ಬರುತ್ತವೆ. ರೋಗಗಳು ಒಂದಕ್ಕೊಂದು ಬರುತ್ತಲೇ ಇರುತ್ತವೆ. ಯಾವುದೇ ರೋಗಗಳು ವಾಸಿಯಾಗದೇ ಬರೀ ಔಷಧಿಗಳನ್ನು ತೆಗೆದುಕೊಳ್ಳುವುದೇ ಒಂದು ಕೆಲಸವಾಗಿ, ಮುಂಚೆಗೆ ಒಂದು ಮಾತ್ರೆ ಇದ್ದದ್ದು ಕೆಲವು ತಿಂಗಳುಗಳ ಅಥವಾ ಕೆಲವು ವರ್ಷಗಳ ನಂತರ ಬೊಗಸೆಯಷ್ಟು ಮಾತ್ರೆಗಳನ್ನು ನುಂಗಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಆದರೂ ರೋಗಗಳು ತಹಬಂದಿಗೆ ಬರುವುದಿಲ್ಲ. ಕಂಡ ಕಂಡ ಡಾಕ್ಟರ್ ಗಳ ಹತ್ತಿರ ಅಲೆದಾಟ ಶುರುವಾಗುತ್ತದೆ. ಇದಕ್ಕೆಲ್ಲಾ ಕೊನೆ ಹಾಡಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.
ಇದಕ್ಕೆಲ್ಲ ಒಳ್ಳೆಯ ಉಪಾಯವೆಂದರೆ ಹೈ ಫೈಬರ್(ಹೊಟ್ಟುಯುಕ್ತ) ಆಹಾರವನ್ನು ಊಟಮಾಡುವುದೇ ಪರಿಹಾರ. ಇದರಲ್ಲಿ ೧೦೦ ಕ್ಕೆ ೧೦೦ ರಷ್ಟು ಪರಿಹಾರ ಸಿಗುತ್ತದೆ. ಔಷಧಿಗಳಿಗೆ ೫೦ಪೈಸೆ ಗಳನ್ನು ಸಹ ಖರ್ಚು ಮಾಡುವ ಪ್ರಸಂಗವು ಎದುರಾಗುವುದಿಲ್ಲ. ಕೆಂಪು ಅಕ್ಕಿ (ಅತಿ ಹೆಚ್ಚು ಫೈಬರ್ ಯುಕ್ತ) ಮತ್ತು ರಾಗಿ ಹೇರಳವಾಗಿ ಉಪಯೋಗಿಸಿ. ರಾಗಿ ಆಗದಿದ್ದವರು ಕೆಂಪು ಅಕ್ಕಿಯನ್ನು ಉಪಯೋಗಿಸಿ ಶೇ.೧೦೦ ರಷ್ಟು ಪ್ರಯೋಜನ ಪಡೆಯಿರಿ. ರೈತರನ್ನು ಕೆಂಪು ಅಕ್ಕಿಯನ್ನು ಬೆಳೆಯಲು ಪ್ರೋತ್ಸಾಹಿಸಿ. ರೈತರಿಗೆ ತಿಳುವಳಿಕೆ ಕೊಡಿ. ಅತ್ಯಾಶ್ಚರ್ಯಕರ ವ್ಯತ್ಯಾಸವನ್ನು ಗಮನಿಸಿರಿ. ನೀವು ಯಾವಾಗಲೂ ಏನೇ ತಿಂದರೂ ಅದು ಹೈ ಫೈಬರ್ ಯುಕ್ತವಾಗಿರಲಿ. ಭತ್ತ ಮಾತ್ರ ತೆಗೆದ ಕೆಂಪು ಅಕ್ಕಿಯಲ್ಲಿ ಹೇರಳವಾಗಿ ಫೈಬರ್ ಇರುತ್ತದೆ.
ಇದು ದೇಹಕ್ಕೆ ತುಂಬಾ ತಂಪನ್ನು ಒದಗಿಸುತ್ತದೆ ಮತ್ತು ಯಾವುದೇ ರೋಗಗಳು ಹತ್ತಿರ ಸುಳಿಯುವುದಿಲ್ಲ. ಇಡೀ ದಿನ ಆನಂದಮಯವಾಗಿರುತ್ತದೆ ಮತ್ತು ಚಟುವಟಿಕೆಯಿಂದ ಕೂಡಿರುತ್ತದೆ. ನೀವು ಕಷ್ಟಪಟ್ಟು ದುಡಿದ ಹಣವನ್ನು ಡಾಕ್ಟರ್ ಗಳಿಗೆ ಸುರಿಯಬೇಡಿ. ತಿಂದುನೋಡಿ ಆನಂದಿಸಿ "ಕೆಂಪು ಅಕ್ಕಿಯ ಚಮತ್ಕಾರವನ್ನು". ಮಾರ್ಕೆಟ್ನಲ್ಲಿ ಪಾಲೀಷ್ ಮಾಡಿದ ಅಕ್ಕಿಗೆ ಬಣ್ಣವನ್ನು ಹಾಕುತ್ತಿದ್ದಾರೆ. "ಎಚ್ಚರಿಕೆ". ಅಲ್ಲಿಯೇ ಉಜ್ಜಿನೋಡಿದರೆ ಕೈಗೆ ಬಣ್ಣ ಮೆತ್ತಿಕ್ಕೊಳ್ಳುವುದು. ನಿಜವಾದ ಕೆಂಪು ಅಕ್ಕಿ ಅನ್ನ ಮಾಡುವ ಮೊದಲು ತೊಳೆದರೆ ಮೇಲಿನ ಕೆಂಪು ಬಣ್ಣವು ಹೋಗಬಾರದು. ಅದೇ ನಿಜವಾದ ಕೆಂಪು ಅಕ್ಕಿ.

ಶನಿವಾರ, ಆಗಸ್ಟ್ 11, 2007

ನಿಮ್ಮ ಹೃದಯ ನಿಮಗೆ ಗೊತ್ತೇ ?

ನಿಮ್ಮ ಹೃದಯ ನಿಮಗೆ ಗೊತ್ತೇ ?

ನಿಮ್ಮ ಹೃದಯ ನಿಮಗೆ ಗೊತ್ತೇ ?

ಹೃದಯ ರೋಗ ಬಂದರಂತೂ ಅಂತಿಮ ಹಂತದಲ್ಲಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ಎಂದು ತಜ್ನ ಡಾಕ್ಟರರುಗಳು ತೀರ್ಮಾನಿಸಿಬಿಡುತ್ತಾರೆ. ವಿವಿಧ ಬಗೆಯ ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆಯೇ ಅಂತಿಮ ಎನ್ನುವ ಅಭಿಪ್ರಾಯವನ್ನು ರೋಗಿಗಳ ತಲೆಗೆ ತುರುಕುತ್ತಾರೆ.
"ನೀವು ಅಸ್ಪತ್ರೆಗೆ ಬಂದಿದ್ದೇ ಅದೃಷ್ಟ, ಕಂಡಿಷನ್ ಕ್ರಿಟಿಕಲ್ ಆಗಿದೆ. ಆಪರೇಷನ್ ಮಾಡಲೇಬೇಕು" ಎಂದು ರೋಗಿ, ಮತ್ತವರ ಸಂಬಂಧಿಕರನ್ನು ಹೆದರಿಸಲಾಗುತ್ತದೆ.
ಕೊಬ್ಬು ಒಂದೇ ದಿನ ಕಟ್ಟಿಕೊಳ್ಳುವುದಿಲ್ಲ. ಹಲವು ವರ್ಷದಲ್ಲಿ ಈ ಕ್ರಿಯೆ ನಡೆಯುತ್ತದೆ. ರಕ್ತದಲ್ಲಿ ಹೆಚ್ಚುವ ಕೊಬ್ಬಿನ ಅಂಶದಿಂದ ಬರುವ ಹೃದಯ ರೋಗವನ್ನು ಶಸ್ತ್ರಚಿಕಿತ್ಸೆಯ ಹೊರತಾಗಿಯೂ ನಿಯತ್ರಿಸಬಹುದು ಎನ್ನುತ್ತಾರೆ ದೆಹಲಿಯ ಖ್ಯಾತ ಹೃದಯ ರೋಗ ತಜ್ನ ಡಾ. ಬಿಮಲ್ ಚಜರ್.
ಒಟ್ಟಾರೆ ಅಂಕಿ ಅಂಶಗಳ ಪ್ರಕಾರ ಹೃದಯ ರೋಗದಲ್ಲಿ ಐ. ಟಿ. ಯಂತೆ ಭಾರತವೇ ಮುಂಚೂಣಿ. ಡಾ. ಬಿಮಲ್ ಅಭಿಪ್ರಾಯ ಪಾಶ್ಚಾತ್ಯ ವೈದ್ಯ ಪದ್ಧತಿಗೆ ಅಂಟಿಕೊಂಡವರಿಗೆ ವಿಚಿತ್ರ ಎನಿಸಬಹುದು. ಆದರೆ ಇವರ ಅನುಭವದ ಮೂಸೆಯಿಂದ ಬರುವ ಮಾತು ಹಾಗೂ ಇವರ
’ಟ್ರಾಕ್ ರೆಕಾರ್ಡ್’ ಗಮನಿಸಿದರೆ ದಾ. ಬಿಮಲ್ ಮಾತನ್ನು ಪಾಲಿಸುವುದೇ ಉತ್ತಮ ಎನಿಸುತ್ತದೆ.
ಮಾತ್ರೆಗಳನ್ನು ಕೊಡುವ ಬದಲು ರೋಗಿಗೆ ಕೊಬ್ಬು ಶೇಖರಣೆ ಕಡಿಮೆಯಾಗಲು ಜೀವನ ವಿಧಾನ ಬದಲಿಸಿ ಎಂದು ಹೇಳಿದರೆ ಅನುಕೂಲವಾಗುತ್ತದೆ. ಇದನ್ನು ಬಹುತೇಕ ಅಲೋಪಥಿ ವೈದ್ಯರು ಸೂಚಿಸುವುಧಿಲ್ಲ. ಆದ್ದರಿಂದ ಆಧುನಿಕ ಅಲೋಪಥಿ ವೈದ್ಯ ಪದ್ಧತಿಯಿಂದ ಈ ರೋಗವನ್ನು ಗುಣಪಡಿಸಲು ಸಾಧ್ಯವಾಗಲ್ಲ ಎಂದುಕೊಂಡರು. ಇದಕ್ಕೆ ಉತ್ತರ ಹುಡುಕುತ್ತಿದ್ದಾಗ ಅವರಿಗೆ ’ದಿ ಲಾನ್ಸೆಟ್’ ಎನ್ನುವ ವೈದ್ಯಕೀಯ ಪತ್ರಿಕೆಯಲ್ಲಿ ಅಮೇರಿಕದ ಟೆಕ್ಸಾಸ್ ಹೃದಯ ಕೇಂದ್ರದ ಡಾ. ಡೀನ್ ಆರ್ನಿಷ್ ಅವರ ಲೇಖನ ಗಮನ ಸೆಳೆಯಿತು. ಅವರು ಹೃದಯಕ್ಕೆ ರಕ್ತವನ್ನು ಸರಬರಾಜು ಮಾಡುವ ಕರೋನರಿ ಆರ್ಟರಿಗಳಲ್ಲಿ ಕಟ್ಟಿದ ಕೊಬ್ಬಿನ ಅಂಶವನ್ನು ಕಡಿಮೆ ಮಾಡುವ ಬಗ್ಗೆ ತಿಳಿಸಿದ್ದರು. ಸಾಮಾನ್ಯವಾಗಿ ಅನಾವಶ್ಯವಾಗಿ ಎಣ್ಣೆ,ಬೆಣ್ಣೆ ತಿನ್ನುವ ವ್ಯಕ್ತಿಗೆ ವರ್ಷಕ್ಕೆ ಶೇ. ೨ರ ಪ್ರಮಾಣದಲ್ಲಿ ಕೊಬ್ಬು ರಕ್ತನಾಳದಲ್ಲಿ ಶೇಖರಣೆಯಾಗುತ್ತಿದೆ. ಒಬ್ಬ ವ್ಯಕ್ತಿ ಓಡಲು ಶೇ. ೩೦, ನಡೆದಾಡಲು ಶೇ. ೨೦, ಹಾಗೂ ಆರಾಮವಾಗಿ ಇರಲು ಶೇ. ೧೦ ರಷ್ಟು ರಕ್ತನಾಳ ರಕ್ತ ಚಲನೆಗೆ ತೆರೆದಿದ್ದರೆ ಸಾಕು ಎನ್ನುವುದು ಡಾ. ಬಿಮಲ್ ಅಭಿಪ್ರಾಯ. ರಕ್ತನಾಳದಲ್ಲಿ ಶೇ.೭೦ ಕ್ಕಿಂತ ಹೆಚ್ಚು ಕೊಬ್ಬು ಶೇಖರಣೆಯಾದರೆ ಹೃದಯ ತೊಂದರೆ ಕಾಣಿಸಿಕೊಳ್ಳುತ್ತದೆ.
ರಕ್ತನಾಳದಲ್ಲಿ ಶೇ. ೮೦ ರಿಂದ ೧೦೦ ರಷ್ಟು ಕೊಬ್ಬು ಶೇಖರಣೆಯಾಗಲು ೧೦ ವರ್ಷಗಳಾದರೂ ಬೇಕಾಗುತ್ತದೆ. ಆದರೆ ಕೊಬ್ಬಿನ ಮೇಲ್ಪದರ ಒಡೆದರೆ ರಕ್ತ ಹೆಪ್ಪುಗಟ್ಟಿ ಹೃಧಯಾಘಾತ ಖಂಡಿತ.
ರಕ್ತಸಂಚಾರ ಸರಾಗವಾಗಲು ಬಲೂನ್ ಆಂಜಿಯೋಪ್ಲಾಸ್ಟಿ ಹೆಚ್ಚಾಗಿದೆ. ಐದು ನಿಮಿಷದ ಚಿಕಿತ್ಸೆಗೆ ೧. ೫ ಲಕ್ಷ ರೂಪಾಯಿ ಖರ್ಚು. ಇದೇನು ಹೃದಯ ತೊಂದರೆಗೆ ಶಾಶ್ವತ ಪರಿಹಾರವಲ್ಲ ಎನ್ನುವುದು ಡಾ. ಬಿಮಲ್ ಅವರ ಅಭಿಪ್ರಾಯ. ಹೃದಯ ತೊಂದರೆಗಳಿಂದ ದೂರವಾಗಲು ಡಾ. ಬಿಮಲ್ ಹದಿನೆಂಟು ಪುಸ್ತಕಗಳನ್ನು ಹೊರತಂದಿದ್ದಾರೆ.
ಇದರಲ್ಲಿ ’ರಿವರ್ಸಲ್ ಆಫ್ ಹಾರ್ಟ್ ಡಿಸೀಸ್’, ಫ಼ುಡ್ ಫಾರ್ ರಿವರ್ಸಲ್ ಆಫ್ ಹಾರ್ಟ್ ಡಿಸೀಸ್’, ಅಡುಗೆ ಪುಸ್ತಕಗಳಾದ ’ಜೀರೋ ಆಯಿಲ್ ಕುಕ್ ಬುಕ್, ಜೀರೋ ಆಯಿಲ್ ಸ್ನಾಕ್ಸ್, ಜೀರೋ ಆಯಿಲ್ ಸ್ವೀಟ್ಸ್, ೨೦೦೧ ಡಯಟ್ ಟಿಪ್ಸ್ ಫಾರ್ ಹಾರ್ಟ್ ಡಿಸೀಸ್.
ಆಹಾರದಲ್ಲಿ ಎಣ್ಣೆ, ತುಪ್ಪ ಬಳಸಲೇಬೇಕಿಲ್ಲ. ಆರೋಗ್ಯಕ್ಕೆ ಉತ್ತಮ ಎನ್ನುವ ಎಣ್ಣೆಯೇ ಇಲ್ಲ.
ಇದೆಲ್ಲಾ ಬರೀ ಮಾರಾಟ ತಂತ್ರ. ಇದರ ಬದಲು ನೀರಲ್ಲೇ ಬೇಯಿಸಬಹುದು. ಇದರಿಂದ ಆರೋಗ್ಯ ಸುಧಾರಿಸುತ್ತದೆ. ಎಂದು ಸಲಹೆ ನೀಡುವರು.

ಶನಿವಾರ, ಜುಲೈ 21, 2007

ನಿಮ್ಮ ದೇಹದ ಚರಂಡಿಯನ್ನು ಶುದ್ಧವಾಗಿಟ್ಟುಕೊಳ್ಳಿ





ಆಸಿಡಿಟಿ, ಭಯ, ಆತಂಕ, ನರಗಳ ಶಕ್ತಿಹೀನತೆ, ಕೈ ಕಾಲುಗಳು ನಡುಗುವುದು, ವಿಪರೀತ ಕೋಪ ಬರುವುದು ಇತ್ಯಾದಿ ಬರುವುದು ಪಿತ್ತದ ಪ್ರಭಾವದಿಂದ. ಆಹಾರದಲ್ಲಿ ಕಟ್ಟುನಿಟ್ಟನ್ನು ಪಾಲಿಸಿದರೆ ಇದೆಲ್ಲದರ ತೊಂದರೆಯಿಂದ ಶಾಶ್ವತವಾಗಿ ಪರಿಹರಿಸಿಕೊಳ್ಳಬಹುದು. ಎಂದೆಂದಿಗೂ ಆನಂದದಿಂದ ಇರಬಹುದು. ನಿಮ್ಮ ದೇಹದ ಚರಂಡಿಯನ್ನು ಶುದ್ಧವಾಗಿಟ್ಟುಕೊಳ್ಳಿ.

ಶನಿವಾರ, ಜುಲೈ 14, 2007

ಮೈದಾ ಹಿಟ್ಟು - ಅತಿ ಅಪಾಯಕಾರಿ ಹಿಟ್ಟು(maida flour)

ನೀವು ಆಸಿಡಿಟಿಯನ್ನು ವಾಸಿಮಾಡಿಕೊಳ್ಳುವುದು ಹೇಗೆ ಎಂಬುದನ್ನು ಈಗ ಹೇಳುತ್ತಿದ್ದೇನೆ.
ಆಸಿಡಿಟಿ ಬರಲು ಕಾರಣ ಏನೆಂದರೆ ಯಾವಾಗಲೂ ಎಣ್ಣೆಯಲ್ಲಿ ಕರಿದ ಪದಾರ್ಥಗಳ ಸೇವನೆ, ಅತಿಯಾದ ಸಿಹಿತಿಂಡಿಗಳ ಸೇವನೆ, ಅತಿಯಾದ ಕಾಫೀ ಮತ್ತು ಟೀ ಕುಡಿಯುವಿಕೆ, ಅತಿಯಾದ ಧೂಮಪಾನ ಮಾಡುವಿಕೆ, ಮೈದಾ ಹಿಟ್ಟಿನಿಂದ ಮಾಡಿದ ಪದಾರ್ಥಗಳ ಅತಿಯಾಗಿ ತಿನ್ನುವುದು, ಪಾಲೀಶ್ ಮಾಡಿದ ಅಕ್ಕಿಯ ಅನ್ನವನ್ನು ಊಟಮಾಡುವುದು, ಸಕ್ಕರೆಯನ್ನು ಉಪಯೋಗಿಸುವುದು, ಇತ್ಯಾದಿ ಪದಾರ್ಥಗಳಿಂದ ಅಸಿಡಿಟಿ ಬರುವುದು. ಇದು ಎಲ್ಲಕ್ಕಿಂತಲೂ ಮಲಬದ್ಧತೆ ಮೂಲ ಕಾರಣ ಈ ರೋಗ ಬರಲು.
ನಮ್ಮ ಮತ್ತು ನಿಮ್ಮ ಮನೆಗಳಲ್ಲಿ ಚರಂಡಿ ಇದೆ ತಾನೇ? ಹಾಗೆಯೇ ನಮ್ಮ ಮತ್ತು ನಿಮ್ಮ ದೇಹದಲ್ಲೂ ಚರಂಡಿ ಇದೆ. ಮನೆಯ ಚರಂಡಿ ಶುದ್ಧವಾಗಿದ್ದರೆ ಯಾವುದೇ ಥರಹದ ದುರ್ವಾಸನೆ ಇರುವುದಿಲ್ಲಾ ತಾನೇ. ಮನೆಗಳ ಚರಂಡಿ ಚೊಕ್ಕಟವಾಗಿಟ್ಟುಕೊಳ್ಲಲು ನಮಗೆಲ್ಲಾ ಗೊತ್ತು. ಅಲ್ವೇ??? ಸಿಕ್ಕಿದ್ದೆಲ್ಲಾ ಮನೆಯ ಚರಂಡಿಯಲ್ಲಿ ಹಾಕುತ್ತಿದ್ದರೆ ಏನಾಗುತ್ತದೆ? ನೀವೇ ಯೋಚನೆ ಮಾಡಿನೋಡಿ. ಹಾಗೆಯೇ ನಮ್ಮ ದೇಹದ ಚರಂಡಿಯನ್ನು ನೋಡಿಕೊಳ್ಳಬೇಕಲ್ಲವೇ? ಅದೂ ಶುದ್ಧವಾಗಿರಬೇಕು ತಾನೇ? ಅದು ಶುದ್ಧವಾಗಿರಲು ಏನು ಮಾಡಬೇಕು? ಮನೆಯ ಚರಂಡಿಯನ್ನು ಶುದ್ಧಗೊಳಿಸಲು ಪರಕೆ ಅಥವಾ ಬ್ರಷ್ ಉಪಯೋಗಿಸುತ್ತೇವೆ, ಹೌದು ತಾನೇ? ಆದರೆ ನಮ್ಮ ಮತ್ತು ನಿಮ್ಮ ದೇಹದ ಚರಂಡಿಯನ್ನು ಪರಕೆ ಹಾಗೂ ಬ್ರಷ್ ಹಾಕಿ ಶುದ್ಧಗೊಳಿಸಲು ಆಗುತ್ತದೆಯೇ? ಯೋಚನೆ ಮಾಡಿನೋಡಿ. ಮೇಲೆ ಹೇಳಿದ ಮೈದಾ ಮತ್ತು ಇತರೆ ವಸ್ತುಗಳನ್ನು ತಿನ್ನುವುದರಿಂದ ನಮ್ಮ ದೇಹದ ಚರಂಡಿಯೊಳಗೆ ಒಂದು ತರಹದ ಪೇಸ್ಟ್ ತಯಾರಾಗಿ ಅಲ್ಲಲ್ಲೇ ಕಟ್ತಿಕೊಳ್ಳಲು ಪ್ರಾರಂಭವಾಗುತ್ತದೆ. ಇದು ಎಲ್ಲರ ೧೦ನೇ ವಯಸ್ಸಿನಿಂದ ಶುರುವಾಗುತ್ತದೆ. ನಮಗೆ ಅದು ಗೊತ್ತಾಗುವ ಹೊತ್ತಿಗೆ ಸುಮಾರು ವಯಸ್ಸಾಗಿರುತ್ತದೆ. ಆಗ ಪರದಾಡಿಕೊಂದು ಡಾಕ್ಟರ್ ಬಳಿ ಓಡಿಹೋಗುತ್ತೇವೆ. ವಾಸಿಯಾಗದೇ ಪರದಾಡುತ್ತೇವೆ. ಇದಕ್ಕೆ ಕಾರಣ ನಾವು ಸರಿಯಾದ ಆಹಾರಗಳನ್ನು ತಿನ್ನುತ್ತಿದ್ದರೆ ಈ ಅಸಿಡಿಟಿ ಅನ್ನುವ ಗೋಜೇ ಇರುವುದಿಲ್ಲ. ಈ ಅಸಿಡಿಟಿ ಇಲ್ಲದಿದ್ದರೆ ಯಾವ ರೋಗವೂ ಹತ್ತಿರ ಸುಳಿಯುವುದಿಲ್ಲ.
ಇದಕ್ಕೆ ಏನು ಮಾಡಬೇಕು?
ಮೈದಾ ಹಿಟ್ಟಿನ ವಿಷಯ ಏನೆಂದರೆ ಅದರಲ್ಲಿ ಚೆನ್ನಾಗಿರುವ ಪೇಸ್ಟನ್ನು ತಯಾರಿಸಬಹುದು. ಇದನ್ನು ವಾಲ್ ಪೇಪರ್ ನ್ನು ಅಂಟಿಸಲು ಉಪಯೋಗಿಸುತ್ತಾರೆ. ಅದು ಎಷ್ಟು ಕಷ್ಟಪಟ್ಟರೂ ಕೀಳಲು ಆಗುವುದಿಲ್ಲ. ಇದು ನಿಮಗೆ ಗೊತ್ತಾ? ಅದೇ ತರಹ ಮೈದಾ ಹಿಟ್ಟಿನಿಂದ ತಯಾರಿಸಿದ ಎಲ್ಲಾ ತಿಂಡಿಗಳು, ಇದರಿಂದ ತಯಾರಿಸಿದ ಸಿಹಿ ತಿಂಡಿಗಳು, ಇದರಿಂದ ತಯಾರಿಸಿದ ಬ್ರೆಡ್, ಬಿಸ್ಕತ್, ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ಮಾಡಲು ಕೆಲವುಸಲ ಮೈದಾವನ್ನು ಉಪಯೋಗಿಸುತ್ತಾರೆ.
ಈ ಮೈದಾ ಹಿಟ್ಟನ್ನು ತಿಂದವರು ಅತ್ಯಂತ ಮಲಬದ್ಧತೆಯಿಂದ ನರಳುತ್ತಾರೆ. ಆದ್ದರಿಂದ ಇನ್ನುಮೇಲೆ ಅತ್ಯಂತ ಪವಿತ್ರವಾದ ನಿಮ್ಮ ದೇಹವನ್ನು ಕಾಪಾಡಿಕೊಳ್ಳಿ. ಯಾವುದೇ ರೋಗಗಳು ಹತ್ತಿರ ಸುಳಿಯುವುದಿಲ್ಲ. ನಿಮ್ಮ ದೇಹವನ್ನು ಶುದ್ಧವಾಗಿಟ್ಟುಕೊಳ್ಳಿರಿ.
ಇದಕ್ಕೆ ನೀವುಗಳು ಹೊಟ್ಟು ಇರುವ ಪದಾರ್ಥಗಳನ್ನು ಸೇವನೆ ಮಾಡಬೇಕು. ಕೆಂಪು ಅಕ್ಕಿ ಅಂದರೆ ಪಾಲೀಶ್ ಮಾಡದ ಕೆಂಪು ಅಕ್ಕಿ ಅತ್ಯಂತ ಶ್ರೇಷ್ಠ. ಇದಕ್ಕೆ ಮುಂಡಗ ಅಕ್ಕಿ ಎಂತಲೂ, ಕಜ್ಜಾಯ ಅಕ್ಕಿ ಎಂತಲೂ ಕರೆಯುತ್ತಾರೆ. ಗೋಧಿಯನ್ನು ಹಿಟ್ಟುಮಾಡಿಸಿದಾಗ ಅದರ ಹೊಟ್ಟನ್ನು ತೆಗೆಯದೇ ಉಪಯೋಗಿಸಿ. ಅಂದರೆ ಒಂದರಿ ಆಡದೇ ಉಪಯೋಗಿಸಬೇಕು. ಎಲ್ಲಾ ಕಾಳು, ಬೇಳೆಗಳನ್ನು ಅದರ ಸಿಪ್ಪೆ ಸಮೇತವಾಗಿ ತಿನ್ನಿ. ಏಲಕ್ಕಿ ಬಾಳೆಹಣ್ಣನ್ನು ಸಿಪ್ಪೇಸಮೇತವಾಗಿ ತಿನ್ನಿ. ಮೊಳಕೆ ಬರಿಸಿದ ಕಾಳುಗಳನ್ನು ಉಪಯೋಗಿಸಿ. ಒಂದು ಪಕ್ಷ ನಿಮಗೆ ಕೆಂಪು ಅಕ್ಕಿ ಸಿಕ್ಕದೇ ಇದ್ದ ಪಕ್ಷದಲ್ಲಿ ಅಂಗಡಿಯಲ್ಲಿ "WHEAT BRAN" ಎಂಬ ಗೋಧಿಯ ಹೊಟ್ಟು ಸಿಕ್ಕುತ್ತದೆ. ಅದನ್ನು ನಿಮ್ಮ ಅಕ್ಕಿಯ ಊಟದಲ್ಲಿ ಉಪಯೋಗಿಸಿ. ಇಲ್ಲವಾದರೆ ಅದರ ಪಾಯಸವನ್ನು ಮಾಡಿ ಕುಡಿಯಿರಿ. ಸಕ್ಕರೆಯನ್ನು ನಿಮ್ಮ ನಿತ್ಯ ಜೀವನದಲ್ಲಿ ಉಪಯೋಗಿಸಬೇಡಿ. ಸಕ್ಕರೆ ಉಪಯೋಗಿಸುವುದರಿಂದ 146 ತರಹ ಖಾಯಿಲೆಗಳು ಬರುತ್ತವೆ. ಎಲ್ಲಾ ರೋಗಕ್ಕೂ ಮೂಲ ಕಾರಣ ಸಕ್ಕರೆ, ಮೈದಾ ಮತ್ತು ಪಾಲೀಶ್ ಮಾಡಿದ ಅಕ್ಕಿ. ನೆನಪಿರಲಿ.