ಬುಧವಾರ, ಅಕ್ಟೋಬರ್ 3, 2012

ಸಸ್ಯಾಹಾರಿಗಳಾದರೆ ಮಾತ್ರ 10 ಬಂಪರ್ ಲಾಭ!


ಸಸ್ಯಾಹಾರಿಗಳಾದರೆ ಮಾತ್ರ 10 ಬಂಪರ್ ಲಾಭ!

Posted by:
ಇಂದು ವಿಶ್ವ ಸಸ್ಯಾಹಾರಿ ದಿನ. ಕೆಲವರು ಹುಟ್ಟಿದಾಗಿನಿಂದ ಸಸ್ಯಾಹಾರಿಗಳಾಗಿರುತ್ತಾರೆ, ಮತ್ತೆ ಕೆಲವರು ಮಾಂಸಾಹಾರವನ್ನು ತಿನ್ನುತ್ತಿದ್ದು ಯಾವುದೋ ಒಂದು ಕಾರಣಕ್ಕೆ ಶುದ್ಧ ಸಸ್ಯಾಹಾರಿಗಳಾಗುತ್ತಾರೆ. ಸಸ್ಯಾಹಾರ ಮಾತ್ರ ತಿಂದರೆ ಸೌಂದರ್ಯ ಹೆಚ್ಚಾಗುತ್ತದೆ ಎಂದು ಅನೇಕ ಸೆಲೆಬ್ರಿಟಿಗಳು ಹೇಳುವುದನ್ನು ಕೇಳಿರಬಹುದು. ಹೌದು, ಮಾಂಸಾಹಾರಕ್ಕಿಂತ ಸಸ್ಯಾಹಾರ ಆರೋಗ್ಯಕ್ಕೆ ಮತ್ತು ದೇಹದ ಸೌಂದರ್ಯಕ್ಕೆ ಒಳ್ಳೆಯದು. ಯಾವ ರೀತಿಯಲ್ಲಿ ಒಳ್ಳೆಯದು ಎಂಬುದನ್ನು ಇಲ್ಲಿ ಹೇಳಲಾಗಿದೆ ನೋಡಿ.
1. ಹಣ್ಣುಗಳು, ನಾರಿನಂಶವಿರುವ ಪದಾರ್ಥಗಳು ಹಾಗೂ ತರಕಾರಿಗಳು ಕೊಲೆಸ್ಟ್ರಾಲ್ ನ ಹಾಗೂ  ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
2. ಒಬೆಸಿಟಿ ಹೆಚ್ಚಾದರೆ ಟೈಪ್ 2 ಮಧುಮೇಹ ಬರುವ ಸಾಧ್ಯತೆ ಹೆಚ್ಚು. ಒಬೆಸಿಟಿಗೆ ಕೊಬ್ಬಿನಂಶವಿರುವ ಪದಾರ್ಥಗಳು ಕಾರಣವಾಗಿದೆ. ತರಕಾರಿಗಳಿಗೆ ಹೋಲಿಕೆ ಮಾಡಿದರೆ ಮಾಂಸಾಹಾರದಲ್ಲಿ ಕೊಬ್ಬಿನಂಶ ಅಧಿಕವಿರುತ್ತದೆ, ಅಲ್ಲದೆ ನಾರಿನಂಶವಿರುವ ತರಕಾರಿಗಳು ದೇಹದಲ್ಲಿ ಸಕ್ಕರೆಯಂಶವನ್ನು ನಿಯಂತ್ರದಲ್ಲಿಡಲು ಸಹಕಾರಿಯಾಗಿದೆ.
3. ತರಕಾರಿಯಲ್ಲಿ antioxidants ಅಂಶವಿರುವುದರಿಂದ ತ್ವಚೆಯಲ್ಲಿರುವ ಕಶ್ಮಲಗಳನ್ನು ಹೋಗಲಾಡಿಸಿ, ತ್ವಚೆ ಸೌಂದರ್ಯವನ್ನು ಹೆಚ್ಚಿಸುತ್ತದೆ. ಅದರಲ್ಲೂ ನೀರಿನಂಶವಿರುವ ಹಣ್ಣುಗಳು ತ್ವಚೆ ಸೌಂದರ್ಯಕ್ಕೆ ತುಂಬಾ ಒಳ್ಳೆಯದು.
4. ಹಣ್ಣು, ತರಕಾರಿಗಳಲ್ಲಿ ಹಾರ್ಮೋನ್ ಗಳನ್ನು ಚುಚ್ಚುವುದಿಲ್ಲ, ಆದರೆ ಕೆಲವು ಪ್ರಾಣಿಗಳಿಗೆ ಬೇಗನೆ ಬೆಳೆಯಲು ಹಾರ್ಮೋನ್ ಗಳನ್ನು ಇಂಜೆಕ್ಟ್ ಮಾಡಲಾಗುವುದು. ಆದ್ದರಿಂದ ಹಾರ್ಮೋನ್ ಫ್ರೀ ತರಕಾರಿಗಳು ಆರೋಗ್ಯಕ್ಕೆ ಒಳ್ಳೆಯದು.
5. ತರಕಾರಿಗಳನ್ನು ತಿಂದರೆ ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ನಡೆಯಲು ಸಹಾಯ ಮಾಡಿ ರಕ್ತದೊತ್ತಡ ಸರಿಯಾದ ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳುತ್ತದೆ.
6. ತರಕಾರಿಗಳಲ್ಲಿ ನಾರಿನಂಶ ಅಧಿಕವಿರುವುದರಿಂದ ಜೀರ್ಣಕ್ರಿಯೆಗೆ ತುಂಬಾ ಸಹಕಾರಿಯಾಗಿದೆ.
7. ತರಕಾರಿಗಳಲ್ಲಿ  ಆರೋಗ್ಯಕ್ಕೆ ಅಗತ್ಯವಾದ ಅಮೈನೊ ಅಂಶ ಅಧಿಕವಿರುತ್ತದೆ.
8. ತರಕಾರಿಯಲ್ಲಿ ಕೊಬ್ಬಿನಂಶ ಕಡಿಮೆ ಇರುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚು.
9. ತರಕಾರಿ, ಹಣ್ಣುಗಳು ಇವುಗಳಿಂದ ಸೂಪ್, ಸಲಾಡ್ ಇಂತಹ ಪದಾರ್ಥಗಳನ್ನು ಮಾಡಿ ಸೇವಿಸುವುದರಿಂದ ಬೊಜ್ಜು ಬರುವ ಸಾಧ್ಯತೆ ಕಡಿಮೆಯಾಗುವುದು.
10. ಮಾಂಸಾಹಾರಕ್ಕೆ ಹೋಲಿಸಿದರೆ ತರಕಾರಿ ಬೆಲೆ ಕೂಡ ಕಡಿಮೆ.





ಸೋಮವಾರ, ಸೆಪ್ಟೆಂಬರ್ 24, 2012

ಆರೋಗ್ಯವೇ ಬಹಳ ಮುಖ್ಯ

ಆಸಿಡಿಟಿ : ಇದು ಬರುವುದು ಬಹಳ ಸುಲಭ. ಇದು ಯಾವುದರಿಂದ ಬರುತ್ತದೆ? ಈ ಆಸಿಡಿಟಿ ಬಂದರೆ ಸಾಕು, ಎಲ್ಲಾ ಖಾಯಿಲೆಗಳಿಗೂ ಆಹ್ವಾನ ಕೊಟ್ಟಂತೆ. ಈ ಆಸಿಡಿಟಿ ಬಹಳ ಅಪಾಯಕಾರಿ ಖಾಯಿಲೆ. ಇದು ಬಂದಾಗ ಜನರೇನು ಮಾಡುತ್ತಾರೆ? ತಕ್ಷಣ ಅಲ್ಲೋಪತಿ ಡಾಕ್ಟರ ಹತ್ತಿರ ಓಡುತ್ತಾರೆ. ಅವರು ಕೊಡುವುದು ಏನನ್ನು ಡೈಜೀನ್ ಎಂಬ ಮಾತ್ರೆಯನ್ನು. ಅದನ್ನು ತೆಗೆದುಕೊಂಡ ತಕ್ಷಣ ಇದು ಮಾಯ. ಆದರೆ ಇದು ಪುನಹ ಯಾವಾಗ ಬೇಕಾದರೂ ಕಾಣಿಸಿಕೊಳ್ಳಬಹುದು.
ಈ ಆಸಿಡಿಟಿ ಬರಲು ಕಾರಣ ಏನೆಂದರೆ ಅತಿಯಾದ ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಮೈದಾ ಹಿಟ್ಟಿನಿಂದ ಮಾಡಿದ ಸಿಹಿ ತಿಂಡಿಗಳು, ಐಸ್ ಕ್ರೀಮ್, ಅತಿಯಾದ ಕಾಫೀ ಸೇವನೆ, ಅತಿ ಎಣ್ಣೆಯ ಸೇವನೆ, ಇತ್ಯಾದಿ ಗಳಿಂದ ಬರುತ್ತದೆ. ಇದನ್ನು ತಡೆಗಟ್ಟುವುದು ಹೇಗೆ?
       ಬಿ-೧ ಜೀವಸತ್ವ                               ೧೯-೭-೨೦೦೫

                 ಸಂಜೀವಿನಿ ಗುಣದ ಜೀವಸತ್ವ ಬಿ-೧                                              

ಬಿ-೧ ಜೀವಸತ್ವದ ಕೊರತೆಯಿಂದ ಹಲವು ರೀತಿಯ ಮಾನಸಿಕ ಹಾಗೂ ದೈಹಿಕ ತೊಂದರೆಗಳು ಕಂಡುಬರುತ್ತವೆ.

     ನಾಗರತ್ನ ತನ್ನ ಗಂಡನ ಸ್ವಭಾವದಲ್ಲಿ ಇತ್ತೀಚೆಗೆ ಅನೇಕ ಬದಲಾವಣೆಗಳಾಗಿರುವುದನ್ನು ಗಮನಿಸಿದಳು. ಸದಾ ಉಲ್ಲಾಸದಿಂದ ಇರುತ್ತಿದ್ದ ಗಂಡ ಚಿಂತೆಯಿಂದ ಮುಂಗೋಪಿಯಾಗಿದ್ದ. ಎಷ್ಟೇ ಚೆನ್ನಾಗಿ ಅಡುಗೆ ಮಾಡಿದ್ದರೂ ಊಟಮಾಡಲು ಒಪ್ಪುತ್ತಿರಲಿಲ್ಲ. ತನ್ನ ಸಂಸಾರ, ನೆರೆ-ಹೊರೆ, ಸ್ನೇಹಿತರ ಬಗ್ಗೆ ಆಸಕ್ತಿ, ಉತ್ಸಾಹ ಕಳೆದುಕೊಂಡು ಸದಾ ಮೌನಿಯಾಗಿರುತ್ತಿದ್ದ. ತೀವ್ರವಾದ ತಲೆನೋವು, ಓಡಾಡಿದರೆ ತಲೆ ತಿರುಗುವುದು, ತಲೆ ಅಲ್ಲಾಡಿಸಿದರೆ ಕಿವಿಯಲ್ಲಿ ಗುಂಯ್ ಎಂಬ ಶಬ್ದ ಕೇಳಿಸುತ್ತದೆಂದು ಹೇಳುತ್ತಿದ್ದ. ಇತ್ತೀಚೆಗಂತೂ ಪತ್ನಿಯ ಮೇಲೆ ಪದೇಪದೇ ರೇಗುತ್ತಾನೆ. ಸಣ್ಣ-ಸಣ್ಣ ವಿಚಾರಗಳಿಗೂ ಜಗಳ ಮಾಡುತ್ತಾನೆ. ಏನೋ ಕಳೆದುಕೊಂಡವನಂತೆ ಏಕಾಂಗಿಯಾಗಿ ಕುಳಿತು ಎತ್ತಲೋ ನೋಡುತ್ತಾ ಇರುತ್ತಾನೆ. ತಾನು ಮನೆಯಿಂದ ಓಡಿಹೋಗುವುದಾಗಿ ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬಡಬಡಿಸುತ್ತಾನೆ. ತನ್ನ ಪ್ರತಿಬಿಂಬವನ್ನು ನೋಡಿ ದ್ವೇಷ ಕಾರುತ್ತಾನೆ. ರಾತ್ರಿಯೆಲ್ಲಾ ನಿದ್ದೆ ಮಾಡದೇ ಎಚ್ಚರವಾಗಿರುತ್ತಾನೆ. ಎದೆಯಲ್ಲಿ ಉರಿ, ಮಲಬದ್ಧತೆಗಳು ಕಾಡುತ್ತಿವೆ. ಆಗಿಂದಾಗ್ಗೆ ದುರ್ವಾಸನೆಯಿಂದ ಕೂಡಿದ ವಾಯು ಬಿಡುತ್ತಿರುತ್ತಾನೆ. ಸದಾ ಆಯಾಸಗೊಂಡವರಂತೆ ಕಾಣಿಸುತ್ತಾನೆ. ಈತನ ಈ ಎಲ್ಲ ಲಕ್ಷಣಗಳಿಗೆ ಕಾರಣ ಅವನಲ್ಲಿ 'ಬಿ-೧' ಜೀವಸತ್ವದ ಕೊರತೆ.
  ಮಕ್ಕಳಲ್ಲಿ ಹಾಗೂ ವಯಸ್ಕರಲ್ಲಿ ಬಿ-೧ ಜೀವಸತ್ವದ ಕೊರತೆಯಿಂದ ಚಿತ್ತ ಏಕಾಗ್ರತೆ ಇಲ್ಲದೆ ಮೊಂಡುತನ ಹಾಗೂ ಸೋಮಾರಿತನ ಉಂಟಾಗುತ್ತದೆ. ಗುರುಗಳು, ತಂದೆ-ತಾಯಿ, ಪರಕೀಯರನ್ನು ಕಂಡರೆ ಮಕ್ಕಳು ಭಯಪಡುತ್ತಾರೆ. ಶಾಲೆಗೆ ಹೋಗಲು ಒಪ್ಪುವುದಿಲ್ಲ. ಸ್ನೇಹಿತರೊಂದಿಗೆ ಆಟ ಆಡಲು ಹೋಗುವುದಿಲ್ಲ. ತರಗತಿಯಲ್ಲಿ ಗುರುಗಳು ಪಾಠಮಾಡುವಾಗ ನಿದ್ದೆ ಮಾಡುತ್ತಾರೆ. ಬಹಳ ದಣಿದವರಂತೆ ಮನೆಗೆ ಬಂದೊಡನೆ ಮಲಗಲು ಬಯಸುತ್ತಾರೆ. ಅದನ್ನು ಯಾರಾದರೂ ವಿರೋಧಿಸಿದರೆ ಜಗಳ ಮಾಡುತ್ತಾರೆ.
  ಈ ಹಂತದಲ್ಲಿ ಮಕ್ಕಳಿಗೆ ಬಿ-೧ ಜೀವಸತ್ವ ಚಿಕಿತ್ಸೆ ಕೊಡದಿದ್ದರೆ ಅವರ ಪರಿಸ್ಥಿತಿ ಇನ್ನಷ್ಟು ಕೆಡುತ್ತದೆ. ಓಡಾಡುವಾಗ, ಮೆಟ್ಟಲುಗಳನ್ನು ಹತ್ತುವಾಗ ಉಸಿರಾಡಲು ಕಷ್ಟಪಡುತ್ತಾರೆ. ಕಾಲುಗಳು ಊದಿಕೊಳ್ಳುತ್ತವೆ. ಬುದ್ಧಿಶಕ್ತಿಗೆ ಮಂಕು ಕವಿಯುತ್ತದೆ. ಯೋಚನಾಶಕ್ತಿ ಕಳೆದುಕೊಳ್ಳುತ್ತಾರೆ. ಹೃದಯ ವೇಗವಾಗಿ ಬಡಿದುಕೊಳ್ಳುತ್ತದೆ. ಕಾಲುಗಳು ಜಡವಾಗಿ ಭಾರವಾಗುತ್ತವೆ. ಯಾವುದೇ ರೀತಿಯ ಶಬ್ದ ಸಹಿಸುವುದಿಲ್ಲ. ಪ್ರಾಣ ಭಯದಿಂದ ಹೊರಗೆ ಹೋಗದೆ ಮನೆಯಲ್ಲೇ ಇರುತ್ತಾರೆ. ರೋಗ ನಿರೋಧಕ ಶಕ್ತಿ ಕುಗ್ಗಿ ವಿವಿಧ ರೋಗಗಳಿಗೆ ಬಲಿಯಾಗುತ್ತಾರೆ. ಇವೆಲ್ಲವೂ ಬಿ-೧ ಜೀವಸತ್ವ ಕೊರತೆಯ ಲಕ್ಷಣಗಳೇ.
  ಥಿಯಾಮಿನ್ ಹೈಡ್ರೋಕ್ಲೋರೈಡ್ ರೂಪದಲ್ಲಿರುವ ಬಿ-೧ ಜೀವಸತ್ವ ಬಿಳುಪಾದ ಸ್ಪಟಿಕದಂಥ ಪದಾರ್ಥ, ನೀರಿನಲ್ಲಿ ಕರಗುತ್ತದೆ. ಪ್ರತಿನಿತ್ಯ ೦.೫ ರಿಂದ ೧.೫ ಮಿಲಿ ಗ್ರಾಂ ನಷ್ಟು ಬಿ-೧ ಜೀವಸತ್ವ ಮನುಷ್ಯನಿಗೆ ಬೇಕು. ಈ ಜೀವಸತ್ವ ದೇಹದಲ್ಲಿ ನರಕೋಶಗಳಿಗೆ ಶಕ್ತಿಯನ್ನು ಒದಗಿಸುವುದರೊಂದಿಗೆ ಅವುಗಳ ರಕ್ಷಣೆಯನ್ನೂ ಮಾಡುತ್ತದೆ. ಆದ್ದರಿಂದ ಬಿ-೧ ಜೀವಸತ್ವವನ್ನು ನರಸಂಬಂಧಿ ರೋಗಗಳಾದ ಸ್ನಾಯು ಸೆಳೆತ, ಚಳಕು, ನಿಶ್ಶಕ್ತಿ, ಸ್ಪರ್ಶನಾಶ, ಮೂಳೆ ಜರುಗುವಿಕೆ, ಪಾರ್ಶ್ವವಾಯು ಚಿಕಿತ್ಸೆಗಳಲ್ಲಿ ಉಪಯೋಗಿಸಲಾಗುತ್ತದೆ.
  ಹೃದಯ ಸಂಬಂಧಿ ಕಾಯಿಲೆ, ಬೆರಿಬೆರಿ ರೋಗದಲ್ಲಿ ಥಿಯಾಮಿನ್ ನ ಕೊರತೆ ಕಂಡುಬರುತ್ತದೆ. ನೆತ್ತಿಯ ಮೇಲ್ಭಾಗದ ರಕ್ತ ಪರಿಚಲನೆಗೆ ಬಿ-೧ ಜೀವಸತ್ವ ಬೇಕೇಬೇಕು. ಅಜೀರ್ಣ ಮತ್ತು ಮಲಬದ್ಧತೆಯಿಂದ ಉಂಟಾಗುವ ವೇಗದ ಹೃದಯ ಬಡಿತ, ಹೃದಯದ ಅಸಮರ್ಪಕ ಕೆಲಸ, ಬಲಭಾಗದ ಹೃದಯಸ್ತಂಭನವಾದಾಗ ನೀಡುವ ಚಿಕೆತ್ಸೆಯಲ್ಲಿಯೂ ಬಿ-೧ ಜೀವಸತ್ವ ಬಳಸುತ್ತಾರೆ.
  ಸಾಮಾನ್ಯವಾಗಿ ಹೊಟ್ಟೆ ಶಸ್ತ್ರಚಿಕಿತ್ಸೆಗೊಳಗಾದ ರೋಗಿಗಳಲ್ಲಿ ಈ ಬಿ-೧ ಜೀವಸತ್ವದ ಕೊರತೆ ಕಂಡುಬರುತ್ತದೆ. ಹೊಟ್ಟೆಯ ಹಾಗೂ ಕರುಳು ಸಂಬಂಧಿ ಕಾಯಿಲೆ ಇರುವವರು ನಿತ್ಯವೂ ಬಿ-೧ ಜೀವಸತ್ವ ಸೇವಿಸುವುದು ಒಳ್ಳೆಯದು.  ಬಹುಕಾಲದ ಕೆಮ್ಮು ಸಹಾ ಬಿ-೧ ಜೀವಸತ್ವದ ಬಳಕೆಯಿಂದ ಕಡಿಮೆಯಾಗುತ್ತದೆ. ಗರ್ಭಿಣಿಯರು ಬಿ-೧ ಜೀವಸತ್ವವನ್ನು ಕ್ರಮವಾಗಿ ಉಪಯೋಗಿಸುವುದರಿಂದ ಹೆರಿಗೆ ಸುಲಭವಾಗುತ್ತದೆ. ಕಣ್ಣಿನ ನರಗಳ ತೊಂದರೆ, ಮಕ್ಕಳಲ್ಲಿ ಪಾರ್ಶ್ವವಾಯು, ದೇಹದ ನರಗಳ ತೊಂದರೆ, ಮರೆವು, ಮುಂಗೋಪ, ಆಯಾಸ, ಹೊಟ್ಟೆಯಲ್ಲಿ ಹುಣ್ಣು...... ಇತ್ಯಾದಿಗಳು ಕಂಡುಬಂದಾಗ ತಪ್ಪದೆ ಬಿ-೧ ಜೀವಸತ್ವ ಕೊಡಿಸುವುದು ಒಳ್ಳೆಯದು.
  ಅಕ್ಕಿಯನ್ನು ಗಿರಣಿಯಲ್ಲಿ ಪಾಲೀಶ್ ಮಾಡುವಾಗ ಸಾಕಷ್ಟು ಪ್ರಮಾಣದಲ್ಲಿ ಈ ಜೀವಸತ್ವ ನಾಶವಾಗುತ್ತದೆ. ಬಿ-೧ ಜೀವಸತ್ವದ ದೈನಂದಿನ ಪೂರೈಕೆಯು ನಾವು ಸೇವಿಸುವ ಕಾರ್ಬೋಹೈಡ್ರೇಟ್ ಅನ್ನು ಅವಲಂಬಿಸಿದೆ. ದೇಹದಲ್ಲಿ ಶಕ್ತಿ ಬಿಡುಗಡೆಯಾಗಲು, ದೈಹಿಕ ಬೆಳವಣಿಗೆ, ಹಸಿವು ಉಂಟಾಗಲು, ಪಚನಕ್ರಿಯೆ ಹಾಗೂ ನರಕ್ಕೆ ಸಂಬಂಧಿಸಿದ ಕಾರ್ಯಚಟುವಟಿಕೆಗಳಲ್ಲಿ ಈ ಜೀವಸತ್ವ ಪಾತ್ರ ವಹಿಸುತ್ತದೆ.
  ವಿಪರೀತ ಮದ್ಯಪಾನ ಮಾಡುವವರಲ್ಲಿಯೂ ಬಿ-೧ ಜೀವಸತ್ವದ ಕೊರತೆ ಉಂಟಾಗುತ್ತದೆ. ಅವರ ಚಲನೆಯಲ್ಲಿ ಅಸ್ಠಿರತೆ, ಗಲಿಬಿಲಿ ಉಂಟಾಗುತ್ತದೆ. ಕೆಲವರಲ್ಲಿ ರೋಗ ಉಲ್ಬಣಿಸಿ ಮರೆವು, ಹೊಸದನ್ನು ಕಲಿಯದ ಸ್ಠಿತಿ, ಮರೆವನ್ನು ಮರೆಮಾಡುವ ಪ್ರಯತ್ನ ಕಂಡುಬರುತ್ತದೆ.

               ಬಿ-೧ ಜೀವಸತ್ವಕ್ಕೆ ಇವುಗಳನ್ನು ಸೇವಿಸಿ:
ಜಾಸ್ತಿ ಪಾಲೀಶ್ ಮಾಡಿರದ ಅಕ್ಕಿ, ಬೇಳೆಕಾಳು, ಹುರುಳಿ, ಕುಸುಬಲಕ್ಕಿ, ಗೋಧಿಕಾಳು, ಹಾಲು, ಮೊಳಕೆಯೊಡೆದ ಕಾಳು, ಬಟಾಣಿ, ನೆಲಗಡಲೆ, ಅಕ್ಕಿಯ ತೌಡು, ಕೋಸು, ಮೂಲಂಗಿ ಗಳು... ಇತ್ಯಾದಿ.

ಬರೆದವರು : ಡಾ. ಎಸ್. ರವಿಕುಮಾರ ರಾರಾವಿ
ಕೃಪೆ : ವಿಜಯಕರ್ನಾಟಕ
ಸಂಗ್ರಹಿಸಿದವರು : ಹೆಚ್.ಕೆ. ಸತ್ಯಪ್ರಕಾಶ್. - ೯೮೮೬೩ ೩೪೬೬೭        ಇ-ಮೈಲ್ : ಮನುಸತ್ಯ ಅಟ್ ರಿಡಿಫ್ ಮೈಲ್.ಕಾಮ್.

ಬುಧವಾರ, ಸೆಪ್ಟೆಂಬರ್ 7, 2011

ಒಡೆದ ಹಿಮ್ಮಡಿ ನಿಮ್ಮನ್ನು ಕಾಡುತ್ತಿದೆಯಾ?

ಒಡೆದ ಹಿಮ್ಮಡಿ ನಿಮ್ಮನ್ನು ಕಾಡುತ್ತಿದೆಯಾ? ಸರಿಯಾಗಿ ಪೋಷಣೆ ಮಾಡದಿದ್ದರೆ ನಿಮ್ಮ ಕಾಲುಗಳೇ ನಿಮಗೆ ಶತ್ರುವಾಗಬಹುದು. ಅದರಲ್ಲೂ ಮಳೆಗಾಲದಲ್ಲಿ ಹಿಮ್ಮಡಿ ಒಡೆಯುವುದನ್ನು ನಿರ್ಲಕ್ಷಿಸಿದರೆ ಸಹಿಸಲಾರದ ನೋವು. ಒಡೆದ ಹಿಮ್ಮಡಿಯನ್ನು ಮೃದುಗೊಳಿಸುವುದು ಹೇಗೆ ಎಂಬ ಬಗ್ಗೆ ಕೆಲವು ಸಲಹೆಗಳು ಇಲ್ಲಿವೆ. ಒಡೆದ ಹಿಮ್ಮಡಿಗೆ ಸಲಹೆಗಳು: 1. ಪ್ಯೂಮಿಕ್ ಸ್ಟೋನ್: ಮೆಡಿಕಲ್ ಶಾಪ್ ಗಳಲ್ಲಿ ದೊರೆಯುವ ಪ್ಯೂಮಿಕ್ ಸ್ಟೋನ್ ನಿಂದ ಒಣಗಿದ ನಿಮ್ಮ ಹಿಮ್ಮಡಿಗಳನ್ನು ಸ್ನಾನ ಮಾಡುವಾಗ ಸ್ಕ್ರಬ್ ನಂತೆ ಮೃದುವಾಗಿ ಉಜ್ಜಿಕೊಂಡರೆ ನಿರ್ಜೀವ ಕಣಗಳು ತೊಲಗಿ ಪಾದಗಳು ನುಣುಪಾಗುತ್ತದೆ. 2. ಮಾಯಿಶ್ಚರೈಸರ್: ಚರ್ಮ ಒಣಗಲು ಬಿಡದೆ ಪಾದಕ್ಕೆ ಮಾಯಿಶ್ಚರೈಸರನ್ನು ಹಚ್ಚುತ್ತಿದ್ದರೆ ಚರ್ಮ ಮೃದುಗೊಳ್ಳುತ್ತದೆ. ಸಾಕ್ಸ್ ಹಾಕಿಕೊಳ್ಳುವ ಮುನ್ನ ಬಾಡಿ ಲೋಶನ್ ಅಥವಾ ಮಾಯಿಶ್ಚರೈಸರ್ ಲೇಪಿಸಿಕೊಂಡರೆ ಪಾದ ಕೋಮಲವಾಗಿರುತ್ತದೆ. ರಾತ್ರಿ ಹೊತ್ತು ಲೇಪಿಸಿಕೊಂಡು ಮಲಗಿದರೆ ಉತ್ತಮ. 3. ಉಪ್ಪು ನೀರು: ಉಗುರು ಬೆಚ್ಚಗಿನ ನೀರಿನಲ್ಲಿ ಉಪ್ಪು ಮತ್ತು ನಿಂಬೆ ರಸ ಬೆರೆಸಿ 20 ನಿಮಿಷ ಪಾದವನ್ನು ಅದರಲ್ಲಿ ಇಡಬೇಕು. ಉಪ್ಪು ಪಾದವನ್ನು ಮೃದುಗೊಳಿಸಿದರೆ, ನಿಂಬೆ ಕೊಳೆಯನ್ನು ತೊಲಗಿಸುತ್ತದೆ. ಪ್ಯೂಮಿಕ್ ಸ್ಟೋನ್ ನಿಂದ ಮೃದುವಾಗಿ ಉಜ್ಜಿದರೆ ಸ್ವಚ್ಛ ಪಾದ ನಿಮ್ಮದಾಗುತ್ತೆ. 4. ರೊಸ್ ವಾಟರ್: ಗ್ಲಿಸರಿನ್ ಜೊತೆ ರೋಸ್ ವಾಟರ್ ಸೇರಿಸಿ ಅದನ್ನು ಹತ್ತಿಯಿಂದ ಹಚ್ಚಿಕೊಳ್ಳಬೇಕು. ಸುಮಾರು 15 ದಿನ ಈ ನಿಯಮ ಪಾಲಿಸಿದರೆ ಒಡೆದ ಹಿಮ್ಮಡಿ ಬೇಗ ಗುಣಹೊಂದುತ್ತದೆ. 5. ಶೂ ಧರಿಸಿ: ನಿಮ್ಮ ಪಾದಗಳಲ್ಲಿ ತೇವಾಂಶವಿರುವಂತೆ ನೋಡಿಕೊಂಡು ಹಿಮ್ಮಡಿ ಒಡೆಯದಂತಿರಲು ಶೂ ಧರಿಸಿದರೆ ತುಂಬಾ ಉಪಯುಕ್ತ. 6. ನೀರು ಕುಡಿಯಿರಿ: ತುಂಬಾ ಚೆನ್ನಾಗಿ ನೀರು ಕುಡಿದರೆ ದೇಹದೊಂದಿಗೆ ಪಾದವನ್ನೂ ತಣ್ಣಗಿಡುತ್ತದೆ. ಇದು ಹಿಮ್ಮಡಿ ಒಡೆಯದಂತೆ ಒಳಗಿನಿಂದ ರಕ್ಷಣೆ ನೀಡುತ್ತದೆ. 7. ಬಾಳೆಯೊಂದಿಗೆ ಗ್ಲಿಸರಿನ್: ಚೆನ್ನಾಗಿ ಕಳಿತ ಬಾಳೆ ಹಣ್ಣಿಗೆ ಕೆಲವು ಹನಿ ಗ್ಲಿಸರಿನ್ ಬೆರೆಸಿ ಅದನ್ನು ಒಡೆದ ಪಾದಗಳಿಗೆ ಹಚ್ಚಿಕೊಂಡರೆ ಪಾದ ನುಣುಪಾಗಿ ಮಿರುಗುತ್ತದೆ. Topics: ಆರೋಗ್ಯ, ಕಾಲು, heel, foot, health English summary Cracked heels can be a major skin problem if not treated well. The deeper the cracks; the longer it will take to get healed so keep the feet moisturized specially in the winter time. Apart from applying moisturizer before going to bed here are tips to cure cracked heels. Take a look.

ಮಂಗಳವಾರ, ಏಪ್ರಿಲ್ 6, 2010

ನಿಮ್ಮ ದೇಹದ ಒಳಗಡೆ ಏನಿದೆ ನೋಡಿದ್ದೀರಾ?

ನಿಮ್ಮ ದೇಹದ ಒಳಗಡೆ ಏನಿದೆ ನೋಡಿದ್ದೀರಾ? ನಿಮ್ಮ ದೇಹದ ಒಳಗೆ ಎಷ್ಟು ಕೊಳಕು ತುಂಬಿದೆ ಅನ್ನೋದು ಗೊತ್ತಾ?






ನಿಮ್ಮ ದೇಹದ ಒಳಗಡೆ ಏನಿದೆ ನೋಡಿದ್ದೀರಾ? ನಿಮ್ಮ ದೇಹದ ಒಳಗೆ ಎಷ್ಟು ಕೊಳಕು ತುಂಬಿದೆ ಅನ್ನೋದು ಗೊತ್ತಾ?
ನೀವು ಬೆಳಿಗ್ಗೆ ಎದ್ದ ತಕ್ಷಣ ಹಲ್ಲು ಉಜ್ಜಿ, ಉಜ್ಜಿ ಉಜ್ಜುತ್ತೀರಾ. ಚೆನ್ನಾಗಿ ಸೋಪ್ ಹಾಕಿ ಸ್ನಾನ ಮಾಡುತ್ತೀರ, ದೇಹದ ಹೊರಗೆಲ್ಲಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದೀರಾ, ಅಲ್ಲವೇ? ಹಾಗೆಯೇ ನಿಮ್ಮ ದೇಹದ ಒಳಗೂ ಚೆನ್ನಾಗಿರುವಂತೆ ನೋಡಿಕೊಳ್ಳಬೇಕಲ್ಲವೇ? ಇದಕ್ಕಾಗಿ ಏನು ಮಾಡಬೇಕು ಎಂಬುದನ್ನು ಇಲ್ಲಿ ಸೂಕ್ಷ್ಮವಾಗಿ ಬರೆಯುತ್ತೇನೆ ಹಾಗು ನಿಮ್ಮ ದೊಡ್ಡ ಕರುಳಿನ ಒಳಗೆ ಎಷ್ಟೆಲ್ಲಾ ಪಾಚಿ ಕಟ್ಟಿಕೊಂಡಿದೆ ಎಂಬ ಚಿತ್ರಗಳನ್ನೂ ಇಲ್ಲಿ ಅಂಟಿಸುತ್ತೇನೆ.
ನೀವು ನಿಮ್ಮ ದೇಹವನ್ನು ಯಾವುದೇ ರೋಗ ಬರದಂತೆ ನೋಡಿಕೊಳ್ಳಬೇಕಾದರೆ ಅಥವಾ ರೋಗ ಬಂದಮೇಲೆ ಸರಿಪಡಿಸಿಕೊಳ್ಳಬೇಕಾದರೆ ಈ ಕೆಳಕಂಡ ಬ್ರಾನ್ ಗಳನ್ನು ನಿಮ್ಮ ನಿತ್ಯ ಊಟಗಳಲ್ಲಿ ಉಪಯೋಗಿಸುತ್ತಲೇ ಇದ್ದರೆ ಎಲ್ಲ ತರಹ ರೋಗಗಳು ಮಂಗಮಾಯವಾಗುತ್ತವೆ.
ಓಟ್ ಬ್ರಾನ್, ಗೋಧಿ ಬ್ರಾನ್, ರೈಸ್ ಬ್ರಾನ್, ಓಟ್ ಮೀಲ್ಸ್, ಬಾರ್ಲಿ ಬ್ರಾನ್, ಇತ್ಯಾದಿ ಉಪಯೋಗಿಸುತ್ತಲೇ ಇರಬೇಕು. ಪಾಲೀಶ್ ಮಾಡಿದ ಅಕ್ಕಿಯ ಅನ್ನವನ್ನು ತಿನ್ನುವವರು, ಜಂಕ್ ತಿಂಡಿಗಳನ್ನು ತಿನ್ನುವವರು, ಮೈದಾದಲ್ಲಿ ಮಾಡಿರುವ ತಿಂಡಿಗಳನ್ನು ತಿನ್ನುವವರು, ಕುರುಕು ತಿಂಡಿಗಳನ್ನು ತಿನ್ನುವವರು ಈ ಮೇಲೆ ಹೇಳಿದ ಬ್ರಾನ್ ಗಳನ್ನು ದಿನ ನಿತ್ಯ ಉಪಯೋಗಿಸುತ್ತಿದ್ದರೆ ಅನುಕೂಲವಾಗುತ್ತದೆ. ಆದರೆ ಪ್ರತಿದಿನವೂ ಈ ಮೇಲಿನ ತಿಂಡಿಗಳನ್ನು ತಿಂದು ಬ್ರಾನ್ ಉಪಯೋಗಿಸುತ್ತಿದ್ದರೂ ಸಹಾ ಏನೂ ಪ್ರಯೋಜನ ಆಗುವುದಿಲ್ಲ. ಇದಲ್ಲದೆ ವಾತಾವರಣದಿಂದ, ಹೊರಗಿನ ಕೆಮಿಕಲ್ ಹೊಗೆಗಳಿಂದಲೂ ಈ ಕೆಟ್ಟ ಪಾಚಿಗಳೂ ನಮ್ಮ ಕರುಳಿನಲ್ಲಿ ಶೇಖರವಾಗಿ ತುಂಬಾ ತೊಂದರೆ ಅನುಭವಿಸಬೇಕಾಗಿ ಬರುತ್ತದೆ.

ಬುಧವಾರ, ಸೆಪ್ಟೆಂಬರ್ 17, 2008

ಮನೆಯಲ್ಲೇ ಮೊಡವೆಗಳಿಗೆ ಔಷಧಿ

೧. ಮೆಣಸನ್ನು ನೀರಿನಲ್ಲಿ ತೇಯ್ದು ಮೊಡವೆಗಳಿಗೆ ಹಚ್ಚುತ್ತಾ ಬಂದರೆ ಕೆಲವೇ ದಿನಗಳಲ್ಲಿ ಮೊಡವೆಗಳು ಮುಖದಲ್ಲಿ ಇಲ್ಲದಂತಾಗುವುದು.
೨. ಕೊತ್ತಂಬರಿಸೊಪ್ಪಿನ ರಸದೊಂದಿಗೆ ನಿಂಬೆರಸ ಮಿಶ್ರ ಮಾಡಿ, ಕ್ರಮವಾಗಿ ಹಚ್ಚುತ್ತಿದ್ದರೆ ಮೊಡವೆ ಹಾಗೂ ಚರ್ಮದ ಮೇಲಿನ ಕಲೆಗಳು ಕಣ್ಮರೆ ಆಗುವುವು.
೩. ಬಾದಾಮಿ ಬೀಜಗಳನ್ನು ಶುದ್ಧವಾದ ಹಸುವಿನ ಹಾಲಿನಲ್ಲಿ ಅರೆದು, ಹತ್ತಿಯೊಂದಿಗೆ ಆ ಮಿಶ್ರಣವನ್ನು ಅದ್ದಿ ಮೊಡವೆಯ ಮೇಲೆ ಸವರುತ್ತಿದ್ದರೆ ಮೊಡವೆಯ ಗುರುತು ಮಾಯವಾಗುವುದು.
೪. ಸೇಬಿನ ಹಾಗೂ ನಿಂಬೆಯ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ ನುಣ್ಣಗೆ ಅರೆದು ಪುಡಿ ಮಾಡಿ ಚೂರ್ಣವನ್ನು ಹಾಲಿನಲ್ಲಿ ಬೆರೆಸಿ ಮೊಡವೆಗಳಿಗೆ ಹಚ್ಚಿದರೆ ಶೀಘ್ಹ್ರದಲ್ಲಿಯೇ ಮೊಡವೆಯ ಗುಳ್ಳೆ ಕರಗುವುದು.
೫. ಸೇಬಿನ ತಿರುಳನ್ನು ಅರೆದು ಮುಖಕ್ಕೆ ಲೇಪಿಸಿಕೊಳ್ಳುವುದರಿಂದ ವಾರದ ಒಳಗಾಗಿ ಮೊಡವೆ ಗುಳ್ಳೆಗಳು ಮಾಯ ಆಗುವುವು. ಜೊತೆಗೆ ಮುಖ ಕಾಂತಿ ಹೆಚ್ಚುವುದು.
೬. ಎಳೆನೀರಿನಲ್ಲಿ ಕೆಲವು ವಾರ ಮುಖ ತೊಳೆಯುತ್ತಿದ್ದರೆ ಮೊಡವೆಗಳು ಮಾಗುತ್ತವೆ. ಮುಖದ ಮೇಲೆ ಕಪ್ಪು ಕಲೆಗಳಿದ್ದರೆ ಮಾಯ ಆಗುವುವು. ಮುಖದ ಮೇಲೆ ಹೊಳಪು ಹೆಚ್ಚುವುದು.
೭. ಕಿತ್ತಲೆ ಸಿಪ್ಪೆಯನ್ನು ಮುಖದಮೇಲೆ ಉಜ್ಜುತ್ತಿದ್ದರೆ ಅದರಿಂದ ಸುವಾಸನೆಯ ದ್ರವ ಹೊರಬಂದು ಮೊಡವೆ ಗುಳ್ಳೆಗಳು ಒಣಗುವುವು.
೮. ನಿಂಬೇರಸದಲ್ಲಿ ದಾಲ್ಚಿನ್ನಿಯನ್ನು ತೇಯ್ದು ಮೊಡವೆಗಳಿಗೆ ಹಚ್ಚಿದರೆ ಬೇಗ ಒಣಗುವುವು.
೯. ಗರಿಕೆ ಹುಲ್ಲಿನ ರಸವನ್ನು ಮುಖದಮೇಲೆ ಲೇಪಿಸುವುದರಿಂದ ಮೊಡವೆಗಳು ಮಾಗುವುವು.
೧೦. ಹಿಂಗನ್ನು ನೀರಿನಲ್ಲಿ ತೇಯ್ದು ಮೊಡವೆಗಳಿಗೆ ಹಚ್ಚುತ್ತಿದ್ದರೂ ಸಹಾ ಮೊಡವೆ ಗುಳ್ಳೆಗಳು ಮುಖದ ಮೇಲೆ ಕಾಣದಂತಾಗುವುದು.

ಇದಕ್ಕಿಂತ ಮುಖ್ಯವಾಗಿ ಈ ಯಾವುದೇ ಚರ್ಮ ರೋಗಗಳು ಬರುವುದು ಹೊಟ್ಟೆಯೊಳಗಿಂದ. ಹೊಟ್ಟೆ ಶುದ್ಧ ಆಗಿದ್ದರೆ ಯಾವುದೇ ತರಹದ ಚರ್ಮ ರೋಗಗಳು ಬರುವುದಿಲ್ಲ. ಇದಕ್ಕಾಗಿ ತಿಂಗಳಿಗೆ ಒಂದು ಸಲ ಭೇದಿ ಮಾತ್ರೆಯನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದ ಪಕ್ಷದಲ್ಲಿ ಹೊಟ್ಟುಳ್ಳ ಧಾನ್ಯಗಳನ್ನು ಸೇವಿಸಬೇಕು. ನಮ್ಮ ದೇಹವೂ ಸಹಾ ನಮ್ಮ ಮನೆಯಲ್ಲಿರುವ ಚರಂಡಿಯಂತೆ. ಮನೆಯಲ್ಲಿರುವ ಚರಂಡಿಗೆ ಏನೇನೊ ಹಾಕಿದರೆ ಹೇಗೆ ಮನೆಯೆಲ್ಲಾ ಹಾಳಾಗುತ್ತದೋ, ಅದೇ ರೀತಿ ನಮ್ಮ ದೇಹದ ಚರಂಡಿ ಕೂಡ. ಎಣ್ಣೆಯಲ್ಲಿ ಕರಿದ ತಿಂಡಿಗಳು, ಮೈದಾ ಹಿಟ್ಟಿನಿಂದ ಮಾಡಿದ ಸಿಹಿ ತಿಂಡಿಗಳು ಮತ್ತು ಕರಿದ ತಿಂಡಿಗಳು, ಮೈದಾ ದೋಸೆ, ಮೈದಾ ಬ್ರೆಡ್ ಇತ್ಯಾದಿಗಳನ್ನು ತಿಂದರೆ ಹೊರಗಿನ ಯಾವ ಔಷಢಿಗಳಿಗೂ ಈ ರೋಗಗಳು ವಾಸಿಯಾಗುವುದಿಲ್ಲ. ವೃಥಾ ಹಣ ಪೋಲು.