ಭಾನುವಾರ, ಜೂನ್ 24, 2007

ಆಸಿಡಿಟಿ ಅಂದರೇನು?

























ಆಸಿಡಿಟಿ ಅಂದರೆ ಹೊಟ್ಟೆಯಲ್ಲಿ ಚುಚ್ಚಿದಂತೆ ಆಗುವುದು, ಹುಳಿ ತೇಗು ಬರುವುದು, ಹೊಟ್ಟೆಯುಬ್ಬರಿಸಿದಂತೆ ಆಗುವುದು, ಪದೇ, ಪದೇ ಜೋರಾದ ತೇಗು ಬರುವುದು, ಹೊಟ್ಟೆ ತುಂಬಿದಂತಿದ್ದರೂ ಏನಾದರೂ ತಿನ್ನುತ್ತಾ ಇರಬೇಕು ಅನ್ನಿಸುವುದು, ವಿಪರೀತವಾಪ ಕೋಪ, ಸಣ್ಣ, ಸಣ್ಣ ವಿಷಯಕ್ಕೂ ಮನಸ್ಸು ಉದ್ರೇಕಗೊಳ್ಳುವಿಕೆ, ಮಂಕುತನ, ಒಂಟಿಯಾಗಿ ಇರಬೇಕೆನ್ನುಸುವಿಕೆ, ಕೆಲಸದಲ್ಲಿ ಆಸಕ್ತಿ ಇಲ್ಲದಿರುವಿಕೆ, ಎಲ್ಲರ ಮೇಲೂ ರೇಗಾಡುವಿಕೆ, ಯಾವಾಗಲೂ ಮಲಗಿರಬೇಕೆಂಬ ಆಸಕ್ತಿಯು, ಇಡೀದಿನ ಮಲಗುವಿಕೆ, ವಿಪರೀತ ನಿದ್ದೆ ಮಾಡುವಿಕೆ, ಇದು ಬಂದಾಗ ಬರೀ ಎಣ್ಣೆಯಲ್ಲಿ ಕರಿದ ತಿಂಡಿಗಳಮೇಲೆ ಆಸಕ್ತಿ, ಚಿಪ್ಸ್, ಮೈದಾದಿಂದ ಮಾಡಿದ ತಿಂಡಿ ತಿನಸುಗಳು, ವಿಪರೀತ ಎಣ್ಣೆಹಾಕಿ ಮಾಡಿದ ತಿಂಡಿ ತಿನಸುಗಳು, ಅತಿಯಾದ ಕಾಫೀ ಸೇವನೆ, ಅತಿಯಾಗಿ ಸಿಗರೇಟ್, ಬೀಡಿ ಸೇದುವಿಕೆ, ಹೋಟೆಲಿನಲ್ಲಿ ಮಾಡಿದ ತಿಂಡಿಗಳ ಮೇಲೆ ಆಸಕ್ತಿ, ಪಾಲೀಶ್ ಮಾಡಿದ ಅಕ್ಕಿಯನ್ನು ಊಟ ಮಾಡುವುದು ಇತ್ಯಾದಿ
ಇದು ಬಂದಾಗ ನಮ್ಮ ಜನರು ಏನು ಮಾಡುತ್ತಾರೆ? ತಕ್ಷಣ ಅಲ್ಲೋಪತಿ ಡಾಕ್ಟರರ ಹತ್ತಿರ ಓಡುತ್ತಾರೆ. ಅವರು ಕೊಡುವುದು ಏನನ್ನು? ಡೈಜೀನ್ ಮಾತ್ರೆ ಕೊಡುತ್ತಾರೆ ಅಥವಾ ಜೆಲ್ಯೂಸಿಲ್ ಮಾತ್ರೆ ಕೊಡುತ್ತಾರೆ. ಇದರಿಂದ ತಾತ್ಕಾಲಿಕ ಶಮನ ಅಗುವುದೇನೋ ನಿಜ. ಆದರೆ ಇದು ಶಾಶ್ವತವಾಗಿ ವಾಸಿಯಾಗುವುದಿಲ್ಲ. ಕಾರಣ ಏನೆಂದರೆ ಮತ್ತೆ ಇನ್ನು ಎರಡು ದಿನ ಕಳೆದಮೇಲೆ ಮತ್ತೆ ಶುರುವಾಗುತ್ತದೆ. ಯಾಕಂದರೆ ಮತ್ತದೇ ಮೇಲೆ ಬರೆದ ತಿಂಡಿಗಳ ಮೇಲೆ ಆಸಕ್ತಿಯಿರುವುದರೀಂದ ಮತ್ತು ಪಾಲೀಶ್ ಮಾಡಿದ ಅಕ್ಕಿಯನ್ನು ಊಟ ಮಾಡುವುದರಿಂದ ಈ ಆಸಿಡಿಟಿ ಬರುತ್ತಲೇ ಇರುತ್ತದೆ. ಈ ಆಸಿಡಿಟಿ ಇಂದ ತಪ್ಪಿಸಿಕೊಳ್ಲಲು ಏನು ಮಾಡಬೇಕು??????????????????????/









ಶನಿವಾರ, ಜೂನ್ 16, 2007

ನಮ್ಮ ಆರೋಗ್ಯ

ಈ ಜಗತ್ತಿನ ಎಲ್ಲಾ ರೋಗಗಳಿಗೆ ಆಸಿಡಿಟಿ ಮತ್ತು ಮಲಬದ್ಧತೆಯೇ ಕಾರಣ.

ಶನಿವಾರ, ಜೂನ್ 9, 2007

ನಮ್ಮ ಆರೋಗ್ಯ ಬಹಳ ಮುಖ್ಯ

ನಾವು ಎಂದೆಂದಿಗೂ ಆರೋಗ್ಯವಾಗಿರಬೇಕಾದರೆ ನಾವು ತಿನ್ನುವ ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಈಗ ನಾವುಗಳು ಸಿಕ್ಕಿದ್ದನ್ನೆಲ್ಲಾ ತಿಂದುಕೊಂಡು ನಮ್ಮ ದೇಹವನ್ನು ಹಾಳುಮಾಡಿಕೊಂಡು ನರಳಾಟವನ್ನು ಅನುಭವಿಸಿಕೊಂಡು ನಂತರ ಡಾಕ್ಟರ ಹತ್ತಿರ ಓಡಿಹೋಗುತ್ತೇವೆ. ಈಗಿನ ಖಾಯಿಲೆಗಳು ಬರುತ್ತಿರುವುದು ನಾವು ತಿನ್ನುತ್ತಿರುವ ಆಹಾರದಿಂದಲೇ.
ಇದರಲ್ಲಿ ಪ್ರಮುಖವಾದದ್ದು ಆಸಿಡಿಟಿ, ಆತಂಕ, ಭಯ, ಭಯ ಆಗೋದು, ಗ್ಯಾಸ್ ತೊಂದರೆಗಳು, ಅಜೀರ್ಣ, ಮಲಬದ್ಧತೆ, ಇಲ್ಲವೇ ನೀರು, ನೀರು ಭೇದಿ, ಹೊಟ್ಟೆಯಲ್ಲಿ ಗುಡ, ಗುಡ ಶಬ್ದ, ಯಾವಾಗಲೂ ಹೊಟ್ಟೆ ತುಂಬಿದ ಹಾಗೇ ಇರುವುದು, ಇಲ್ಲವೇ ಪದೇ, ಪದೇ ಏನಾದರೂ ತಿನ್ನಬೇಕೆನ್ನಿಸುವುದು, ಗಂಟಲಲ್ಲಿ ಏನೋ ಸಿಕ್ಕಿಕೊಂಡಂತೆ ಭಾಸವಾಗುವುದು, ಮನಸ್ಸಿಗೆ ಏನೋ ತಳಮಳ, ವಿಪರೀತ ಕೋಪ, ಇತ್ಯಾದಿ. ಇದಕ್ಕೆ ನಾವು ಮಾಡುತ್ತಿರುವುದೇನು? ತಕ್ಷಣ ಡಾಕ್ಟರ್ ಹತ್ರ ಓಡಿಹೋಗೋದು. ಅವರು ಕೊಟ್ಟಿದ್ದನ್ನು ನುಂಗುವುದು. ಅವರು ಕೊಟ್ಟಿದ್ದ ಔಷಧಿಯಿಂದ ತಕ್ಷಣ ವಾಸಿಯೇನೋ ಆಗುತ್ತೆ. ಆದರೆ ಅದರಿಂದ ಬೇರೆ ಖಾಯಿಲೆಗಳೂ ಹುಟ್ಟಿಕೊಳ್ಳುತ್ತೆ. ನಿಮಗೆ ಬಂದಿದ್ದ ತೊಂದರೆ ತಾತ್ಕಾಲಿಕವಾಗಿ ವಾಸಿಯಾಗಿರುತ್ತೆ. ಇನ್ನೊಂದು ದಿನ ಮತ್ತದೇ ತೊಂದರೆ ಕಾಣಿಸಿಕೊಳ್ಳುತ್ತೆ. ಹೀಗೇ ಒಂದಕ್ಕೊಂದು ಖಾಯಿಲೆಗಳು ಬಂದು ಒಂದು ದಿನ ಸಕ್ಕರೆ ಖಾಯಿಲೇನೋ, ಕ್ಯಾನ್ಸರ್ರೋ, ಇತ್ಯಾದಿ ಬರುತ್ತೆ. ಆಗ ವೃಥಾ ಡಾಕ್ಟರ್ ಗಾಗಿ ಹುಡುಕಾಟ. ಸುಮ್ಮನೇ ಹಣ ಖರ್ಚು. ಹೀಗಾಗಿ ಜೀವನವೆಲ್ಲಾ ಮಾನಸಿಕ ಹಿಂಸೆ.
ಇದಕ್ಕೆ ಉತ್ತರವನ್ನು ಮುಂದಿನ ಭಾಗದಲ್ಲಿ ಬರೆಯಲಾಗುತ್ತದೆ.

ಸೋಮವಾರ, ಜೂನ್ 4, 2007

ಆರೋಗ್ಯವೇ ಭಾಗ್ಯ

ನನ್ನ ಹೆಸರು ಸತ್ಯ. ನಾನು ಸಧ್ಯದಲ್ಲೇ ಆರೋಗ್ಯ ವಿಭಾಗವನ್ನು ಪ್ರಾರಂಭಿಸಲಿದ್ದೇನೆ.