ಭಾನುವಾರ, ಆಗಸ್ಟ್ 12, 2007

ನಿಮ್ಮ ರಕ್ತನಾಳಗಳು

ನಿಮ್ಮ ರಕ್ತನಾಳಗಳು

ನಿಮ್ಮ ರಕ್ತನಾಳಗಳನ್ನು ಶುಧ್ಹವಾಗಿಟ್ಟುಕೊಳ್ಳಿ. ಅಂದರೆ ನಿಮ್ಮ ದೊಡ್ಡ ಕರುಳನ್ನು ಶುದ್ಧವಾಗಿಟ್ಟುಕೊಂಡರೆ ನಿಮ್ಮ ರಕ್ತನಾಳಗಳೂ ಸಹಾ ಶುದ್ಧವಾಗಿರುತ್ತದೆ. ಇದಕ್ಕಾಗಿ ನೀವುಗಳು ಹೊಟ್ಟಿನಿಂದ ಕೂಡಿದ ಕೆಂಪು ಅಕ್ಕಿ, ಹೊಟ್ಟಿನಿಂದ ಕೂಡಿದ ಎಲ್ಲ ತರಹದ ಧಾನ್ಯಗಳು, ಸಿಪ್ಪೆ ಸಮೇತವಾಗಿ ತಿನ್ನುವಂಥ ಹಣ್ಣುಗಳು ಮತ್ತು ಸಿಪ್ಪೆ ಸಮೇತವಾಗಿ ತಿನ್ನುವ ತರಕಾರಿಗಳನ್ನು ಊಟಮಾಡಿ. ಎಲ್ಲ ಹಣ್ಣುಗಳಲ್ಲಿರುವ ಸಿಪ್ಪೆಯಲ್ಲಿ ಹೇರಳವಾಗಿ ನಾರಿನ ಅಂಶ ಇರುತ್ತದೆ. ಕೆಲವು ತರಕಾರಿಗಳಲ್ಲಿ ಹೇರಳವಾದ ನಾರಿನ ಅಂಶವು ಇರುತ್ತದೆ. ಈ ತರಹದ ಊಟವನ್ನು ಮಾಡುವುದರಿಂದ ದೊಡ್ಡ ಕರುಳು ಶುದ್ಧವಾಗಿರುತ್ತದೆ. ಆಗ ನಿಮ್ಮ ರಕ್ತನಾಳಗಳೂ ಸಹಾ ಶುದ್ಧವಾಗಿರುತ್ತದೆ. ನಿಮ್ಮ ಹತ್ತಿರಕ್ಕೆ ಯಾವುದೇ ತರಹದ ರೋಗಗಳು ಹತ್ತಿರ ಸುಳಿಯಲಾರವು. ದೇಹ ಮತ್ತು ಮನಸ್ಸು ಸಹಾ ಶುದ್ಧವಾಗಿರುತ್ತದೆ, ಚಟುವಟಿಕೆಯಿಂದ ಕೂಡಿರುತ್ತದೆ ಮತ್ತು ಆನಂದಮಯವಾಗಿರುತ್ತದೆ.

ಪಾಲೀಶ್ ಮಾಡಿದ ಅಕ್ಕಿ "ಆಸಿಡ್" ಮಯ.

ಪಾಲೀಶ್ ಮಾಡಿದ ಅಕ್ಕಿ "ಆಸಿಡ್" ಮಯ.

ಪ್ರಕೃತಿ ನಮಗೆಲ್ಲ ಜನ್ಮ ಕೊಟ್ಟಿರುವುದು ನಮಗೆಲ್ಲಾ ತಿಳಿದೇ ಇದೆ. ಪ್ರಕೃತಿ ನಮಗೆ ಏನೇನು ಆಹಾರಗಳನ್ನು ಕೊಟ್ಟಿದೆಯೋ ಅದನ್ನೆಲ್ಲಾ ಸಂಸ್ಕರಿಸದೆ ಅದು ಕೊಟ್ಟಿರುವ ರೂಪದಲ್ಲೇ ಅಂದರೆ ಉದಾಹರಣೆಗೆ: ಅಕ್ಕಿಯನ್ನು ಅದರ ಮೇಲಿನ ಭತ್ತವನ್ನು ಮಾತ್ರ ತೆಗೆದು ಬರುವ
ಪೂರ್ಣಧಾನ್ಯವನ್ನು ಊಟ ಮಾಡಿದರೆ ಸಂಪೂರ್ಣ ಆರ್‍ಓಗ್ಯವು ಲಭಿಸುವುದು. ನಾವು ಊಟ ಮಾಡುವುದು ಏತಕ್ಕಾಗಿ? ನಾವು ಊಟ ಮಾಡುವುದು ಶಕ್ತಿ ಬರುವುದಕ್ಕೋ ಅಥವ ಖಾಯಿಲೆ ಬರಿಸಿಕೊಳ್ಳಲಿಕ್ಕೋ? ಆಸಿಡ್ ಇರುವ ಪಾಲೀಶ್ ಮಾಡಿದ ಅಕ್ಕಿಯನ್ನು ಊಟ ಮಾಡುವುದರಿಂದ ಏನು ಪ್ರಯೋಜನ? ಪಾಲೀಶ್ ಮಾಡಿದ ಅಕ್ಕಿಯನ್ನು ಊಟ ಮಾಡುವುದರಿಂದ "ಆಸಿಡಿಟಿ" ಎಂಬ ರೋಗವು ಬರುವುದು. ಈ ಆಸಿಡಿಟಿ ಎಂಬ ರೋಗದಿಂದ ಬಳಲುವವರು ಯಾವಾಗಲೂ ಸಿಟ್ಟು, ಸೆಡವು, ಕೋಪ, ಮಾನಸಿಕ ಖಿನ್ನತೆ, ಆಸಿಡಿಕ್ ಬ್ಲಡ್,
ಅರ್ಧ, ಅರ್ಧ ಗಂಟೆಗೆ ಒಂದು ಸಲ ಏನಾದರೂ ತಿನ್ನುತ್ತಲೇ ಇರುತ್ತಾರೆ. ಆಸಿಡಿಟಿ ಇಂದ ಬಳಲುವವರು ನೂರಾರು "ಡೈಝೀನ್" ಮತ್ತು "ಜೆಲ್ಯೂಸಿಲ್" ಎಂಬ ಮಾತ್ರೆಗಳನ್ನು ನುಂಗುತ್ತಿರುತ್ತಾರೆ. ಇದಲ್ಲದೆ ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ಮತ್ತು ಸಿಹಿ ತಿಂಡಿಗಳನ್ನು ವಿಪರೀತವಾಗಿ ತಿನ್ನುತ್ತಾರೆ. ಈ ಮೇಲೆ ಹೇಳಿರುವ ಪಧಾರ್ಥಗಳಿಂದ ದೇಹವು ರಾಸಾಯಿನಿಕ ಗುಡಾಣ ಆಗುತ್ತದೆ. ಆಹಾರದಿಂದಲೇ ಎಲ್ಲ ತರಹ ದೇಹದ ತೊಂದರೆಗಳನ್ನು ೧೦೦ ಕ್ಕೆ ೧೦೦ ರಷ್ಟು ವಾಸಿಮಾಡಿಕ್ಕೊಳ್ಳಬಹುದು. ಈಗಿರುವ ಆಧುನಿಕ ಖಾಯಿಲೆಗಳು ಆಸಿಡಿಟಿ ಎಂಬುದರಿಂದಲೇ ಉತ್ಪನ್ನವಾಗುತ್ತಿವೆ. ಇದರಿಂದ ದೇಹದಲ್ಲಿ ಕೊಲೆಸ್ಟರಾಲ್, ಬೀ. ಪಿ, ಸಕ್ಕರೆ ಖಾಯಿಲೆ, ಹಾರ್ಟ್ ಟ್ರಬಲ್, ಕ್ಯಾನ್ಸರ್, ಇತ್ಯಾದಿ ರೋಗಗಳು ಕಾಣಿಸಿಕೊಳ್ಳುತ್ತವೆ. ನಂತರ ಔಷಧಿಗಳ ಸೇವನೆ. ನಂತರ ಆಸ್ಪತ್ರೆಗೋ, ನರ್ಸಿಂಗ್ ಹೋಂಗೋ ದಾಖಲಾತಿ ಆಗಬೇಕಾಗುತ್ತದೆ. ಅಲ್ಲಿ ವಿಷಯುಕ್ತ ಔಷಧಗಳ ಸೇವನೆ ಪ್ರಾರಂಭ. ಆಹಾರಕ್ಕಿಂತ ಔಷಧಗಳೇ ಜಾಸ್ತಿಯಾಗುತ್ತದೆ.
ಪ್ರಕೃತಿ ಕೊಟ್ಟಿರುವ ಕೆಂಪು ಅಕ್ಕಿಯನ್ನು ಪಾಲೀಶ್ ಮಾಡದೇ ಸೇವಿಸಿದರೆ ಶೇ. ೧೦೦ ಕ್ಕೆ ೧೦೦ ರಷ್ಟು ಆರೋಗ್ಯವು ಲಭಿಸುವುದು. ಇಂದೇ ಕೆಂಪು ಅಕ್ಕಿಯ ಸೇವನೆಯನ್ನು ಆರಂಭಿಸಿರಿ. ಜೀವನವನ್ನು ಆನಂದದಿಂದ ಕಳೆಯಿರಿ. ಇದನ್ನು ಉಪಯೋಗಿಸುವುದರಿಂದ ನಿಮಗೆ ಬೇರೆ ತಿಂಡಿಗಳನ್ನು ತಿನ್ನಲು ಮನಸ್ಸೇ ಬರುವುದಿಲ್ಲ. ಇದಲ್ಲದೇ ಹೊಟ್ಟೆಯು ಯಾವಾಗಲೂ ತಂಪಾಗಿರುತ್ತದೆ, ಹೊಟ್ಟೆಯು ಹಗುರವಾಗಿರುತ್ತದೆ, ಹೊಟ್ಟೆ ಭಾರವಾಗುವುದಿಲ್ಲ, ಆತಂಕ, ಭಯ, ಮಾನಸಿಕ ಖಿನ್ನತೆ, ಹೊಟ್ಟೆಯಲ್ಲಿನ ಸಂಕಟ ಇಲ್ಲವಾಗುತ್ತದೆ, ಮನಸ್ಸು ಆಹ್ಲಾದವಾಗಿರುತ್ತದೆ, ಮಲವಿಸರ್ಜನೆ ತುಂಬಾ ಚೆನ್ನಾಗಿ ಆಗಿ ಕರುಳಿನ ಒಳಗಡೆ ಕಟ್ಟಿಕೊಂಡಿರುವ ಅತ್ಯಂತ ಕಟ್ಟಕಡೆಯ ಪಾಚಿಯೂ ಸಹ ಕೊಚ್ಕೊಂಡು ಹೋಗುತ್ತದೆ. ಕೆಂಪು ಅಕ್ಕಿಗೆ - ಕೆಂಪು ಮುಂಡಗ ಅಥವಾ ಕಜ್ಜಾಯ ಅಕ್ಕಿ ಎಂದೂ ಕರೆಯುತ್ತಾರೆ.

rice bran


rice bran


rice bran

ಹೊಟ್ಟು(ಫೈಬರ್)

ಹೊಟ್ಟು(ಫೈಬರ್)(ಭಾಗ-೧)

ಹೊಟ್ಟು ಎಂದರೆ ಭತ್ತ ಮಾತ್ರ ತೆಗೆದ ತಕ್ಷಣ ಒಳಗಡೆ ಒಂದು ಕವಚವಿರುತ್ತದೆ. ಅದೇ ಮುಖ್ಯವಾದ ಹೊಟ್ಟು. ಆ ಕವಚವನ್ನು ತೆಗೆದು ತಿಂದರೆ ನಾನಾ ರೋಗಗಳು ಉಂಟಾಗುವುವು. ಈಗ ಹಾಲಿ ಸಿಕ್ಕುತ್ತಿರುವುದೆಲ್ಲಾ ಆ ಕವಚ ತೆಗೆದಿರುವ ಅಕ್ಕಿಯೇ. ಆ ಕವಚಕ್ಕೆ ಇಂಗ್ಲೀಷಿನಲ್ಲಿ ಕರ್ನಲ್ ಎಂದೂ ಕರೆಯುತ್ತಾರೆ. ಹೊಟ್ಟು ತಿನ್ನುವವರು ೧೦೦ ರಿಂದ ೧೨೦ ವರ್ಷಗಳವರೆಗೂ ಯಾವುದೇ ರೋಗ ರುಜಿನಗಳಿಲ್ಲದೆ ಸಂತೋಷವಾಗಿ ಬಾಳಬಹುದು. ಎಲ್ಲಾ ಧಾನ್ಯಗಳಲ್ಲೂ ಹೊಟ್ಟು ಇರುತ್ತದೆ. ಹೊಟ್ಟು ದೇಹಕ್ಕೆ ಬಹಳ ಅತ್ಯಗತ್ಯ ವಸ್ತುವಾಗಿರುತ್ತದೆ. ಈ ಹೊಟ್ಟಿನಲ್ಲಿ ಬೇಕಾದಷ್ಟು ಪೌಷ್ಟಿಕಾಂಶ ಇರುತ್ತದೆ. ಹೊರಗಡೆ ಯಾವುದೇ ಔಷಧಿಗಳಲ್ಲಿ ಅಥವಾ ಲೇಹಗಳಲ್ಲಿ ಸಿಗದೇಇರುವ ಪೌಷ್ಟಿಕಾಂಶಗಳು ಈ ಹೊಟ್ಟಿನಲ್ಲಿ ಇರುತ್ತವೆ. ಕೆಂಪು ಅಕ್ಕಿಯ ಹೊಟ್ಟೇ ಅತ್ಯಂತ ಶಕ್ತಿದಾಯಕ ಮತು ತಂಪುಕಾರಕ ಗುಣವನ್ನು ಹೊಂದಿರುವಂಥಾದ್ದು. ಕೆಂಪು ಅಕ್ಕಿಯ ಹೊಟ್ಟಿನಲ್ಲಿ ರೈಸ್ ಬ್ರಾನ್ ಆಯಿಲ್ ತಯಾರುಮಾಡುತ್ತಾರೆ. ಇದಕ್ಕೆ ಹಾರ್ಟ್ ಆಯಿಲ್ ಎಂದೂ ಕರೆಯುತ್ತಾರೆ. ಇದನ್ನು ದೇಶವಿದೇಶಗಳಲ್ಲಿ ಹಾರ್ಟ್ ಅಟ್ಯಾಕ್ ಆಗದಿರಲಿ ಎಂದು ಡಾಕ್ಟರರು ಶಿಫಾರಸು ಮಾಡುತ್ತಾರೆ. ಗೋಧಿಯ ಹೊಟ್ಟು ಉಷ್ಣವನ್ನುಂಟು ಮಾಡುತ್ತದೆ. ಕೆಂಪು ಅಕ್ಕಿ ಮತ್ತು ರಾಗಿ ಮಾತ್ರ ದೇಹಕ್ಕೆ ತಂಪನ್ನು ಉಂಟುಮಾಡುತ್ತದೆ ಮತ್ತು ಇಡೀ ದಿನ ದೇಹ ಮತ್ತು ಮನಸ್ಸನ್ನು ಚುರುಕಾಗಿಟ್ಟಿರುತ್ತದೆ. ಕೆಂಪು ಅಕ್ಕಿ, ಗೋಧಿ, ರಾಗಿ ಮತ್ತು ಎಲ್ಲ ಧಾನ್ಯಗಳಲ್ಲಿ ಈ ಹೊಟ್ಟು ಬೇಕಾದಷ್ಟು ಇರುತ್ತದೆ. ನೀವು ಎಷ್ಟು ಸಲ ತಿಂಡಿ, ಊಟ ಮಾಡುತ್ತೀರೋ ಅಷ್ಟು ಸಲವೂ ಹೊಟ್ಟಿನಿಂದ ಕೂಡಿದ ಆಹಾರವನ್ನೇ ತಿನ್ನಿ. ಇದು ನಿಮ್ಮನ್ನು ೧೦೦ ಕ್ಕೆ ೧೦೦ ರಷ್ಟು ಆರೋಗ್ಯವನ್ನು ಕೊಡುತ್ತದೆ. ಇಡೀ ದಿನ ದೇಹ ಮತ್ತು ಮನಸ್ಸು ಉಲ್ಲಾಸಮಯವಾಗಿರುತ್ತದೆ. ಸ್ವಲ್ಪವೂ ಸಂಕಟವಾಗುವುದಿಲ್ಲ, ಗ್ಯಾಸ್ ಆಗುವುದಿಲ್ಲ, ಗ್ಯಾಸ್ಟ್ರ್‍ಐಟಿಸ್ ಆಗುವುದಿಲ್ಲ, ಹೊಟ್ಟೆ ಭಾರವಾಗುವುದಿಲ್ಲ, ಹೊಟ್ಟೆಯು ಮಲ್ಲಿಗೆ ಹೂವಿನಂತಿರುತ್ತದೆ, ರಾತ್ರಿ ಹೊತ್ತು ಚೆನ್ನಾಗಿ ನಿದ್ರೆ ಬರುತ್ತದೆ, ಮಲಬದ್ಧತೆಯ ಸುಳಿವೇ ಇರುವುದಿಲ್ಲ, ಕರುಳಿನಲ್ಲಿ ಕಟ್ಟಿಕೊಂಡಿರುವ ಅತ್ಯಂತ ಕಟ್ಟಕಡೆ ಪಾಚಿಯೂ ಸಹ ಕೊಚ್ಚಿಕೊಂಡು ಹೊರಟುಹೋಗುತ್ತದೆ. ಮಲವಿಸರ್ಜನೆಯ ನಂತರ ಮನಸ್ಸು ಆನಂದಮಯವಾಗುತ್ತದೆ.

ಹೊಟ್ಟು(ಬ್ರಾನ್)-ಭಾಗ-೨
ಹೊಟ್ಟು (ಬ್ರಾನ್ ಅಥವ ಕರ್ನಲ್) ಇರುವ ಕೆಂಪು ಅಕ್ಕಿ ಸಿಗದೇಇದ್ದಲ್ಲಿ ಫುಡ್ ವರ್ಲ್ಡ್ ಅಥವಾ ದೊಡ್ಡ ಡಿಪಾರ್ಟ್ ಮೆಂಟ್ ಸ್ಟೋರ್ಸ್ ಗಳಲ್ಲಿ ಸಿಗುವ ಸೀರಿಯಲ್(ಧಾನ್ಯಗಳ) ಮತ್ತು ಗೋಧಿಯ ಹೊಟ್ಟು ಸಿಗುತ್ತದೆ. ಇದನ್ನು ಪ್ರತಿದಿನದ ತಿಂಡಿ, ಊಟಗಳ ಜೊತೆಗೆ ಅಥವಾ ಊಟದ ನಂತರ ೩ ರಿಂದ ೬ ಟೀ ಚಮಚದವರೆಗೆ ನೀರಿನಲ್ಲಿ ಮಿಕ್ಸ್ ಮಾಡಿ ಕುಡಿದು ಮೇಲೆ ಒಂದು ದೊಡ್ಡ ಗ್ಲಾಸ್ ನೀರು ಕುಡಿಯಿರಿ. ಅದರ ಆನಂದವನ್ನು ಸ್ವಲ್ಪ ಹೊತ್ತಿನಮೇಲೆ ಅನುಭವಿಸಿರಿ. ಇದಲ್ಲದೆ ಜ್ಯೂಸ್, ಕುದಿಸಿದ ನೀರು, ಹಾಲು, ಮೊಸರು, ಉಪ್ಪಿಟ್ಟು, ಒಗ್ಗರಣೆ ಅವಲಕ್ಕಿ, ಚಿತ್ರಾನ್ನ, ಪಾಯಸ, ಯಾವುದೇ ರೀತಿಯ ಭಾತ್ ಗಳು, ರಾಯತ ಇತ್ಯಾದಿಗಳಿಗೆ ಮಿಕ್ಸ್ ಮಾಡಿ ಉಪಯೋಗಿಸಿ. ಹೊಟ್ಟಿಲ್ಲದೆ ಒಂದು ತುತ್ತನ್ನೂ ತಿನ್ನಬೇಡಿ. ಹೊಟ್ಟು ಜೀವರಕ್ಷಕ ಔಷಧಿಯಾಗಿರುತ್ತದೆ, ಮಲಬದ್ಧತೆಗೆ ಒಳ್ಳೇ ಪ್ರಾಕೃತಿಕ ಆಹಾರ. ನಿಮ್ಮ ದೇಹದಲ್ಲಿರುವ ಎಲ್ಲ ತರಹದ ವಿಷಪದಾರ್ಥಗಳನ್ನು ಹೊಡೆದೋಡಿಸುತ್ತದೆ. ನಿಮ್ಮ ದೇಹಕ್ಕೆ ಅತ್ಯಧಿಕ ಶಕ್ತಿಯನ್ನೂ ಸಹಾ ಕೊಡುತ್ತದೆ. ಹೊಟ್ಟುಳ್ಳ ಪದಾರ್ಥಗಳನ್ನು ಸೇವಿಸುತ್ತಿದ್ದರೆ ಯಾವುದೇ ರೋಗವಿಲ್ಲದೇ ೧೦೦ ರಿಂದ ೧೨೦ ವರ್ಷ ಬಾಳಬಹುದು. ಈಗ ನಾನಾ ರೀತಿಯ ರೋಗ ರುಜಿನಗಳಿಂದ ನರಳುತ್ತಿರುವವರೂ ಸಹಾ ಇದರ ಉಪಯೋಗ ಪಡೆದು ಆರೋಗ್ಯವನ್ನು ಸಂಪಾದಿಸಬಹುದು. ಹೊಟ್ಟು "ಅತ್ಯಾಶ್ಚರ್ಯಕರ ಆಹಾರ", ಅತ್ಯಾಶ್ಚರ್ಯಕರ ಶಕ್ತಿವರ್ಧಕ", "ಅತ್ಯಾಶ್ಚರ್ಯಕರ ಔಷಧಿ", "ಅತ್ಯಾಶ್ಚರ್ಯಕರ ಮಲವಿಸರ್ಜಕ".
ಇಂಥ ಅಮೂಲ್ಯವಾದ ಹೊಟ್ಟನ್ನು ಪ್ರಾಕೃತಿಕವಾಗಿ ’ದೇವರು’ ಸಮಸ್ತ ಜನಕೋಟಿಗೆಲ್ಲಾ ಅರ್ಪಿಸಿದ್ದಾನೆ. ಇಂಥ ಹೊಟ್ಟನ್ನು ಸೇವಿಸಿ ಅತ್ಯಾನಂದವಾದ ಆರೋಗ್ಯವನ್ನು ಪಡೆಯಿರಿ. ದೇವರು ನಿಮಗೆಲ್ಲಾ ಬೇಗ ಒಳ್ಳೆಯದನ್ನು ಮಾಡಲೆಂದು ಹಾರೈಸುತ್ತೇನೆ.

ಭತ್ತ ಮಾತ್ರ ತೆಗೆದಿರುವ ಕೆಂಪು ಅಕ್ಕಿ

ಭತ್ತ ಮಾತ್ರ ತೆಗೆದಿರುವ ಕೆಂಪು ಅಕ್ಕಿ

ಭತ್ತ ಮಾತ್ರ ತೆಗೆದಿರುವ ಕೆಂಪು ಅಕ್ಕಿಯನ್ನೇ ಯಾವಾಗಲೂ ಊಟಕ್ಕೆ ಉಪಯೋಗಿಸಿ ಆನಂದವನ್ನು ಪಡೆಯಿರಿ. ಈ ಅಕ್ಕಿಗೆ ಆಡು ಭಾಷೆಯಲ್ಲಿ ಕೆಂಪು ಮುಂಡಗ ಅಕ್ಕಿ ಅಥವಾ ಕಜ್ಜಾಯ ಅಕ್ಕಿ ಎಂದೂ ಕರೆಯುತ್ತಾರೆ. ಈ ಅಕ್ಕಿಯಲ್ಲಿ ಬೇಕಾದಷ್ಟು ಪೌಷ್ಟಿಕಾಂಶಗಳು ಇವೆ. ಹೊರಗಡೆ ಯಾವುದೇ ಅಂಗಡಿಯಲ್ಲಿ ಇದು ದೊರಕುವಂತಾದ್ದಲ್ಲ. ಕೋಟಿ ರೂಪಾಯಿಗಳನ್ನು ಕೊಟ್ಟರೂ ಸಿಗುವುದಿಲ್ಲ. ಊಟ ಮಾಡುತ್ತಿರುವಾಗಲೇ ಈ ಪೌಷ್ಟಿಕಾಂಶಗಳು ದೇಹದಲ್ಲಿರುವ ಎಲ್ಲ ಕಸಕಡ್ಡಿಗಳನ್ನೂ, ಅತಿಯಾದ ವಾತ ಪಿತ್ತ ಕಫಗಳನ್ನೂ, ಯಾವುದೇ ರೀತಿಯ ಬೆನ್ನುನೋವು, ತಲೆನೋವು, ಸೊಂಟನೋವು, ಕಾಲುನೋವು, ತಲೆಭಾರ, ನಿದ್ರೆ ಸರಿಯಾಗಿ ಬಾರದಿರುವುದು, ಕೊಲೆಸ್ಟರಾಲನ್ನು ಪೂರ್ತಿಯಾಗಿ ಕರಗಿಸುವುದು. ಮುಂದೆ ಎಂದೆಂದಿಗೂ ಕೊಲೆಸ್ಟರಾಲ್ ದೇಹದಲ್ಲಿ ಸೇರಲು ಅವಕಾಶ ಕೊಡುವುದಿಲ್ಲ, ಬ್ಲಡ್ ಶುಗರನ್ನು ೧೦೦ ಕ್ಕೆ ೧೦೦ ರಷ್ಟು ಕಡಿಮೆಮಾಡುವುದು. ಇದನ್ನೆಲ್ಲ ವಿಜ್ನಾನಿಗಳು ದೃಡಪಡಿಸಿದ್ದಾರೆ. ಮನೆಯಲ್ಲಿ ಪಿ.ಸಿ. ಇದ್ದು ಇಂಟರ್ನೆಟ್ ಹಾಕಿಸಿಕೊಂಡಿರುವವರು ಗೂಗಲ್ ನಲ್ಲಿ ಜಾಲಾಡಿನೋಡಿ. ಈ ಕಜ್ಜಾಯ ಅಕ್ಕಿಗೆ ೧೦೦ ಕ್ಕೆ ೧೦೦ ರಷ್ಟು ಕ್ಯಾನ್ಸರ್ ವಾಸಿಮಾಡುವ ಶಕ್ತಿ ಇದೆ.

ಇದಲ್ಲದೆ ಆಸಿಡಿಟಿ, ಗ್ಯಾಸ್ಟ್ರೈಟಿಸ್, ಬೊಜ್ಜು ಈ ಎಲ್ಲವೂ ೧೦೦% ವಾಸಿಯಾಗುತ್ತದೆ. ಇದಲ್ಲದೇ ಮುಖವೂ ಕಾಂತಿಯುಕ್ತವಾಗುತ್ತದೆ. ಕಣ್ಣುಗಳು ಮಿನುಗುತ್ತವೆ. ಚಟುವಟಿಕೆ ಜಾಸ್ತಿಯಾಗುತ್ತದೆ. ಊಟ ಮಾಡಿದ ತಕ್ಷಣ ಹೊಟ್ಟೆ ಭಾರವಾಗುವುದಿಲ್ಲ. ಬ್ಲೋಟಿಂಗ್ ಅನುಭವ ಇರುವುದಿಲ್ಲ. ಹೊಟ್ಟೆಯಲ್ಲಿ ಸಂಕಟವಾಗುವುದೂ ನಿಂತುಹೋಗುತ್ತದೆ. ಹೊಟ್ಟೆ ಯಾವಾಗಲೂ ತಂಪಾಗಿರುತ್ತದೆ. ಮಲಬದ್ದತೆ ನಿರ್ನಾಮವಾಗಿ ದೊಡ್ಡಕರುಳಿನಲ್ಲಿ ಕಟ್ಟಿಕೊಂಡಿರುವ ಅತ್ಯಂತ ಕಟ್ಟಕಡೆ ಪಾಚಿಯೂ ಸಹ ಕೊಚ್ಚಿಕೊಂಡು ಹೋಗುತ್ತದೆ. ಮಲವಿಸರ್ಜನೆಯ ಬಳಿಕ ದೇಹ ಮತ್ತು ಮನಸ್ಸು ಆನಂದಮಯವಾಗುತ್ತದೆ. ಪ್ರತಿದಿನ ಮಲವಿಸರ್ಜನೆಯ ನಂತರ ದೇಹ ಮತ್ತು ಮನಸ್ಸು ಹಗುರವಾಗಿ ಚಟುವಟಿಕೆಯಿಂದ ಕೂಡಿರುತ್ತದೆ. ಕೆಂಪು ಅಕ್ಕಿಯಲ್ಲಿರುವ ಅತ್ಯಂತ ಶಕ್ತಿ ಬೇರೆ ಯಾವುದೇ ಇಲ್ಲ ಎಂದು ಕಾಣಿಸುತ್ತದೆ. ಎಲ್ಲ ಧಾನ್ಯಗಳಿಗೂ ತನ್ನದೇ ಆದ ಶಕ್ತಿ ಇರುತ್ತದೆ. ಎಲ್ಲಾ ಕಾಲಕ್ಕೂ ಹೊಟ್ಟಿನಿಂದ ಕೂಡಿದ ಕೆಂಪು ಅಕ್ಕಿಯೇ ಸರ್ವಶ್ರೇಷ್ಟ ವಾದುದು.

ಬರೆದವರು : ಹೆಚ್.ಕೆ.ಸತ್ಯಪ್ರಕಾಶ್
೯೮೮೬೩ ೩೪೬೬೭

ಕೆಂಪು ಅಕ್ಕಿ(ಕಜ್ಜಾಯ ಅಕ್ಕಿ)

ಕೆಂಪು ಅಕ್ಕಿ(ಕಜ್ಜಾಯ ಅಕ್ಕಿ)

ಯಾವುದೇ ಔಷಧಿಗಳಿಂದ ವಾಸಿಯಾಗದ ಖಾಯಿಲೆಗಳು, ಹೊಟ್ಟಿನಿಂದ ಕೂಡಿದ ಕೆಂಪು ಅಕ್ಕಿಯಿಂದ ವಾಸಿಯಾಗುತ್ತದೆ, (ಅಂದರೆ ಭತ್ತ ಮಾತ್ರ ತೆಗೆದ ಕೆಂಪು ಅಕ್ಕಿ) ಅಲ್ಲದೆ ಅಧಿಕ ಪೌಷ್ಟಿಕಾಂಶಗಳೂ ದೊರೆತು ದೇಹ ಶಕ್ತಿಯುತವಾಗುತ್ತದೆ. ಕೆಂಪು ಅಕ್ಕಿಯ ವಿಶೇಷ ಏನೆಂದರೆ ನೀವು ಎಷ್ಟು ತಿನ್ನುತ್ತಿದ್ದರೂ ಹೊಟ್ಟೆ ತುಂಬುವುದೇ ಇಲ್ಲ. ತಿನ್ನಲು ತುಂಬಾ ತುಂಬಾ ರುಚಿಯಾಗಿರುತ್ತದೆ. ನಾವು ಊಟ ಮಾಡಿಯೇ ಇಲ್ಲವೇನೋ ಅನ್ನಿಸುತ್ತಿರುತ್ತದೆ. ಎಷ್ಟು ತಿಂದರೂ ಒಳಗಡೆ ಹೋಗುತ್ತಲೇ ಇರುತ್ತದೆ. ಹೊಟ್ಟೆ ಭಾರವೇ ಆಗುವುದಿಲ್ಲ. ಒಂದು ಸಲ ಊಟ ಮಾಡಿದರೆ ಸುಮಾರು ೬ ರಿಂದ ೮ ಗಂಟೆಗಳ ಕಾಲ ಆರಾಮವಾಗಿ ಇರಬಹುದು. ಏನೇನೂ ಸಂಕಟ ಆಗುವುದಿಲ್ಲ. ಹೊಟ್ಟೆ ತಂಪಾಗಿರುತ್ತದೆ. ಸುಸ್ತು ಕೂಡ ಆಗುವುದಿಲ್ಲ. ಇಡೀ ದಿನ ದೇಹ ಮತ್ತು ಮನಸ್ಸು ಆನಂದಮಯವಾಗಿರುವುದು. ಇದೇ ತಾನೆ ಎಲ್ಲ ಮನುಷ್ಯರಿಗೂ ಬೇಕಾಗಿರುವುದು. ದೇಹದಲ್ಲಿರುವ ಕೊಲೆಸ್ಟರಾಲ್ ಇರಲಿ, ಯಾವುದೇ ರೀತಿಯ ಕೊಬ್ಬು ಇರಲಿ, ಬೊಜ್ಜು, ವಾತ, ಪಿತ್ತ ಹಾಗೂ ಕಫದಿಂದ ಉಂಟಾದ ರೋಗಗಳನ್ನೂ, ಮೈ, ಕೈ ನೋವುಗಳು, ಬೆನ್ನು ನೋವು, ಸೊಂಟನೋವು, ತಲೆನೋವು, ತಲೆಭಾರ, ಮಾರ್ನಿಂಗ್ ಸಿಕ್ ನೆಸ್, ಹೊಟ್ಟೆ ಉರಿ ಇತ್ಯಾದಿ ಮತ್ತು ದೇಹದಲ್ಲಿರುವ ಎಲ್ಲಾ ರೀತಿಯ ವಿಷ ಪದಾರ್ಥಗಳನ್ನು ಹೊಡೆದೋಡಿಸುವ ಶಕ್ತಿ ಸಮೃದ್ದಿಯಾದ ಹೊಟ್ಟಿನಿಂದ ಕೂಡಿದ ಕೆಂಪು ಅಕ್ಕಿಗೆ ಮಾತ್ರ ಇದೆ. ಕೆಂಪು ಅಕ್ಕಿಯ ಅನ್ನವನ್ನು ತಿನ್ನುವುದರಿಂದ ಕ್ಯಾನ್ಸರ್ ಸಹಾ ವಾಸಿಯಾಗುವುದೆಂದು
ವಿಜ್ನಾನಿಗಳು ಇತ್ತೀಚೆಗೆ ಕಂಡುಹಿಡಿದಿದ್ದಾರೆ. ಚರ್ಮ ರೋಗಗಳೂ ಸಹ ವಾಸಿಯಾಗುವುದು. ನೀವೆಲ್ಲಾ ಕಬ್ಬಿನ ರಸವನ್ನು ಹೇಗೆ ತೆಗೆಯುತ್ತಾರೆಂಬುದನ್ನು ನೋಡಿದ್ದೀರಿ. ಅದೇ ರೀತಿ ಹೊಟ್ಟಿನಿಂದ ಕೂಡಿದ ಕೆಂಪು ಅಕ್ಕಿಯು ನಿಮ್ಮ ದೇಹದಲ್ಲಿರುವ ಎಲ್ಲ ತರಹದ ವಿಷ,ಕಫ,ಕೊಬ್ಬು,ಕೊಲೆಸ್ಟರಾಲ್ ಮತ್ತು ದೊಡ್ಡಕರುಳಿನಲ್ಲಿ ಕಟ್ಟಿಕೊಂಡಿರುವ ಎಲ್ಲ ಮಲಗಳು ಒಂದೇ ಹೊತ್ತಿನ ಊಟದಲ್ಲಿ ಹೋಗಿಬಿಡುತ್ತದೆ. ಅಥವ ಒಂದು ವಾರದ ಊಟದಲ್ಲಿ ಹೋಗಿಬಿಡುತ್ತದೆ. ಸ್ವರ್ಗ ಸಿಕ್ಕಿದಷ್ಟು ಸಂತೋಷವುಂಟುಮಾಡುತ್ತದೆ. ಇಂದೇ ಕೆಂಪು ಅಕ್ಕಿಯ ಅನ್ನವನ್ನು ಸೇವಿಸಲು ಆರಂಭಿಸಿರಿ ಮತ್ತು ರೋಗಗಳಿಂದ ಮುಕ್ತರಾಗಿರಿ. ಎಂದೆಂದಿಗೂ ಆನಂದಮಯವಾದ ಜೀವನವನ್ನು ನಡೆಸಿರಿ. ನಿರೋಗಿಗಳಾಗಿ ಬಾಳಿರಿ. ಬೇಕಾದ ಸಾಧನೆಗಳನ್ನು ಸಂತೋಷದಿಂದ ಮಾಡಿರಿ.
ಹೆಚ್.ಕೆ.ಸತ್ಯಪ್ರಕಾಶ್.
೯೮೮೬೩ ೩೪೬೬೭
೦೮೦-೨೬೭೫೫೨೯೯

ಅಪಾಯಕಾರಿ ಪಾಲೀಷ್ ಮಾಡಿದ ಅಕ್ಕಿ

ಅಪಾಯಕಾರಿ ಪಾಲೀಷ್ ಮಾಡಿದ ಅಕ್ಕಿ

ಪಾಲೀಷ್ ಮಾಡಿದ ಅಕ್ಕಿಯನ್ನು ಊಟಮಾಡಬೇಡಿ. ಅದರಲ್ಲಿ ಪ್ರತಿದಿನವೂ ನರಳುವ ರೋಗಗಳು ಬರುತ್ತವೆ. ರೋಗಗಳು ಒಂದಕ್ಕೊಂದು ಬರುತ್ತಲೇ ಇರುತ್ತವೆ. ಯಾವುದೇ ರೋಗಗಳು ವಾಸಿಯಾಗದೇ ಬರೀ ಔಷಧಿಗಳನ್ನು ತೆಗೆದುಕೊಳ್ಳುವುದೇ ಒಂದು ಕೆಲಸವಾಗಿ, ಮುಂಚೆಗೆ ಒಂದು ಮಾತ್ರೆ ಇದ್ದದ್ದು ಕೆಲವು ತಿಂಗಳುಗಳ ಅಥವಾ ಕೆಲವು ವರ್ಷಗಳ ನಂತರ ಬೊಗಸೆಯಷ್ಟು ಮಾತ್ರೆಗಳನ್ನು ನುಂಗಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಆದರೂ ರೋಗಗಳು ತಹಬಂದಿಗೆ ಬರುವುದಿಲ್ಲ. ಕಂಡ ಕಂಡ ಡಾಕ್ಟರ್ ಗಳ ಹತ್ತಿರ ಅಲೆದಾಟ ಶುರುವಾಗುತ್ತದೆ. ಇದಕ್ಕೆಲ್ಲಾ ಕೊನೆ ಹಾಡಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.
ಇದಕ್ಕೆಲ್ಲ ಒಳ್ಳೆಯ ಉಪಾಯವೆಂದರೆ ಹೈ ಫೈಬರ್(ಹೊಟ್ಟುಯುಕ್ತ) ಆಹಾರವನ್ನು ಊಟಮಾಡುವುದೇ ಪರಿಹಾರ. ಇದರಲ್ಲಿ ೧೦೦ ಕ್ಕೆ ೧೦೦ ರಷ್ಟು ಪರಿಹಾರ ಸಿಗುತ್ತದೆ. ಔಷಧಿಗಳಿಗೆ ೫೦ಪೈಸೆ ಗಳನ್ನು ಸಹ ಖರ್ಚು ಮಾಡುವ ಪ್ರಸಂಗವು ಎದುರಾಗುವುದಿಲ್ಲ. ಕೆಂಪು ಅಕ್ಕಿ (ಅತಿ ಹೆಚ್ಚು ಫೈಬರ್ ಯುಕ್ತ) ಮತ್ತು ರಾಗಿ ಹೇರಳವಾಗಿ ಉಪಯೋಗಿಸಿ. ರಾಗಿ ಆಗದಿದ್ದವರು ಕೆಂಪು ಅಕ್ಕಿಯನ್ನು ಉಪಯೋಗಿಸಿ ಶೇ.೧೦೦ ರಷ್ಟು ಪ್ರಯೋಜನ ಪಡೆಯಿರಿ. ರೈತರನ್ನು ಕೆಂಪು ಅಕ್ಕಿಯನ್ನು ಬೆಳೆಯಲು ಪ್ರೋತ್ಸಾಹಿಸಿ. ರೈತರಿಗೆ ತಿಳುವಳಿಕೆ ಕೊಡಿ. ಅತ್ಯಾಶ್ಚರ್ಯಕರ ವ್ಯತ್ಯಾಸವನ್ನು ಗಮನಿಸಿರಿ. ನೀವು ಯಾವಾಗಲೂ ಏನೇ ತಿಂದರೂ ಅದು ಹೈ ಫೈಬರ್ ಯುಕ್ತವಾಗಿರಲಿ. ಭತ್ತ ಮಾತ್ರ ತೆಗೆದ ಕೆಂಪು ಅಕ್ಕಿಯಲ್ಲಿ ಹೇರಳವಾಗಿ ಫೈಬರ್ ಇರುತ್ತದೆ.
ಇದು ದೇಹಕ್ಕೆ ತುಂಬಾ ತಂಪನ್ನು ಒದಗಿಸುತ್ತದೆ ಮತ್ತು ಯಾವುದೇ ರೋಗಗಳು ಹತ್ತಿರ ಸುಳಿಯುವುದಿಲ್ಲ. ಇಡೀ ದಿನ ಆನಂದಮಯವಾಗಿರುತ್ತದೆ ಮತ್ತು ಚಟುವಟಿಕೆಯಿಂದ ಕೂಡಿರುತ್ತದೆ. ನೀವು ಕಷ್ಟಪಟ್ಟು ದುಡಿದ ಹಣವನ್ನು ಡಾಕ್ಟರ್ ಗಳಿಗೆ ಸುರಿಯಬೇಡಿ. ತಿಂದುನೋಡಿ ಆನಂದಿಸಿ "ಕೆಂಪು ಅಕ್ಕಿಯ ಚಮತ್ಕಾರವನ್ನು". ಮಾರ್ಕೆಟ್ನಲ್ಲಿ ಪಾಲೀಷ್ ಮಾಡಿದ ಅಕ್ಕಿಗೆ ಬಣ್ಣವನ್ನು ಹಾಕುತ್ತಿದ್ದಾರೆ. "ಎಚ್ಚರಿಕೆ". ಅಲ್ಲಿಯೇ ಉಜ್ಜಿನೋಡಿದರೆ ಕೈಗೆ ಬಣ್ಣ ಮೆತ್ತಿಕ್ಕೊಳ್ಳುವುದು. ನಿಜವಾದ ಕೆಂಪು ಅಕ್ಕಿ ಅನ್ನ ಮಾಡುವ ಮೊದಲು ತೊಳೆದರೆ ಮೇಲಿನ ಕೆಂಪು ಬಣ್ಣವು ಹೋಗಬಾರದು. ಅದೇ ನಿಜವಾದ ಕೆಂಪು ಅಕ್ಕಿ.

ಶನಿವಾರ, ಆಗಸ್ಟ್ 11, 2007

ನಿಮ್ಮ ಹೃದಯ ನಿಮಗೆ ಗೊತ್ತೇ ?

ನಿಮ್ಮ ಹೃದಯ ನಿಮಗೆ ಗೊತ್ತೇ ?

ನಿಮ್ಮ ಹೃದಯ ನಿಮಗೆ ಗೊತ್ತೇ ?

ಹೃದಯ ರೋಗ ಬಂದರಂತೂ ಅಂತಿಮ ಹಂತದಲ್ಲಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ಎಂದು ತಜ್ನ ಡಾಕ್ಟರರುಗಳು ತೀರ್ಮಾನಿಸಿಬಿಡುತ್ತಾರೆ. ವಿವಿಧ ಬಗೆಯ ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆಯೇ ಅಂತಿಮ ಎನ್ನುವ ಅಭಿಪ್ರಾಯವನ್ನು ರೋಗಿಗಳ ತಲೆಗೆ ತುರುಕುತ್ತಾರೆ.
"ನೀವು ಅಸ್ಪತ್ರೆಗೆ ಬಂದಿದ್ದೇ ಅದೃಷ್ಟ, ಕಂಡಿಷನ್ ಕ್ರಿಟಿಕಲ್ ಆಗಿದೆ. ಆಪರೇಷನ್ ಮಾಡಲೇಬೇಕು" ಎಂದು ರೋಗಿ, ಮತ್ತವರ ಸಂಬಂಧಿಕರನ್ನು ಹೆದರಿಸಲಾಗುತ್ತದೆ.
ಕೊಬ್ಬು ಒಂದೇ ದಿನ ಕಟ್ಟಿಕೊಳ್ಳುವುದಿಲ್ಲ. ಹಲವು ವರ್ಷದಲ್ಲಿ ಈ ಕ್ರಿಯೆ ನಡೆಯುತ್ತದೆ. ರಕ್ತದಲ್ಲಿ ಹೆಚ್ಚುವ ಕೊಬ್ಬಿನ ಅಂಶದಿಂದ ಬರುವ ಹೃದಯ ರೋಗವನ್ನು ಶಸ್ತ್ರಚಿಕಿತ್ಸೆಯ ಹೊರತಾಗಿಯೂ ನಿಯತ್ರಿಸಬಹುದು ಎನ್ನುತ್ತಾರೆ ದೆಹಲಿಯ ಖ್ಯಾತ ಹೃದಯ ರೋಗ ತಜ್ನ ಡಾ. ಬಿಮಲ್ ಚಜರ್.
ಒಟ್ಟಾರೆ ಅಂಕಿ ಅಂಶಗಳ ಪ್ರಕಾರ ಹೃದಯ ರೋಗದಲ್ಲಿ ಐ. ಟಿ. ಯಂತೆ ಭಾರತವೇ ಮುಂಚೂಣಿ. ಡಾ. ಬಿಮಲ್ ಅಭಿಪ್ರಾಯ ಪಾಶ್ಚಾತ್ಯ ವೈದ್ಯ ಪದ್ಧತಿಗೆ ಅಂಟಿಕೊಂಡವರಿಗೆ ವಿಚಿತ್ರ ಎನಿಸಬಹುದು. ಆದರೆ ಇವರ ಅನುಭವದ ಮೂಸೆಯಿಂದ ಬರುವ ಮಾತು ಹಾಗೂ ಇವರ
’ಟ್ರಾಕ್ ರೆಕಾರ್ಡ್’ ಗಮನಿಸಿದರೆ ದಾ. ಬಿಮಲ್ ಮಾತನ್ನು ಪಾಲಿಸುವುದೇ ಉತ್ತಮ ಎನಿಸುತ್ತದೆ.
ಮಾತ್ರೆಗಳನ್ನು ಕೊಡುವ ಬದಲು ರೋಗಿಗೆ ಕೊಬ್ಬು ಶೇಖರಣೆ ಕಡಿಮೆಯಾಗಲು ಜೀವನ ವಿಧಾನ ಬದಲಿಸಿ ಎಂದು ಹೇಳಿದರೆ ಅನುಕೂಲವಾಗುತ್ತದೆ. ಇದನ್ನು ಬಹುತೇಕ ಅಲೋಪಥಿ ವೈದ್ಯರು ಸೂಚಿಸುವುಧಿಲ್ಲ. ಆದ್ದರಿಂದ ಆಧುನಿಕ ಅಲೋಪಥಿ ವೈದ್ಯ ಪದ್ಧತಿಯಿಂದ ಈ ರೋಗವನ್ನು ಗುಣಪಡಿಸಲು ಸಾಧ್ಯವಾಗಲ್ಲ ಎಂದುಕೊಂಡರು. ಇದಕ್ಕೆ ಉತ್ತರ ಹುಡುಕುತ್ತಿದ್ದಾಗ ಅವರಿಗೆ ’ದಿ ಲಾನ್ಸೆಟ್’ ಎನ್ನುವ ವೈದ್ಯಕೀಯ ಪತ್ರಿಕೆಯಲ್ಲಿ ಅಮೇರಿಕದ ಟೆಕ್ಸಾಸ್ ಹೃದಯ ಕೇಂದ್ರದ ಡಾ. ಡೀನ್ ಆರ್ನಿಷ್ ಅವರ ಲೇಖನ ಗಮನ ಸೆಳೆಯಿತು. ಅವರು ಹೃದಯಕ್ಕೆ ರಕ್ತವನ್ನು ಸರಬರಾಜು ಮಾಡುವ ಕರೋನರಿ ಆರ್ಟರಿಗಳಲ್ಲಿ ಕಟ್ಟಿದ ಕೊಬ್ಬಿನ ಅಂಶವನ್ನು ಕಡಿಮೆ ಮಾಡುವ ಬಗ್ಗೆ ತಿಳಿಸಿದ್ದರು. ಸಾಮಾನ್ಯವಾಗಿ ಅನಾವಶ್ಯವಾಗಿ ಎಣ್ಣೆ,ಬೆಣ್ಣೆ ತಿನ್ನುವ ವ್ಯಕ್ತಿಗೆ ವರ್ಷಕ್ಕೆ ಶೇ. ೨ರ ಪ್ರಮಾಣದಲ್ಲಿ ಕೊಬ್ಬು ರಕ್ತನಾಳದಲ್ಲಿ ಶೇಖರಣೆಯಾಗುತ್ತಿದೆ. ಒಬ್ಬ ವ್ಯಕ್ತಿ ಓಡಲು ಶೇ. ೩೦, ನಡೆದಾಡಲು ಶೇ. ೨೦, ಹಾಗೂ ಆರಾಮವಾಗಿ ಇರಲು ಶೇ. ೧೦ ರಷ್ಟು ರಕ್ತನಾಳ ರಕ್ತ ಚಲನೆಗೆ ತೆರೆದಿದ್ದರೆ ಸಾಕು ಎನ್ನುವುದು ಡಾ. ಬಿಮಲ್ ಅಭಿಪ್ರಾಯ. ರಕ್ತನಾಳದಲ್ಲಿ ಶೇ.೭೦ ಕ್ಕಿಂತ ಹೆಚ್ಚು ಕೊಬ್ಬು ಶೇಖರಣೆಯಾದರೆ ಹೃದಯ ತೊಂದರೆ ಕಾಣಿಸಿಕೊಳ್ಳುತ್ತದೆ.
ರಕ್ತನಾಳದಲ್ಲಿ ಶೇ. ೮೦ ರಿಂದ ೧೦೦ ರಷ್ಟು ಕೊಬ್ಬು ಶೇಖರಣೆಯಾಗಲು ೧೦ ವರ್ಷಗಳಾದರೂ ಬೇಕಾಗುತ್ತದೆ. ಆದರೆ ಕೊಬ್ಬಿನ ಮೇಲ್ಪದರ ಒಡೆದರೆ ರಕ್ತ ಹೆಪ್ಪುಗಟ್ಟಿ ಹೃಧಯಾಘಾತ ಖಂಡಿತ.
ರಕ್ತಸಂಚಾರ ಸರಾಗವಾಗಲು ಬಲೂನ್ ಆಂಜಿಯೋಪ್ಲಾಸ್ಟಿ ಹೆಚ್ಚಾಗಿದೆ. ಐದು ನಿಮಿಷದ ಚಿಕಿತ್ಸೆಗೆ ೧. ೫ ಲಕ್ಷ ರೂಪಾಯಿ ಖರ್ಚು. ಇದೇನು ಹೃದಯ ತೊಂದರೆಗೆ ಶಾಶ್ವತ ಪರಿಹಾರವಲ್ಲ ಎನ್ನುವುದು ಡಾ. ಬಿಮಲ್ ಅವರ ಅಭಿಪ್ರಾಯ. ಹೃದಯ ತೊಂದರೆಗಳಿಂದ ದೂರವಾಗಲು ಡಾ. ಬಿಮಲ್ ಹದಿನೆಂಟು ಪುಸ್ತಕಗಳನ್ನು ಹೊರತಂದಿದ್ದಾರೆ.
ಇದರಲ್ಲಿ ’ರಿವರ್ಸಲ್ ಆಫ್ ಹಾರ್ಟ್ ಡಿಸೀಸ್’, ಫ಼ುಡ್ ಫಾರ್ ರಿವರ್ಸಲ್ ಆಫ್ ಹಾರ್ಟ್ ಡಿಸೀಸ್’, ಅಡುಗೆ ಪುಸ್ತಕಗಳಾದ ’ಜೀರೋ ಆಯಿಲ್ ಕುಕ್ ಬುಕ್, ಜೀರೋ ಆಯಿಲ್ ಸ್ನಾಕ್ಸ್, ಜೀರೋ ಆಯಿಲ್ ಸ್ವೀಟ್ಸ್, ೨೦೦೧ ಡಯಟ್ ಟಿಪ್ಸ್ ಫಾರ್ ಹಾರ್ಟ್ ಡಿಸೀಸ್.
ಆಹಾರದಲ್ಲಿ ಎಣ್ಣೆ, ತುಪ್ಪ ಬಳಸಲೇಬೇಕಿಲ್ಲ. ಆರೋಗ್ಯಕ್ಕೆ ಉತ್ತಮ ಎನ್ನುವ ಎಣ್ಣೆಯೇ ಇಲ್ಲ.
ಇದೆಲ್ಲಾ ಬರೀ ಮಾರಾಟ ತಂತ್ರ. ಇದರ ಬದಲು ನೀರಲ್ಲೇ ಬೇಯಿಸಬಹುದು. ಇದರಿಂದ ಆರೋಗ್ಯ ಸುಧಾರಿಸುತ್ತದೆ. ಎಂದು ಸಲಹೆ ನೀಡುವರು.