ಬುಧವಾರ, ಸೆಪ್ಟೆಂಬರ್ 17, 2008

ಮನೆಯಲ್ಲೇ ಮೊಡವೆಗಳಿಗೆ ಔಷಧಿ

೧. ಮೆಣಸನ್ನು ನೀರಿನಲ್ಲಿ ತೇಯ್ದು ಮೊಡವೆಗಳಿಗೆ ಹಚ್ಚುತ್ತಾ ಬಂದರೆ ಕೆಲವೇ ದಿನಗಳಲ್ಲಿ ಮೊಡವೆಗಳು ಮುಖದಲ್ಲಿ ಇಲ್ಲದಂತಾಗುವುದು.
೨. ಕೊತ್ತಂಬರಿಸೊಪ್ಪಿನ ರಸದೊಂದಿಗೆ ನಿಂಬೆರಸ ಮಿಶ್ರ ಮಾಡಿ, ಕ್ರಮವಾಗಿ ಹಚ್ಚುತ್ತಿದ್ದರೆ ಮೊಡವೆ ಹಾಗೂ ಚರ್ಮದ ಮೇಲಿನ ಕಲೆಗಳು ಕಣ್ಮರೆ ಆಗುವುವು.
೩. ಬಾದಾಮಿ ಬೀಜಗಳನ್ನು ಶುದ್ಧವಾದ ಹಸುವಿನ ಹಾಲಿನಲ್ಲಿ ಅರೆದು, ಹತ್ತಿಯೊಂದಿಗೆ ಆ ಮಿಶ್ರಣವನ್ನು ಅದ್ದಿ ಮೊಡವೆಯ ಮೇಲೆ ಸವರುತ್ತಿದ್ದರೆ ಮೊಡವೆಯ ಗುರುತು ಮಾಯವಾಗುವುದು.
೪. ಸೇಬಿನ ಹಾಗೂ ನಿಂಬೆಯ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ ನುಣ್ಣಗೆ ಅರೆದು ಪುಡಿ ಮಾಡಿ ಚೂರ್ಣವನ್ನು ಹಾಲಿನಲ್ಲಿ ಬೆರೆಸಿ ಮೊಡವೆಗಳಿಗೆ ಹಚ್ಚಿದರೆ ಶೀಘ್ಹ್ರದಲ್ಲಿಯೇ ಮೊಡವೆಯ ಗುಳ್ಳೆ ಕರಗುವುದು.
೫. ಸೇಬಿನ ತಿರುಳನ್ನು ಅರೆದು ಮುಖಕ್ಕೆ ಲೇಪಿಸಿಕೊಳ್ಳುವುದರಿಂದ ವಾರದ ಒಳಗಾಗಿ ಮೊಡವೆ ಗುಳ್ಳೆಗಳು ಮಾಯ ಆಗುವುವು. ಜೊತೆಗೆ ಮುಖ ಕಾಂತಿ ಹೆಚ್ಚುವುದು.
೬. ಎಳೆನೀರಿನಲ್ಲಿ ಕೆಲವು ವಾರ ಮುಖ ತೊಳೆಯುತ್ತಿದ್ದರೆ ಮೊಡವೆಗಳು ಮಾಗುತ್ತವೆ. ಮುಖದ ಮೇಲೆ ಕಪ್ಪು ಕಲೆಗಳಿದ್ದರೆ ಮಾಯ ಆಗುವುವು. ಮುಖದ ಮೇಲೆ ಹೊಳಪು ಹೆಚ್ಚುವುದು.
೭. ಕಿತ್ತಲೆ ಸಿಪ್ಪೆಯನ್ನು ಮುಖದಮೇಲೆ ಉಜ್ಜುತ್ತಿದ್ದರೆ ಅದರಿಂದ ಸುವಾಸನೆಯ ದ್ರವ ಹೊರಬಂದು ಮೊಡವೆ ಗುಳ್ಳೆಗಳು ಒಣಗುವುವು.
೮. ನಿಂಬೇರಸದಲ್ಲಿ ದಾಲ್ಚಿನ್ನಿಯನ್ನು ತೇಯ್ದು ಮೊಡವೆಗಳಿಗೆ ಹಚ್ಚಿದರೆ ಬೇಗ ಒಣಗುವುವು.
೯. ಗರಿಕೆ ಹುಲ್ಲಿನ ರಸವನ್ನು ಮುಖದಮೇಲೆ ಲೇಪಿಸುವುದರಿಂದ ಮೊಡವೆಗಳು ಮಾಗುವುವು.
೧೦. ಹಿಂಗನ್ನು ನೀರಿನಲ್ಲಿ ತೇಯ್ದು ಮೊಡವೆಗಳಿಗೆ ಹಚ್ಚುತ್ತಿದ್ದರೂ ಸಹಾ ಮೊಡವೆ ಗುಳ್ಳೆಗಳು ಮುಖದ ಮೇಲೆ ಕಾಣದಂತಾಗುವುದು.

ಇದಕ್ಕಿಂತ ಮುಖ್ಯವಾಗಿ ಈ ಯಾವುದೇ ಚರ್ಮ ರೋಗಗಳು ಬರುವುದು ಹೊಟ್ಟೆಯೊಳಗಿಂದ. ಹೊಟ್ಟೆ ಶುದ್ಧ ಆಗಿದ್ದರೆ ಯಾವುದೇ ತರಹದ ಚರ್ಮ ರೋಗಗಳು ಬರುವುದಿಲ್ಲ. ಇದಕ್ಕಾಗಿ ತಿಂಗಳಿಗೆ ಒಂದು ಸಲ ಭೇದಿ ಮಾತ್ರೆಯನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದ ಪಕ್ಷದಲ್ಲಿ ಹೊಟ್ಟುಳ್ಳ ಧಾನ್ಯಗಳನ್ನು ಸೇವಿಸಬೇಕು. ನಮ್ಮ ದೇಹವೂ ಸಹಾ ನಮ್ಮ ಮನೆಯಲ್ಲಿರುವ ಚರಂಡಿಯಂತೆ. ಮನೆಯಲ್ಲಿರುವ ಚರಂಡಿಗೆ ಏನೇನೊ ಹಾಕಿದರೆ ಹೇಗೆ ಮನೆಯೆಲ್ಲಾ ಹಾಳಾಗುತ್ತದೋ, ಅದೇ ರೀತಿ ನಮ್ಮ ದೇಹದ ಚರಂಡಿ ಕೂಡ. ಎಣ್ಣೆಯಲ್ಲಿ ಕರಿದ ತಿಂಡಿಗಳು, ಮೈದಾ ಹಿಟ್ಟಿನಿಂದ ಮಾಡಿದ ಸಿಹಿ ತಿಂಡಿಗಳು ಮತ್ತು ಕರಿದ ತಿಂಡಿಗಳು, ಮೈದಾ ದೋಸೆ, ಮೈದಾ ಬ್ರೆಡ್ ಇತ್ಯಾದಿಗಳನ್ನು ತಿಂದರೆ ಹೊರಗಿನ ಯಾವ ಔಷಢಿಗಳಿಗೂ ಈ ರೋಗಗಳು ವಾಸಿಯಾಗುವುದಿಲ್ಲ. ವೃಥಾ ಹಣ ಪೋಲು.

ಶುಕ್ರವಾರ, ಸೆಪ್ಟೆಂಬರ್ 12, 2008

ನಿಮ್ಮ ಆರೋಗ್ಯ ಬಹಳ ಮುಖ್ಯ

ನಿಮ್ಮ ಆರೋಗ್ಯವನ್ನು ದಯವಿಟ್ಟು ಕಾಪಾಡಿಕೊಳ್ಳಿ. ಆರೋಗ್ಯವನ್ನು ಕೆಡಿಸಿಕೊಂಡು ಆಮೇಲೆ ಪರದಾಡಬೇಡಿ.
ಯಾವಾಗಲೂ ನಿಮ್ಮ ಊಟಕ್ಕೆ ಪಾಲೀಶ್ ಮಾಡದೇ ಇರುವ ಕೆಂಪು ಕಜ್ಜಾಯ ಅಕ್ಕಿಯನ್ನೇ ಉಪಯೋಗಿಸಿರಿ. ನಿಮಗೆ ಒಂದು ಪಕ್ಷ ಕಜ್ಜಾಯ ಅಕ್ಕಿ ಸಿಗದಿದ್ದಲ್ಲಿ ಮಾಮೂಲಿ ಅಕ್ಕಿಯನ್ನೇ ಊಟ ಮಾಡಿ. ಎರಡು ಮೂರು ದಿನಕ್ಕೆ ಒಂದು ಸಲ ರಾತ್ರಿ ನಿಮ್ಮ ಊಟವಾದ ಎರಡು ಘಂಟೆಗಳ ಬಳಿಕ
ಇಸಬ್ ಗೋಲ್ ಎಂಬ ಹೊಟ್ಟನ್ನು ಒಂದು ಒಣಗಿದ ಲೋಟಕ್ಕೆ ಹಾಕಿ ಅದಕ್ಕೆ ಪೂರ್ತಿ ನೀರು ತುಂಬಿ ತಕ್ಷಣ ಕಲಕಿ ತಕ್ಷಣ ಕುಡಿಯಿರಿ.
ನಂತರ ಒಂದು ದೊಡ್ಡ ಲೋಟ ನೀರು ಕುಡಿಯಿರಿ. ಇದರಿಂದ ನಿಮ್ಮ ಹೊಟ್ಟೆಯಲ್ಲಿ ಕಟ್ಟಿಕೊಂಡಿರುವ ಟಾಕ್ಸಿನ್ ಗಳು, ಕೊಲೆಸ್ಟರಾಲ್, ಕಫ ಇತ್ಯಾದಿ ಮಾರನೆ ದಿನ ಮಲವಿಸರ್ಜನೆಯಲ್ಲಿ ಹೋಗಿಬಿಡುತ್ತದೆ. ನೀವು ಪಾಲೀಶ್ ಮಾಡಿದ ಅಕ್ಕಿಯನ್ನು ಊಟ ಮಾಡುತ್ತಿದ್ದರೆ ನಿಮಗೆ ಆಸಿಡಿಟಿ ಉಂಟಾಗುತ್ತದೆ. ಆಗ ನಿಮಗೆ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ತಿನ್ನಬೇಕೆನಿಸುತ್ತದೆ. ಸಿಕ್ಕಿದ್ದನ್ನೆಲ್ಲಾ ತಿನ್ನಬೇಕೆನಿಸುತ್ತದೆ. ಜೋಪಾನ.
ಸಾವಯವ ಕೆಂಪು ಅಕ್ಕಿಯನ್ನು ಉಪಯೋಗಿಸಬೇಡಿ. ಅದರಲ್ಲಿ ನಮಗೆ ಅತಿ ಮುಖ್ಯವಾಗಿ ಬೇಕಾದ ಬಿ-ಕಾಂಪ್ಲೆಕ್ಸ್ ಇಲ್ಲ. ಮಲವಿಸರ್ಜನೆ ಏನೋ ಆಗುತ್ತದೆ. ಆದರೆ ಬಹಳ ಮುಖ್ಯವಾಗಿರುವ ಬಿ-ಕಾಂಪ್ಲೆಕ್ಸ್ ಇಲ್ಲದಿರುವ ಆ ಅಕ್ಕಿ ಊಟ ಮಾಡಿ ಏನು ಪ್ರಯೋಜನ? ನಿಮ್ಮ ದೇಹದ ಚರಂಡಿಯನ್ನು ಶುದ್ಧವಾಗಿಟ್ಟುಕೊಳ್ಳಿ. ನಮ್ಮ ಮನೆಯಲ್ಲಿರುವ ಚರಂಡಿಯನ್ನು ಹೇಗೆ ಚೊಕ್ಕಟವಾಗಿ ಇಟ್ಟುಕೊಳ್ಳುತ್ತೇವೋ, ಅದೇ ರೀತಿ ನಮ್ಮ ದೇಹದ ಚರಂಡಿಯನ್ನು ಚೊಕ್ಕಟವಾಗಿಟ್ಟುಕೊಳ್ಳಬೇಕು. ಮೈದಾ ಹಿಟ್ಟಿನಿಂದ ಮಾಡಿರುವ ತಿಂಡಿಗಳನ್ನು ಹತ್ತಿರವೂ ಸೇರಿಸಬೇಡಿ. ಅಂದರೆ ಮೈದಾ ಹಿಟ್ಟಿನಿಂದ ಮಾಡಿದ ಬ್ರೆಡ್, ಬಿಸ್ಕತ್ ಗಳು, ದೋಸೆ, ಕರಿದ ತಿಂಡಿಗಳು, ಸಿಹಿ ತಿಂಡಿಗಳು, ಪೂರಿ, ಚಪಾತಿ ಇತ್ಯಾದಿ
ಮೈದಾ ದಿಂದ ಗೋಂದು ತಯಾರಿಸುತ್ತಾರೆ ವಾಲ್ ಪೋಸ್ಟರ್ ಅಂಟಿಸಲು ಗೊತ್ತಾ ನಿಮಗೆ? ಆಮೇಲೆ ಆ ವಾಲ್ ಪೋಸ್ಟರ್ ನ ಕೀಳಲು ಎಷ್ಟು ಕಷ್ಟ ಗೊತ್ತಾ? ಅದೇ ರೀತಿಯಲ್ಲೇ ನಮ್ಮ ದೇಹದಲ್ಲೂ ಆ ಮೈದಾ ಕೆಲಸ ಮಾಡುವುದು. ಜೋಪಾನ, ಜೋಪಾನ ನಿಮ್ಮ ದೇಹ. ಸಾಧ್ಯವಾದಷ್ಟೂ ಕಾಯಿಸಿ ಆರಿದ ನೀರನ್ನು ಕುಡಿಯಿರಿ. ಈ ಮೇಲಿನ ತಿಂಡಿಗಳಿಂದ ಪಿತ್ತ ಅತೀ ಜಾಸ್ತಿಯಾಗುತ್ತದೆ. ನೀವುಗಳು ಬರೀ ಪಿತ್ತದಿಂದ ನರಳುತ್ತಿದ್ದರೆ ಮಾಮೂಲಿ ತಣ್ಣೀರನ್ನು ಕುಡಿಯಿರಿ. ಪಿತ್ತ ಮತ್ತು ಕಫ ಆಗಿದ್ದರೆ ಕಾದಾರಿದ ನೀರನ್ನು ಎರಡು ದೊಡ್ಡ ಲೋಟದಷ್ಟು ಕುಡಿಯಿರಿ. ಬರೀ ಕಫ ಇದ್ದರೆ ಬಿಸಿ ನೀರನ್ನು ಕುಡಿಯಿರಿ. ಪಿತ್ತ ಇರುವಾಗ ಬಿಸಿ ನೀರನ್ನು ಕುಡಿಯಬೇಡಿ.