ಬುಧವಾರ, ಸೆಪ್ಟೆಂಬರ್ 17, 2008

ಮನೆಯಲ್ಲೇ ಮೊಡವೆಗಳಿಗೆ ಔಷಧಿ

೧. ಮೆಣಸನ್ನು ನೀರಿನಲ್ಲಿ ತೇಯ್ದು ಮೊಡವೆಗಳಿಗೆ ಹಚ್ಚುತ್ತಾ ಬಂದರೆ ಕೆಲವೇ ದಿನಗಳಲ್ಲಿ ಮೊಡವೆಗಳು ಮುಖದಲ್ಲಿ ಇಲ್ಲದಂತಾಗುವುದು.
೨. ಕೊತ್ತಂಬರಿಸೊಪ್ಪಿನ ರಸದೊಂದಿಗೆ ನಿಂಬೆರಸ ಮಿಶ್ರ ಮಾಡಿ, ಕ್ರಮವಾಗಿ ಹಚ್ಚುತ್ತಿದ್ದರೆ ಮೊಡವೆ ಹಾಗೂ ಚರ್ಮದ ಮೇಲಿನ ಕಲೆಗಳು ಕಣ್ಮರೆ ಆಗುವುವು.
೩. ಬಾದಾಮಿ ಬೀಜಗಳನ್ನು ಶುದ್ಧವಾದ ಹಸುವಿನ ಹಾಲಿನಲ್ಲಿ ಅರೆದು, ಹತ್ತಿಯೊಂದಿಗೆ ಆ ಮಿಶ್ರಣವನ್ನು ಅದ್ದಿ ಮೊಡವೆಯ ಮೇಲೆ ಸವರುತ್ತಿದ್ದರೆ ಮೊಡವೆಯ ಗುರುತು ಮಾಯವಾಗುವುದು.
೪. ಸೇಬಿನ ಹಾಗೂ ನಿಂಬೆಯ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ ನುಣ್ಣಗೆ ಅರೆದು ಪುಡಿ ಮಾಡಿ ಚೂರ್ಣವನ್ನು ಹಾಲಿನಲ್ಲಿ ಬೆರೆಸಿ ಮೊಡವೆಗಳಿಗೆ ಹಚ್ಚಿದರೆ ಶೀಘ್ಹ್ರದಲ್ಲಿಯೇ ಮೊಡವೆಯ ಗುಳ್ಳೆ ಕರಗುವುದು.
೫. ಸೇಬಿನ ತಿರುಳನ್ನು ಅರೆದು ಮುಖಕ್ಕೆ ಲೇಪಿಸಿಕೊಳ್ಳುವುದರಿಂದ ವಾರದ ಒಳಗಾಗಿ ಮೊಡವೆ ಗುಳ್ಳೆಗಳು ಮಾಯ ಆಗುವುವು. ಜೊತೆಗೆ ಮುಖ ಕಾಂತಿ ಹೆಚ್ಚುವುದು.
೬. ಎಳೆನೀರಿನಲ್ಲಿ ಕೆಲವು ವಾರ ಮುಖ ತೊಳೆಯುತ್ತಿದ್ದರೆ ಮೊಡವೆಗಳು ಮಾಗುತ್ತವೆ. ಮುಖದ ಮೇಲೆ ಕಪ್ಪು ಕಲೆಗಳಿದ್ದರೆ ಮಾಯ ಆಗುವುವು. ಮುಖದ ಮೇಲೆ ಹೊಳಪು ಹೆಚ್ಚುವುದು.
೭. ಕಿತ್ತಲೆ ಸಿಪ್ಪೆಯನ್ನು ಮುಖದಮೇಲೆ ಉಜ್ಜುತ್ತಿದ್ದರೆ ಅದರಿಂದ ಸುವಾಸನೆಯ ದ್ರವ ಹೊರಬಂದು ಮೊಡವೆ ಗುಳ್ಳೆಗಳು ಒಣಗುವುವು.
೮. ನಿಂಬೇರಸದಲ್ಲಿ ದಾಲ್ಚಿನ್ನಿಯನ್ನು ತೇಯ್ದು ಮೊಡವೆಗಳಿಗೆ ಹಚ್ಚಿದರೆ ಬೇಗ ಒಣಗುವುವು.
೯. ಗರಿಕೆ ಹುಲ್ಲಿನ ರಸವನ್ನು ಮುಖದಮೇಲೆ ಲೇಪಿಸುವುದರಿಂದ ಮೊಡವೆಗಳು ಮಾಗುವುವು.
೧೦. ಹಿಂಗನ್ನು ನೀರಿನಲ್ಲಿ ತೇಯ್ದು ಮೊಡವೆಗಳಿಗೆ ಹಚ್ಚುತ್ತಿದ್ದರೂ ಸಹಾ ಮೊಡವೆ ಗುಳ್ಳೆಗಳು ಮುಖದ ಮೇಲೆ ಕಾಣದಂತಾಗುವುದು.

ಇದಕ್ಕಿಂತ ಮುಖ್ಯವಾಗಿ ಈ ಯಾವುದೇ ಚರ್ಮ ರೋಗಗಳು ಬರುವುದು ಹೊಟ್ಟೆಯೊಳಗಿಂದ. ಹೊಟ್ಟೆ ಶುದ್ಧ ಆಗಿದ್ದರೆ ಯಾವುದೇ ತರಹದ ಚರ್ಮ ರೋಗಗಳು ಬರುವುದಿಲ್ಲ. ಇದಕ್ಕಾಗಿ ತಿಂಗಳಿಗೆ ಒಂದು ಸಲ ಭೇದಿ ಮಾತ್ರೆಯನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದ ಪಕ್ಷದಲ್ಲಿ ಹೊಟ್ಟುಳ್ಳ ಧಾನ್ಯಗಳನ್ನು ಸೇವಿಸಬೇಕು. ನಮ್ಮ ದೇಹವೂ ಸಹಾ ನಮ್ಮ ಮನೆಯಲ್ಲಿರುವ ಚರಂಡಿಯಂತೆ. ಮನೆಯಲ್ಲಿರುವ ಚರಂಡಿಗೆ ಏನೇನೊ ಹಾಕಿದರೆ ಹೇಗೆ ಮನೆಯೆಲ್ಲಾ ಹಾಳಾಗುತ್ತದೋ, ಅದೇ ರೀತಿ ನಮ್ಮ ದೇಹದ ಚರಂಡಿ ಕೂಡ. ಎಣ್ಣೆಯಲ್ಲಿ ಕರಿದ ತಿಂಡಿಗಳು, ಮೈದಾ ಹಿಟ್ಟಿನಿಂದ ಮಾಡಿದ ಸಿಹಿ ತಿಂಡಿಗಳು ಮತ್ತು ಕರಿದ ತಿಂಡಿಗಳು, ಮೈದಾ ದೋಸೆ, ಮೈದಾ ಬ್ರೆಡ್ ಇತ್ಯಾದಿಗಳನ್ನು ತಿಂದರೆ ಹೊರಗಿನ ಯಾವ ಔಷಢಿಗಳಿಗೂ ಈ ರೋಗಗಳು ವಾಸಿಯಾಗುವುದಿಲ್ಲ. ವೃಥಾ ಹಣ ಪೋಲು.

ಶುಕ್ರವಾರ, ಸೆಪ್ಟೆಂಬರ್ 12, 2008

ನಿಮ್ಮ ಆರೋಗ್ಯ ಬಹಳ ಮುಖ್ಯ

ನಿಮ್ಮ ಆರೋಗ್ಯವನ್ನು ದಯವಿಟ್ಟು ಕಾಪಾಡಿಕೊಳ್ಳಿ. ಆರೋಗ್ಯವನ್ನು ಕೆಡಿಸಿಕೊಂಡು ಆಮೇಲೆ ಪರದಾಡಬೇಡಿ.
ಯಾವಾಗಲೂ ನಿಮ್ಮ ಊಟಕ್ಕೆ ಪಾಲೀಶ್ ಮಾಡದೇ ಇರುವ ಕೆಂಪು ಕಜ್ಜಾಯ ಅಕ್ಕಿಯನ್ನೇ ಉಪಯೋಗಿಸಿರಿ. ನಿಮಗೆ ಒಂದು ಪಕ್ಷ ಕಜ್ಜಾಯ ಅಕ್ಕಿ ಸಿಗದಿದ್ದಲ್ಲಿ ಮಾಮೂಲಿ ಅಕ್ಕಿಯನ್ನೇ ಊಟ ಮಾಡಿ. ಎರಡು ಮೂರು ದಿನಕ್ಕೆ ಒಂದು ಸಲ ರಾತ್ರಿ ನಿಮ್ಮ ಊಟವಾದ ಎರಡು ಘಂಟೆಗಳ ಬಳಿಕ
ಇಸಬ್ ಗೋಲ್ ಎಂಬ ಹೊಟ್ಟನ್ನು ಒಂದು ಒಣಗಿದ ಲೋಟಕ್ಕೆ ಹಾಕಿ ಅದಕ್ಕೆ ಪೂರ್ತಿ ನೀರು ತುಂಬಿ ತಕ್ಷಣ ಕಲಕಿ ತಕ್ಷಣ ಕುಡಿಯಿರಿ.
ನಂತರ ಒಂದು ದೊಡ್ಡ ಲೋಟ ನೀರು ಕುಡಿಯಿರಿ. ಇದರಿಂದ ನಿಮ್ಮ ಹೊಟ್ಟೆಯಲ್ಲಿ ಕಟ್ಟಿಕೊಂಡಿರುವ ಟಾಕ್ಸಿನ್ ಗಳು, ಕೊಲೆಸ್ಟರಾಲ್, ಕಫ ಇತ್ಯಾದಿ ಮಾರನೆ ದಿನ ಮಲವಿಸರ್ಜನೆಯಲ್ಲಿ ಹೋಗಿಬಿಡುತ್ತದೆ. ನೀವು ಪಾಲೀಶ್ ಮಾಡಿದ ಅಕ್ಕಿಯನ್ನು ಊಟ ಮಾಡುತ್ತಿದ್ದರೆ ನಿಮಗೆ ಆಸಿಡಿಟಿ ಉಂಟಾಗುತ್ತದೆ. ಆಗ ನಿಮಗೆ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ತಿನ್ನಬೇಕೆನಿಸುತ್ತದೆ. ಸಿಕ್ಕಿದ್ದನ್ನೆಲ್ಲಾ ತಿನ್ನಬೇಕೆನಿಸುತ್ತದೆ. ಜೋಪಾನ.
ಸಾವಯವ ಕೆಂಪು ಅಕ್ಕಿಯನ್ನು ಉಪಯೋಗಿಸಬೇಡಿ. ಅದರಲ್ಲಿ ನಮಗೆ ಅತಿ ಮುಖ್ಯವಾಗಿ ಬೇಕಾದ ಬಿ-ಕಾಂಪ್ಲೆಕ್ಸ್ ಇಲ್ಲ. ಮಲವಿಸರ್ಜನೆ ಏನೋ ಆಗುತ್ತದೆ. ಆದರೆ ಬಹಳ ಮುಖ್ಯವಾಗಿರುವ ಬಿ-ಕಾಂಪ್ಲೆಕ್ಸ್ ಇಲ್ಲದಿರುವ ಆ ಅಕ್ಕಿ ಊಟ ಮಾಡಿ ಏನು ಪ್ರಯೋಜನ? ನಿಮ್ಮ ದೇಹದ ಚರಂಡಿಯನ್ನು ಶುದ್ಧವಾಗಿಟ್ಟುಕೊಳ್ಳಿ. ನಮ್ಮ ಮನೆಯಲ್ಲಿರುವ ಚರಂಡಿಯನ್ನು ಹೇಗೆ ಚೊಕ್ಕಟವಾಗಿ ಇಟ್ಟುಕೊಳ್ಳುತ್ತೇವೋ, ಅದೇ ರೀತಿ ನಮ್ಮ ದೇಹದ ಚರಂಡಿಯನ್ನು ಚೊಕ್ಕಟವಾಗಿಟ್ಟುಕೊಳ್ಳಬೇಕು. ಮೈದಾ ಹಿಟ್ಟಿನಿಂದ ಮಾಡಿರುವ ತಿಂಡಿಗಳನ್ನು ಹತ್ತಿರವೂ ಸೇರಿಸಬೇಡಿ. ಅಂದರೆ ಮೈದಾ ಹಿಟ್ಟಿನಿಂದ ಮಾಡಿದ ಬ್ರೆಡ್, ಬಿಸ್ಕತ್ ಗಳು, ದೋಸೆ, ಕರಿದ ತಿಂಡಿಗಳು, ಸಿಹಿ ತಿಂಡಿಗಳು, ಪೂರಿ, ಚಪಾತಿ ಇತ್ಯಾದಿ
ಮೈದಾ ದಿಂದ ಗೋಂದು ತಯಾರಿಸುತ್ತಾರೆ ವಾಲ್ ಪೋಸ್ಟರ್ ಅಂಟಿಸಲು ಗೊತ್ತಾ ನಿಮಗೆ? ಆಮೇಲೆ ಆ ವಾಲ್ ಪೋಸ್ಟರ್ ನ ಕೀಳಲು ಎಷ್ಟು ಕಷ್ಟ ಗೊತ್ತಾ? ಅದೇ ರೀತಿಯಲ್ಲೇ ನಮ್ಮ ದೇಹದಲ್ಲೂ ಆ ಮೈದಾ ಕೆಲಸ ಮಾಡುವುದು. ಜೋಪಾನ, ಜೋಪಾನ ನಿಮ್ಮ ದೇಹ. ಸಾಧ್ಯವಾದಷ್ಟೂ ಕಾಯಿಸಿ ಆರಿದ ನೀರನ್ನು ಕುಡಿಯಿರಿ. ಈ ಮೇಲಿನ ತಿಂಡಿಗಳಿಂದ ಪಿತ್ತ ಅತೀ ಜಾಸ್ತಿಯಾಗುತ್ತದೆ. ನೀವುಗಳು ಬರೀ ಪಿತ್ತದಿಂದ ನರಳುತ್ತಿದ್ದರೆ ಮಾಮೂಲಿ ತಣ್ಣೀರನ್ನು ಕುಡಿಯಿರಿ. ಪಿತ್ತ ಮತ್ತು ಕಫ ಆಗಿದ್ದರೆ ಕಾದಾರಿದ ನೀರನ್ನು ಎರಡು ದೊಡ್ಡ ಲೋಟದಷ್ಟು ಕುಡಿಯಿರಿ. ಬರೀ ಕಫ ಇದ್ದರೆ ಬಿಸಿ ನೀರನ್ನು ಕುಡಿಯಿರಿ. ಪಿತ್ತ ಇರುವಾಗ ಬಿಸಿ ನೀರನ್ನು ಕುಡಿಯಬೇಡಿ.

ಮಂಗಳವಾರ, ಜುಲೈ 1, 2008

ಗಂಟಲು ನೋವು

ಮುಂದುವರೆದುದು
೨)-ಸೋಮಾರಿ ಬೇರನ್ನು ಲಿಂಬೆರಸದಲ್ಲಿ ತೇಯ್ದು ಗಂಟಲಿನ ಹೊರ್ಭಾಗಕ್ಕೆ ಹಚ್ಚಬೇಕು.
೩)-ಉಪ್ಪಿನಕಾಯಿಯನ್ನು ಸ್ವಲ್ಪ ತೆಗೆದುಕೊಂಡು ಗಂಟಲು ಮೂಳೆಗೆ(ಕೆನ್ನಾಲಿಗೆಗೆ) ಹಚ್ಚಬೇಕು. ಬಂದ ಎಂಜಲನ್ನು ಉಗುಳಬೇಕು.
೪)-ಸ್ವಲ್ಪ ಬಿಸಿನೀರನ್ನು ಕುಡಿಯುತ್ತಿರಬೇಕು

ಅಜೀರ್ಣದಿಂದ ಹೊಟ್ಟೆ ಉಬ್ಬರಿಸಿದರೆ:
೧)-ಊಟದ ಜೊತೆ ಬೆಳ್ಳುಳ್ಳಿ ತಿನ್ನಬೆಕು.
೨)-ಹಸಿ ಶುಂಠಿಯನ್ನು ತಿನ್ನಬೇಕು.
೩)-ಸ್ವಲ್ಪ ಜೀರಿಗೆಯನ್ನು ಅಗಿದು ತಿನ್ನಬೇಕು.

ಆಮಶಂಕೆಯಲ್ಲಾಗುವ ರಕ್ತಸ್ರಾವ ತಡೆಗಟ್ಟಲು:
ನಿಂಬೆಹಣ್ಣಿನ ಪಾನಕಕ್ಕೆ ಅಡಿಗೆ ಉಪ್ಪನ್ನು ಸೇರಿಸಿ ಕುಡಿಯುವುದರಿಂದ ಸ್ವಲ್ಪಮಟ್ಟಿನ ಗುಣ ಕಂಡುಬರುವುದು.

ಮೂತ್ರದ ಕಟ್ಟುವಿಕೆ:
೧)-ಚೆನ್ನಾಗಿ ಮಾಗಿದ ಅನಾನಸ್ ಹಣ್ಣಿನಿಂದ ತಯಾರಿಸಿದ ಪಾನಕ(ರಸ) ಸೇವಿಸಬೇಕು.
೨)-ಬಾಳೆಪಟ್ಟಿಯನ್ನು ಹಿಂಡಿ ರಸ ತೆಗೆದು ಒಂದು ಕಪ್ ರಸಕ್ಕೆ ಒಂದು ಸ್ಪೂನ್ ಹಸುವಿನ ತುಪ್ಪ ಸೇರಿಸಿ ಕುಡಿಯಬೇಕು.
ತಕ್ಷಣವೇ ಮೂತ್ರ ಸರಾಗವಾಗಿ ವಿಸರ್ಜನೆಯಾಗುತ್ತದೆ.
೩)-ಒಂದು ಕಪ್ ಟೀ ತಯಾರಿಸಿ ಅದಕ್ಕೆ ಒಂದು ಚಿಟಿಕೆ ಏಲಕ್ಕಿಪುಡಿ ಸೇರಿಸಿ ಕುಡಿದರೆ ಸರಾಗ ಮೂತ್ರವಿಸರ್ಜನೆಯಾಗುತ್ತದೆ.
೪)-ಕಬ್ಬಿನ ಹಾಲಿಗೆ ಎಳೆನೀರು, ಹಸಿಶುಂಠಿರಸ, ನಿಂಬೆರಸ ಸೇರಿಸಿ ಸೇವಿಸುವುದರಿಂದ ಗುಣಕಾರಿ.
೫)-ಎಳೆನೀರನ್ನು ಸೇವಿಸಿ.
೬)-ಮೂಲಂಗಿ ಸೊಪ್ಪಿನ ರಸ ಕುಡಿಯಬೇಕು.

ಜೇನುನೊಣ ಕಚ್ಚಿದಾಗ:
ಈರುಳ್ಳಿಯನ್ನು ಹೋಳುಮಾಡಿ ಒಂದು ಹೋಳಿನಿಂದ ಕಚ್ಚಿದ ಜಾಗಕ್ಕೆ ತಿಕ್ಕಬೇಕು.
ಶ್ರವಣಶಕ್ತಿ ಹೆಚ್ಚಿಸಲು: ಒಂದು ಬಟ್ಟಲು ಮಾವಿನಹಣ್ಣಿನ ರಸವನ್ನು ಹಾಲು ಮತ್ತು ಜೇನಿನೊಂದಿಗೆ ಪ್ರತಿದಿನ ಸೇವಿಸಬೇಕು.

ವಿಷಾಹಾರ ಸೇವಿಸಿದಾಗ: ಒಂದು ಟೀ ಚಮಚದಷ್ಟು ಸಾಸಿವೆ ಪುಡಿಯನ್ನು ಉಗುರುಬೆಚ್ಚಗಿನ ನೀರಿನಲ್ಲಿ ಸೇರಿಸಿ ಕುಡಿಯಬೇಕು.

ನಿದ್ರೆ ಬಾರದಿದ್ದರೆ: ಗಸಗಸೆಯ ಹಾಲನ್ನು ತೆಂಗಿನಕಾಯಿಯ ಹಾಲಿನೊಂದಿಗೆ ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ ಸೇವಿಸಬೇಕು.

ಭಾನುವಾರ, ಜೂನ್ 22, 2008

ಮನೆ ಮದ್ದು-ಮುಂದುವರಿದದ್ದು

ಮುಂದುವರೆದದ್ದು
ಕಫ ಮತ್ತು ಕೆಮ್ಮು: ಹಸಿ ಶುಂಠಿಯರಸ ಮತ್ತು ವೀಳ್ಯೆದೆಲೆಯರಸವನ್ನು ಒಟ್ಟುಗೂಡಿಸಿ ಅದರಲ್ಲಿ ಜೇನುತುಪ್ಪವನ್ನು ಬೆರೆಸಿ ತಿನ್ನಬೇಕು.
ಶೀಘ್ರ ವಾಸಿಯಾಗುತ್ತದೆ.
ಸ್ತನದಲ್ಲಿ ಹಾಲು ತುಂಬಿಕೊಂಡು ಊದಿಕೊಂಡರೆ: ಪೂರ್ಣ ಅರಳಿದ ಹಿಡಿಮಲ್ಲಿಗೆ ಹೂಗಳನ್ನು ಎರಡೂ ಸ್ತನಗಳ ಮೇಲೆ ಇಟ್ಟು ಕಟ್ಟಬೇಕು ಅಥವಾ
ಹಸಿ ವೀಳ್ಯೆದೆಲೆ ಕಟ್ಟಿದರೂ ನಡೆಯುತ್ತದೆ.
ಅಜೀರ್ಣವಾದಾಗ: 1)-ಸ್ವಲ್ಪ ಓಮಕಾಳು(ಅಜವಾನ) ಸೇವಿಸಿ ಅಥವಾ ಅದರ ಕಷಾಯವನ್ನು ಕುಡಿಯಬೇಕು.
2)-ನೀರಿಗೆ ಒಂದು ಟೀ ಚಮಚ ನಿಂಬೆರಸ ಮತ್ತು ಒಂದು ಚಿಟಿಕೆ ಅಡುಗೆ ಸೋಡ ಬೆರೆಸಿ ಸೇವಿಸಿ.
ವಾಂತಿಯಾದಾಗ: ನಿಂಬೆಹಣ್ಣನ್ನು ಅರ್ಧ ಹೆಚ್ಚಿ ಅರ್ಧ ಹೋಳಿನಲ್ಲಿ ಸಕ್ಕರೆ ಹಾಕಿ ಕಾಯಿಸಿ ಸೇವಿಸಬೇಕು.
ಗಂಟಲು ನೋವು: ಸ್ವಲ್ಪ ತಿನ್ನುವ ಸುಣ್ಣಕ್ಕೆ ಅಷ್ಟೇ ಪ್ರಮಾಣದಲ್ಲಿ ಜೇನುತುಪ್ಪವನ್ನು ಸೇರಿಸಿ ಚೆನ್ನಾಗಿ ಕದಡಬೇಕು. ಅದನ್ನು ಗಂಟಲಿನ ಹೊರಭಾಗಕ್ಕೆ ಚೆನ್ನಾಗಿ ಲೇಪಿಸಬೇಕು.

ಶನಿವಾರ, ಜೂನ್ 21, 2008

ಮನೆ ಮದ್ದು-1

ಮನೆ ಮದ್ದು-1
ಹೊಟ್ಟೆನೋವಿಗೆ: ಬೆಲ್ಲದಲ್ಲಿ ಕಾಳುಮೆಣಸಿನಪುಡಿ ಬೆರೆಸಿ ಸೇವಿಸಿದರೆ ನೋವು ಶಮನವಾಗುತ್ತದೆ
ಒಣಕೆಮ್ಮು: ಬೆಲ್ಲದಲ್ಲಿ ಅರಿಶಿಣಪುಡಿ ಸೇರಿಸಿ ಸೇವಿಸಿದರೆ ಒಣಕೆಮ್ಮು ನಿವಾರಣೆಯಾಗಿ ಗಂಟಲಿಗೆ ಹಿತವಾಗಿರುತ್ತದೆ.

ಮಂಗಳವಾರ, ಜೂನ್ 10, 2008

ಭತ್ತ ಮಾತ್ರ ತೆಗೆದಿರುವ ಕೆಂಪು ಅಕ್ಕಿ

09-6-2008 ಭತ್ತ ಮಾತ್ರ ತೆಗೆದಿರುವ ಕೆಂಪು ಅಕ್ಕಿ

ಭತ್ತ ಮಾತ್ರ ತೆಗೆದಿರುವ ಕೆಂಪು ಅಕ್ಕಿಯನ್ನೇ ಯಾವಾಗಲೂ ಊಟಕ್ಕೆ ಉಪಯೋಗಿಸಿ ಆನಂದವನ್ನು ಪಡೆಯಿರಿ. ಈ ಅಕ್ಕಿಗೆ ಆಡು ಭಾಷೆಯಲ್ಲಿ ಕೆಂಪು ಮುಂಡಗ ಅಕ್ಕಿ ಅಥವಾ ಕಜ್ಜಾಯ ಅಕ್ಕಿ ಎಂದೂ ಕರೆಯುತ್ತಾರೆ. ಈ ಅಕ್ಕಿಯಲ್ಲಿ ಬೇಕಾದಷ್ಟು ಪೌಷ್ಟಿಕಾಂಶಗಳು ಇವೆ. ಹೊರಗಡೆ ಯಾವುದೇ ಅಂಗಡಿಯಲ್ಲಿ ಇದು ದೊರಕುವಂತಾದ್ದಲ್ಲ. ಕೋಟಿ ರೂಪಾಯಿಗಳನ್ನು ಕೊಟ್ಟರೂ ಸಿಗುವುದಿಲ್ಲ. ಊಟ ಮಾಡುತ್ತಿರುವಾಗಲೇ ಈ ಪೌಷ್ಟಿಕಾಂಶಗಳು ದೇಹದಲ್ಲಿರುವ ಎಲ್ಲ ಕಸಕಡ್ಡಿಗಳನ್ನೂ, ಅತಿಯಾದ ವಾತ ಪಿತ್ತ ಕಫಗಳನ್ನೂ, ಯಾವುದೇ ರೀತಿಯ ಬೆನ್ನುನೋವು, ತಲೆನೋವು, ಸೊಂಟನೋವು, ಕಾಲುನೋವು, ತಲೆಭಾರ, ನಿದ್ರೆ ಸರಿಯಾಗಿ ಬಾರದಿರುವುದು, ಕೊಲೆಸ್ಟರಾಲನ್ನು ಪೂರ್ತಿಯಾಗಿ ಕರಗಿಸುವುದು. ಮುಂದೆ ಎಂದೆಂದಿಗೂ ಕೊಲೆಸ್ಟರಾಲ್ ದೇಹದಲ್ಲಿ ಸೇರಲು ಅವಕಾಶ ಕೊಡುವುದಿಲ್ಲ, ಬ್ಲಡ್ ಶುಗರನ್ನು ೧೦೦ ಕ್ಕೆ ೧೦೦ ರಷ್ಟು ಕಡಿಮೆಮಾಡುವುದು. ಇದನ್ನೆಲ್ಲ ವಿಜ್ನಾನಿಗಳು ದೃಡಪಡಿಸಿದ್ದಾರೆ. ಮನೆಯಲ್ಲಿ ಪಿ.ಸಿ. ಇದ್ದು ಇಂಟರ್ನೆಟ್ ಹಾಕಿಸಿಕೊಂಡಿರುವವರು ಗೂಗಲ್ ನಲ್ಲಿ ಜಾಲಾಡಿನೋಡಿ. ಈ ಕಜ್ಜಾಯ ಅಕ್ಕಿಗೆ ೧೦೦ ಕ್ಕೆ ೧೦೦ ರಷ್ಟು ಕ್ಯಾನ್ಸರ್ ವಾಸಿಮಾಡುವ ಶಕ್ತಿ ಇದೆ.

ಇದಲ್ಲದೆ ಆಸಿಡಿಟಿ, ಗ್ಯಾಸ್ಟ್ರೈಟಿಸ್, ಬೊಜ್ಜು ಈ ಎಲ್ಲವೂ ೧೦೦% ವಾಸಿಯಾಗುತ್ತದೆ. ಇದಲ್ಲದೇ ಮುಖವೂ ಕಾಂತಿಯುಕ್ತವಾಗುತ್ತದೆ. ಕಣ್ಣುಗಳು ಮಿನುಗುತ್ತವೆ. ಚಟುವಟಿಕೆ ಜಾಸ್ತಿಯಾಗುತ್ತದೆ. ಊಟ ಮಾಡಿದ ತಕ್ಷಣ ಹೊಟ್ಟೆ ಭಾರವಾಗುವುದಿಲ್ಲ. ಬ್ಲೋಟಿಂಗ್ ಅನುಭವ ಇರುವುದಿಲ್ಲ. ಹೊಟ್ಟೆಯಲ್ಲಿ ಸಂಕಟವಾಗುವುದೂ ನಿಂತುಹೋಗುತ್ತದೆ. ಹೊಟ್ಟೆ ಯಾವಾಗಲೂ ತಂಪಾಗಿರುತ್ತದೆ. ಮಲಬದ್ದತೆ ನಿರ್ನಾಮವಾಗಿ ದೊಡ್ಡಕರುಳಿನಲ್ಲಿ ಕಟ್ಟಿಕೊಂಡಿರುವ ಅತ್ಯಂತ ಕಟ್ಟಕಡೆ ಪಾಚಿಯೂ ಸಹ ಕೊಚ್ಚಿಕೊಂಡು ಹೋಗುತ್ತದೆ. ಮಲವಿಸರ್ಜನೆಯ ಬಳಿಕ ದೇಹ ಮತ್ತು ಮನಸ್ಸು ಆನಂದಮಯವಾಗುತ್ತದೆ. ಪ್ರತಿದಿನ ಮಲವಿಸರ್ಜನೆಯ ನಂತರ ದೇಹ ಮತ್ತು ಮನಸ್ಸು ಹಗುರವಾಗಿ ಚಟುವಟಿಕೆಯಿಂದ ಕೂಡಿರುತ್ತದೆ. ಕೆಂಪು ಅಕ್ಕಿಯಲ್ಲಿರುವ ಅತ್ಯಂತ ಶಕ್ತಿ ಬೇರೆ ಯಾವುದೇ ಇಲ್ಲ ಎಂದು ಕಾಣಿಸುತ್ತದೆ. ಎಲ್ಲ ಧಾನ್ಯಗಳಿಗೂ ತನ್ನದೇ ಆದ ಶಕ್ತಿ ಇರುತ್ತದೆ. ಎಲ್ಲಾ ಕಾಲಕ್ಕೂ ಹೊಟ್ಟಿನಿಂದ ಕೂಡಿದ ಕೆಂಪು ಅಕ್ಕಿಯೇ ಸರ್ವಶ್ರೇಷ್ಟ ವಾದುದು.

ಬರೆದವರು : ಹೆಚ್.ಕೆ.ಸತ್ಯಪ್ರಕಾಶ್
೯೮೮೬೩ ೩೪೬೬೭
ಇ-ಮೈಲ್: ಎಸ್ಪಿ೧೯೩೯@ಜಿಮೈಲ್.kaaM

ಭಾನುವಾರ, ಏಪ್ರಿಲ್ 27, 2008

ಬೇಸಿಗೆಯ ಆರೋಗ್ಯಕರ ಪಾನೀಯಗಳು

ಸಿಹಿ ಲಸ್ಸಿ:
ಸಿಹಿ ಮೊಸರಿಗೆ ಕಲ್ಲುಸಕ್ಕರೆ ಬೆರೆಸಿ ಮಿಕ್ಸರ್ ನಲ್ಲಿ ತಿರುವಿ ಲಸ್ಸಿ ತಯಾರಿಸಬೇಕು.

ಕಬ್ಬಿನ ಹಾಲು :
ಇದಕ್ಕೆ ನಿಂಬೆರಸ ಬೆರೆಸಿ ಸೇವಿಸಬೇಕು. ಇದು ಬೇಸಿಗೆಯಲ್ಲಿ ಮಾತ್ರ. ಬೇರೆ ಕಾಲಗಳಲ್ಲಿ
ಬರೀ ಕಬ್ಬಿನ ರಸ ಸೇವಿಸಬೇಕು. ಅದಕ್ಕೆ ಸಕ್ಕರೆ, ಬೆಲ್ಲ, ಜೇನುತುಪ್ಪ ಇತ್ಯಾದಿಗಳನ್ನು ಬೆರೆಸಬಾರಾದು.

ಕಲ್ಲಂಗಡಿ ಜ್ಯೂಸ್:
ಕಲ್ಲಂಗಡಿ ಹಣ್ಣಿನ ತಿರುಳಿಗೆ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಕಾಳುಮೆಣಸಿನಪುಡಿ ಬೆರೆಸಿ ಮಿಕ್ಸಿ ಯಲ್ಲಿ ತಿರುವಬೇಕು.

ರಾಗಿ ಪಾನೀಯ:
ಮೊಳಕೆ ಬರಿಸಿದ ರಾಗಿ ರುಬ್ಬಿ ಸೋಸಿ, ಅದಕ್ಕೆ ಬೆಲ್ಲ ಹಾಕಿ ತಣ್ಣಗೆ ಅಥವಾ ಬಿಸಿ ಮಾಡಿ ಸೇವಿಸಬಹುದು.

ಟೊಮೇಟೋ ಪಾನೀಯ:
ಮೂರು ಟೋಮೇಟೋಗಳನ್ನು ಹೆಚ್ಚಿ ರುಬ್ಬಿ, ಅದಕ್ಕೆ ಕಿತ್ತಳೆ, ನಿಂಬೆ ಅಥವಾ ಮೋಸಂಬಿ ರಸ ಬೆರೆಸಿ.

ಹೆಸರಿನ ಪೇಯ:
ಹೆಸರು ಕಾಳನ್ನು ಹುರಿದು ಪುಡಿ ಮಾಡಿ, ನೀರು ಹಾಗೂ ಬೆಲ್ಲ ಸೇರಿಸಿ ಸೇವಿಸಿ.

ಕಿತ್ತಳೆ ಲಸ್ಸಿ:
ಸಿಹಿ ಮೊಸರು ೧ ಕಪ್, ಕಿತ್ತಳೆ ರಸ ೧ ಕಪ್, ಸ್ವಲ್ಪ ಸಕ್ಕರೆ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ ಕುಡಿಯಿರಿ.

ರಸಾಯನ: ಸಿಹಿ ಮಾವಿನಹಣ್ಣನ್ನು ಕತ್ತರಿಸಿ ಸಕ್ಕರೆ ಜೊತೆ ಬೆರೆಸಿ ಮಿಕ್ಸರ್ ನಲ್ಲಿ ರುಬ್ಬಿ ನೀರಿನ ಬದಲು ಹಾಲು ಬೆರೆಸಿದರೆ ಮಾವಿನ ರಸಾಯನ ಅಥವಾ ಮಿಲ್ಕ್ ಶೇಕ್ ಸಿದ್ಧ. ಮಾವಿನ ಹಣ್ಣಿನ ಬದಲು ಬಾಳೆಹಣ್ಣಿನಿಂದಲೂ ತಯಾರಿಸಬಹುದು.

ಎಳ್ಳಿನ ನೀರು:
ಬಿಳಿ ಎಳ್ಳನ್ನು ಹುರಿದು ಪುಡಿ ಮಾಡಿ ಅದಕ್ಕೆ ನೀರು, ಬೆಲ್ಲ, ಚಿಟಿಕೆ ಏಲಕ್ಕಿ ಪುಡಿ ಬೆರೆಸಬೇಕು.

ಈ ಮೇಲಿನ ಪಾನೀಯಗಳು ದೇಹವನ್ನು ತಂಪಾಗಿಡುತ್ತವೆ. ಬಾಯಾರಿಕೆ, ಸುಸ್ತು ನೀಗಿಸುತ್ತದೆ. ಅಗತ್ಯ ಪೋಷಕಾಂಶಗಳು, ನೀರಿನ ಅಂಶವನ್ನು ದೇಹಕ್ಕೆ ಪೂರೈಸುತ್ತದೆ.

ಶುಕ್ರವಾರ, ಏಪ್ರಿಲ್ 25, 2008

ಬೇಸಿಗೆ ಕಾಲದಲ್ಲಿ ಆಹಾರ

ಪ್ರಕೃತಿಯಲ್ಲಿ ಕಾಲಗಳು ಬದಲಾವಣೆ ಆಗುತ್ತಿರುತ್ತವೆ. ಅದರಲ್ಲೂ ಈ ಬೇಸಿಗೆ ಕಾಲ ಅನ್ನುವುದು ಬಹಳ ತಾಪವನ್ನುಂಟು ಮಾಡುವಂತಾದ್ದು.
ಈ ಬೇಸಿಗೆಯಲ್ಲಿ ನಾವುಗಳು ಆಹಾರದಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಬೇಸಿಗೆಯಲ್ಲಿ ಸೂರ್ಯನ ತಾಪದಿಂದಾಗಿ ದೇಹ ಬಳಲುತ್ತದೆ. ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುತ್ತದೆ. ಶಕ್ತಿ ಕುಂದುತ್ತದೆ. ಜೀರ್ಣಶಕ್ತಿ ಕಡಿಮೆಯಾಗುತ್ತದೆ. ಹಾಗಾಗಿ ದೇಹ ತಂಪು ಮಾಡುವ, ಜಲ ಅಂಶ ಹೆಚ್ಚು ಇರುವ ಆಹಾರ, ಜ್ಯೂಸ್ ಗಳನ್ನು ಸೇವಿಸಬೇಕು. ಅವು ಜೀರ್ಣಕ್ರಿಯೆಗೂ ಸಹಕಾರಿಯಾಗುವಂತೆ ಇರಬೇಕು. ಉಷ್ಣದ ಪಾನೀಯಗಳನ್ನು ಸೇವಿಸಕೂಡದು. ಉಪ್ಪು, ಹುಳಿ, ಖಾರರಸಗಳುಳ್ಳ ಸಾಧ್ಯವಾದಷ್ಟೂ ಕಡಿಮೆ ಮಾಡಬೇಕು. ಎಣ್ಣೆಯಲ್ಲಿ ಕರಿದ ತಿಂಡಿಗಳಿಂದ ದೂರವಿರಬೇಕು. ಮೈದಾ ಹಿಟ್ಟಿನಿಂದ ತಯಾರಿಸಿದ ಸಿಹಿ ಮತ್ತು ಖಾರದ ತಿಂಡಿಗಳನ್ನು ಸೇವಿಸಲೇಬಾರದು.
ಬೇಸಿಗೆಯಲ್ಲಿ ಆರೋಗ್ಯಕರ ಪಾನೀಯಗಳು:
೧)-ದ್ರಾಕ್ಷಿ ಜ್ಯೂಸ್: ಒಣ ದ್ರಾಕ್ಷಿ ಹಾಗೂ ಒಂದು ಕಪ್ನಷ್ಟು ಹಸಿ ದ್ರಾಕ್ಷಿ ಬೆರೆಸಿ ರುಬ್ಬಿ ಜ್ಯೂಸ್ ತಯಾರಿಸಬೇಕು. ಒಣ ದ್ರಾಕ್ಷಿ ಸಿಹಿಯಾಗಿರುವುದರಿಂದ ಜ್ಯೂಸ್ ಗೆ ಸಕ್ಕರೆ ಬೆರೆಸುವ ಅಗತ್ಯವಿಲ್ಲ. ಯಾವುದೇ ಹಣ್ಣಿನ ಪಾನೀಯಕ್ಕೂ ಸಕ್ಕರೆ ಬೆರೆಸಬೇಡಿ. ಬೇಕಿದ್ದರೆ ಜೇನುತುಪ್ಪ ಬೆರೆಸಿ ಕುಡಿಯಿರಿ.
..................................................................ಮುಂದುವರೆಯುವುದು

ಗುರುವಾರ, ಏಪ್ರಿಲ್ 24, 2008

ಕೂದಲು ಉದುರುವುದು

ಕೂದಲು ಉದುರುವುದಕ್ಕೆ ಶಕ್ತಿಹೀನತೆಯೇ ಮುಖ್ಯ ಕಾರಣ. ಪೋಷಕಾಂಶಗಳ ಅಭಾವದಿಂದ ಶಕ್ತಿಯ ಕೊರತೆಯುಂಟಾಗುವುದರಿಂದ ಇಳಿ ವಯಸ್ಸಿನಲ್ಲಿ ಹೆಚ್ಚು ಹೆಚ್ಚಾಗಿ ಕೂದಲು ಉದುರುವುದು. ಆದುದರಿಂದ ಉತ್ತಮ ಪೋಷಕಾಂಶಗಳುಳ್ಳ ಆಹಾರ ಜೀರ್ಣಿಸಿಕೊಳ್ಳುವ ಸಾಮರ್ಥ್ಯವಿದ್ದಲ್ಲಿ ಕೂದಲು ಉದುರುವಿಕೆ ಅಷ್ಟಾಗಿ ಕಂಡುಬರುವುದಿಲ್ಲ. ಕೂದಲು ಉದುರುವುದನ್ನು ತಡೆಗಟ್ಟಬೇಕಾದರೆ ಮಾಂಸ, ಮೀನು, ಹಾಲು, ಬೆಣ್ಣೆ, ತುಪ್ಪ, ಮೊಳೆತ ಕಡಲೆಕಾಳು, ಮೊಳೆತ ಹೆಸರುಕಾಳು ಕ್ರಮವಾಗಿ ಸೇವಿಸಬೇಕು. ಕರಿದ ತಿಂಡಿ, ತಿನಸುಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಕೋಪ, ವ್ಯಥೆ, ನಿರೀಕ್ಷೆ, ಕುತೂಹಲ, ಭಯ, ಚಿಂತೆ ಮತ್ತಿತರ ಕಾರಣಗಳಿಂದ ಮನಸ್ಸು ಕೆರಳದಂತೆ ಎಚ್ಚರಿಕೆ ವಹಿಸಬೇಕು. ನಿದ್ದೆ ಕೆಡುವುದು, ಅತಿಯಾದ ಲೈಂಗಿಕ ಸಂಭೋಗ, ಮಲಮೂತ್ರಗಳ ಒತ್ತಡ ತಡೆಹಿಡಿಯುವುದು ಸಾಧುವಲ್ಲ. ಪ್ರತಿದಿನವೂ ತಲೆಗೆ ತಣ್ಣೀರಿನ ತುಂತುರು ಸ್ನಾನ ಮಾಡುವ ಅಭ್ಯಾಸವಿಟ್ಟುಕೊಳ್ಳಬೇಕು. ಇದಿಷ್ಟೂ ಎಚ್ಚರಿಕೆಯ ಕ್ರಮಗಳನ್ನು ಅನುಸರಿಸುವುದೇ ಅಲ್ಲದೆ, ಪ್ರತಿದಿನ ತಲೆಕೂದಲಿಗೆ ಎಳ್ಳೆಣ್ಣೆ ಅಥವಾ ಅಪ್ಪಟ ಕೊಬ್ಬರಿ ಎಣ್ಣೆ ಹಚ್ಚಿ ಬಾಚುತ್ತಿರಬೇಕು. ವಾರಕ್ಕೊಮ್ಮೆ ಅಭ್ಯಂಜನ ಸ್ನಾನ ಮಾಡಲು ಮರೆಯಬಾರದು. ಈ ಕ್ರಮ ಅನುಸರಿಸುವುದರಿಂದ ಕೂದಲು ಉದುರುವುದನ್ನು ಹಾಗೂ ತಲೆಯಲ್ಲಿ ಹೊಟ್ಟು ಏಳುವುದನ್ನು ಬಹುಮಟ್ಟಿಗೆ ನಿವಾರಿಸಬಹುದು.
ಮನೆ ಮದ್ದು:
೧)-ಸುಮಾರು ೧೦೦ ಗ್ರಾಂ ಕೊಬ್ಬರಿ ಎಣ್ಣೆಗೆ ಒಂದು ಟೀ ಚಮಚ ನಿಂಬೆರಸ ಹಿಂಡಿ. ನಂತರ, ಆ ಎಣ್ಣೆಯೊಂದಿಗೆ ಅಷ್ಟೇ ಪ್ರಮಾಣ ಸುಣ್ಣದ ತಿಳಿ ಮಿಶ್ರ ಮಾಡಿ ಚೆನ್ನಾಗಿ ಕುಲುಕಿ. ಈ ಮಿಶ್ರಣವನ್ನು ಪ್ರತಿದಿನವೂ ಕೂದಲಿಗೆ ಹಚ್ಚುವ ಅಭ್ಯಾಸವಿಟ್ಟುಕೊಳ್ಳಿ.
೨)-ರಾತ್ರಿ ಮಲಗುವುದಕ್ಕಿಂತ ಮುಂಚೆ ಉಗುರು ಬೆಚ್ಚಗಿನ ಕೊಬ್ಬರಿ ಎಣ್ಣೆಯನ್ನು ತಲೆಬುರುಡೆಗೆ ಹಚ್ಚಿ ಚೆನ್ನಾಗಿ ತಿಕ್ಕಿ, ಮರುದಿನ ಬೆಳಿಗ್ಗೆ ತಲೆಗೆ ಸ್ನಾನ ಮಾಡಿ. ವಾರಕ್ಕೆ ಎರಡು ಬಾರಿ ಈ ಕ್ರಮ ಅನುಸರಿಸಿ.
೩)-ಕೂದಲಿನ ಬುಡಕ್ಕೆ ನಿಂಬೆ ರಸ ಹಚ್ಚಿ ಚೆನ್ನಾಗಿ ತಿಕ್ಕಿ. ಅರ್ಧ ಗಂಟೆಯ ನಂತರ ತಣ್ಣೀರಿನಿಂದ ತಲೆ ತೊಳೆಯಿರಿ.
೪)-ಮೆಂತ್ಯವನ್ನು ತಂಗಿನ ಹಾಲಿನೊಂದಿಗೆ ನುಣ್ಣಗೆ ಅರೆಯಿರಿ. ಈ ಸರಿಯನ್ನು ತಲೆಗೆ ಹಚ್ಚಿ ಚೆನ್ನಾಗಿ ತಿಕ್ಕಿ. ಅರ್ಧ ಗಂಟೆಯ ನಂತರ ತಣ್ಣೀರಿನಿಂದ ತಲೆ ತೊಳೆಯಿರಿ.
೫)-ವಾರಕ್ಕೊಮ್ಮೆ ಬೇವಿನ ಎಲೆಗಳ ಕಷಾಯದಿಂದ ತಲೆ ತೊಳೆಯಿರಿ.

ಮಂಗಳವಾರ, ಏಪ್ರಿಲ್ 8, 2008

ಫಿಸಿಯೋ ಥೆರಪಿ




ಹನುಮಂತನಗರದ ೫೦ ಅಡಿ ರಸ್ತೆಯಲ್ಲಿರುವ "ಸುಹಾಸ್ ಡಯಾಗ್ನೋಸ್ಟಿಕ್ ಸೆಂಟರ್" ನಲ್ಲಿ ಇತ್ತೀಚೆಗೆ ಫಿಸಿಯೋ ಥೆರಪಿ ಆರಂಭವಾಗಿದೆ.
ದಯವಿಟ್ಟು ಈ ಸ್ಥಳಕ್ಕೆ ಹತ್ತಿರವಾಗಿರುವವರು ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳಿರಿ
ಸುಹಾಸ್ ಡಯಾಗ್ನೋಸ್ಟಿಕ್ ಸೆಂಟರ್,
೫೪೮/ಏ, ೫೦ ಅಡಿ ರಸ್ತೆ, ಹನುಮಂತನಗರ, ಬೆಂಗಳೂರು-೫೬೦೦೫೦
ಫೋನ್: ೨೨೪೨ ೮೫೦೩, ೨೫೯೨ ೮೩೯೭, ೨೬೬೦ ೮೪೭೩

ಮನೆ ಮದ್ದುಗಳು

ಮನೆ ಮದ್ದು


ವಸ್ತು : ಸೌತೆಕಾಯಿ
ಉಪಯೋಗ : ಜೀರ್ಣಶಕ್ತಿ ಹೆಚ್ಚಳ ಮತ್ತು ಉತ್ತಮ ನಿದ್ರೆ.
ಸೌತೆಕಾಯಿಯನ್ನು ಸಿಪ್ಪೆ ಸಹಿತ ಕತ್ತರಿಸಿ ಕಾಳುಮೆಣಸಿನ ಪುಡಿ ಮತ್ತು ಉಪ್ಪಿನೊಂದಿಗೆ ಸೇರಿಸಿಕೊಂಡು ತಿನ್ನುತ್ತಾ ಬಂದರೆ ಜೀರ್ಣಶಕ್ತಿ ಹೆಚ್ಚುವುದು. ಸೌತೆಕಾಯಿ ತಿರುಳಿನಿಂದ ಅಂಗಾಲು ಉಜ್ಜಿಕೊಂಡರೆ ಕಣ್ಣುಗಳ ಉರಿ ಶಾಂತವಾಗಿ ಚೆನ್ನಾಗಿ ನಿದ್ದೆ ಬರುತ್ತದೆ. ಮುಖದ ಚರ್ಮದ ಮೇಲೆ ಸೌತೆಕಾಯಿ ಚೂರುಗಳನ್ನು ತಿಕ್ಕಿದರೆ ಮುಖ ಕಾಂತಿಯುಕ್ತವಾಗುವುದು.


ವಸ್ತು : ಏಲಕ್ಕಿ
ಶಮನ : ಅಜೀರ್ಣದ ಸಮಸ್ಯೆಯಿಂದ ಬಳಲುತ್ತಿರುವವರು ಏಲಕ್ಕಿ ಸೇವಿಸಿದರೆ ಶಮನಗೊಳ್ಳುವುದು. ಏಲಕ್ಕಿ ಯಿಂದ ಆಹಾರ ಜೀರ್ಣವಾಗಿ ಬಾಯಿಗೆ ರುಚಿಯುಂಟಾಗುತ್ತದೆ. ಒಣಕೆಮ್ಮು ಕಾಣಿಸಿಕೊಂಡಾಗ ಏಲಕ್ಕಿ ಪುಡಿಗೆ ಸ್ವಲ್ಪ ಶುಂಠಿ ಪುಡಿಯನ್ನು ಸೇರಿಸಿ ಸೇವಿಸಿದರೆ ಪರಿಣಾಮ ಬೀರುವುದು. ಮೇಲಿಂದ ಮೇಲೆ ಭೇದಿಯಾಗುತ್ತಿದ್ದರೆ ಸ್ವಲ್ಪ ಏಲಕ್ಕಿಯನ್ನು ಬೆಣ್ಣೆಯೊಡನೆ ಅರೆದು ತಿನ್ನುವುದರಿಂದ ಭೇದಿ ಕಡಿಮೆಯಾಗುತ್ತದೆ.


ವಸ್ತು : ಮೆಣಸು
ಶಮನ : ಅಜೀರ್ಣ, ಮೊಡವೆ, ಜಂತುಹುಳು.
ಮೆಣಸನ್ನು ಚೆನ್ನಾಗಿ ಪುಡಿ ಮಾಡಿ ಶುಂಠಿಯ ರಸದೊಡನೆ ಸೇವಿಸುವುದರಿಂದ ಅಜೀರ್ಣವು ನಿವಾರಣೆಯಾಗುತ್ತದೆ. ಕೆಲವು ಮೆಣಸಿನ ಕಾಳುಗಳನ್ನು ನೀರಿನಲ್ಲಿ ತೇಯ್ದು ಮೊಡವೆಗಳಿರುವ ಜಾಗಕ್ಕೆ ಹಚ್ಚಿದರೆ ವಾಸಿಯಾಗುತ್ತವೆ. ಹೊಟ್ಟೆಯಲ್ಲಿ ಜಂತುಹುಳುಗಳ ಉಪಟಳ ಜಾಸ್ತಿಯಾದಾಗ ಬೆಳಗ್ಗೆ ಮತ್ತು ರಾತ್ರಿ ಮೆಣಸಿನ ಕಷಾಯವನ್ನು ಕುಡಿಯುವುದು ಪರಿಣಾಮಕಾರಿ.


ವಸ್ತು : ಈರುಳ್ಳಿ
ಶಮನ : ರಕ್ತಹೀನತೆ, ಗಾಯದ ನೋವು, ರಕ್ತಸ್ರಾವ.
ಊಟದ ಜತೆ ಹಲವು ದಿನಗಳವರೆಗೆ ಪ್ರತಿನಿತ್ಯ ಹಸಿ ಈರುಳ್ಳಿಯನ್ನು ತಿನ್ನುವುದರಿಂದ ರಕ್ತಹೀನತೆ ವಾಸಿಯಾಗುತ್ತದೆ. ಪಟಾಕಿ ಸಿಡಿದು ಉಂಟಾದ ಗಾಯಗಳಿಗೆ ಈರುಳ್ಳಿಯನ್ನು ಜಜ್ಜಿ ಕಟ್ಟುವುದರಿಂದ ನೋವು ಕಡಿಮೆಯಾಗುತ್ತದೆ. ಮೂಗಿನಿಂದ ಆಗಾಗ್ಗೆ ರಕ್ತ ಒಸರುತ್ತಿದ್ದರೆ, ಮೂಗಿಗೆ ಒಂದೆರಡು ತೊಟ್ಟು ಈರುಳ್ಳಿ ರಸವನ್ನು ಹಾಕುವುದರಿಂದ ರಕ್ತ ಒಸರುವುದು ನಿಲ್ಲುವುದು.


ವಸ್ತು : ಕಡಲೆಕಾಳು
ಉಪಯೋಗ : ತೂಕ ಹೆಚ್ಚಳ, ಬಿಕ್ಕಳಿಕೆಗೆ ಕಡಿವಾಣ.
ಕಡಲೇಬೇಳೆಯನ್ನು ಚೆನ್ನಾಗಿ ಬೇಯಿಸಿ ಬೆಲ್ಲದೊಡನೆ ರುಬ್ಬಿ ತಯಾರಿಸಿದ ಹೂರಣವನ್ನು ಮಿತ ಪ್ರಮಾಣದಲ್ಲಿ ಹಲವು ದಿವಸ ತಿಂದರೆ ಶರೀರದ ತೂಕವು ಹೆಚ್ಚಾಗುವುದು. ಹುರಿದ ಕಡಲೆಯ ಹಿಟ್ಟನ್ನು ಕೆಂಡದ ಮೇಲೆ ಹಾಕಿ ಬಂದ ಹೊಗೆಯನ್ನು ಕುಡಿಯುವುದರಿಂದ ಬಿಕ್ಕಳಿಕೆ ನಿಲ್ಲುತ್ತದೆ.

ವಸ್ತು : ಹಲಸಿನ ಹಣ್ಣು
ಶಮನ : ತಲೆನೋವು, ನಿತ್ರಾಣ
ಸಾಮಾನ್ಯ ತಲೆನೋವು ಇರುವಾಗ, ಸ್ವಲ್ಪ ತುಪ್ಪದೊಡನೆ ಬೆಲ್ಲ ಸೇರಿಸಿ ಸೇವಿಸುವುದರಿಂದ ತಲೆನೋವು ಕಡಿಮೆಯಾಗುತ್ತದೆ. ಗರ್ಭಿಣಿಯರಿಗೆ ಮತ್ತು ಇತರರಿಗೆ ಆಗಾಗ್ಗೆ ನಿತ್ರಾಣವೆನಿಸಿದಾಗ ಬಿಸಿ ಹಾಲಿನ ಜೊತೆ ಸ್ವಲ್ಪ ಬೆಲ್ಲ ಸೇರಿಸಿ ಕುಡಿಯುವುದರಿಂದ ಚೈತನ್ಯ ಮೂಡುವುದು.


ವಸ್ತು : ಶುಂಠಿ
ಶಮನ : ಗಂಟಲು ಕಟ್ಟುವಿಕೆ, ಬಾಯಿ ವಾಸನೆ
ಶೀತ ಅಥವಾ ಇನ್ನಾವುದೇ ತೊಂದರೆಗಳಿಂದ ಗಂಟಲು ಕಟ್ಟಿ ಸರಿಯಾಗಿ ಮಾತನಾಡಲು ತೊಂದರೆಯಾದರೆ, ಹಸಿಶುಂಠಿ, ಲವಂಗ ಮತ್ತು ಸ್ವಲ್ಪ ಅಡುಗೆ ಉಪ್ಪು ಸೇರಿಸಿ ಬಾಯಿಗೆ ಹಾಕಿಕೊಂಡು ಚಪ್ಪರಿಸಿದರೆ ಗಂಟಲು ಕಟ್ಟುವುದು ನಿವಾರಣೆಯಾಗುತ್ತದೆ. ಶುಂಠಿ ಸುಟ್ಟು ಬೂದಿ ಮಾಡಿಟ್ಟುಕೊಂಡು ಅದಕ್ಕೆ ಸ್ವಲ್ಪ ಉಪ್ಪು ಬೆರೆಸಿ ಹಲ್ಲುಜ್ಜುವುದರಿಂದ ಬಾಯಿ ವಾಸನೆ ಕಡಿಮೆಯಾಗುತ್ತದೆ.


ವಸ್ತು : ಮೆಂತ್ಯಸೊಪ್ಪು
ಶಮನ : ಸಕ್ಕರೆ ಕಾಯಿಲೆ
ಸಕ್ಕರೆ ರೋಗ ನಿಯಂತ್ರಣದಲ್ಲಿ ಮೆಂತ್ಯಸೊಪ್ಪು ಸಹಕಾರಿ.
ಸಕ್ಕರೆ ಕಾಯಿಲೆ ಕಾಣಿಸಿಕೊಂಡ ಆರಂಭದಲ್ಲಿಯೇ ಪ್ರತಿದಿವಸ ಬೆಳಿಗ್ಗೆ ಮೆಣ್ತ್ಯಸೊಪ್ಪಿನ ರಸವನ್ನು ಕುಡಿಯುತ್ತಾ ಬಂದರೆ ಪರಿಣಾಮ ಬೀರುವುದು. ಮೆಂತ್ಯಸೊಪ್ಪಿನಂತೆಯೇ ಮೆಂತ್ಯ ಕೂಡ ಔಷಧೀಯ ಗುಣಗಳನ್ನು ಹೊಂದಿದೆ.


ವಸ್ತು : ಎಳ್ಳು
ಶಮನ : ಸುಟ್ಟ ಗಾಯ, ಉರಿಮೂತ್ರ
ಸುಟ್ಟಗಾಯಕ್ಕೆ ಎಳ್ಳೆಣ್ಣೆ ಹಚ್ಚುವುದರಿಂದ ಗಾಯ ಬೇಗ ವಾಸಿಯಾಗುತ್ತದೆ. ಎಳ್ಳು ಮತ್ತು ಸೌತೆಬೀಜವನ್ನು ಅರೆದು ಹಾಲು, ತುಪ್ಪದೊಡನೆ ಸೇರಿಸಿ ಕುಡಿಯುವುದರಿಂದ ಎಲ್ಲ ರೀತಿಯ ಕಟ್ಟು ಮೂತ್ರ ಮತ್ತು ಉರಿಮೂತ್ರ ಗುಣವಾಗುತ್ತದೆ.


ಸಾಸಿವೆ(ಮಸ್ಟರ್ಡ್)
ಶಮನ : ಹಲ್ಲು ನೋವು, ಉಪ್ಪಿನಕಾಯಿ ಶಿಲೀಂದ್ರ
ಹಲ್ಲು ನೋವಿರುವವರು ಸ್ವಲ್ಪ ಸಾಸಿವೆ ಕಾಳನ್ನು ಅಗಿದು ಸ್ವಲ್ಪ ಹೊತ್ತಿನ ನಂತರ ಉಗಿಯಬೇಕು. ಇದರಿಂದ ಹಲ್ಲುನೋವು ನಿವಾರಣೆಯಾಗುತ್ತದೆ. ಜತೆಗೆ ಹಸಿವನ್ನೂ ಹೆಚ್ಚಿಸುತ್ತದೆ. ಉಪ್ಪಿನಕಾಯಿಯಲ್ಲಿ ಸಾಸಿವೆಯನ್ನು ಸ್ವಲ್ಪ ಹೆಚ್ಚು ಬಳಸಿದರೆ, ಬೇಗ ಕೆಡುವುದಿಲ್ಲ. ಸಾಮಾನ್ಯವಾಗಿ ಉಪ್ಪಿನಕಾಯಿ ಹಾಳಾಗಲು ಆಸ್ಟರ್ಜಲಿನ್ ಎಂಬ ಶಿಲೀಂದ್ರ ಕಾರಣವಾಗಿದ್ದು, ಇದು ಬೆಳೆಯುವುದನ್ನು ಸಾಸಿವೆ ತಡೆಯುತ್ತದೆ.

ವಸ್ತು : ಗೋಧಿ
ಶಮನ : ಹೊಟ್ಟೆ ಹುಣ್ಣು, ಕೀಲುನೋವು
ಗೋಧಿ ಹಿಟ್ಟಿನಲ್ಲಿ ಚಪಾತಿ ಮಾಡಿ ತಿನ್ನುವುದರಿಂದ ಹೊಟ್ಟೆಯಹುಣ್ಣು ನಿವಾರಣೆಯಾಗುವುದು. ಜತೆಗೆ ಹಲ್ಲು ಮತ್ತು ವಸಡುಗಳಿಗೆ ಶಕ್ತಿ ಬರುವುದು. ಗೋಧಿ ಹಿಟ್ಟಿನ ತಂಬಿಟ್ಟು ಮಾಡಿಕೊಂಡು ತಿಂದರೆ ಕೀಲು ಮತ್ತು ಎಲುಬು ನೋವು ಶಮನಗೊಳ್ಳುವುದು.


ವಸ್ತು : ಶುಂಠಿ
ಶಮನ : ಅಜೀರ್ಣ, ನೆಗಡಿ, ಹಲ್ಲುನೋವು.
ಊಟ ಮಾಡುವುದಕ್ಕೆ ಮೊದಲು ಅವರೆಕಾಳಿನಷ್ಟು ಹಸಿಶುಂಠಿಯನ್ನು ನಾಲ್ಕು ಹರಳು ಉಪ್ಪು ಸಹಿತ ಅಗಿದು ತಿಂದರೆ ಅಜೀರ್ಣದ ಸಮಸ್ಯೆ ಇಲ್ಲವಾಗುವುದು. ಹಸಿಶುಂಠಿಯ ಕಷಾಯಕ್ಕೆ ಸಕ್ಕರೆ ಬೆರೆಸಿ ದಿನಕ್ಕೆ ಮೂರು ಬಾರಿ ಸೇವಿಸಿದರೆ ನೆಗಡಿ ನಿವಾರಣೆಯಾಗುವುದು. ಒಣಶುಂಠಿಯನ್ನು ಕೆಂಡದ ಮೇಲೆ ಸುಟ್ಟು ಪುಡಿ ಮಾಡಿ ಅದಕ್ಕೆ ಉಪ್ಪಿನ ಪುಡಿ ಬೆರೆಸಿ ಹಲ್ಲು ತಿಕ್ಕಿದರೆ ಹಲ್ಲು ನೋವು ಶಮನವಾಗುವುದು.


ವಸ್ತು : ಜೇನುತುಪ್ಪ
ಶಮನ : ಸುಟ್ಟ ಗಾಯ, ಚರ್ಮರೋಗ.
ಸುಟ್ಟ ಗಾಯಕ್ಕೆ ತಕ್ಷಣ ಜೇನುತುಪ್ಪ ಹಚ್ಚುವುದರಿಂದ ಉರಿ ಶಮನವಾಗಿ ಗಾಯ ಶೀಘ್ರ ಮಾಗುತ್ತದೆ. ಹುಳುಕಡ್ಡಿ, ಇಸಬು ಮುಂತಾದ ಚರ್ಮರೋಗಗಳಿಗೆ ಮತ್ತು ಹುಣ್ಣುಗಳ ಮೇಲೆ ಜೇನುತುಪ್ಪ ಸವರುವುದರಿಂದ ಗುಣವಾಗುವುದು.


ವಸ್ತು : ಕಡಲೇ ಕಾಳು
ಶಮನ : ನಿಶ್ಯಕ್ತಿ, ನೆಗಡಿ
ನಿಶ್ಯಕ್ತಿಯಿಂದ ಬಳಲುವವರು, ಹೆಚ್ಚು ವ್ಯಾಯಾಮ ಮಾಡುವವರು ಎರಡು ಮೂರು ಚಮಚದಷ್ಟು ಕಡಲೇ ಕಾಳನ್ನು ತಣ್ಣೀರಿನಲ್ಲಿ ರಾತ್ರಿ ನೆನೆಸಿಟ್ಟು ಬೆಳಗ್ಗೆ ಒಣದ್ರಾಕ್ಷಿಯ ಜತೆ ಅಗಿದು ಸೇವಿಸಿ ನಂತರ ಹಾಲು ಕುಡಿದರೆ ನಿಶ್ಯಕ್ತಿ ಕಡಿಮೆಯಾಗುವುದು. ನೆಗಡಿಯಿರುವವರು ಬಿಸಿಯಾದ ಕಡಲೆಯನ್ನು ತಿನ್ನುವುದರಿಂದ ಶೀತ ಕಡಿಮೆಯಾಗುತ್ತದೆ.


ವಸ್ತು : ಹಲಸಿನ ಹಣ್ಣು
(ಜ್ಯಾಕ್ ಫ್ರೂಟ್)
ಶಮನ : ಪಿತ್ತ ವಿಕಾರ, ನರಗಳ ದೌರ್ಬಲ್ಯ.
ಹಲಸಿನ ಹಣ್ಣನ್ನು ಜೇನುತುಪ್ಪದೊಡನೆ ತಿನ್ನುತ್ತಾ ಬಂದರೆ ಪಿತ್ತವಿಕಾರಗಳು ಶಮನಗೊಳ್ಳುವುದು. ತೊಳೆಗಳನ್ನು ಸಣ್ಣದಾಗಿ ತುಂಡುಮಾಡಿ ಬಾಳೆಹಣ್ಣು, ಜೇನುತುಪ್ಪದೊಡನೆ ಸೇವಿಸಿದರೆ ದೈಹಿಕ ಶಕ್ತಿ ಹೆಚ್ಚುವುದಲ್ಲದೇ ನರಗಳ ದೌರ್ಬಲ್ಯ ಕಡಿಮೆಯಾಗುತ್ತದೆ. ಹಲಸಿನ ಸೇವನೆಯಿಂದ ವೀರ್ಯ್ ವೃದ್ಧಿಯೂ ಆಗುತ್ತದೆ. ಅತಿಯಾಗಿ ತಿಂದರೆ ಹೊಟ್ಟೆನೋವು ಬರುವ ಸಾಧ್ಯತೆ ಇದೆ.


ವಸ್ತು : ಸೀತಾಫಲ (ಕಸ್ಟರ್ಡ್ ಆಪಲ್)
ಉಪಯೋಗ : ಜೀರ್ಣಶಕ್ತಿ ಹೆಚ್ಚಳ, ರಕ್ತವೃದ್ಧಿ.
ಪ್ರತಿದಿನ ಊಟದ ನಂತರ ಈ ಹಣ್ಣನ್ನು ಸೇವಿಸುವುದರಿಂದ ಜೀರ್ಣಶಕ್ತಿ ಹೆಚ್ಚುವುದು. ಇದು ತಂಪುಕಾರಕವಾಗಿದ್ದು ಸೇವನೆಯಿಂದ ರಕ್ತವೃದ್ಧಿಯಾಗುವುದರ ಜತೆಗೆ ಸ್ನಾಯುಗಳು ಬಲಗೊಳ್ಳುತ್ತವೆ. ವಾಂತಿ ಹಾಗೂ ಹೊಟ್ಟೆ ಉರಿ ಶಮನವಾಗುತ್ತದೆ. ಕುರುಗಳನ್ನು ಪಕ್ವಗೊಳಿಸಲು ಹಣ್ಣಿನ ತಿರುಳನ್ನು ಉಪ್ಪಿನ ಜತೆ ಬೆರೆಸಿ ಲೇಪಿಸಬೇಕು.



ವಸ್ತು : ಹಾಗಲಕಾಯಿ
(ಬಿಟ್ಟರ್ ಗೌರ್ಡ್)
ಶಮನ : ಮಧುಮೇಹ, ಕರುಳಿನ ಹುಣ್ಣು, ಮೂಲವ್ಯಾಧಿ.
ಮಧುಮೇಹದಿಂದ ನರಳುತ್ತಿರುವ ರೋಗಿಗಳು ಹಾಗಲಕಾಯಿಯನ್ನು ಹಸಿಯಾಗಿ ತಿಂದರೆ ರೋಗ ಉಲ್ಬಣಿಸದೆ ಬಹುಪಾಲು ಗುಣವಾಗುವುದು. ಹಾಗಲಕಾಯಿಯ ಗೊಜ್ಜು ಮಾಡಿಕೊಂಡು ಕ್ರಮವಾಗಿ ಸೇವಿಸುತ್ತಿದ್ದರೆ ರಕ್ತ ಶುದ್ಧಿಯಾಗುವುದು. ಕರುಳಿನ ಹುಣ್ಣು, ಮೂಲವ್ಯಾಧಿ ಹಾಗೂ ಕೆಮ್ಮು ನಿವಾರಣೆಯಾಗುವುದು.


ವಸ್ತು : ಅಂಜೂರ (ಫಿಗ್)
ಶಮನ : ಒತ್ತಡ, ಮಲಬದ್ಧತೆ, ಮೂಲವ್ಯಾಧಿ.
ಅಂಜೂರದ ಹಣ್ಣುಗಳ ಸೇವನೆಯಿಂದ ಅಧಿಕ ಕೆಲಸದಿಂದ ಉಂಟಾದ ದೈಹಿಕ ಮತ್ತು ಮಾನಸಿಕ ಒತ್ತಡ ನಿವಾರಣೆಯಾಗುವುದು. ನವ ಚೈತನ್ಯ ಮೂಡುವುದು. ಈ ಹಣ್ಣಿನಲ್ಲಿ ನಾರಿನಂಶವಿರುವುದರಿಂದ ಮಲಬದ್ಧತೆ ಶಮನವಾಗುವುದು. ಮೂಲವ್ಯಾಧಿಯಿಂದ ಬಳಲುವವರು ಮೂರು ಅಂಜೂರದ ಹಣ್ಣುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಎದ್ದ ಕೂಡಲೇ ಹಣ್ಣುಗಳನ್ನು ತಿಂದು ಆ ನೀರು ಕುಡಿದರೆ ಗುಣವಾಗುವುದು.


ವಸ್ತು ಸೇಬು (ಆಪಲ್)
ಶಮನ : ತಲೆನೋವು, ಮರೆವು, ಮೊಡವೆ.
ಸೇಬಿನ ಹಣ್ಣನ್ನು ತುಂಡುಮಾಡಿಕೊಂಡು ಉಪ್ಪು ಸಹಿತ ನಿರಂತರ ಸೇವಿಸಿದರೆ ತಲೆನೋವು ಕಡಿಮೆಯಾಗುವುದು. ಸೇಬಿನ ತಿರುಳನ್ನು ಅರೆದು ಮುಖಕ್ಕೆ ಲೇಪಿಸಿಕೊಂಡರೆ ಮೊಡವೆಗಳು ನಿವಾರಣೆಯಾಗಿ ಮುಖದ ಕಾಂತಿ ಹೆಚ್ಚುವುದು. ಊಟವಾದ ಬಳಿಕ ಸೇಬನ್ನು ತಿಂದರೆ ಜ್ನಾಪಕ ಶಕ್ತಿ ಹೆಚ್ಚುವುದು.


ವಸ್ತು : ಪರಂಗಿ ಹಣ್ಣು
(ಪಪಾಯ)
ಶಮನ : ಹೃದಯ ದೌರ್ಬಲ್ಯ
ಪರಂಗಿಹಣ್ಣಿನ ಜತೆ ಹಾಲು ಮತ್ತು ಜೇನುತುಪ್ಪ ಸೇರಿಸಿ ಸೇವಿಸುವುದರಿಂದ ಹೃದಯ ದೌರ್ಬಲ್ಯ ನಿವಾರಣೆಯಾಗಿ ಹೊಸ ಚೈತನ್ಯ ಮೂಡುವುದು. ಹಾಲುಣಿಸುವ ತಾಯಂದಿರು ಹಣ್ಣನ್ನು ನಿಯಮಿತವಾಗಿ ಬಳಸುವುದರಿಂದ ಶಕ್ತಿ ಹೆಚ್ಚುವುದು. ಊಟದ ನಂತರ ಹಣ್ಣನ್ನು ಸೇವಿಸುತ್ತಾ ಬಂದರೆ ಆಹಾರ ಚೆನ್ನಾಗಿ ಜೀರ್ಣವಾಗುವುದು.


ವಸ್ತು : ಕಡಲೇಕಾಯಿ
ಉಪಯೋಗ : ಮುಖದ ಕಾಂತಿ ಹೆಚ್ಚಳ, ಮಧುಮೇಹಿಗಳಿಗೆ ಅನುಕೂಲ.
ಒಂದು ಚಮಚ ಕಡಲೇಕಾಯಿ ಎಣ್ಣೆಗೆ ಅಷ್ಟೇ ಪ್ರಮಾಣದ ನಿಂಬೆ ರಸ ಬೆರೆಸಿ ರಾತ್ರಿ ಮುಖಕ್ಕೆ ಲೇಪಿಸುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ. ಗೋಧಿ ಹಿಟ್ಟು ಹಾಗೂ ಶೇಂಗಾ ಹಿಟ್ಟು ಬೆರೆಸಿದ ರೊಟ್ಟಿಯು ಮಧುಮೇಹಿಗಳಿಗೆ ಹಿತ. ಶೇಂಗಾ ಹಿಂಡಿಯಲ್ಲಿ ಉತ್ತಮ ಸಸಾರಜನಕವಿದ್ದು, ದನಕರುಗಳಿಗೆ ಉತ್ತಮ.


ವಸ್ತು : ಮಾವು (ಮ್ಯಾಂಗೊ)
ಶಮನ : ಮೂಲವ್ಯಾಧಿ, ವಾತ-ಪಿತ್ತ, ಮಲಬದ್ಧತೆ, ಅಜೀರ್ಣ.
ಹುಣಸೆ ಚಿಗುರು ಮತ್ತು ಎಳೆ ಮಾವಿನಕಾಯಿಯನ್ನು ಬೇಯಿಸಿಕೊಂಡು ತಿಂದರೆ ಮೂಲವ್ಯಾಧಿ ಗುಣವಾಗುವುದು. ಹಣ್ಣನ್ನು ಹಿತಮಿತವಾಗಿ ತಿಂದರೆ ವಾಯು ಶಮನಗೊಳ್ಳುವುದು. ವಾತ-ಪಿತ್ತ ನಾಶಗೊಳಿಸಿ ಹೃದಯಕ್ಕೆ ಹಿತವಾಗುವುದು. ಉಪ್ಪು ಮತ್ತು ಜೇನುತುಪ್ಪವನ್ನು ನಂಚಿಕೊಂಡು ಮಾವಿನಕಾಯಿ ಹೀಚು ತಿಂದರೆ ಮಲಬದ್ಧತೆ ಮತ್ತು ಅಜೀರ್ಣ ನಿವಾರಣೆಯಾಗುವುದು.


ವಸ್ತು : ಅಡುಗೆ ಉಪ್ಪು
ಶಮನ : ಬಾಯಿ ಹುಣ್ನು
ಒಂದು ಬಟ್ಟಲು ಬಿಸಿನೀರಿನಲ್ಲಿ ಅರ್ಧ ಟೀ ಚಮಚ ಉಪ್ಪನ್ನು ಕರಗಿಸುವುದು. ನಂತರ ಈ ನೀರಿನಿಂದ ಬಾಯಿ ಮುಕ್ಕಳಿಸುವುದರಿಂದ ಬಾಯಿ ಹುಣ್ಣು ಶಮನವಾಗುವುದು.


ವಸ್ತು : ಮೆಣಸು
ಶಮನ : ಹಲ್ಲುನೋವು
ಮೆಣಸನ್ನು ನುಣ್ಣಗೆ ಅರೆದು ವಸಡಿಗೆ ಹಚ್ಚುವುದರಿಂದ ಕೆಟ್ಟ ನೀರು ಸುರಿದುಹೋಗಿ ನೋವು ಕಡಿಮೆಯಾಗುವುದು. ವಸಡಿಗೆ ನಿಂಬೆರಸ ಹಚ್ಚುವುದರಿಂದ ಹಲ್ಲುನೋವು ಶಮನವಾಗುವುದು.


ವಸ್ತು : ಕಿತ್ತಳೆ
ಶಮನ : ಮುಖದಲ್ಲಿ ಕಲೆ
ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಮುಖದಲ್ಲಿ ಕಲೆಯಿರುವ ಭಾಗದಲ್ಲಿ ಮೃದುವಾಗಿ ತಿಕ್ಕಬೇಕು. ಪ್ರತಿದಿನ ಹೀಗೆ ಮಾಡುತ್ತಿದ್ದರೆ ಮುಖದಲ್ಲಿನ ಮೊಡವೆಗಳು ಹಾಗೂ ಕಪ್ಪು ಕಲೆಗಳು ನಿವಾರಣೆಯಗುವುವು.


ವಸ್ತು : ಕೊತ್ತಂಬರಿ
ಶಮನ : ತಲೆನೋವು, ಬಾಯಿಯ ದುರ್ಗಂಧ.
ಕೊತ್ತಂಬರಿ ಸೊಪ್ಪಿನ ರಸವನ್ನು ಹಣೆಗೆ ಲೇಪ ಹಾಕುವುದರಿಂದ ತಲೆನೋವು ನಿವಾರಣೆಯಾಗುವುದು. ಬರೀ ಕೊತ್ತಂಬರಿಸೊಪ್ಪನ್ನು ಬಾಯಿಯಲ್ಲಿ ಜಗಿಯುವುದರಿಂದ ಬಾಯಿಯಿಂದ ದುರ್ಗಂಧ ಬರುವುದಿಲ್ಲ. ಜತೆಗೆ ದಂತ ಕ್ಷಯವೂ ನಿವಾರಣೆಯಾಗುತ್ತದೆ.


ವಸ್ತು : ಉದ್ದು
ಶಮನ : ವೀರ್ಯ ವೃದ್ಧಿಯಾಗಿ ಶಾರೀರಿಕ ಬಲ.
ಉದ್ದಿನ ಬೇಳೆಯನ್ನು ಹುರಿದು ಹಾಲಿನಲ್ಲಿ ಬೇಯಿಸಿ ಸಕ್ಕರೆ, ಏಲಕ್ಕಿ ಸೇರಿಸಿ ಪಾಯಸ ಮಾಡಿ ಸೇವಿಸುವುದರಿಂದ ವೀರ್ಯ ವೃದ್ಧಿಯಾಗಿ ಶಾರೀರಿಕ ಬಲ ಹೆಚ್ಚುವುದು. ಉದ್ದಿನ ಬೇಳೆ ತೊವ್ವೆಯನ್ನು ತಯಾರಿಸಿ ಊಟದ ಜತೆ ಸೇವಿಸಿದರೆ ಅಂಗಾಂಗಗಳು ಬಲಗೊಳ್ಳುವುವು.


ವಸ್ತು : ನಿಂಬೆ
ಶಮನ : ಸೊಳ್ಳೆಗಳ ಕಾಟ, ಬಾಯಿಯ ದುರ್ವಾಸನೆ.
ಸೊಳ್ಳೆಗಳು ಹೆಚ್ಚಾಗಿರುವ ಪ್ರದೇಶದಲ್ಲಿ ವಾಸಿಸುವ ಜನರು ಮೈಕೈಗೆ ನಿಂಬೆರಸ ಸವರಿಕೊಂಡರೆ ಸೊಳ್ಳೆಗಳು ಹತ್ತಿರ ಸುಳಿಯುವುದಿಲ್ಲ. ಬಾಯಿಯಿಂದ ದುರ್ವಾಸನೆ ಬರುತ್ತಿದ್ದರೆ ನಿಂಬೆರಸವನ್ನು ನೀರಿನಲ್ಲಿ ಬೆರೆಸಿ ಆಗಾಗ ಬಾಯಿ ಮುಕ್ಕಳಿಸುವುದರಿಂದ ನಿವಾರಣೆಯಾಗುವುದು.


ವಸ್ತು : ಲವಂಗ
ಶಮನ : ಹಲ್ಲು ನೋವು, ಕೆಮ್ಮು.
ಹಲ್ಲು ನೋವಿಗೆ ಲವಂಗದ ಎಣ್ಣೆ ಅಥವಾ ಲವಂಗದ ಮುಲಾಮನ್ನು ಹಚ್ಚುವುದರಿಂದ ನೋವು ನಿವಾರಣೆಯಾಗುತ್ತದೆ. ಸಾಧಾರಣ ಕೆಮ್ಮು ಕಾಣಿಸಿಕೊಂಡಾಗ ಕಲ್ಲುಸಕ್ಕರೆ ಮತ್ತು ಲವಂಗವನ್ನು ಬಾಯಿಗೆ ಹಾಕಿಕೊಂಡು ಜಗಿದು ರಸ ನುಂಗುವುದರಿಂದ ಶಮನವಾಗುವುದು.





ವಸ್ತು : ತುಳಸಿ
ಶಮನ : ಮೈಕೈನೋವು
ಒಂದು ಲೋಟ ನೀರಿನಲ್ಲಿ ಹತ್ತು ತುಲಸಿ ಎಲೆಗಳನ್ನು ಚೆನ್ನಾಗಿ ಕುದಿಸುವುದು. ನೀರು ಚೆನ್ನಾಗಿ ಕುದಿದು ಅರ್ಧ ಲೋಟ ಆದಮೇಲೆ ಸೋಸಿಕೊಳ್ಳುವುದು. ತಣ್ಣಗಾದ ಕಷಾಯಕ್ಕೆ ಉಪ್ಪನ್ನು ಹಾಕಿ ಕುಡಿಯುವುದು. ಮೈಕೈನೋವು ನಿಲ್ಲುವವರೆಗೂ ಪ್ರತಿದಿನ ಈ ಕಷಾಯ ಬಳಸುವುದು. ಜತೆಗೆ, ಅರ್ಧ ಗ್ರಾಂ ದಾಲ್ಚಿನ್ನಿ (ಚಕ್ಕೆ) ಪುಡಿಯನ್ನು ಒಂದು ಟೀ ಚಮಚ ಜೇನುತುಪ್ಪದೊಂದಿಗೆ ಕನಿಷ್ಟ ಪಕ್ಷ ದಿನಕ್ಕೆರಡು ಬಾರಿ ಸೇವಿಸಿದರೆ ನೋವು ಬೇಗ ಶಮನವಾಗುವುದು.


ವಸ್ತು : ಮಾವಿನ ಎಲೆಗಳು
ಶಮನ : ಕಿವಿ ಸೋಂಕು
ಕೆಲವು ತಾಜಾ ಮಾವಿನ ಎಲೆಗಳನ್ನು ಚೆನ್ನಾಗಿ ಅರೆದು ಅವುಗಳಿಂದ ಒಂದು ಟೀ ಚಮಚ ರಸವನ್ನು ತಯಾರಿಸಿಕೊಳ್ಳುವುದು. ಈ ರಸವನ್ನು ಸ್ವಲ್ಪ ಬೆಚ್ಚಗೆ ಮಾಡಿ ಸೋಂಕಿಗೆ ಒಳಗಾಗಿರುವ ಕಿವಿಗೆ ಔಷಧವಾಗಿ ಬಳಸಬಹುದು. ದಿನಕ್ಕೆರಡು ಬಾರಿ ಪ್ರತಿಸಲವೂ ಒಂದೆರಡು ಹನಿ ಬಳಸಿದರೆ ಸೋಂಕು ನಿವಾರಣೆಯಾಗುವುದು.


ವಸ್ತು : ಖರ್ಜೂರ
ಶಮನ : ಜಂತುಹುಳು, ಭೇದಿ.
ಜಂತುಹುಳುಗಳಿಂದ ಬಳಲುತ್ತಿರುವವರು ಐದು ಖರ್ಜೂರ ತಿಂದು ನಿಂಬೆಹಣ್ಣಿನ ಪಾನೀಯ ಕುಡಿದರೆ ಶಮನವಾಗುವುದು. ಪರಿಣಾಮ ಬೀರುವವರೆಗೂ ಮುಂದುವರಿಸುವುದು ಒಳ್ಳೆಯದು. ಭೇದಿಯಾಗುತ್ತಿರುವಾಗ ಖರ್ಜೂರ ಸೇವಿಸಿದರೆ ನಿವಾರಣೆಯಾಗುವುದು.


ವಸ್ತು : ಉದ್ದು
ಶಮನ : ಸ್ತ್ರೀಯರ ಬಿಳುಪು ರೋಗ.
ಉದ್ದಿನ ಹಿಟ್ಟು, ಅತಿಮಧುರ, ಕುಂಬಳದ ಬೇರು ಹಾಗೂ ಅಶ್ವಗಂಧ, ಇವುಗಳನ್ನು ಸಮನಾಗಿ ಕುಟ್ಟಿ ಶೋಧಿಸಿಟ್ಟುಕೊಂಡು ಹಲವು ದಿನಗಳವರೆಗೆ ಬಿಡದೆ ಒಂದೊಂದು ಚಮಚದಂತೆ ಜೇನುತುಪ್ಪದೊಡನೆ ಸೇರಿಸಿ ದಿನಕ್ಕೆರಡು ಬಾರಿ ಸೇವಿಸುವುದರಿಂದ ಸ್ತ್ರೀಯರ ಬಿಳುಪುರೋಗ ವಾಸಿಯಾಗುತ್ತದೆ.


ವಸ್ತು : ಬಿಲ್ವ
ಶಮನ : ಕಫ, ಊತ.
ಕಫ ಕಟ್ಟಿಕೊಂಡು ಎದೆ ನೋವು ಬರುತ್ತಿದ್ದರೆ ಬಿಲ್ವದ ಎಲೆಗಳ ರಸವನ್ನು ಕುಡಿದರೆ ಶಮನವಾಗುವುದು. ಊತವಿರುವಾಗ ಎಲೆಗಳನ್ನು ಬಿಸಿ ಮಾಡಿ ಪಟ್ಟು ಹಾಕಿದರೆ ಪರಿಣಾಮ ಬೀರುವುದು.


ವಸ್ತು : ವೀಳ್ಯದೆಲೆ
ಶಮನ : ಕೆಮ್ಮು, ನೋವು.
ಒಂದು ವೀಳ್ಯದೆಲೆ, ಸ್ವಲ್ಪ ಕರೀ ತುಳಸಿ ಹಾಗೂ ಒಂದು ಲವಂಗವನ್ನು ಅರೆದು ದಿನಕ್ಕೆ ಎರಡು ಬಾರಿ ಸೇವಿಸಿದರೆ ಕೆಮ್ಮು ಕಡಿಮೆಯಾಗುವುದು. ವೀಳ್ಯದೆಲೆಗೆ ಹರಳೆಣ್ಣೆಯನ್ನು ಹಚ್ಚಿ ಅದನ್ನು ಬಿಸಿ ಮಾಡಿ ಹೊಟ್ಟೆ ಉಬ್ಬರದಿಂದ ನರಳುತ್ತಿರುವ ಮಗುವಿನ ಹೊಟ್ಟೆಗೆ ಕಾವು ಕೊಟ್ಟರೆ ನೋವು ಮಾಯವಾಗಿ ಮೂತ್ರ ಸುಲಭವಾಗಿ ಆಗುವುದು.





ವಸ್ತು : ಅರಿಶಿನ
ಶಮನ : ರಕ್ತ ಸ್ರಾವ, ಮೊಡವೆ.
ದೇಹದ ಯಾವುದೇ ಭಾಗ ಕೊಯ್ದುಕೊಂಡು ರಕ್ತ ಒಸರುತ್ತಿದ್ದರೆ, ಆ ಗಾಯದ ಮೇಲೆ ಅರಿಶಿನ ಹುಡಿಯನ್ನು ಉದುರಿಸಿದರೆ ರಕ್ತ ಬರುವುದು ನಿಲ್ಲುವುದು. ಮೊಡವೆಗಳಿಗೆ ಅರಿಶಿನದ ಕೊರಡನ್ನು ತೇಯ್ದು ಲೇಪಿಸುವುದರಿಂದ ಅವುಗಳು ಕ್ರಮೇಣ ಕಡಿಮೆಯಾಗುತ್ತವೆ.


ವಸ್ತು : ತುಳಸಿ
ಶಮನ : ಹುಳುಕಡ್ಡಿ.
ತುಳಸಿ ಗಿಡದ ಕಾಂಡದಿಂದ ಹುಳುಕಡ್ಡಿಯ ಭಾಗವನ್ನು ಚೆನ್ನಾಗಿ ಕೆರೆದು, ಅನಂತರ ತುಳಸಿ ಸೊಪ್ಪಿನ ಕಷಾಯದಿಂದ ಆ ಭಾಗವನ್ನು ಚೆನ್ನಾಗಿ ತೊಳೆಯಬೇಕು. ಇದಾದ ಮೇಲೆ ತುಳಸಿ ಸೊಪ್ಪನ್ನು ಚೆನ್ನಾಗಿ ಅರೆದು ಹುಳುಕಡ್ಡಿಯ ಮೇಲೆ ಲೇಪಿಸುವುದರಿಂದ ಶೀಘ್ರ ಗುಣ ಕಂಡುಬರುವುದು.





ವಸ್ತು : ಶ್ರೀಗಂಧ
ಶಮನ : ಚರ್ಮದ ಅಲರ್ಜಿ.
ಚರ್ಮದ ಅಲರ್ಜಿಯಿಂದ ಬಳಲುತ್ತಿರುವವರು ಶ್ರ್‍ಈಗಂಧವನ್ನು ಬಳಸಿದರೆ ಪರಿಣಾಮ ಬೀರುವುದು. ಒಂದು ಟೀ ಚಮಚ ನಿಂಬೇಹಣ್ಣಿನ ರಸದೊಂದಿಗೆ ಶ್ರ್‍ಈಗಂಧದ ಪುಡಿಯನ್ನು ಬೆರೆಸಿ ಅಲರ್ಜಿಯಿರುವ ಚರ್ಮದ ಮೇಲೆ ಲೇಪಿಸುತ್ತಾ ಬಂದರೆ ಗುಣವಾಗುವುದು.


ವಸ್ತು : ಪರಂಗಿಹಣ್ಣು
ಉಪಯೋಗ : ರೋಗ ನಿರೋಧಕ ಶಕ್ತಿ ಹೆಚ್ಚಳ, ಬೊಜ್ಜು ಕರಗುವಿಕೆ.
ಪ್ರತಿದಿನ ಪರಂಗಿಹಣ್ಣನ್ನು ಸೇವಿಸುವುದರಿಂದ ಶರೀರದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಅತಿಯಾದ ಬೊಜ್ಜಿನಿಂದ ಬಳಲುತ್ತಿರುವವರು ಹಣ್ಣು ಸೇವಿಸಿದರೆ ಪರಿಣಾಮ ಬೀರುವುದು. ಬಾಣಂತಿಯರು ಸೇವಿಸಿದರೆ ಹಾಲಿನ ಉತ್ಪತ್ತಿ ಹೆಚ್ಚುವುದು.

ಬಿಗಿ ಹೊಟ್ಟೆ ಸಡಿಲಿಸಲು ನಾರು.

ಬಿಗಿ ಹೊಟ್ಟೆ ಸಡಿಲಿಸಲು ನಾರು.

ಆಹಾರದಲ್ಲಿ ನಾರಿನ ಅಂಶ ಇಲ್ಲದಿರುವುದೇ ಮಲಬದ್ಧತೆ ಉಂಟಾಗಲು ಮುಖ್ಯ ಕಾರಣ. ನಾರಿನಂಶವಿರುವ ಆಹಾರ ಸೇವನೆ ಮಾಡುತ್ತಿದ್ದರೆ ಸಾಮಾನ್ಯವಾಗಿ ಎಂದೂ ಮಲಬದ್ಧತೆ ಆಗುವುದಿಲ್ಲ.

ನಾರು ನಮ್ಮ ಹೊಟ್ಟೆಯಲ್ಲಿ ಜೀರ್ಣವಾಗುವುದಿಲ್ಲ. ಆದರೆ ಈ ನಾರು ಕರುಳಿನಲ್ಲಿರುವ ವಿಷ ಪದಾರ್ಥಗಳನ್ನು ಹೀರಿಕೊಂಡು ಗಾತ್ರಧಲ್ಲಿ ಹೆಚ್ಚುತ್ತದೆ. ಇದರ ಪರಿಣಾಮವಾಗಿ ದೊಡ್ಡ ಕರುಳಿನಲ್ಲಿ ಉಪಯುಕ್ತ ಬ್ಯಾಕ್ಟೀರಿಯ ಸಂಖ್ಯೆ ಹೆಚ್ಚುತ್ತದೆ. ಈ ಉಪಯುಕ್ತ ಬ್ಯಾಕ್ಟೀರಿಯ ನಮ್ಮ ಕರುಳಿನಲ್ಲಿಯ ನೈಟ್ರೋಜೆನ್, ಗ್ಲೂಕೋಸ್, ಕೊಲೆಸ್ಟರಾಲ್ ಉಪಯೋಗಿಸಿ ವೃದ್ಧಿಹೊಂದುತ್ತವೆ. ಆದ್ದರಿಂದ ಈ ನಾರು ಮಲಬದ್ದತೆ ತಡೆಯುವುದಲ್ಲದೆ ಸಕ್ಕರೆ ಕಾಯಿಲೆ ಉಳ್ಳವರಿಗೆ, ಬೊಜ್ಜು ಇರುವ ವ್ಯಕ್ತಿಗಳಿಗೆ, ಪಿತ್ತಕೋಶದಲ್ಲಿ ಕಲ್ಲು ಇರುವವರಿಗೆ, ಹೃದಯ ರೋಗಿಗಳಿಗೆ ಪ್ರಯೋಜಕವಾಗುತ್ತವೆ.

ಪಾಶ್ಚಿಮಾತ್ಯ ಜನರು ಕಡಿಮೆ ಪ್ರಮಾಣದ ನಾರು ಸೇವಿಸುವುದರಿಂದ (೨೦ ಗ್ರಾಮ್) ಅವರಲ್ಲಿ ಅನೇಕ ರೋಗಗಳು ಉದಾ: ಕರುಳಿನ ಕ್ಯಾನ್ಸರ್, ಪಿತ್ತಕೋಶದ ಕಲ್ಲುಗಳು ಹೆಚ್ಚಾಗುತ್ತವೆ.

ಆಫ್ರಿಕಾದಲ್ಲಿ ಜನರು ಸರಾಸರಿ ೧೫೦ ಗ್ರಾಮ್ ನಷ್ಟು ನಾರು ಪದಾರ್ಥ ಸೇವಿಸುವುದರಿಂದ ಅಲ್ಲಿಯ ಜನರಿಗೆ ಈ ತೊಂದರೆಗಳು ಅಷ್ಟೇನು ಕಂಡುಬರುವುದಿಲ್ಲ. ದಿನಕ್ಕೆ ಸರಾಸರಿ ೫೦ ಗ್ರಾಮ್ ನಾರು ಉಪಯೋಗಿಸಿದರೂ ಸಾಕು, ಬಿಗಿ ಹೊಟ್ಟೆ ಸಡಿಲವಾಗುತ್ತದೆ, ಜತೆಗೆ ಇತರ ರೋಗಗಳನ್ನೂ ತಡೆಗಟ್ಟಬಹುದಾಗಿದೆ.

ಔಷಧಗಳಿಗೆ ಶರಣು ಹೋಗುವುದು ಒಳ್ಳೆಯದಲ್ಲ. ಅವು ಅಭ್ಯಾಸ ಅಥವಾ ಚಟ ಉಂಟು ಮಾಡುತ್ತವೆ ಹಾಗೂ ಮಲಬದ್ಡತೆ ಗುಣ ಹೊಂದುವುದಿಲ್ಲ. ನಾರಿನಂಶ ಇರುವ ಆಹಾರ ಪದಾರ್ಥಗಳೆಂದರೆ - ಸೊಪ್ಪು, ಬೀಟ್ ರೂಟ್, ಕ್ಯಾಬೇಜ್, ಆಲೂಗೆಡ್ಡೆ, ಕೆಂಪು ಅಕ್ಕಿ, ರಾಗಿ, ಜೋಳ, ನವಣೆ, ಸಜ್ಜೆ, ತೊಗರೆ, ಹೆಸರು, ಉದ್ದು, ಅಂಟು, ಸೇಬು, ಬಾಳೆಹಣ್ಣು, ದ್ರಾಕ್ಷಿ ಇತ್ಯಾದಿ. ಮೇಲೆ ಹೇಳಿದ ಕೆಲವು ಪದಾರ್ಥಗಳಲ್ಲಿ ಅಂದರೆ ಜೋಳ, ನವಣೆ, ಸಜ್ಜೆ, ಉದ್ದು, ಬಾಳೇಹಣ್ಣು ಕೆಲವರಿಗೆ ಆಗದೇ ಇರಬಹುದು. ಅಂಥಹವರು ಕೆಂಪು ಅಕ್ಕಿಯನ್ನು ಉಪಯೋಗಿಸಿದರೆ ಬಹಳ ಅನುಕೂಲವಾಗುತ್ತದೆ.

ರಾಗಿ ಅಭ್ಯಾಸ ಇರುವವರಿಗೆ ಏನೂ ತೊಂದರೆ ಇರುವುದಿಲ್ಲ. ಪಾಲೀಶ್ ಮಾಡಿದ ಅಕ್ಕಿ, ಬೇಕರಿ ತಿಂಡಿಗಳು, ಹೋಟೆಲ್ ನಲ್ಲಿ ತಿನ್ನುವ ಅಭ್ಯಾಸ, ಎಣ್ಣೆಯಲ್ಲಿ ಕರಿದ ತಿಂಡಿಗಳು, ಇತ್ಯಾಧಿಗಳನ್ನು ಉಪಯೋಗಿಸುವವರು ಮಲಬದ್ದತೆಗೆ ಸುಲಭವಾಗಿ ತುತ್ತಾಗುವರು. ಆದ್ದರಿಂದ ಹೇರಳವಾಗಿ ಹೊಟ್ಟು ಇರುವ(ಅಂದರೆ ಭತ್ತ ಮಾತ್ರ ತೆಗೆದ ಕೆಂಪು ಅಕ್ಕಿ) ಕೆಂಪು ಅಕ್ಕಿಯನ್ನು ನಿಮ್ಮ ಊಟದಲ್ಲಿ ಪ್ರತಿದಿನವೂ ಊಟಮಾಡುತ್ತಿದ್ದರೆ ಮಲಬದ್ದತೆಯ ತೊಂದರೆಗಳೇ ಇರುವುದಿಲ್ಲ.

ಹೆಚ್.ಕೆ.ಸತ್ಯಪ್ರಕಾಶ್.
ಕೃಪೆ : ಪ್ರಜಾವಾಣಿ ೯೮೮೬೩ ೩೪೬೬೭
ಡಾ. ಸಿ. ಪ್ರಕಾಶ್ ರಾವ್.

ಆಹಾರದಲ್ಲಿನ ಸತ್ವ

ಆಹಾರದಲ್ಲಿನ ಸತ್ವ

ಪ್ರಕೃತಿ : ಏನಯ್ಯಾ ನಿಮ್ಮನೇಲಿ ಎಲ್ಲ ೧೪
ಜನಾನು ಒಂದಲ್ಲ ಒಂದು ಕಾಯಿಲೆಯಿಂದ ನರಳುತ್ತಿದ್ದಾರಲ್ಲ, ಡಾಕ್ಟರಿಗೆ ತೋರಿಸ್ಲಿಲ್ವಾ?

ಮನುಷ್ಯ : ಅಯ್ಯೋ, ಡಾಕ್ಟರುಗಳಿಗೆ ತೋರ್‍ಸಿ ತೋರ್‍ಸಿ ಸಾಕಾಗಿದೆ, ಪ್ರಕೃತಿ. ಯಾವ ಡಾಕ್ಟರರ ಹತ್ರ ಹೋದ್ರೂ ಒಂದೇ ಕತೆ, ಔಷಧಿ ಕೊಡ್ಸಿ ಕೊಡ್ಸಿ ಸಾಕಾಗಿದೆ. ಹಾವು ಸಾಯೋಲ್ಲ, ಕೋಲು ಮುರಿಯೋಲ್ಲ ಅನ್ನೋ ಹಾಗಾಗಿದೆ ನಮ್ಮ ಪರಿಸ್ಥಿತಿ. ಬೇಜಾರಾಗೋಗಿದೆ.
ಔಷಧಿಗಳು ಕೆಲಸವೇ ಮಾಡ್ತಾಇಲ್ವೇನೋ ಅನ್ನಸ್ತಾ ಇದೆ. ಒಂದು ಔಷಧಿ ಕೊಟ್ರೆ ಇನ್ನೊಂದು ಕಾಯಿಲೆ ಶುರುವಾಗುತ್ತೆ. ಶುರುವಿನಲ್ಲಿ ಒಂದೇ ಒಂದು ಕಾಯಿಲೆ ಇತ್ತು. ಅದಕ್ಕೆ ಔಷಧಿ ಕೊಡಿಸೋಕ್ಕೆ ಹೋಗಿ ಈಗ ನೂರೆಂಟು ಕಾಯಿಲೆ ಅಂಟಿಕೊಂಡುಬಿಟ್ಟಿದೆ. ಈಗ ಬೆಳಿಗ್ಗೆಯಿಂದ ರಾತ್ರಿ ಮಲಗೋವರೆಗೂ ೧ ಕೇಜಿ ಔಷಧಿ ತಿನ್ನೋದೆ ಆಗ್ತಿದೆ. ಆಹಾರಕ್ಕಿಂತ ಔಷಧಿಗಳೇ ಜಾಸ್ತಿ ಆಗೋಗಿದೆ. ಏನು ಮಾಡಬೇಕೋ ದಿಕ್ಕೇ ತೋಚ್ತಾ ಇಲ್ಲ. ನೀನಾದ್ರೂ ದಾರಿ ತೋರ್‍ಸಯ್ಯಾ, ಪ್ರಕೃತಿ ದೇವರೇ. ನಿನಗೆ ಪುಣ್ಯ ಬರುತ್ತೆ.

ಪ್ರಕೃತಿ : ಅಲ್ಲಾಯ್ಯ, ನೀನು ಪ್ರಜಾವಾಣಿ, ವಿಜಯಕರ್ನಾಟಕ ಪೇಪರ್ ಗಳನ್ನ ಓದ್ತಾಇದೀಯ? ಅದರಲ್ಲಿ ಎರಡು ವರ್ಷದಿಂದ ಪ್ರತಿಯೊಬ್ಬರೂ ಆರೋಗ್ಯವನ್ನು ಹೇಗೆ ಕಾಪಾಡ್ಕೋಬೇಕು ಅಂತ ಬರೀತಾ ಇದಾರಲ್ಲ, ಅದನ್ನು ಓದಿದೀಯ? ಔಷಧಿಗಳ ಗೋಜೇ ಇಲ್ಲದೆ ಎಲ್ಲ ಕಾಯಿಲೆಗಳನ್ನು ನಾವು ಉಪಯೋಗಿಸುವ ಆಹಾರಗಳಲ್ಲೇ ಸರಿಮಾಡಬಹುದು ಎಂದು ಬರೀತಿದಾರಲ್ಲ! ಹಿಂದೆ ಯಾರೂ ಯಾವ ಪೇಪರ್‍ನೋರೂ ಹೀಗೆ ಜನಗಳಿಗೆ ಎಚ್ಚರಿಕೆ ಕೊಡ್ತಾಇರ್‍ಲಿಲ್ಲ. ಈಚೆಗೆ ಎಲ್ಲ ಪೇಪರ್‍ನೋರೂ ಜನಗಳಿಗೆ ತಿಳಿಸಿಕೊಡ್ತಾ ಇದಾರೆ.

ಮನುಷ್ಯ : ಏನಂತ ಇದೆ ಅದರಲ್ಲಿ! ಅಂಥಾ ವಿಶೇಷ ಏನು? ನಮ್ಮ ಆಹಾರದಲ್ಲೇ ಕಾಯಿಲೆ ವಾಸಿಮಾಡಬಹುದು ಅಂತ ಮತ್ತು ಅದು ಹೇಗೆ ಸಾಧ್ಯ ಡಾಕ್ಟರು ಗಳಿಗೆ ವಾಸಿಮಾಡೋಕೆ ಆಗದೇ ಇರುವುದು ಬರೀ ಆಹಾರದಲ್ಲೇ ಹೇಗೆ ವಾಸಿಯಾಗುತ್ತದೆ!

ಪ್ರಕೃತಿ : ಅಯ್ಯಾ, ಪೆದ್ದಪ್ಪ, ಈ ಇಡೀ ಜಗತ್ತಿನಲ್ಲಿ ಇರುವ ಕಾಯಿಲೆಗಳನ್ನೆಲ್ಲಾ ನಮ್ಮ ಆಹಾರಗಳಲ್ಲೇ ೧೦೦ ಕ್ಕೆ ೧೦೦ ರಷ್ಟು ವಾಸಿಮಾಡಬಹುದು ಕಣಯ್ಯಾ. ಅದೂ ಅಲ್ಲದೇ ಈಗ ನರಳುತ್ತಿರುವ ಕಾಯಿಲೆಗಳಿಂದ ಸಂಪೂರ್ಣವಾಗಿ ಬಿಡುಗಡೆ ಹೊಂದಿ ಇನ್ನು ಮುಂದೆಯೂ ಯಾವ ಕಾಯಿಲೆಯೂ ಬರದಂತೆ ನೋಡಿಕೊಳ್ಳಬಹುದು ಕಣಯ್ಯಾ.

ಮನುಷ್ಯ : ಅದು ಹೇಗೆ ನನಗೂ ತಿಳಿಸಿಕೊಡಯ್ಯಾ.

ಪ್ರಕೃತಿ : ಹಿಂದಿನ ಕಾಲದಲ್ಲಿ ಕೆಂಪು ಅಕ್ಕಿ ಅಂತ ಬೆಳೀತ ಇದ್ರು ಗೊತ್ತಾ? ಅಥವಾ ಕೊಟ್ಟಣದ ಅಕ್ಕಿ ಅಂತ ಕರೀತಾ ಇದ್ರು ಗೊತ್ತಾ? ಅದನ್ನ ತಿಂದು ಜನ ಎಷ್ಟು ಗಟ್ಟಿಮುಟ್ಟಾಗಿದ್ರು ಗೊತ್ತಾ? ಆಗೆಲ್ಲಾ ಈಗ ಬರುತ್ತಿರುವ ಕಾಯಿಲೆಗಳೆಲ್ಲ ಇತ್ತಾ? ಯೋಚನೆ ಮಾಡಿ ನೋಡು. ಇತ್ತೀಚಿನ ವರ್ಷಗಳಲ್ಲಿ ಪಾಲೀಶ್ ಮಾಡಿದ ಅಕ್ಕಿ ತಿಂದು ಈ ಕಾಯಿಲೆಗಳೆಲ್ಲ ಬಂದಿರುವುದು ಗೊತ್ತಾ? ಈ ಅಕ್ಕಿಯನ್ನು ಊಟಮಾಡುವವರಿಗೆ ಈ ಕಾಯಿಲೆಗಳೆಲ್ಲಾ ಸಾಮಾನ್ಯ. ಜೊತೆಗೆ ಈ ಅಕ್ಕಿಯನ್ನು ತಿನ್ನುವವರಿಗೆ ಆಸಿಡಿಟಿ, ಗ್ಯಾಸ್ಟ್ರ್‍ಐಟಿಸ್ ಎಂಬ ಕಾಯಿಲೆಗಳು ಹುಟ್ಟಿಕೊಳ್ಳುತ್ತವೆ. ಇದರಿಂದಲೇ ಬೇರೆಲ್ಲ ಕಾಯಿಲೆಗಳು ಹುಟ್ಟಿಕೊಳ್ಳುತ್ತವೆ.

ಗುರುವಾರ, ಮಾರ್ಚ್ 27, 2008

ದಣಿದ ದೇಹಕ್ಕೆ ತಂಪನೆ ಪಾನೀಯ

ಸೌತೆಕಾಯಿ ಜ್ಯೂಸ್:-
ಸಾಮಗ್ರಿ: ಒಂದು ಮಂಗಳೂರು ಸೌತೇಕಾಯಿ, ಎರಡು ಲೋಟ ನೀರು, ಒಂದು ಅಚ್ಚು ಬೆಲ್ಲ, ಚಿಟಿಕೆ ಏಲಕ್ಕಿ ಪುಡಿ।
ವಿಧಾನ: ಸೌತೇಕಾಯಿಯ ಸಿಪ್ಪೆ ಹಾಗೂ ತಿರುಳನ್ನು ತೆಗೆದೆಸೆದು ಉಳಿದ ಭಾಗವನ್ನು ಸಣ್ಣದಾಗಿ ಕತ್ತರಿಸಿ ರುಬ್ಬಿ ಅದಕ್ಕೆ ಅಗತ್ಯಕ್ಕೆ ತಕ್ಕಷ್ಟು ನೀರು, ಬೆಲ್ಲ, ಏಲಕ್ಕಿ ಪುಡಿ ಸೇರಿಸಿದರೆ ಜ್ಯೂಸ್ ಸಿದ್ಧ।

ಬೀಟ್ ರೂಟ್ ಜ್ಯೂಸ್:-
ಸಾಮಗ್ರಿ: ಒಂದು ಬೀಟ್ ರೂಟ್, ಅರ್ಧ ಅಚ್ಚು ಬೆಲ್ಲ, ನೀರು, ಅರ್ಧ ಚಮಚ ಏಲಕ್ಕಿ ಪುಡಿ।
ವಿಧಾನ: ಸಿಪ್ಪೆ ತೆಗೆದ ಬೀಟ್ ರೂಟನ್ನು ಸಣ್ಣದಾಗಿ ಹೆಚ್ಚಿ, ನುಣ್ಣಗೆ ರುಬ್ಬಿ ಶೋಧಿಸಿ। ಈ ರಸಕ್ಕೆ ಬೆಲ್ಲ ಮತ್ತು ಏಲಕ್ಕಿ ಪುಡಿ ಬೆರೆಸಿದರೆ
ಜ್ಯೂಸ್ ಸಿದ್ಧ.

ಶನಿವಾರ, ಫೆಬ್ರವರಿ 2, 2008

ಧನ, ಮಧ್ಯ ಮತ್ತು ರುಣಾತ್ಮಕ ಆಹಾರ

ಧನಾತ್ಮಕ ಆಹಾರ
ಧನಾತ್ಮಕ, ಸತ್ವಯುತ, ಅಮೃತಾನ್ನ, ಸಾತ್ವಿಕ(ಪ್ರೈಮರಿ, ಪಾಸಿಟೀವ್)
೧. ಹಣ್ಣುಗಳು
೧. (ಅ) ಸಿಹಿ/ಖಂಡಭರಿತ : ಬಾಳೆ, ಪಪಾಯಿ, ಮಾವು, ಸೀಬೆ, ಹಲಸು, ಕರಬೂಜ, ಸಪೋಟ(ಚಿಕ್ಕು), ಸೇಬು, ರಾಮಫಲ, ಸೀತಾಫಲ, ಕಲ್ಲಂಗಡಿ, ಬೆಟ್ಟನೆಲ್ಲೀಕಾಯಿ ಇತ್ಯಾದಿ.
(ಆ) ಹುಳಿಹಣ್ಣುಗಳು : ಕಿತ್ತಲೆ, ದ್ರಾಕ್ಷಿ, ಮೂಸಂಬಿ, ನೇರಳೆ, ದಾಳಿಂಬೆ, ಚಕ್ಕೋತ, ನಿಂಬೆ, ಟೊಮೇಟೋ ಇತ್ಯಾದ.
(ಇ) ಒಣಹಣ್ಣುಗಳು : ಒಣದ್ರಾಕ್ಷಿ, ಖರ್ಜೂರ, ಅಂಜೂರ ಇತ್ಯಾದಿ

೨. ತರಕಾರಿಗಳು
(ಅ) ಸೊಪ್ಪುಗಳು : ಬಸಳೆ, ಮೆಂಥ್ಯ, ಕೊತ್ತಂಬರಿ, ಪುದೀನ, ಲೆಟ್ಯೂಸ್, ಪಾಲಕ್, ಸಬ್ಬಸಿಗೆ, ಕರಿಬೇವು, ದೊಡ್ಡಪತ್ರೆ, ಒಂದೆಲಗ, ಗರಗ ಇತ್ಯಾದಿ.
(ಆ) ಹಸಿರು ತರಕಾರಿಗಳು : ಪಡ್ವಲ, ಹೀರೇಕಾಯಿ, ಎಲೆಕೋಸು, ಸೌತೇಕಾಯಿ, ಟೊಮೇಟೋ, ಬುದುಗುಂಬಳ, ಸಿಹಿಗುಂಬಳ ಇತ್ಯಾದಿ.
(ಇ) ಗೆಡ್ಡೆಗೆಣಸುಗಳು : ಕ್ಯಾರಟ್, ಗೆಡ್ಡೆಕೋಸು, ಬೀಟ್ ರೂಟ್, ಮರಗೆಣಸು, ಸಿಹಿ ಗೆಣಸು, ಮೂಲಂಗಿ.

೩. ಕಾಯಿಗಳು(ನಟ್ಸ್) : ತೆಂಗಿನಕಾಯಿ, ಕಡ್ಲೇಕಾಯಿಬೀಜ, ಬಾದಾಮಿ, ಗೋಡಂಬಿ, ಪಿಸ್ತ, ವಾಲ್ ನಟ್ ಇತ್ಯಾದಿ.
೪. ರಸಗಳು : ಎಳೆನೀರು, ಹಣ್ಣಿನ ರಸಗಳು, ತರಕಾರಿ ರಸಗಳು, ದೊಡ್ಡಪತ್ರೆ ರಸ, ಒಂದೆಲಗದ ರಸ, ಗರಗದ ರಸ, ತುಳಸೀ ರಸ, ಬಿಲ್ಪತ್ರೇ ರಸ, ಗರಿಕೆಹುಲ್ಲಿನ ರಸ, ಗೋಧೀಹುಲ್ಲಿನ ರಸ, ಕಬ್ಬಿನ ರಸ ಇತ್ಯಾದಿ.
೫) ಮೊಳಕೆ ಕಾಳುಗಳು : ಗೋಧಿ, ಹೆಸರುಕಾಳು, ಕಡಲೆಕಾಳು, ಬಟಾಣಿ, ಮೆಂಥ್ಯ, ಎಳ್ಳು, ರಾಗಿ, ಕಡ್ಲೇಕಾಯಿಬೀಜ, ಆಲ್ಫಾಲ್ಪಾ ಇತ್ಯಾದಿ.

ಮಧ್ಯಸ್ಥ ಆಹಾರ

ಮಧ್ಯಸ್ಠ,ನಿಗದಿತ ಸತ್ವ, ಮಧ್ಯಮಾನ್ನ, ರಾಜಸ(ಸೆಕೆಂಡರಿ,ನೂಟ್ರಲ್)
೧. ಸೊಪ್ಪುಗಳು : ದಂಟು, ಚಕ್ಕೋತ, ಕಿರುಕುಸಾಲೆ, ಬೆರಕೆ ಸೊಪ್ಪು, ನುಗ್ಗೆ, ಅಗಸೆ, ಹೊನಗೊನೆ, ಗೋಣಿ, ವಿಷ್ಣುಕ್ರಾಂತಿ ಇತ್ಯಾದಿ.
೨. ಹಸಿರು ತರಕಾರಿಗಳು : ಹುರುಳೀಕಾಯಿ, ಜವಳಿಕಾಯಿ, ಕೆಸವಿನ ದಂಟು, ಬಾಳೇಕಾಯಿ, ಹಲಸಿನಕಾಯಿ, ಬದನೆಕಾಯಿ, ಪರಂಗಿಕಾಯಿ, ಸೀಮೇಬದನೆ, ಹಾಗಲಕಾಯಿ, ಸೋರೇಕಾಯಿ, ಸಿಹಿಗುಂಬಳ ಇತ್ಯಾದಿ.
೩. ಈರುಳ್ಳಿ, ಬೆಳ್ಳುಳ್ಳಿ, ಆಲೂಗೆಡ್ಡೆ ಇತ್ಯಾದಿ.
೪. ಕೊಟ್ಟಣದ ಅಕ್ಕಿ, ಹೊಟ್ಟು ತೆಗೆಯದ ಹಿಟ್ಟು, ಹೊಟ್ಟು ತೆಗೆಯದ ಬೇಳೆಗಳು, ನೆನೆಸಿದ ಕಾಳುಗಳು.
೫. ಬೆಲ್ಲ, ವೀಳೇದೆಲೆ.
೬. ಹಾಲು, ಮಸರು, ಬೆಣ್ಣೆ, ತುಪ್ಪ, ಜೇನುತುಪ್ಪ.
೭. ಹಬೆಯಲ್ಲಿ ಬೇಯಿಸಿದ ಆಹಾರ, ಕಡಿಮೆ ಉಪ್ಪು, ಹುಳಿ, ಕಾರದಿಂದ ಕೂಡಿದ ಆಹಾರ, ಹುದುಗಿಸಲ್ಪಟ್ಟ ಆಹಾರ(ಇಡ್ಲಿ, ದೋಸೆ), ಕಂದು ಬ್ರೆಡ್(ಬ್ರೌನ್ ಬ್ರೆಡ್) ಇತ್ಯಾದಿ.
೮. ಕೆಂಡದಲ್ಲಾಗಲಿ, ಓವನ್ನಿನಲ್ಲಾಗಲಿ ಸುಟ್ಟ ಆಲೂಗೆಡ್ಡೆ, ಕಡ್ಲೇಕಾಯಿ, ಕ್ಯಾರಟ್, ಇತ್ಯಾದಿಗಳು.
೯. ಗಾಣದಿಂದ ತೆಗೆದ ಎಣ್ಣೆ.

ಋಣಾತ್ಮಕ ಆಹಾರ

ಋಣಾತ್ಮಕ, ನಿಸ್ಸತ್ವ, ಮೃತಾನ್ನ, ತಾಮಸ(ನೆಗೆಟೀವ್)
೧. ಕಾಫಿ, ಟೀ, ಸಾರಾಯಿ, ನಿಕೋಟಿನ್ ಇತ್ಯಾದಿ
೨. ಮಾಂಸ, ಮೊಟ್ಟೆ ಇತ್ಯಾದಿ.
೩. ಪಾಲೀಶ್ ಅಕ್ಕಿ, ಮೈದಾ, ಪಾಲೀಶ್ ಮಾಡಿದ ಬೇಳೆ.
೪. ಬಿಳಿಯ ಬ್ರೆಡ್, ಬೇಕರಿಯ ಇತರ ತಿಂಡಿಗಳು.
೫. ಸಕ್ಕರೆ, ಮೈದಾ, ಅದರಿಂದ ತಯಾರಿಸಲ್ಪಟ್ಟ ಆಹಾರ ಪದಾರ್ಥಗಳು.
೬. ಅತಿ ಉಪ್ಪು, ಹುಳಿ, ಖಾರಗಳಿಂದ ಪದಾರ್ಥಗಳು.
೭. ಹುರಿದ, ಕರಿದ ತಿಂಡಿಗಳು.
೮. ಐಸ್ ಕ್ರೀಮ್, ಚಾಕೋಲೇಟ್, ಬಿಸ್ಕತ್ ಇತ್ಯಾದಿಗಳು.
೯. ಪಾಶ್ಚರೈಸ್ ಮಾಡಿದ ಹಾಲು, ಕೆನೆ, ಕೆನೆಯಿಂದ ತಯಾರಿಸಿದ ಆಹಾರಗಳು.
೧೦. ರೀಫೈನ್ ಮಾಡಿದ ಎಣ್ಣೆ, ಡಾಲ್ಡ.
೧೧. ರೆಫ್ರಿಜಿರೇಟರ್ನಲ್ಲಿಟ್ಟ ಆಹಾರ.
೧೨. ಹಿಂದಿನ ದಿನ ಮಾಡಿ ಕುದಿಸಿಟ್ಟ ಆಹಾರ.
೧೩. ಡಬ್ಬದ ಆಹಾರಗಳು, ಫಾಸ್ಟ್ ಫ಼ುಡ್, ಇತ್ಯಾದಿಗಳು.

ಕೃಪೆ : ಮನುಜಾ! ಏನು ನಿನ್ನ ಆಹಾರ? ಎಂಬ ಪುಸ್ತಕದಿಂದ
ಬರೆದವರು : ತುಮಕೂರಿನ ಜಿ.ವಿ.ವಿ.ಶಾಸ್ತ್ರಿ
ಸಂಗ್ರಹಿಸಿದವರು : ೧) ಎಲ್. ಅರುಣ್
೯೮೮೬೪ ೧೭೨೫೨
ಈಮೈಲ್ : ಪರಿಸರ್ಪ್ರೇಮಿ ಅಟ್ ಯಾಹೂ.ಕಾಮ್
೨) ಹೆಚ್.ಕೆ.ಸತ್ಯಪ್ರಕಾಶ್
೯೮೮೬೩ ೩೪೬೬೭
ಈಮೈಲ್ : ಎಸ್ಪಿ_೧೯೩೯ ಅಟ್ ಯಾಹೂ.ಕೊ.ಇನ್

ಯುವಕ ಯುವತಿಯರ ಆಹಾರ

ಯುವಕ ಯುವತಿಯರ ಆಹಾರ

'ಯುವಕಸ್ತಾವತ್ ಯುವತೀಸಕ್ತಃ'- ಯುವಕನ ಆಸಕ್ತಿ ಯುವತಿಯಲ್ಲಿ! ಯುವಕರಿಗೆ ಆಹಾರದ ವಿಷಯದಲ್ಲಿ ವಿಶೇಷ ಆಸಕ್ತಿಯಿರುವುದಿಲ್ಲ. ಹೋಟೆಲುಗಳು, ರಸ್ತೆಯ ಪಕ್ಕದ ಪಾನೀಪೂರಿ ಇತ್ಯಾದಿಗಳಲ್ಲಿ ಗಮನ ಹೆಚ್ಚು. ಕಾರಣ ಸ್ನೇಹಿತೆಯರೊಂದಿಗೆ ಸ್ವಚ್ಚಂದವಾಗಿ ತಿನ್ನಬಹುದಲ್ಲ. ಆದರೆ ಯುವತಿಯರೂ ಆ ರೀತಿಯೇ ತಿಂದರೂ ಸಹ ದಿನಕ್ಕೊಮ್ಮೆ ವಾರ್ ಡ್ರೋಬ್ ನ ಕನ್ನಡಿ ನೋಡಿಕೊಂಡು ದಪ್ಪಗಾದೆನೆಂದು ಕೊರಗುತ್ತಾರೆ! ಡಯಟ್ ಮಾಡಲು ಅನೇಕ ಸ್ತ್ರೀಯರ ಮ್ಯಾಗಝೀನ್ ಗಳು ಸಹಾಯಕ್ಕೆ ಬರುತ್ತವೆ.

ಮೊದಲ ಒಂದು ವಾರ ಡಯಟ್
ಮುಂದಿನ ವಾರ ಪೂರ್ಣ ಹೋಟೆಲ್ ವಿಸಿಟ್

ಹೀಗೆ ಮಾನಸಿಕವಾಗಿ ನರಳುವವರು ಕೆಲವರು. ನಿಜವಾಗಿ ಆಹಾರ ಬಿಟ್ಟು ನರಳುವವರು ಕೆಲವರು. ಈಚೆಗೆ 'ಫಿಗರ್' ಬಗ್ಗೆ ಕಾಳಜಿಯ ಹೆಣ್ಣುಮಕ್ಕಳು ಹೆಚ್ಚುತ್ತಿದ್ದಾರೆ. ಅವರು ಅನ್ನವೇ ತಮ್ಮ ಸಕಲ ದುಃಖಕ್ಕೂ ಕಾರಣವೆಂದು ಅನ್ನವನ್ನು ದ್ವೇಷಿಸಿ ತೃಪ್ತರಾಗುತ್ತಿದ್ದಾರೆ. ಆದರೆ ಅವರ ತೂಕವೇನು ಕಡಿಮೆಯಾಗುತ್ತಿಲ್ಲ. ಯುವಕರು ಈ ಬಗ್ಗೆ ಚಿಂತಿಸುವುದೇ ಇಲ್ಲ. ನಲವತ್ತರ ಮೇಲೆ ಹೊಟ್ಟೆ ಗಣಪನ ಹೊಟ್ಟೆಯೊಂದಿಗೆ ಸ್ಪರ್ಧಿಸಿ ಗೆದ್ದಮೇಲೆ ಡಾಕ್ಟರರ ಸಲಹೆಯಂತೆ ಡಯಟ್ ಮಾಡಲು ಒಲ್ಲದ ಮನಸ್ಸಿನಿಂದ ಪ್ರಾರಂಭ. ಇಬ್ಬರೂ ವೈಜ್ನಾನಿಕವಾಗಿ ಬಹಳಷ್ಟು ವಿಷಯಗಳನ್ನು ತಿಳಿದುಕೊಂಡಿದ್ದಾರೆ. ಅವರವರ ಎತ್ತರಿಕ್ಕಿರಬೇಕಾದ ತೂಕದ ಚಾರ್ಟ್, ಕ್ಯಾಲೋರಿ, ಡಯಟ್ ಯಾವುದೂ ಅವರ ಸಹಾಯಕ್ಕೆ ಬರುತ್ತಿಲ್ಲ. ಅದಕ್ಕೆಲ್ಲಾ ಅವರು ತಿನ್ನುತ್ತಿರುವ ಸತ್ತ ಆಹಾರ(ಜಂಕ್ ಫುಡ್) ಕಾರಣ. ರಸ್ತೆಯ ಬದಿಯ ಆಹಾರ ಸೇವಿಸುವುದು ಆರೋಗ್ಯಕರವೇ? ಅವರಿಗೆ ಅದು ಗೊತ್ತಿಲ್ಲವೇ? ಎಲ್ಲವೂ ಗೊತ್ತಿದೆ. ಆದರೆ ಅನುಷ್ಠಾನದಲ್ಲಿಲ್ಲ. ಹೋಟೆಲ್ಗಳು, ಪಾನೀಪುರಿ ಅಂಗಡಿಗಳು, ನಾರ್ತ್ ಇಂಡಿಯನ್, ಚೈನೀ, ಬೇಕರಿಗಳು ಇತ್ಯಾದಿ ಹೊಸ ತರಹೆಯ ನಾನಾ ನಮೂನೆಯ ಆಕರ್ಷಣೀಯವಾದ ಆಹಾರದ ತಾಣಗಳು ಇಂದು ಹೆಚ್ಚು ಹೆಚ್ಚು ಯುವಕ ಯುವತಿಯರನ್ನು ತನ್ನತ್ತ ಆಕರ್ಷಿಸಿಕೊಳ್ಳುತ್ತಿದೆ.

ಮುಖ್ಯವಾದ ವಿಷಯ, ವ್ಯಾಯಾಮ ಹಾಗೂ ಸರಿಯಾದ ಆಹಾರವನ್ನು ಅವರು ಅಳವಡಿಸಿಕೊಳ್ಳಬೇಕು. ಯುವಕ ಯುವತಿಯರ ವಿಷಯದಲ್ಲಿ ಸರಿಯಾದ ಮೊದಲ ಆದ್ಯತೆಯ ಆಹಾರವೆಂದರೆ ಹಲ್ಲಿಗೆ ವ್ಯಾಯಾಮವನ್ನು ಒದಗಿಸುವ(ಚ್ಯೂಯಿಂಗ್ ಗಮ್ ಅಲ್ಲ) ಆಹಾರವೇ, ಮಿಕ್ಕ ಆಹಾರಗಳೆಲ್ಲವೂ ದ್ವಿತೀಯ ದರ್ಜೆಯ ಆಹಾರ. ಇಡ್ಲಿ, ದೋಸೆ, ಬಿಳಿಯ ಬ್ರೆಡ್ ಇತ್ಯಾದಿಗಳಿಗೆಲ್ಲಾ ಹಲ್ಲಿನ ಅವಶ್ಯಕತೆ ಇದೆಯೇ? ಇವಕ್ಕೇ ಈಗ ಪ್ರಥಮ ಸ್ಥಾನ. ಅದಕ್ಕೇ ಬೇಗ ಹಲ್ಲುಗಳನ್ನು ಕಳೆದುಕೊಳ್ಳುವಿಕೆ. ಮೇಲಿನ ಆಹಾರವನ್ನು ಹಲ್ಲು ಹೋದ ಮೇಲೆ ತಿನ್ನುವಿರಂತೆ. ಆದರೆ, ಮೊಳಕೇಕಾಳುಗಳನ್ನು ಅಗಿದು ತಿನ್ನುವ, ಸೀಬೆ, ಸೇಬು ಇತ್ಯಾದಿಗಳನ್ನು ಕಚ್ಚಿ ತಿನ್ನುವ, ಚಪಾತಿಯನ್ನು ಅಗಿಯುವ, ಕಬ್ಬನ್ನು ಸಿಗಿಯುವ ಆನಂದ, ಇದನ್ನೆಲ್ಲಾ ಯಾವಾಗ ಅನುಭವಿಸುತ್ತೀರಿ?

ಇದಕ್ಕೆಲ್ಲಾ ವೇಳೆಯಿಲ್ಲ! ಹಾಗಾದರೆ ವೇಳೆಯನ್ನು ಹೇಗೆ ಉಪಯೋಗಿಸುತ್ತೀರಿ? "ಓದಿಗೆ, ಆಟಕ್ಕೆ" "ಏನು ಆಟ ಆಡುತ್ತೀರ?" "ಇಲ್ಲ, ಟಿ.ವಿ.ಯಲ್ಲಿ ಕ್ರಿಕೆಟ್ ನೋಡುತ್ತೇವೆ." ಸಾರ್ಥಕವಾಯಿತು!! ಆಟ ಆಡಲಿಕ್ಕೋ ಅಥವ ಬರೀ ನೋಡಲಿಕ್ಕೋ? ಇಂತಹ ಆಟ, ಅಂತಹ ಊಟದ ನಮ್ಮ ಭವ್ಯ ಭಾರತದ ಮುಂದಿನ ಪ್ರಜೆಗಳನ್ನು ನೆನೆಸಿಕೊಂಡರೆ ಭಯವಾಗುತ್ತದೆ!!

ಮೊದಲ ಸ್ಥಾನ ಮೊಳಕೆಯ ಕಾಳುಗಳು, ಕ್ಯಾರಟ್, ಬೀಟ್ ರೂಟ್ ಇತ್ಯಾದಿ ಹಸಿಯ ತರಕಾರಿಗಳು, ಸೇಬು, ಸೀಬೆ, ಹಲಸು ಇತ್ಯಾದಿ ಹಣ್ಣುಗಳು, ಕಬ್ಬು. ಬೇಯಿಸಿದ ಆಹಾರಕ್ಕೆ ಎರಡನೆಯ ಸ್ಥಾನ. ಅದರಲ್ಲೂ ಚಪಾತಿ, ರೊತ್ತಿ ಇತ್ಯಾದಿಗಳು ಮುಖ್ಯ. ಮೆತ್ತಗಿರುವ ಆಹಾರ ಹಲ್ಲು ಬಾರದ ಮಕ್ಕಳಿಗೂ ಅದಕ್ಕಿಂತ ಹೆಚ್ಚಾಗಿ ಮಿದುಕರಿಗೇ ಇರಲಿ ಬಿಡಿ! ಯುವಕರು ಹಲ್ಲಿಗೆ ಕೆಲಸ ಕೊಡದೆ ಆಹಾರ ಸೇವಿಸುವುದು ಮಹಾಪರಾಧ. ಹುಡುಗರಾಗಿದ್ದಾಗ ಮಾಡಿದ ತಪ್ಪಿನಿಂದ ಹಲ್ಲುಗಳು ಆಗಲೇ ಸಾಕಷ್ಟು ಹಾಳಾಗಿರುತ್ತವೆ.
ಈಗಲೂ ಮೃದುವಾದ ಆಹಾರ ಸೇವಿಸಿ ಬೇಗ ಹಲ್ಲುಗಳ ಗೋರಿಯನ್ನು ತೋಡುವುದೇ! ಅಗಿಯುವುದರ ಆನಂದ ಅಗಿದೇ ಅನುಭವಿಸಬೇಕು. ಬರೀ ಬರೆದು ಏನು ಪ್ರಯೋಜನ? ಯುವಕ, ಯುವತಿಯರು ದಪ್ಪ, ಸಣ್ಣ ಇತ್ಯಾದಿಗಳ ಬಗ್ಗೆ ವೃಥಾ ಚಿಂತಿಸದೆ ಹಲ್ಲನ್ನು ಉಪಯೋಗಿಸಿ ಹೆಚ್ಚು ನೈಸರ್ಗಿಕ ಆಹಾರವನ್ನು ಸೇವಿಸಿದರೆ ತನ್ನ ತಂದೆ, ತಾಯಿಯರಿಂದ ಪಡೆದ ಜೀನ್ ಗೆ ಅನುಗುಣವಾಗಿ ತೂಕ, ಎತ್ತರ ಎಲ್ಲವೂ ಸಹಜವಾಗಿ ಬರುತ್ತದೆ. ವಂಶವಾಹಿನಿಯಲ್ಲಿ ಬಾರದಿರುವುದನ್ನು ಯಾವ ಸಾಧನದಿಂದಲೂ ಸಾಧಿಸಲು ಸಾಧ್ಯವಿಲ್ಲ. ಉತ್ತಮ ಆಹಾರ, ಉತ್ತಮ ವ್ಯಾಯಾಮ ನೀವು ಮಾಡಬೇಕಾದ ಜೀವವಿಮೆ. ಇದರ ಬಗ್ಗೆ ಚಿಂತಿಸಿ.

ಒಂದು ದಿನದ ಆಹಾರದ ಮಾದರಿ :
ಬೆಳಿಗ್ಗೆ : ೦೫-೦೦ ಒಂದು ಚೊಂಬು ನೀರು, (ನಂತರ ವ್ಯಾಯಾಮ, ಯೋಗಾಸನ, ಈಜು, ಓಟ, ಆಟ ಇತ್ಯಾದಿ)
೦೭-೦೦ ಬಿಸಿ ನೀರು + ಬೆಲ್ಲ + ನಿಂಬೆಹಣ್ಣು
೦೯-೦೦ ರೊಟ್ಟಿ, ಚಪಾತಿ(ಸೂಖ) ಇತ್ಯಾದಿ ೪೦% + ತರಕಾರಿಗಳ ಸಲಾಡ್ ೬೦%
ಮಧ್ಯಾನ್ಹ ೧೨-೦೦ ಹಿಟ್ಟು + ಬೇಯಿಸಿದ ತರಕಾರಿ + ಮಜ್ಜಿಗೆ + ಒಂದು ಹಸಿಯ ಕ್ಯಾರಟ್(ಈರುಳ್ಳಿ) ಕಡಿದು ತಿನ್ನಬೇಕು.
ಸಂಜೆ ೦೫-೦೦ ಬಾಳೆಯ ಹಣ್ಣು + ಋತುಮಾನದ ಹಣ್ಣು(ಬೇಕಿದ್ದಲ್ಲಿ).
ಆಟ-ಬೆವರು ಬೀಳುವಂತೆ)
ರಾತ್ರಿ ೦೮-೦೦ ಮೊಳಕೆಯ ಗೋಧಿ ೨ ಹಿಡಿ + ಬೆಂಡ ಖರ್ಜೂರ + ತೆಂಗಿನಕಾಯಿ + ೧ ಲೋಟ ಹಾಲು + ಹಣ್ಣುಗಳು, ಅಥವಾ ಮೊಳಕೆಯ ಹೆಸರುಕಾಳು(ಮೆಂಥ್ಯ, ಬಟಾಣಿ, ಕಡ್ಲೆ) + ತೆಂಗಿನ ತುರಿ + ತರಕಾರಿಯ ಸಲಾಡ್ = ಮಜ್ಜಿಗೆ.

ಜೀವಂತ ಆಹಾರವೆಂದರೆ ಏನೇನು ಬರುತ್ತದೆ? ಅದರ ಉಪಯೋಗ ಹೇಗೆ?

fêÀAvÀ DºÁgÀzÀ §UÉÎ PÉ®ªÀÅ ¥Àæ±ÉßUÀ¼ÀÄ
* fêÀAvÀ DºÁgÀªÉAzÀgÉ K£ÉãÀÄ §gÀÄvÀÛzÉ? CzÀgÀ G¥À0iÉÆÃUÀ ºÉÃUÉ?
fêÀAvÀ DºÁgÀzÀ°è ªÉÆzÀ® ¸ÁÜ£À ºÀtÂÚUÉ. J¯Áè ºÀtÄÚUÀ¼ÀÆ ªÀiÁ£ÀªÀ£À DºÁgÀ. §ºÀ¼À PÁ®¢AzÀ CzÀ£ÀÄß PÀqÉ0iÀÄ ¸ÁÜ£ÀPÉÌ(CAzÀgÉ ªÀÄ®UÀĪÀ ªÀÄÄAZÉ MAzÀÄ ¨Á¼É0iÀÄ ºÀtÄÚ) PÀ¼ÀÄ»¹gÀĪÀÅzÀjAzÀ FUÀ PÉ®ªÀjUÉ PÉ®ªÀÅ DºÁgÀUÀ¼ÀÄ vÉÆAzÀgÉ ªÀiÁqÀÄvÀÛªÉ. CAvÀºÀ ºÀtÄÚUÀ¼À£ÀÄß ªÉÆzÀ®Ä PÉÆAZÀ PÉÆAZÀªÉà wAzÀÄ gÀÆrüªÀiÁrPÉƼÀî¨ÉÃPÀÄ. JgÀqÀ£É0iÀÄ DºÁgÀ-vÀgÀPÁjUÀ¼ÀÄ, CzÀgÀ®Æè ºÀ¹gÀÄ vÀgÀPÁjUÀ¼ÀÄ, £ÀAvÀgÀ UÉqÉØ vÀgÀPÁjUÀ¼ÀÄ. ªÀÄÆgÀ£É0iÀÄ ¸ÁÜ£À-PÁ¬ÄUÀ¼ÀÄ, £Á®Ì£É0iÀÄ ¸ÁÜ£À-DUÀ QvÀÛ ºÀ¹ PÁ¼ÀÄUÀ¼ÀÄ, LzÀ£É0iÀÄ ¸ÁÜ£À-ªÉƼÀPÉ0iÀÄ PÁ¼ÀÄUÀ¼ÀÄ.
* fêÀAvÀ DºÁgÀ ¸Éë¹zÀgÉ J¯Áè PÁ¬Ä¯ÉUÀ¼ÀÄ UÁågÀAnà ºÉÆÃUÀĪÀÅzÉÃ?
F UÁågÀAnà PÁqÀð£ÀÄß 0iÀiÁgÀÆ PÉÆqÀ®Ä ¸ÁzsÀå«®è. F UÁågÀAnà PÁqÀð£ÀÄß ¤ÃªÀÅ 0iÀiÁjAzÀ §0iÀĸÀÄwÛ¢ÝÃj? CzÀ£ÀÄß ¥ÀæPÀÈw PÉÆqÀ¨ÉÃPÀÄ. ¥ÀæPÀÈw0iÀÄ£ÀÄß «PÀÈwUÉƽ¹zÀ ªÀiÁ£ÀªÀ EzÀ£ÀÄß PÉüÀ®Ä JµÀÄÖ CºÀð? DzÀgÀÆ ¥ÀæPÀÈw zÀ0iÀiÁªÀĬÄ. gÀ«ÃAzÀægÀÄ ºÉüÀÄvÁÛgÉ, "MAzÀÄ ªÀÄUÀÄ«£À ºÀÄlÄÖ, ¥ÀgÀªÀiÁvÀä, ªÀiÁ£ÀªÀ£À §UÉÎ E£ÀÆß ¤µÀÌgÀÄtÂ0iÀiÁV®è J£ÀÄߪÀÅzÀgÀ ¸ÀAPÉÃvÀ" ªÉAzÀÄ. ºÁUÉ ¥ÀæPÀÈw0iÀÄ zÀ0iÉĬÄAzÀ¯Éà £Á«£ÀÆß §zÀÄQzÉÝêÉ. C®èzÉ gÉÆÃUÀPÉÌ DºÁgÀ MAzÉà PÁgÀtªÀ®è. DºÁgÀ¢AzÀ CzÀÄ §AzÀÄzÁVzÀÝgÉ RArvÀ UÀÄtªÁUÀÄvÀÛzÉ. K£Éà DUÀ° fêÀ£À GvÀÛªÀĪÁUÀĪÀÅzÀÄ UÁågÀAn.
* »A¢£ÀªÀgÀÄ ¨ÉìĹzÀÄzÀ£Éßà wAzÀÄPÉÆAqÀÄ ±ÀvÁ0iÀÄĶUÀ¼ÁV DgÉÆÃUÀåªÀAvÀgÁVgÀ°®èªÉÃ?
CA¢£À ªÁvÁªÀgÀtªÉà EA¢£ÀzÀQÌAvÀ DgÉÆÃUÀåPÀgÀªÁVvÀÄÛ. C®èzÉ CªÀgÀÄ ¤¸ÀUÀðPÉÌ ºÀwÛgÀªÁVzÀÝgÀÄ. ±ÀæªÀÄfëUÀ¼ÁVzÀÝgÀÄ. DºÁgÀ ¸ÀA¸ÀÌgÀt EA¢£À¶ÖgÀ°®è. ±ÀjÃgÀzÀ J¯Áè CAUÀUÀ¼À£ÀÄß G¥À0iÉÆÃV¹ PÉ®¸ÀªÀiÁqÀÄwÛzÀÝgÀÄ, ªÀÄÄRåªÁV ºÀ®ÄèUÀ¼ÀÄ. £ÁUÀjÃPÀ ¸ÀA¸ÀÌöÈw ºÀ°è®èzÉ DºÁgÀ vÉUÉzÀÄPÉƼÀÄîªÀ PÀ¯É0iÀÄ£ÀÄß ZÉ£ÁßV PÀ°wzÉ. ªÀÄÄRåªÁV CªÀgÀÄ MvÀÛqÀ PÀrªÉÄ0iÀiÁzÀ fêÀ£À £ÀqɸÀÄwÛzÀÝgÀÄ. CªÀgÀÄ ªÀiÁqÀÄwÛzÀÝ MAzÉà MAzÀÄ vÀ¥ÀÅöà-¨ÉìĸÀĪÀÅzÀÄ, ¤¸ÀUÀð PÀë«Ä¹vÀÄÛ. EAzÀÄ J¯Áè jÃw0iÀÄ vÀ¥ÀÅöàUÀ¼À£ÀÆß ªÀiÁqÀÄwÛgÀĪÀ £ÀªÀÄUÉ ¨ÉìĹzÀ DºÁgÀªÀÇ ¸ÉÃj vÀ¦à£À ªÉÆvÀÛ ºÉaÑzÉ. J¯Áè ±ÀvÁ0iÀÄĶUÀ¼ÀÆ DºÁgÀzÀ «µÀ0iÀÄzÀ°è ºÉZÀÄÑ ¸ÀA¸ÀÌj¹zÀ ¸ÀgÀ¼À DºÁgÀªÀ£ÀÄß vÉUÉzÀÄPÉƼÀÄîwÛzÉÝêÉAzÀÄ ºÉüÀĪÀÅzÀÄ ¸ÁªÀiÁ£Àå. »A¢£ÀªÀgÀ DgÉÆÃUÀåPÀÆÌ CzÉà PÁgÀt.
* EgÀĪÀ £Á®ÄÌ ¢£À wAzÀÄ ¸Á0iÀÄĪÀÅzÀÄ ©lÄÖ, EzÉ°è0iÀÄ PÀªÀÄð?
'wAzÀÄ ¸Á0iÀÄĪÀÅzÀÄ'!! w£ÀÄߪÀÅzÀÄ §zÀÄPÀĪÀÅzÀPÁÌV0iÉÆà ¸Á0iÀÄĪÀÅzÀPÁÌV0iÉÆÃ! w£ÀÄߪÀÅzÀÄ §zÀÄPÀ°PÁÌV, §zÀÄQgÀĪÀÅzÀÄ w£Àß°PÁÌV C®è. §jà ¨Á¬Ä gÀÄaUÁV K£ÉAzÀgÉ CzÀÄ, 0iÀiÁªÁUÉAzÀgÉ DªÁUÀ, ºÉÃUÉAzÀgÉ ºÁUÉ wAzÀgÉ, wAzÀÄ gÉÆÃUÀ vÀAzÀÄPÉÆAqÀgÉ, ªÀÄÄAzÉ fêÀ£À¥À0iÀÄðAvÀ w£Àß®Æ DUÀzÀ §zÀÄPÀ®Æ DUÀzÀ ¥Àj¹Üw §gÀÄvÀÛzÉ.
PÀqÉUÉ qÁPÀÖgÀgÀ ¨Á¬ÄAzÀ ¥ÀxÀåzÀ ªÀiÁvÀÄ PÉý CzÀ£ÀÄß £ÀqɸÀ¯ÉèÉÃPÁUÀÄvÀÛzÉ. CµÀÄÖ ºÉÆwÛUÉ ªÀ0iÀĸÀÆì DVgÀÄvÀÛzÉ. ªÀÄ£À¸ÀÄì ªÀÄvÀÄÛ ±ÀjÃgÀ JgÀqÀÆ §UÀÄΪÀÅ¢®è. dvÉUÉ ºÀ®Æè ©¢ÝgÀÄvÀÛzÉ. DzÀÝjAzÀ aPÀÌ ¥Áæ0iÀÄ¢AzÀ¯Éà F jÃw0iÀÄ fêÀ£ÀPÉÌ §gÀĪÀÅzÀÄ J¯Áè zÀȶ֬ÄAzÀ®Æ GvÀÛªÀÄ.
* ªÀÄ£ÀĵÀå£À ªÀÄ£À¸ÀÄì ªÉÊ«zsÀåvÉ0iÀÄ£ÀÄß §0iÀĸÀÄvÀÛzÉ. ¥ÁætÂUÀ¼ÀAvÉ §jà ºÀ¹0iÀÄ vÀgÀPÁj ªÀÄvÀÄÛ ºÀtÄÚUÀ¼À£ÀßµÉÖà wA¢gÀ®Ä ¸ÁzsÀåªÉÃ?
¤¸ÀUÀð ªÉÊ«zsÀåªÀĬÄ. ªÀÄ£ÀĵÀå vÀ£Àß §Ä¢Þ±ÀQÛ¬ÄAzÀ CqÀÄUÉ0iÀÄ PÀ¯É0iÀÄ£ÀÄß PÀ°vÀ. CzÀjAzÀ «zsÀ «zsÀzÀ SÁzÀåUÀ¼À£ÀÄß ªÀiÁqÀ§®è. DzÀgÉ ¤¸ÀUÀð CzÀPÀÆÌ ºÉaÑ£À ºÀtÄÚUÀ¼À£ÀÄß, vÀgÀPÁjUÀ¼À£ÀÄß ¸ÀȶֹzÉ. ºÀtÄÚUÀ½UÉ ¸ÀªÀiÁ£ÀªÁzÀ §tÚ, gÀÄaUÀ¼À£ÀÄß ¤ÃqÀĪÀ DºÁgÀªÀ£ÀÄß ªÀiÁ£ÀªÀ ¸Àȶֹ0iÀiÁ£É? ¤¸ÀUÀðzÀ ªÀÄÄRå UÀÄtªÉà ªÉÊ«zsÀåvÉ. ¤vÀåªÀÇ CzÉà ¸ÀÆ0iÉÆðÃzÀ0iÀÄ, DzÀgÀÆ ¤«ÄµÀ ¤«ÄµÀPÀÆÌ K£ÉÆà ºÉƸÀzÀÄ. DzÀÝjAzÀ £ÉʸÀVðPÀ DºÁgÀzÀ°è ªÉÊ«zsÀåvÉ0iÀÄ §UÉÎ aAvÉ ¨ÉÃqÀ. ªÉÊ«zsÀåvÉ EgÀĪÀÅzÀÄ ºÉÆgÀUÉ®Æè C®è, CzÀ£ÀÄß PÁtĪÀ ªÀÄ£À¹ì£À°è, ¥Àæw¨sÉ0iÀÄ°è.
* CqÀÄUÉ MAzÀÄ GvÀÛªÀÄ PÀ¯É. CzÀ£ÀÄß ºÁ¼ÀÄ ªÀiÁrzÀAvÁUÀĪÀÅ¢®èªÉÃ?
ºÁ¼ÀÄ ªÀiÁqÀĪÀÅzÀÄ GzÉÝñÀåªÀ®è. CzÀ£ÀÄß ªÉÊeÁߤPÀªÁV E£ÀÆß GvÀÛªÀÄ¥Àr¹, ªÀÄzsÀå¸ÀÜ DºÁgÀªÁV G¥À0iÉÆÃV¸À¨ÉÃPÀ®èzÉ §jà ¥ÁPÀPÀ¯É0iÀÄ£Éßà £ÀA©zÀgÉ ±ÀjÃgÀzÀ PÉƯïé!
* MªÉÆäªÉÄä ¨ÉìĹzÀ DºÁgÀ ¸Éë¸À§ºÀÄzÉÃ?
¸Éë¸À§ºÀÄzÀÄ. ºÁUÉ MªÉÆäªÉÄä w£ÀÄߪÀÅzÀjAzÀ ZÀ¥À®ªÀÇ wÃgÀÄvÀÛzÉ. dvÉUÉ £ÉʸÀVðPÀ DºÁgÀzÀ §UÉÎ M®ªÀÇ ºÉZÀÄÑvÀÛzÉ. ªÁgÀPÉÆÌAzÀÄ ºÉÆvÀÄÛ CzÀPÁÌV «ÄøÀ°qÀ§ºÀÄzÀÄ. FUÀ ¢£ÀªÀÇ ¨ÉìĹzÀ DºÁgÀ wAzÀÆ wAzÀÆ ¸ÀºÀ ¨ÉøÀgÀ §A¢gÀÄvÀÛzÉ. ªÁgÀPÉÆ̪ÉÄä wAzÁUÀ CzÀÆ §ºÀ¼À gÀÄa J¤¸ÀÄvÀÛzÉ. £ÉʸÀVðPÀ DºÁgÀ ¨ÉøÀgÀ §gÀĪÀÅ¢®è. CzÀgÀ gÀÄa ¨ÉìĹzÀÝQÌAvÀ®Æ £ÀÆgÀÄ ¥ÀlÄÖ. ºÀ¸ÀÄ«£À DºÁgÀ ºÀÄ®Äè. £ÀªÀÄä ¸ÀºÀªÁ¸À¢AzÀ C£ÀߪÀ£ÀÄß PÉÆlÖgÉ wA¢ÃvÀÄ. DzÀgÉ CzÀgÀ ¥ÀæªÀÄÄR DºÁgÀ 0iÀiÁªÀÅzÉAzÀÄ CzÀgÀ ¥ÀæeÉßUÉ UÉÆvÀÄÛ. ºÀ¹0iÀÄ ºÀÄ®Äè ªÀÄvÀÄÛ C£ÀߪÀ¤ßlÖgÉ ºÀ¹0iÀÄ ºÀÄ°èUÉà ¨Á¬Ä ºÁPÀĪÀÅzÀÄ. CzÉà jÃw ¸ÀºÀd ªÀiÁ£ÀªÀ£ÀÆ ¸ÀºÀ £ÉʸÀVðPÀ DºÁgÀªÀ£ÀÄß ªÉÆzÀ®Ä ¦æÃw¸ÀÄvÁÛ£É.
* §ºÀ¼À PÁ®¢AzÀ®Æ ¨ÉìĹzÀ DºÁgÀPÉÌ ºÉÆA¢PÉÆArgÀĪÀ ±ÀjÃgÀ FUÀ MªÉÄäUÉà PÀZÁÑ DºÁgÀPÉÌ ºÉÆA¢PÉƼÀÄîvÀÛzÉ0iÉÄÃ?
F ¥Àæ±Éß ¸ÀºÀd. ªÉÆzÀ®£É0iÀÄzÁV, £ÀªÀÄä ªÀÄ£À¸ÀÄì MUÀÄΪÀÅ¢®è. JgÀqÀ£É0iÀÄzÁV, §ºÀ¼À ªÀµÀðUÀ½AzÀ ¨ÉAzÀ DºÁgÀPÉÌ ºÉÆA¢PÉÆAqÀ ±ÀjÃgÀ ºÀ¹ DºÁgÀPÉÌ ºÉÆA¢PÉƼÀî®Ä PÉÆAZÀ ¸ÀªÀÄ0iÀÄ ¨ÉÃPÁUÀÄvÀÛzÉ. D PÁ®zÀ°è PÉÆAZÀ vÁ¼Éä ¨ÉÃPÀÄ. ¨sÉâ, £ÉUÀr, £ÀªÉ, EvÁå¢ PÉ®ªÀÅ ¸ÀtÚ ¥ÀÅlÖ PÁ¬Ä¯ÉUÀ¼ÀÄ §gÀ§ºÀÄzÀÄ. PÉ®ªÉà ¢£ÀUÀ°è 0iÀiÁªÀÅzÉà OµÀ¢ü¬Ä®èzÉà UÀÄtªÀÄÄRªÁUÀÄvÀÛªÉ. ªÀÄ£À¹ìUÉ ºÁUÀÆ ±ÀjÃgÀPÉÌ ºÉÆA¢PÉÆAqÀ ªÉÄÃ¯É ªÉÆzÀ°VAvÀ®Æ GvÀÛªÀÄ ±ÀQÛ ºÁUÀÆ DgÉÆÃUÀåªÀ£ÀÄß PÉÆqÀÄvÀÛzÉ.
* ¸ÀªÀiÁd §jà ¨ÉìĹzÀ DºÁgÀªÀ£ÀÄß w¤ßwÛzÉ. £Á£ÉƧâ£Éà §jà ºÀ¹0iÀÄzÁzÀ DºÁgÀ wAzÀgÉ £À£ÀߣÀÄß £ÉÆÃr d£ÀgÀÄ £ÀUÀĪÀÅ¢®èªÉÃ?
§jà £ÀUÀĪÀÅzÉãÀÄ, PÉÃPÉ ºÁQ £ÀUÀÄvÁÛgÉ. CªÀgÀÄ £ÀUÀÄvÁÛgÉAzÀÄ ºÉzÀjPÉƼÀî¨ÉÃPÉ? DºÁgÀ CªÀgÀªÀgÀ ±ÀjÃgÀPÉÌà «£ÀºÀ ¨ÉÃgÉ0iÀĪÀgÀ£ÀÄß vÀÈ¦Û ¥Àr¸À®Ä C®è. ¨ÉìĹzÀ DºÁgÀªÀ£Éßà wAzÀÄ C£ÁgÉÆÃUÀå¢AzÀ £ÀgÀ¼ÀĪÁUÀ F £ÀUÀĪÀªÀgÀÄ §gÀĪÀgÉÃ?
* EAvÀºÀ DºÁgÀ wAzÀÄ JµÀÄÖ ªÀµÀð §zÀÄPÀ¨ÉÃPÉAzÀÄ ªÀiÁr¢ÝÃj?
ºÀ¸ÀÄ ºÀÄ®Äè wAzÀÄ JµÀÄÖ ªÀµÀð §zÀÄPÀ¨ÉÃPÉAzÀÄ ªÀiÁrzÉ? ¸ÀºÀdªÁV JµÀÄÖ ªÀµÀ𠤸ÀUÀð ¤0iÀīĹzÉ0iÉÆà CµÀÄÖ ªÀµÀðUÀ¼ÀÄ. £ÁªÀÇ CµÉÖ.
* F jÃw G¥ÀÅöà, ºÀĽ, SÁgÀUÀ½®èzÉ DºÁgÀ¢AzÀ ±ÀQÛ J°è?
'DºÁgÀzÀ°è ±ÀQÛ EzÉ. CzÀ£ÀÄß MqÉ0iÀÄĪÀŪÀÅ QtéUÀ¼ÀÄ'.-EzÀÄ ªÉÊeÁߤPÀ aAvÀ£É, ±ÀQÛ0iÀÄ ªÀÄÆ® fêÀ. CzÀÄ DºÁgÀzÀ°ègÀĪÀ ±ÀQÛ0iÀÄ£ÀÄß MqÉ0iÀÄÄvÀÛzÉ. ZÀ¥À®PÉÌ ¨ÉÃPÁzÀ G¥ÀÅöà, ºÀĽ, SÁgÀUÀ¼ÀÄ ±ÀQÛ0iÀÄ£ÀÄß PÉÆqÀ¯ÁgÀªÀÅ. EzÀPÉÌ GzÁºÀgÀuÉ ¥ÁætÂUÀ¼À ±ÀQÛ. CªÀÅ EªÀÅUÀ¼À°è 0iÀiÁªÀÅzÀ£ÀÆß G¥À0iÉÆÃV¸ÀzÉ ±ÀQÛ±Á°UÀ¼ÁVªÉ.
* gÉÆÃUÀ §AzÁUÀ ¤ÃªÀÅ ºÉýzÀAvÉ w£ÉÆßÃt. DgÉÆÃUÀåªÁVgÀĪÁUÀ F ¸À£Áå¸ÀªÉÃPÉ?
ªÀÄ£ÉUÉ ¨ÉAQ ©zÁÝUÀ ¨Á« vÉÆÃqÀ®Ä ¥ÁægÀA©ü¹zÀAvÉ! C®èzÉ ¸À£Áå¸ÀPÀÆÌ ºÀ¹0iÀÄ DºÁgÀPÀÆÌ 0iÀiÁPÉ UÀAlÄ ºÁPÀÄwÛÃj? E°è ©qÀĪÀÅzÀÄ K£ÀÆ E®è. ¸ÀºÀd, £ÉʸÀVðPÀ DºÁgÀPÉÌ ªÀÄgÀ½zÉÝêÀµÉÖ.
* F jÃw0iÀÄ fêÀ£À¢AzÀ ºÉAUÀ¸ÀgÀÄ ¸ÉÆêÀiÁjUÀ¼ÁUÀĪÀÅ¢®èªÉÃ?
§ºÀ¼À M¼Éî0iÀÄ ¥Àæ±Éß. UÀAqÀ¸ÀÄ PÉüÀ¨ÉÃPÁzÀ ¥Àæ±Éß!
ClÖlÄÖ PÀuÉÚ®è ¸ÀÄlÄÖ
ªÀåxÀðªÁ¬ÄvÀÄ ºÉtÂÚ£Á ºÀÄlÄÖ.
ºÉAUÀ¸ÀgÉAzÀgÉ §jà CqÀÄUÉUÉ ¸Àj JAzÀÄ, CªÀgÀ£ÀÄß CqÀÄUÉ ªÀÄ£É0iÉÄA§ ¸ÉgɪÀÄ£ÉUÉ zÀ©â CªÀ½UÉ ²PÀët PÉÆqÀzÀ ¸ÀªÀiÁd ªÉÄð£À ¥Àæ±Éß0iÀÄ£Àß®èzÉà ªÀÄvÉÛãÀ£ÀÄß PÉüÀ®Ä ¸ÁzsÀå? CqÀÄUÉ0iÀÄ£ÀÄß PÀrªÉÄ ªÀiÁrPÉÆAqÀÄ G½zÀ ªÉüÉ0iÀÄ£ÀÄß ¸ÀAVÃvÀ, ¸Á»vÀå, PÀ¯É, «eÁߣÀ CxÀªÀ vÀ£ÀUÉ ¨ÉÃPɤ¹zÀ ºÀªÁå¸À 0iÀiÁªÀÅzÁzÀgÉÆAzÀgÀ°è vÉÆqÀV¹PÉÆAqÀgÉ CªÀ¼À ºÁUÀÆ ªÀÄ£É0iÀÄ DgÉÆÃUÀå JgÀqÀÆ ºÉZÀÄѪÀÅzÀÄ.
* §jà ºÀ¹0iÀÄ DºÁgÀ w£ÀÄߪÀÅzÀjAzÀ ºÉÆmÉÖ vÀÄA§ÄvÀÛzÉ0iÉÄÃ?
§ºÀ¼À ¢ªÀ¸ÀUÀ½AzÀ §jà ¨ÉìĹzÀ DºÁgÀPÉÌ MVÎzÀ ºÉÆmÉÖ vÀ£Àß ¸ÀºÀd ¹Üw¸ÁÜ¥ÀPÀvÀéªÀ£ÀÄß PÀ¼ÉzÀÄPÉÆArgÀÄvÀÛzÉ. DzÀÝjAzÀ ªÉÆzÀ®Ä ªÉÆzÀ®Ä CvÀȦÛ0iÀiÁUÀ§ºÀÄzÀÄ. ¢£ÀUÀ¼ÀÄ PÀ¼ÉzÀAvÉ doÀgÀzÀ ªÀiÁA¸ÀRAqÀUÀ¼ÀÄ ±ÀQÛ0iÀÄÄvÀªÁV ¸ÀAPÉÆÃZÀ£À ºÉÆA¢ aPÀÌzÁUÀÄvÀÛzÉ. DUÀ ºÀ¹0iÀÄ DºÁgÀ ¸ÁPÁUÀÄvÀÛzÉ. PÉÆAZÀªÉà ºÀ¹0iÀÄ DºÁgÀ ºÉZÀÄÑ ±ÀQÛ0iÀÄ£ÀÄß PÉÆqÀÄvÀÛzÉ.
* vÀgÀPÁj ºÁUÀÆ ºÀtÄÚUÀ¼À£ÀÄß ¨É¼É0iÀÄ®Ä gÁ¸Á¬Ä¤PÀ UÉƧâgÀUÀ¼À£ÀÄß G¥À0iÉÆÃV¸ÀÄvÁÛgÀ®è, CzÀÄ £ÀªÀÄä DgÉÆÃUÀåªÀ£ÀÄß ºÁ¼ÀÄ ªÀiÁqÀĪÀÅ¢®èªÉÃ?
¤d, ºÁ¼ÁUÀÄvÀÛzÉ. K£ÀÄ ªÀiÁqÀĪÀÅzÀÄ? C£ÉÃPÀ ªÀµÀðUÀ½AzÀ ¤¸ÀUÀðfêÀ£ÀªÀ£ÀÄß £ÀqɸÀÄwÛgÀĪÀªÀgÀ CºÀªÁ®£ÀÄß PÉüÀĪÀªÀgÁgÀÄ? FZÉUÉ ¸ÀºÀd PÀȶ, ¸ÁªÀ0iÀĪÀ PÀȶ ªÀÄÄAvÁzÀ ¥Àæ0iÉÆÃUÀUÀ¼ÀÄ £ÀqÉ0iÀÄÄwÛªÉ. EzÀjAzÀ ªÀÄÄAzÉ M¼Éî0iÀÄzÁUÀĪÀ ¸ÁzsÀåvÉ EzÉ. ¤ÃªÀÇ ¸ÀºÀ ¸ÀºÀd PÀȶ, ¸ÁªÀ0iÀĪÀ PÀȶ¬ÄAzÀ ¨É¼ÉzÀ ªÀ¸ÀÄÛUÀ¼À£Éßà MvÁ۬Ĺ, PÉÆAqÀÄ, ¥ÉÇæÃvÁ컹. ¸ÁzsÀå«zÀÝgÉ ¨É¼É¬Äj.
* gÁ¸Á¬Ä¤PÀ UÉƧâgÀ §¼À¸À¢zÀÝgÉ EµÉÆÖAzÀÄ ¥ÀæeÁ¸ÀASÉåUÉ DºÁgÀ ºÉÃUÉ MzÀV¸ÀĪÀÅzÀÄ?
gÁ¸Á¬Ä¤PÀ UÉƧâgÀ ¨É¼É¹ C¢üPÀ E¼ÀĪÀj vÉUÉzÀ d£À ¥Àæ¥ÀAZÀzÀ ºÀ¹ªÀ£ÀÄß EAV¹zÁÝgÉ0iÉÄÃ? gÁ¸Á¬Ä¤PÀ UÉƧâgÀ¢AzÀ ºÉZÀÄÑ ¨É¼ÉzÀ DºÁgÀªÉ¯Áè ºÉUÀÎtUÀ½UÉ UÉÆÃqˤ£À°è DºÁgÀªÁVzÉ. ºÉZÀÄÑ ¨É¼ÉzÀgÉ §qÀªÀjUÉ ¹PÀÄÌvÀÛzÉ£ÀÄߪÀÅzÀÄ MAzÀÄ «ÄxÉå. £ÉÆÃ¨É¯ï ¥ÁjvÉÆõÀPÀ «eÉÃvÀ CªÀÄvÀåð¸Éãï gÀ ºÉýPÉ0iÀÄÆ ¸ÀºÀ EzÀ£ÀÄß ¸ÀªÀÄyð¸ÀÄvÀÛzÉ. §jà ¨É¼ÉzÀgÉ G¥À0iÉÆÃUÀ«®è. CzÀ£ÀÄß ¸Àj0iÀiÁV ºÀAZÀ¨ÉÃPÀÄ. F ªÀåªÀ¸ÉÜ0iÀÄ°è CzÀÄ ¸ÁzsÀå«®è. DzÀÝjAzÀ ¨sÀÆ«Ä0iÀÄ£ÀÄß §gÀqÀÄ ªÀiÁr ºÉZÀÄÑ ¨É¼ÉzÀÄ, d£ÀgÀ DgÉÆÃUÀå PÉr¹, ºÁ¼ÀÄ ªÀiÁqÀĪÀÅzÀÄ 0iÀiÁªÀ ¸ÁxÀðPÀPÉÌ? eÉÆvÉUÉ »A¢£À ¥Àæ±Éß0iÀÄ GvÀÛgÀªÀ£ÀÄß ªÀÄvÉÆÛªÉÄä N¢.
* Qæ«Ä£Á±ÀPÀUÀ¼À£ÀÄß ºÉÆqÉ¢gÀĪÀ ºÀtÄÚ-vÀgÀPÁjUÀ¼À£ÀÄß §¼À¹zÀgÉ DgÉÆÃUÀåPÉÌ ºÁ¤0iÀÄ®èªÉÃ?
gÁ¸Á¬Ä¤PÀ UÉƧâgÀzÀ §¼ÀPɬÄAzÀ VqÀUÀ¼ÀÄ vÀªÀÄä ¸ÀºÀd ±ÀQÛ0iÀÄ£ÀÄß PÀ¼ÉzÀÄPÉÆArgÀÄvÀÛªÉ. DUÀ ºÀļÀÄUÀ¼ÀÄ DPÀæªÀÄt ªÀiÁqÀÄvÀÛªÉ. CªÀÅUÀ¼À ¤ªÁgÀuÉUÉ Qæ«Ä£Á±ÀPÀ. EzÀÄ MAzÀÄ «µÀZÀPÀæ. EzÀjAzÀ ©qÀÄUÀqÉ ºÉÃUÉ? ªÀÄzÀĪÉ0iÀiÁUÀĪÀªÀgÉUÀÆ ºÀÄZÀÄÑ ©qÀĪÀÅ¢®è. ºÀÄZÀÄÑ ©qÀĪÀªÀgÉUÀÆ ªÀÄzÀĪÉ0iÀiÁUÀĪÀÅ¢®è. dUÀvÀÛ£ÀÄß KPÁKQ §zÀ¯Á¬Ä¸À®Ä ¸ÁzsÀå«®è. £ÁªÁzÀgÀÆ PÉÆAZÀ JZÀÑjPÉ ªÀ»¸ÉÆÃt. ºÀtÄÚ-vÀgÀPÁjUÀ¼À£ÀÄß G¥ÀÅöà ¤Ãj£À°è vÉƼÉzÀÄ G¥À0iÉÆÃV¸ÉÆÃt. dvÉUÉ DUÁUÉÎ G¥ÀªÁ¸À ªÀiÁqÉÆÃt.
* Qæ«Ä£Á±ÀPÀUÀ½AzÀ zÀÆgÀªÁUÀ®Ä FZÉUÉ PÉ®ªÀÅ qÁPÀÖgÀÄUÀ¼ÀÄ ¨ÉìĹzÀ ¥ÀzÁxÀðUÀ¼À£ÀÄß ªÀiÁvÀæ w£ÀÄߪÀAvÉ ¸À®ºÉ ªÀiÁqÀÄwÛzÁÝgÉ, EzÀÄ ¸Àj0iÉÄÃ?
ªÀÄ£ÀĵÀå §ºÀ¼À »AzÉ ºÀ¹0iÀÄ DºÁgÀªÀ£ÀÄß w£ÀÄßwÛzÀÝ. ¨ÉìĸÀĪÀ PÀ¯É0iÀÄ£ÀÄß PÀ°vÀ ªÉÄÃ¯É ¢£Éà ¢£Éà ºÀ¹0iÀÄ DºÁgÀªÀ£ÀÄß PÀrªÉÄ ªÀiÁrzÀ. «eÁߣÀ ªÀÄvÉÛ ºÀ¹0iÀÄ DºÁgÀzÀ ªÀĺÀvÀéªÀ£ÀÄß JwÛ »r¬ÄvÀÄ. PÁgÀt, CzÀgÀ°ègÀĪÀ fêÀAwPÉ, fêÀ¸ÀvÀéUÀ¼ÀÄ. QtéUÀ¼ÀÄ ¨ÉìĸÀÄ«PɬÄAzÀ £Á±ÀªÁUÀÄvÀÛªÉ. EzÀÄ «eÁߣÀªÀÇ CjvÀ ¸ÀvÀå. Qæ«Ä£Á±ÀPÀ, gÁ¸Á¬Ä¤PÀ UÉƧâgÀ-EªÀÅUÀ¼ÀÆ «eÁߣÀzÀ ²±ÀÄUÀ¼ÉÃ. EzÀÄ «eÁߣÀªÀ£ÀÄß ¸ÁéxÀðPÁÌV G¥À0iÉÆÃV¹PÉÆAqÀzÀÝPÉÌ GzÁºÀgÀuÉ. ªÉÊeÁߤPÀ eÁߣÀ¢AzÀ ºÀ¹0iÀÄ ¥ÀzÁxÀðUÀ¼À£ÀÄß w¤ßgÉAzÀÄ ºÉýzÀªÀgÀÆ ªÉÊzÀågÉÃ. FUÀ ¨ÉÃqÀªÉ£ÀÄߪÀªÀgÀÆ CªÀgÉÃ. EzÀjAzÀ ¸ÁªÀiÁ£ÀåjUÉ UÉÆAzÀ® GAmÁUÀÄvÀÛzÉ. ¨ÉìĸÀĪÀÅzÀjAzÀ gÁ¸Á¬Ä¤PÀUÀ¼À ¥Àæ¨sÁªÀ vÀUÀÄΪÀÅ¢®è. ±ÀjÃgÀPÉÌ ºÁ¤ ªÀiÁqÀĪÀ UÀÄtªÀÇ PÀrªÉÄ0iÀiÁUÀĪÀÅ¢®è. CªÀÅUÀ¼À G¥À0iÉÆÃUÀªÀ£Éßà ¤°è¹ ¸ÀºÀd PÀȶUÁUÀ°, ¸ÁªÀ0iÀĪÀ PÀȶUÁUÀ° ªÀÄgÀ¼ÀĪÀÅzÉÆAzÉà EgÀĪÀ ªÀiÁUÀð. C°è0iÀĪÀgÉ«UÀÆ DUÁUÀ G¥ÀªÁ¸À CxÀªÀ ªÀÄÆ°PÁgÀ¸ÀUÀ½AzÀ CªÀÅUÀ¼À «¥ÀjÃvÀ ¥ÀjuÁªÀĪÀÅ vÀUÀÄΪÀAvÉ ªÀiÁrPÉƼÀî¨ÉÃPÀÄ.
* ºÀ¹0iÀÄ DºÁgÀªÀ£ÀÄß §¼À¸ÀĪÀÅzÀjAzÀ ºÉÆmÉÖ0iÀÄ°è Qæ«ÄUÀ¼ÀÄ §gÀĪÀÅ¢®èªÉÃ?
ºÀ¹0iÀÄ DºÁgÀzÀ°è ºÀļÀÄUÀ¼À ªÉÆmÉÖUÀ½gÀÄvÀÛªÉ. ºÉÆmÉÖ0iÀÄ°è ºÀļÀÄUÀ¼ÁUÀĪÀ ¸ÁzsÀåvɬÄzÉ. DzÀgÉ 0iÀiÁªÁUÀ? CªÀPÉÌ zÉÆqÀØ PÀgÀĽ£À°è ¨É¼É0iÀÄ®Ä CªÀPÁ±À ¹QÌzÀ°è ªÀiÁvÀæ. E®è¢zÀÝgÉ ¸Á0iÀÄÄvÀÛªÉ. ªÀÄ®ªÀÅ ºÉUÀÎgÀĽ£À°è ºÉZÀÄÑ PÁ® G½zÀgÉ, ºÉZÀÄÑ ±ÁR GAmÁV, ±ÀjÃgÀzÀ DªÀÄè zÀħð®ªÁVzÀÝ°è, ªÉÆmÉÖUÀ¼ÀÄ MqÉzÀÄ ºÀļÀÄUÀ¼ÁUÀÄvÀÛªÉ. fÃuÁðAUÀ ºÁUÀÆ ±ÀÄ¢ÞÃPÀgÀuÁAUÀ ±ÀQÛ0iÀÄÄvÀªÁVzÀÄÝ ZÉ£ÁßV PÉ®¸À ¤ªÀð»¹zÀgÉ ºÀļÀÄUÀ¼ÁUÀĪÀÅ¢®è. CªÀÅUÀ¼À£ÀÄß PÉÆ®ÄèªÀ ±ÀQÛ ±ÀjÃgÀPÉÌà EzÉÝà EzÉ. G¥ÀÅöà ¤Ãj£À°è PÀZÁÑ ªÀ¸ÀÄÛUÀ¼À£ÀÄß ZÉ£ÁßV vÉƼÉzÀÄ G¥À0iÉÆÃV¸ÀĪÀÅzÀÄ PÉëêÀÄPÀgÀ.
* ºÀtÄÚ vÀgÀPÁjUÀ¼À F zÀĨÁj0iÀÄ PÁ®zÀ°è §qÀªÀgÀÄ §jà ºÀ¹0iÀÄ DºÁgÀ ¸Éë¸À®Ä ¸ÁzsÀåªÉÃ?
J¯Áè ªÀ¸ÀÄÛUÀ¼ÀÆ zÀĨÁj0iÀiÁVªÉ. CzÀÄ §jà ºÀtÄÚ ªÀÄvÀÄÛ vÀgÀPÁjUÀ½UÉ ªÀiÁvÀæ ¹Ã«ÄvÀªÁV®è.
* ºÀ°è®èzÀªÀgÀ UÀw K£ÀÄ?
UÉÆâü, ºÉ¸ÀgÀÄ, ªÉÄAxÀå, J¼ÀÄî, PÀqÉèÃPÁ¬Ä©Ãd ªÀÄÄAvÁzÀĪÀ£ÀÄß gÀÄ©â0iÀiÁUÀ°, «ÄQìUÉ ºÁQ0iÀiÁUÀ° §¼À¸À§ºÀÄzÀÄ. vÀgÀPÁjUÀ¼À gÀ¸À vÉUÉzÀÄ G¥À0iÉÆÃV¸À§ºÀÄzÀÄ. ºÀtÄÚUÀ¼À£ÀÄß ºÀ°è®èzÉ0iÉÄà w£ÀߧºÀÄzÀÄ. vÉAV£ÀPÁ¬Ä0iÀÄ£ÀÄß vÀÄjzÀÄ w£ÀߧºÀÄzÀÄ.
PÀ鴃 : ªÀÄ£ÀÄeÁ! K£ÀÄ ¤£Àß DºÁgÀ? JA§ ¥ÀŸÀÛPÀ¢AzÀ
§gÉzÀªÀgÀÄ : vÀĪÀÄPÀÆj£À f.«.«.±Á¹Ûç
¸ÀAUÀ滹zÀªÀgÀÄ : 1) J¯ï. CgÀÄuï
98864 17252
E-mail : ಪರಿಸರಪ್ರೇಮಿ ಅಟ್ ಯಾಹೂ .ಕಾಮ್
2) ºÉZï.PÉ.¸ÀvÀå¥ÀæPÁ±ï
98863 34667
E-mail : ಎಸ್ಪಿ_೧೯೩೯ ಅಟ್ ಯಾಹೂ.ಕೊ.ಇನ್

ಕೆಂಪಕ್ಕಿ(ಕಜಾಯ ಅಕ್ಕಿ) ಮತ್ತು ಅದರ ತಿನಿಸುಗಳು

ಭತ್ತ/ಕೆಂಪಕ್ಕಿ

ಭತ್ತದಿಂದ ಅಕ್ಕಿ, ಅಕ್ಕಿಯಿಂದ ಅನ್ನ, ಆಹಾರಕ್ಕೆ ಪರ್‍ಯಾಯ ಪದವೇ ಅನ್ನ. ದಕ್ಷಿಣ ಭಾರತದಲ್ಲಿ ನಾವು ಹೆಚ್ಚು ಉಪಯೋಗಿಸುವ ಆಹಾರವೇ ಅನ್ನ. ಹಿಂದೆ ಒಬ್ಬನ ಶಕ್ತಿಯನ್ನು ಅಳೆಯುತ್ತಿದ್ದುದೇ ಅವನು ತಿನ್ನುವ ಅನ್ನದ ಅಳತೆಯಿಂದ. "ಪಾವಕ್ಕಿ ತಿಂದು ಅರಗಿಸಿಕೊಳ್ಳುತ್ತಾನೆ, ಸೇರಕ್ಕಿ ತಿಂದು ಅರಗಿಸಿಕೊಳ್ಳುತ್ತಾನೆ." ನಾವು ಮಾಡುತ್ತಿದ್ದ ಹಾಗೂ ಮಾಡುತ್ತಿರುವ ತಪ್ಪು ಇದೇ. ಅವಶ್ಯಕತೆಗಿಂತ ಹೆಚ್ಚು ಅನ್ನವನ್ನು ತಿನ್ನಬಾರದು. ಬಹುಶಃ ಭತ್ತವನ್ನು ಬೆಳೆಯುವ ಕಲೆಯನ್ನು ಕಲಿತ ಮೇಲೆ ದಿನನಿತ್ಯದ ಆಹಾರ ಹುಡುಕಬೇಕಾದ ಕಷ್ಟ ತಪ್ಪಿ ಮನುಷ್ಯ ನಿರಾಳನಾದನೆಂದು ಕಾಣುತ್ತದೆ. ಅದರಿಂದ, ಅನ್ನ ಅವನ ಎಲ್ಲಾ ಆಹಾರಪದಾರ್ಥಗಳಲ್ಲಿ ಮೊದಲ ಸ್ಥಾನ ಪಡೆಯಿತು. ಈಗ ಉಪಯೋಗಿಸುತ್ತಿರುವ ಬಿಳಿಯ ಅಕ್ಕಿ ಯಾವ ಅಳತೆಗೋಲಿನಿಂದಲೂ ಸರಿಯಾದ ಆಹಾರಪದಾರ್ಥವಲ್ಲ. ತೌಡಿನಲ್ಲಿ ಎಲ್ಲಾ ಸತ್ವಗಳು ಹೊರಟುಹೋಗಿರುತ್ತವೆ. ನಾವು ಅಕ್ಕಿ ಎಂದು ಹೇಳಿದರೆ ಅದು ಕೆಂಪಕ್ಕಿಯೇ. ಹಿಂದೆ ಇದರಲ್ಲಿ ಅನೇಕ ತಳಿಗಳಿದ್ದವು. ಈಗ 'ದೇವಮಲ್ಲಿಗೆ' ಎಂಬ ಒಂದೇ ರೀತಿಯ ತಳಿ ಉಳಿದಿದೆ. ಅದನ್ನೂ ಸಹ ಹೆಚ್ಚು ಪಾಲೀಶ್ ಮಾಡಿರುತ್ತಾರೆ. ಹಾಗೆ ಮಾಡದಂತೆ ವಿನಂತಿಸಿಕೊಳ್ಳಬೇಕು. ಅಕ್ಕಿಯನ್ನು ತಿಕ್ಕಿ ತಿಕ್ಕಿ ಅನೇಕ ಸಲ ತೊಳೆಯಬಾರದು. ಧೂಳು ಹೋಗುವಂತೆ ಒಮ್ಮೆ ತೊಳೆದರೆ ಸಾಕು. ಇಲ್ಲದಿದ್ದರೆ ಜೀವಸತ್ವಗಳು ನಷ್ಟವಾಗುತ್ತವೆ. ಗಂಜಿಯನ್ನು ಬಸಿದು ಗಟಾರಕ್ಕೆ ಚೆಲ್ಲಬಾರದು. ಗಂಜಿಯನ್ನು ಇಂಗಿಸಿ ಅನ್ನ ಮಾಡಬೇಕು. ಇಲ್ಲದಿದ್ದರೆ ರೈಸ್ ಕುಕ್ಕರ್‍ನಲ್ಲಿ ಅನ್ನ ಮಾಡಬೇಕು.

ಅಕ್ಕಿಯಲ್ಲಿನ ಆಹಾರ ಸತ್ವಗಳು = ೧೦೦ ಗ್ರಾಂ ನಲ್ಲಿ :
ನೀರು ೧೩.೩%, ಸಸಾರಜನಕ ೭.೫%, ಖನಿಜಗಳು ೦.೯%, ಕ್ಯಾಲ್ಸಿಯಂ ೧೦ ಮಿ.ಗ್ರಾಂ, ನಾರು ೦.೬%, ಪಿಷ್ಟ ೭೬.೭%, ಕ್ಯಾಲೋರಿ ೩೪೬, ರಂಜಕ ಅ೯೦ ಮಿ.ಗ್ರಾಂ, ಕಬ್ಬಿಣ ೩.೨ ಮಿ.ಗ್ರಾಂ, ವಿಟಮಿನ್ 'ಬಿ'

ಅಕ್ಕಿಯನ್ನು ಕ್ರ್‍ಇಸ್ತಪೂರ್ವ ೩೦೦೦ ದಿಂದ ಉಪಯೋಗಿಸುತ್ತಿರುವ ದಾಖಲೆಗಳಿವೆ. ಅಕ್ಕಿ, ರಾಗಿ, ಗೋಧಿ ಮೂರೂ ಪಿಷ್ಟ ಪದಾರ್ಥಗಳೇ ಆದರೂ ಅಕ್ಕಿಯಲ್ಲಿನ ಪಿಷ್ಟದಲ್ಲಿ ಅಮೈಲೋಪೆಕ್ಟಿನ್ ಎಂಬ ಅಂಶ ಹೆಚ್ಚು ಇದೆ. ಇದರಿಂದ ಗೋಧಿ, ರಾಗಿಗಳಿಗಿಂತ ಬೇಗ ಜೀರ್ಣವಾಗುತ್ತದೆ. ಆದ್ದರಿಂದ ಮುದುಕರು, ರೋಗಿಗಳು,ಮಕ್ಕಳಿಗೆ ಅಕ್ಕಿ ಉತ್ತಮ ಆಹಾರ. ಇದರಲ್ಲಿರುವ ಸಸಾರಜನಕದ ಭಾಗ ೭.೫% ಮಾತ್ರ. ಆದರೆ ಇದರಲ್ಲಿಯ ಎಂಟು ಅವಶ್ಯ ಅಮೈನೋ ಆಮ್ಲಗಳಿವೆ. ಇವು ಒಳ್ಳೆಯ ಚರ್ಮ, ಕಣ್ಣಿನ ಹೊಳಪು ಉಂಟುಮಾಡುವುದಲ್ಲದೆ, ಹೃದಯ, ಶ್ವಾಸಕೋಶ, ಮಸ್ತಿಷ್ಕ ಮುಂತಾದುವುಗಳ ಜೀವಕೋಶಗಳನ್ನು ಬೆಳಸುತ್ತವೆ. ಇದರಲ್ಲಿರುವ 'ಬಿ' ಕಾಂಪ್ಲೆಕ್ಸ್, ಥಯಾಮಿನ್, ರಿಬೋಫ್ಲೇವಿನ್ ಮತ್ತು ನಯಾಸಿನ್ ಗಳಿಂದ ಕೂಡಿದೆ. ಇದರಿಂದ ಚರ್ಮದ ಆರೋಗ್ಯ, ನರಗಳು, ಹಾರ್ಮೋನ್, ಇವುಗಳ ಬೆಳವಣಿಗೆಗೆ ಸಹಾಯಕ. ಶರೀರದ ಒಳಗಿನ ನೀರಿನ ಸಮತ್ವವನ್ನು ಕಾಯುತ್ತದೆ. ಕಬ್ಬಿಣವನ್ನು ರಕ್ತಕ್ಕೆ ಕೊಡುವುದರಿಂದ 'ಅನೀಮಿಯ' ಗುಣವಾಗುತ್ತದೆ.

ಆಯುರ್ವೇದ ಅಕ್ಕಿಯ ಬಗ್ಗೆ ಹೀಗೆ ಹೇಳುತ್ತದೆ. ರಕ್ತಶ್ಹಲಿರ್ವರಸ್ತೇಷಾಂ ಬಲ್ಯೋವ್ರಣ ತ್ರಿದೋಷಜಿತ್! ಚಕ್ಷುಷ್ಯೋ ಮೂತ್ರಲಃ ಸ್ವರ್ಯಃ ಶುಕ್ರಲಃ ತೃಟ್ ಜ್ವರಾಪಹಃ-ಕೆಂಪು ಅಕ್ಕಿ ಬೇರೆ ಎಲ್ಲಾ ಅಕ್ಕಿಗಳಿಗಿಂತ ಶ್ರ್‍ಏಷ್ಟವಾದದ್ದು. ಅದು ಬಲಕಾರಿ,ಗಾಯಗಳನ್ನು ವಾಸಿಮಾಡುವುದು. ಮೂತ್ರ ದೋಷಗಳನ್ನೂ ತೆಗೆಯುವುದು, ಕಣ್ಣಿಗೆ ಹಿತಕರ, ಮೂತ್ರವನ್ನು ಸಡಿಲಿಸುವುದು, ಧ್ವನಿಯ ಆರೋಗ್ಯಕ್ಕೆ ಒಳ್ಳೆಯದು, ವೀರ್ಯವರ್ಧಕ, ಅತಿಯಾದ ಬಾಯಾರಿಕೆ, ಜ್ವರವನ್ನು ಕಳೆಯುವುದು. ಈ ಗುಣಗಳಿಂದ ಎಲ್ಲೆಲ್ಲಿ ಅದನ್ನು ಉಪಯೋಗಿಸಬೇಕೆಂದು ಅರಿವಾಗುತ್ತದೆ.

ಕಫದ ಕಾಯಿಲೆಗಳಲ್ಲಿ ಇದು ವರ್ಜ್ಯ. ಮಧುರ ರಸವು ಕಫವನ್ನು ಹೆಚ್ಚಿಸುವುದು. ನೆಗಡಿ, ಕೆಮ್ಮು, ಆಸ್ತಮಾಗಳಲ್ಲಿ ಹೆಚ್ಚು ಬಳಸಬಾರದು. ಅಕ್ಕಿಯಲ್ಲಿ ಕೊಬ್ಬು ಕಡಿಮೆ. ಕೆಂಪಕ್ಕಿಯಲ್ಲಿರುವ ಕ್ಯಾಲ್ಸಿಯಂ ಲವಣವು ನರಗಳ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುವುದು. ಆದ್ದರಿಂದ ರಕ್ತದೊತ್ತಡದ ರೋಗಿಗಳಿಗೆ ಉತ್ತಮ ಆಹಾರ. ಜೀರ್ಣಾಂಗಗಳಲ್ಲಿನ ಎಲ್ಲಾ ತೊಂದರೆಗಳಲ್ಲಿ ಅನ್ನವು ಬಹಳ ಉಪಕಾರಿ. ಇದರಲ್ಲಿ ನಾರಿನ ಅಂಶ ಕಡಿಮೆ ಇರುವುದರಿಂದ ಹೊಟ್ಟೆಗೆ ಹಿತಕರ. ಎಲ್ಲಾ ಜೀರ್ಣಾಂಗಗಳ ತೊಂದರೆಯಲ್ಲಿಯೂ ಇದನ್ನು ಉಪಯೋಗಿಸಬಹುದು. ಭೇದಿಯಲ್ಲಿಯೂ ಕೂಡ ಅನ್ನವನ್ನು ಗಂಜಿಯ ರೂಪದಲ್ಲಿ ಕೊಡಬಹುದು.

ಮೇಲೆ ಹೇಳಿದ ಎಲ್ಲಾ ಕಾರಣಗಳಿಂದ ಅನ್ನವು ಶರೀರಕ್ಕೆ ಅನುಕೂಲಕರವೆಂಬುದು ವ್ಯಕ್ತವಾಗುವುದು, ಆದರೆ ಕೆಂಪಕ್ಕಿಯನ್ನು ಉಪಯೋಗಿಸಬೇಕು. ಈ ಅನ್ನವನ್ನೂ ಸಹ ಹೆಚ್ಚು ತರಕಾರಿಗಳ ಜೊತೆ, ಮೊಳಕೆಯ ಕಾಳುಗಳೊಂದಿಗೆ ಸೇವಿಸಬೇಕು. ಜತೆಗೆ ಹಣ್ಣು, ಹಾಲು, ಮೊಸರು ಇತ್ಯಾದಿಗಳಿರಬೇಕು. ಯಾವಾಗಲೂ ಅನ್ನ-ಸಾರು, ಬರೀ ಮೊಸರನ್ನ ಇಷ್ಟನ್ನೇ ಸೇವಿಸುತ್ತಿರಬಾರದು. ಸಮತ್ವದಿಂದ ಕೂಡಿದ್ದಲ್ಲಿ ತೊಂದರೆಯಿರುವುದಿಲ್ಲ. ನಾವು ಮಸಾಲೆಯೊಂದಿಗೆ ಬರೀ ಅನ್ನವನ್ನು ತಿನ್ನುವ ರೂಢಿ ಮಾಡಿಕೊಂಡಿದ್ದೇವೆ. ಇದು ತಪ್ಪು. ಹಿಂದಿನವರ ಆಹಾರದಲ್ಲಿಯೂ ಸಹ ಎಲ್ಲೂ ಬರೀ ಅನ್ನವಿರಲಿಲ್ಲ. ವೈವಿಧ್ಯಮಯವಾದ ಸೊಪ್ಪು-ತರಕಾರಿಗಳು, ಹಣ್ಣುಗಳು, ಹಾಲು ಇತ್ಯಾದಿಗಳಿದ್ದವು.

ಕೆಂಪಕ್ಕಿಯ ತಿನಿಸುಗಳು :
೧) ಕೆಂಪಕ್ಕಿಯ ಅನ್ನ : ೧ ಪಾವು ಅಕ್ಕಿಗೆ ೨ ಪಾವು ನೀರಿಟ್ಟು ಕುಕ್ಕರಿನಲ್ಲಾಗಲಿ, ಬೇರೆ ಪಾತ್ರೆಯಲ್ಲಾಗಲಿ ನೀರನ್ನು ಇಂಗಿಸಿ ಬೇಯಿಸುವುದು.
೨) ಗಂಜಿ ಅನ್ನ : ಅನ್ನಕ್ಕೆ ಕೊಂಚ ಹೆಚ್ಚು ನೀರಿಟ್ಟು, ಅಂದರೆ ೧ ಪಾವು ಅಕ್ಕಿಗೆ ೩ ಪಾವು ನೀರಿಟ್ಟು ಅದನ್ನು ಗಂಜಿ ಸಮೇತವಾಗಿ ಬಿಸಿಬಿಸಿಯಾಗಿ ಬಡಿಸಿ ಸ್ವಲ್ಪ ಉಪ್ಪು ಮತ್ತು ಕಡೆದ ಮಜ್ಜಿಗೆಯೊಂದಿಗೆ ತಿನ್ನುವುದು. ಇದು ಉಷ್ಣವನ್ನು ಕಡಿಮೆ ಮಾಡುವುದು.
೩) ರಾತ್ರಿ ಮಾಡಿದ ಅನ್ನವನ್ನು ಕೊಂಚ ತಣ್ಣೀರಿನಲ್ಲಿಟ್ಟು ಬೆಳಗ್ಗೆ ಆ ನೀರು ಸಮೇತ ಕಿವಿಚಿ, ಸ್ವಲ್ಪ ಉಪ್ಪು, ಕೊಂಚ ಗಟ್ಟಿ ಮಜ್ಜಿಗೆ ಹಾಕಿ ಕುಡಿಯುವುದು. ಶರೀರಕ್ಕೆ ತಂಪು.
೪) ೨೫೦ ಗ್ರಾಂ ಅಕ್ಕಿ + ೨೫ ಗ್ರಾಂ ಗೋಧಿಯ ಮೊಳಕೆ ಸೇರಿಸಿ ಅನ್ನ ಮಾಡಿದರೆ ರುಚಿಯಾಗಿರುವುದರ ಜೊತೆಗೆ ಅಗಿಯಲು ಅನುಕೂಲಕರ. ಕೆಂಪಕ್ಕಿ ಸಿಕ್ಕದಿದ್ದಾಗ ಬಿಳಿಯ ಅಕ್ಕಿಯೊಂದಿಗೆ ಗೋಧಿಯ ಮೊಳಕೆಯನ್ನು ಹಾಕಿ ಅನ್ನ ಮಾಡಿದರೆ ಅಕ್ಕಿಯಲ್ಲಿ ಕಳೆದುಕೊಂಡ ನಾರನ್ನು ಗೋಧಿಯಲ್ಲಿ ಪಡೆಯಬಹುದು.
೫) ೨೫೦ ಗ್ರಾಂ ಅಕ್ಕಿ + ೫೦ ಗ್ರಾಂ ಹೆಸರು ಕಾಳು ಮೊಳಕೆ. ಅನ್ನ ಮೇಲಿನಂತೆಯೇ.
೬) ೨೫೦ ಗ್ರಾಂ ಅಕ್ಕಿ + ೧೦೦ ಗ್ರಾಂ ಹಲಸಂದೆ(ಕಾರಾಮಣಿ) ಕಾಳು ಮೊಳಕೆ ಅನ್ನ ಮಾಡಿ.
ವಿ.ಸೂ : ಸಣ್ಣ ಮೊಳಕೆಗಳಿರುವಾಗಲೇ ಅಕ್ಕಿಯೊಂದಿಗೆ ಬೆರೆಸಿ ಅನ್ನಕ್ಕಿಡಿ.
೭) ಮೊಳಕೆಕಾಳುಗಳ ಹುಗ್ಗಿ : ಬೇಕಾಗುವ ಪದಾರ್ಥಗಳು : ಕೆಂಪಕ್ಕಿ ೨೫೦ ಗ್ರಾಂ, ಕಾರಾಮಣಿ ಕಾಳು ಮೊಳಕೆ ೫೦ ಗ್ರಾಂ, ಹೊಟ್ಟಿನ ಸಮೇತ ಇರುವ ಹೆಸರುಬೇಳೆ ೧೫೦ ಗ್ರಾಂ, ಬಟಾಣಿ ಮೊಳಕೆ ೨೫ ಗ್ರಾಂ, ಹೆಸರುಕಾಳು ಮೊಳಕೆ ೫೦ ಗ್ರಾಂ, ಮೆಣಸು, ಜೀರಿಗೆ ೧ ಚಮಚ, ಕಡ್ಲೇಕಾಳು ಮೊಳಕೆ ೨೫ ಗ್ರಾಂ, ಹಸಿಶುಂಠಿ ಚೂರು ೧ಚಮಚ, ಗೋಧಿ ಮೊಳಕೆ ೨೫ ಗ್ರಾಂ, ಕಾಯಿತುರಿ ೧ ಹೋಳು, ಅರಿಶಿನದ ಪುಡಿ ೧ ಚಮಚ, ಉಪ್ಪು ರುಚಿಗೆ ತಕ್ಕಷ್ಟು.
ಮಾಡುವ ವಿಧಾನ : ಮೊದಲು ಅಕ್ಕಿ, ಹೆಸರುಬೇಳೆಗಳನ್ನು ಸ್ವಲ್ಪ ಬೆಚ್ಚಗೆ ಮಾಡಿಕೊಳ್ಳಬೇಕು. ಮೇಲೆ ಹೇಳಿದ ಎಲ್ಲಾ ಕಾಳುಗಳನ್ನೂ ಸಣ್ಣ ಮೊಳಕೆಗಳನ್ನಾಗಿ ನಾಡಿಕೊಳ್ಳಬೇಕು. ಎಲ್ಲವನ್ನೂ ಸೇರಿಸಿ ೩ ಲೋಟ(೩ ಪಾವು) ನೀರನ್ನಿಟ್ಟು ಕುಕ್ಕರಿನಲ್ಲಿ ಬೇಯಿಸಬೇಕು(ಹೊರಗಡೆಯೂ ಬೇಯಿಸಬಹುದು). ನಂತರ ಉಪ್ಪು ಬೆರೆಸಿ ಬಡಿಸುವುದು.
೮) ತರಕಾರಿಯ ಹುಗ್ಗಿ : ಬೇಕಾಗುವ ಪದಾರ್ಥಗಳು : ಕೆಂಪಕ್ಕಿ ೨೫೦ ಗ್ರಾಂ, ಹೊಟ್ಟಿನ ಹೆಸರುಬೇಳೆ ೧೫೦ ಗ್ರಾಂ, ಆಲೂಗೆಡ್ಡೆ ೨(ದೊಡ್ಡದು), ಹುರುಳೀಕಾಯಿ ೧೦೦ ಗ್ರಾಂ, ಟೊಮೇಟೋ ೨(ಸಣ್ಣದು), ತೊಂಡೇಕಾಯಿ ೫೦ ಗ್ರಾಂ, ದೊಣ್ಣೇಮೆಣಸಿನಕಾಯಿ ೧, ಕ್ಯಾರಟ್ ೫೦ ಗ್ರಾಂ, ಗೆಡ್ಡೆ ಕೋಸು ೧, ಸೀಮೇಬದನೆ ೧ ದೊಡ್ಡದು, ಹೂಕೋಸು ಸ್ವಲ್ಪ, ಶುಂಠಿ ಚೂರು ೧ ಚಮಚ, ಸೊಪ್ಪುಗಳು : ಮೆಂಥ್ಯ, ಸಬ್ಬಸಿಗೆ, ಪಾಲಾಕ್, ಪುದಿನಾ, ಕೊತ್ತಂಬರಿ, ಕರಿಬೇವು, ಅರಿಶಿನಪುಡಿ ೧ ಚಮಚ, ತೆಂಗಿನಕಾಯಿ ಅರ್ಧ ಹೋಳು, ಜೀರಿಗೆ, ಮೆಣಸಿನಪುಡಿ ೧ ಚಮಚ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ : ಹಿಂದಿನಂತೆಯೇ. ಒಗ್ಗರಣೆ ಹಾಕಿಕೊಳ್ಳಬಹುದು. ತುಪ್ಪ ಮೊಸರಿನೊಂದಿಗೆ ತಿನ್ನಲು ರುಚಿಯಾಗಿರುತ್ತದೆ.
(೭) ರಲ್ಲಿ ಹೇಳಿದ ಮೊಳಕೆ ಕಾಳುಗಳು (೮) ರಲ್ಲಿ ಹೇಳಿದ ತರಕಾರಿಗಳು ಎರಡನ್ನೂ ಸೇರಿಸಿ ಹುಗ್ಗಿಯನ್ನು ತಯಾರಿಸಿಕೊಳ್ಳಬಹುದು. ಮೊಳಕೆಯ ಕಾಳುಗಳು ಜೀರ್ಣಕ್ರಿಯೆಯ ವೇಗವನ್ನು ಹೆಚ್ಚಿಸುತ್ತವೆ. ತರಕಾರಿಗಳು ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತವೆ. ಇವೆರಡರಲ್ಲೂ ಇರುವ ನಾರು-ಬೇರುಗಳು ಕರುಳನ್ನು ಶುಚಿಗೊಳಿಸುತ್ತವೆ. ಮೊಳಕೆಯ ಕಾಳುಗಳನ್ನು ಉಪಯೋಗಿಸುವುದರಿಂದ ಖರ್ಚು ಕಡಿಮೆಯಾಗುತ್ತದೆ. ಮೊಳಕೆ ಕಾಳುಗಳು, ತರಕಾರಿಗಳು ಯಾವುದನ್ನೂ ಹಾಕದೆ ಬರೀ ಕರೀಮೆಣಸು, ಜೀರಿಗೆ ಹುಗ್ಗಿಯನ್ನು ಮಾಡಿದರೆ ಅದನ್ನು ಖಾರದ ಪೊಂಗಲ್ ಅನ್ನುವರು.
೯) ತುಪ್ಪಾನ್ನ(ಘೀ ರೈಸ್): ಬೇಕಾಗುವ ಪದಾರ್ಥಗಳು : ಕೆಂಪಕ್ಕಿ ೨೫೦ ಗ್ರಾಂ, ಮೆಣಸಿನಕಾಯಿ ೨, ಉದ್ದಿನಹಪ್ಪಳ ೫, ಉದ್ದಿನಬೇಳೆ ೨ ಚಮಚ, ಇಂಗು ೧ ಹರಳು, ತುಪ್ಪ ೧ ಟೇಬಲ್ ಚಮಚ, ತೆಂಗಿನ ಕಾಯಿ ತುರಿ ೫೦ ಗ್ರಾಂ, ಜೀರಿಗೆ ಅರ್ಧ ಚಮಚ.
ಮಾಡುವ ವಿಧಾನ : ಅನ್ನ ಮಾಡಿಟ್ಟುಕೊಳ್ಳುವುದು. ತುಪ್ಪದಲ್ಲಿ ಸಾಸುವೆ ಒಗ್ಗರಣೆ ಮಾಡಿ ಅದಕ್ಕೆ ಉದ್ದಿನಬೇಳೆ ಹಾಕಿ ಅದು ಕೆಂಪಗಾಗುವವರೆಗೂ ಹುರಿದು ನಂತರ ಮೆಣಸಿನ ಕಾಯಿ, ಇಂಗು ಇತ್ಯಾದಿಗಳನ್ನು ಹಾಕಬೇಕು. ಸುಟ್ಟ ಹಪ್ಪಳದ ಚೂರುಗಳು, ಉಪ್ಪು, ತುಪ್ಪ, ತೆಂಗಿನ ತುರಿ ಹಾಕಿ ಚೆನ್ನಾಗಿ ಕಲಸಬೇಕು.
೧೦) ಮೊಸರನ್ನ : ಬೇಕಾಗುವ ಪದಾರ್ಥಗಳು : ಕೆಂಪಕ್ಕಿ ೨೫೦ ಗ್ರಾಂ, ತೆಂಗಿನ ಕಾಯಿ ಕಾಲು ಹೋಳು, ಹಲಸಂದೆಯ ಮೊಳಕೆ ೧೨೫ ಗ್ರಾಂ, ಒಗ್ಗರಣೆ ಮೊಸರು.
ಮಾಡುವ ವಿಧಾನ : ಅಕ್ಕಿ, ಸಣ್ಣ ಮೊಳಕೆಯ ಹಲಸಂದೆಯ ಕಾಳು, ಎರಡನ್ನೂ ಒಟ್ಟಿಗೆ ಇಟ್ಟು ಅನ್ನ ಮಾಡಬೇಕು. ಅದನ್ನು ಆರಿ ಹಾಕಿ, ಆರಿದ ಮೇಲೆ ತೆಂಗಿನ ತುರಿ, ಒಗ್ಗರಣೆ, ಮೊಸರು ಹಾಕಿ ಕಲಸಬೇಕು. ಹಲಸಂದೆಯ ಮೊಳಕೆಯೇ ಏಕೆ? ಬೆರೆಯ ಮೊಳಕೆಗಳಿಗಿಂತ ಅನ್ನದ ಜೊತೆ ಹೆಚ್ಚು ಹೊಂದಿಕೊಳ್ಳುತ್ತದೆ.
೧೧) ಹಸಿಯ ತರಕಾರಿಯ ಅನ್ನ : ಬೇಕಾಗುವ ಪದಾರ್ಥಗಳು : ಕ್ಯಾರಟ್ ೫೦ ಗ್ರಾಂ, ಸೌತೇಕಾಯಿ ಅರ್ಧ, ಬೀಟ್ರೂಟ್ ೨೫ ಗ್ರಾಂ, ತೆಂಗಿನಕಾಯಿ ಕಾಲು, ಗೆಡ್ಡೇಕೋಸು ೧, ಕೆಂಪಕ್ಕಿ ೨೫೦ ಗ್ರಾಂ.
ಮಾಡುವ ವಿಧಾನ : ಎಲ್ಲಾ ತರಕಾರಿಗಳನ್ನೂ ತೆಂಗನ್ನೂ ತುರಿದಿಟ್ಟುಕೊಳ್ಳಿ, ಅನ್ನ ಮಾಡಿ ಆರಿಸಿ ಅದಕ್ಕೆ ಹಸಿ ತರಕಾರಿಗಳ ತುರಿ ಮತ್ತು ತೆಂಗಿನ ತುರಿಯನ್ನು ಹಾಕಿ, ಕಲಸಬೇಕು. ತಿನ್ನಲಿಕ್ಕೆ ಬೇಕೆನಿಸಿದರೆ ಉಪ್ಪು ಹಾಕಿ, ಇಲ್ಲದಿದ್ದರೆ ಹಾಗೆಯೇ ತಿನ್ನಿ. ಇನ್ನೂ ರುಚಿ ಬೇಕಾದರೆ ಒಗ್ಗರಣೆ, ಮೊಸರು ಎಲ್ಲಾ ಹಾಕಿಕೊಳ್ಳಿ.
೧೨) ಹಸಿಯ ತರಕಾರಿಯ ರಸದ ಅನ್ನ : ಕೆಂಪಕ್ಕಿ ೨೫೦ ಗ್ರಾಂ + ಎರಡು ಗ್ಲಾಸ್ ನೀರಿನ ಬದಲು - ಒಂದು ಗ್ಲಾಸ್ ನೀರು, ಮತ್ತೊಂದು ಗ್ಲಾಸ್ ಕ್ಯಾರಟ್ ರಸ, ಬೀಟ್ ರೂಟ್ ರಸ, ಸೌತೇಕಾಯಿ ರಸ, ಅನ್ನಕ್ಕಿಡಿ.
ಅಥವಾ ಮೇಲಿನ ರಸಗಳನ್ನು ತೆಗೆದು ಅದಕ್ಕೆ ಒಗ್ಗರಣೆ, ಕಾಯಿರಸ ಎಲ್ಲವನ್ನೂ ಹಾಕಿ. ಅನ್ನವನ್ನು ಮಾಮೂಲಿನಂತೆ ಮಾಡಿ, ಸಾರಿಗೆ ಬದಲು ಈ ರಸವನ್ನು ಹಾಕಿಕೊಂಡು ಊಟ ಮಾಡಿ. ( ಬೇಕಿದ್ದಲ್ಲಿ ಉಪುಉ).
೧೩) ಕ್ಯಾರಟ್-ನಿಂಬೆ ಚಿತ್ರಾನ್ನ : ಬೇಕಾಗುವ ಪದಾರ್ಥಗಳು : ಕೆಂಪಕ್ಕಿ ೨೫೦ ಗ್ರಾಂ, ಒಣಮೆಣಸಿನಕಾಯಿ ೩-೪, ಅರಿಶಿಣ ೧ ಚಮಚ, ಕ್ಯಾರಟ್ ೧೦೦ ಗ್ರಾಂ, ನಿಂಬೆಹಣ್ಣು ೧ ದೊಡ್ಡದು, ಕರಿಬೇವು, ಕೊತ್ತಂಬರಿ, ತೆಂಗಿನಕಾಯಿ ೫೦ ಗ್ರಾಂ, ಸಾಸುವೆ ಕಾಲು ಚಮಚ, ಕಡಲೇಕಾಯಿಬೀಜ ೨೦ ಗ್ರಾಂ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ : ಅನ್ನ ಮಾಡಿಕೊಂಡು ಅದನ್ನು ಒಂದು ದೊಡ್ಡ ತಟ್ಟೆಯ ಮೇಲೆ ಆರಲು ಹಾಕಿ, ತೆಂಗಿನಕಾಯಿ ತುರಿ, ಒಣ ಮೆಣಸಿನಕಾಯಿ, ಸಾಸುವೆ, ಎಲ್ಲಾ ನುಣ್ಣಗೆ ರುಬ್ಬಿಕೊಂಡು ಅದನ್ನು ಅನ್ನದ ಮೇಲೆ ಹಾಕಿ, ಒಗ್ಗರಣೆ, ಸಣ್ಣಗೆ ಹೆಚ್ಚಿಕೊಂಡ ಕೊತ್ತಂಬರಿ, ನಿಂದೆರಸ, ಕ್ಯಾರಟ್ ತುರಿಯನ್ನು ಅದರ ಮೇಲೆ ಹಾಕಿ ಚೆನ್ನಾಗಿ ಕಲಸಿ.
ಹಾಗೆಯೇ ಬೀಟ್ ರೂಟ್-ನಿಂಬೆ ಚಿತ್ರಾನ್ನ ಮಾಡಬಹುದು. ನಿಂಬೆಹಣ್ಣಿಗೆ ಬದಲು ಮಾವಿನಕಾಯಿಯನ್ನು ತುರಿದು ಹುಳಿಗಾಗಿ ಬಳಸಬಹುದು. ಅಥವ ಟೋಮೇಟೋವನ್ನಾದರೂ ಬಳಸಬಹುದು. ಅಥವ ನಿಂಬೆ, ಟೊಮೇಟೋ ಎರಡನ್ನು ಸೇರಿಸಬಹುದು.
೧೪) ಮೊಳಕೆ ಕಾಳುಗಳ ಬಿಸಿಬೇಳೇ ಭಾತ್ : ಬೇಕಾಗುವ ಪದಾರ್ಥಗಳು : ಕೆಂಪಕ್ಕಿ ೨೫೦ ಗ್ರಾಂ, ಹೆಸರುಕಾಳು ಮೊಳಕೆ ೨೫ ಗ್ರಾಂ, ಹೀರೇಕಾಯಿ ೧೦೦ ಗ್ರಾಂ, ಗೋಧಿ ಮೊಳಕೆ ೨೦ ಗ್ರಾಂ, ತೊಗರೀಬೇಳೆ ೧೦೦ ಗ್ರಾಂ, ಹಲಸಂದೇಕಾಳು ಮೊಳಕೆ ೧೦೦ ಗ್ರಾಂ, ಹುರುಳೀಕಾಯಿ ೫೦ ಗ್ರಾಂ, ಬಟಾಣಿ ಮೊಳಕೆ ೫೦ ಗ್ರಾಂ, ಗೆಡ್ಡೆಕೋಸು ೧, ಕಡ್ಲೇಕಾಳು ಮೊಳಕೆ ೨೫ ಗ್ರಾಂ, ಕ್ಯಾರಟ್ ೧೦೦ ಗ್ರಾಂ, ಕಡಲೇಕಾಯಿಬೀಜದ ಮೊಳಕೆ ೫೦ ಗ್ರಾಂ, ತೊಂಡೇಕಾಯಿ ೫೦ ಗ್ರಾಂ, ಕಡಲೇಬೇಳೆ, ಉದ್ದಿನಬೇಳೆ ೧ ಚಮಚ, ಸೀಮೇಬದನೆ ೧, ಎಣ್ಣೆ ೧೦೦ ಗ್ರಾಂ, ಕೊತ್ತಂಬರಿಬೀಜ ೨ ಚಮಚ, ಹೂಕೋಸು ೧, ಸುವರ್ಣಗೆಡ್ಡೆ ೧೦೦ ಗ್ರಾಂ, ಜಾಯಿಕಾಯಿ, ಜಾಪತ್ರೆ, ಅನಾನಸ್ ಹೂ ಸ್ವಲ್ಪ, ಒಣಮೆಣಸಿನಕಾಯಿ ೧೦, ಕೊಬ್ಬರಿ ಅರ್ಧ ಹೋಳು, ಚಕ್ಕೆ = ಲವಂಗ = ಮೊಗ್ಗು = ೪, ಬೆಲ್ಲ ೨ ಸಣ್ಣ ಉಂಡೆ, ಸಾಸುವೆ = ಗಸಗಸೆ = ೧ ಚಮಚ ತೆಂಗಿನಕಾಯಿ ಅರ್ಧ ಹೋಳು, ಹುಣಿಸೇಹಣ್ಣು ೨೦ ಗ್ರಾಂ, ಉಪ್ಪು ರುಚಿಗೆ ತಕ್ಕಷ್ಟು.
ಮಾಡುವ ವಿಧಾನ : ಸಾಂಬಾರ್ ಪದಾರ್ಥಗಳನ್ನು ಹುರಿದುಕೊಂಡು ಕಾಯಿ, ಕೊಬ್ಬರಿಯೊಂದಿಗೆ ರುಬ್ಬಿಕೊಳ್ಳುವುದು. ಬೇಲೆ, ಮೊಳಕೆಯ ಕಾಳುಗಳು, ಮತ್ತು ತರಕಾರಿ ಬೇಯಿಸಿ ಇಟ್ಟುಕೊಳ್ಳುವುದು. ಹುಣಿಸೇ ರಸ, ಬೆಲ್ಲ, ಉಪ್ಪು, ರುಬ್ಬಿದ ಮಿಶ್ರಣ, ಬೆಂದ ಬೇಳೆಕಾಳುಗಳು, ತರಕಾರಿಗಳೊಂದಿಗೆ ಸೇರಿಸಿ ಒಲೆಯ ಮೇಲಿಟ್ಟು ಸ್ವಲ್ಪ ನೀರು ಹಾಕಿ ಕುದಿಸುವುದು.
ಅಕ್ಕಿಯನ್ನು ಬೇರೆಯಾಗಿ ಬೇಯಿಸಿ ಅನ್ನ ಮಾಡಿಕೊಳ್ಳುವುದು, ಒಲೆಯ ಮೇಲಿಟ್ಟ ಹುಳಿ ಚೆನ್ನಾಗಿ ಕುದಿ ಬಂದ ಮೇಲೆ ಈ ಅನ್ನವನ್ನು ನಿಧಾನವಾಗಿ ಹಾಕುತ್ತಾ ಕಲಕುತ್ತಿರಬೇಕು.( ತಳಹತ್ತದಂತೆ ನೋಡಿಕೊಳ್ಳುವುದು) ಆರಿದ ಮೇಲೆ ಗಟ್ಟಿಯಾಗುವ ಪ್ರಯುಕ್ತ ಕೊಂಚ ನೀರು ಹೆಚ್ಚಿರುವುದು ಉತ್ತಮ.
ಎಣ್ಣೆ, ಸಾಸುವೆ, ಇಂಗು, ಕೊತ್ತಂಬರಿ, ಕರಿಬೇವು ಎಲ್ಲದರ ಒಗ್ಗರಣೆ(ಬೇಕಾದರೆ ಈರುಳ್ಳಿ, ಬೆಳ್ಳುಳ್ಳಿ) ಮಾಡಿ ಹಾಕಬಹುದು. ಕೊಂಚ ಆರಿದ ನಂತರ ಉಳಿದ ಎಣ್ಣೆಯನ್ನು ಕಾಯಿಸಿ ಹಾಕಿ ಕೆದಕುವುದು.
'ಬಿ ಕ್ಯೂಬ್' ಎಂದೇ ಪ್ರಸಿದ್ಧವಾಗಿರುವ ಬಿಸಿಬೇಳೇಭಾತ್ ಜೀರ್ಣಕ್ಕೆ ಬಹಳ ಜಡ. ಸಿಮೆಂಟ್ ಕಾಂಕ್ರ್‍ಈಟ್ ನಂತೆ ಹೊಟ್ಟೆಯಲ್ಲಿ ಗಟ್ಟಿಯಾಗಿ ಕುಳಿತುಬಿಡುತ್ತದೆ. ಆದರೆ ಮೇಲೆ ಹೇಳಿರುವುದರಲ್ಲಿ ತರಕಾರಿಗಳು, ಮೊಳಕೆ ಕಾಳುಗಳು ಬಿದ್ದಿರುವುದರಿಂದ ಜೀರ್ಣಕ್ಕೆ ಹಗುರ. ನೀವೂ ಮಾಡಿ ತಿಂದು ನೋಡಿ.
೧೫) ಪಲಾವ್ : ತರಕಾರಿಗಳು ಮತ್ತು ಮೊಳಕೆಯ ಕಾಳುಗಳನ್ನು ಹಾಕುವುದರಿಂದ ಜೀರ್ಣಕ್ಕೆ ಸುಲಭವಾಗುತ್ತದೆ. ಬೇಕಾಗುವ ಪದಾರ್ಥಗಳು : ಕೆಂಪಕ್ಕಿ ೨೫೦ ಗ್ರಾಂ, ಮೊಳಕೆ ಕಾಳುಗಳು : ಬಟಾಣು ೫೦ ಗ್ರಾಂ, ಕಡ್ಲೇಕಾಳು ೫೦ ಗ್ರಾಂ, ಗೋಧಿ ೨೫ ಗ್ರಾಂ, ತೊಗರೀಕಾಳು ೫೦ ಗ್ರಾಂ, ಅವರೇಕಾಳು ೫೦ ಗ್ರಾಂ, ತರಕಾರಿಗಳು : ಕ್ಯಾರಟ್, ಗೆಡ್ಡೇಕೋಸು, ಹುರಳಿಕಾಯಿ, ಗೋರೀಕಾಯಿ. ಮಸಾಲೆ ಪದಾರ್ಥಗಳು : ಚಕ್ಕೆ ೧೦ ಗ್ರಾಂ, ಲವಂಗ ೫ ಗ್ರಾಂ, ಏಲಕ್ಕಿ ೧೦, ಅನಾನಸ್ ಮೊಗ್ಗು ಅರ್ಧ ಕಲ್ಲು ಹೂ, ಎಲೆ ೧ ಪ್ಯಾಕೆಟ್, ತೆಂಗಿನಕಾಯಿ ೧, ಶುಂಠಿ, ಅಚ್ಚಮೆಣಸಿನಪುಡಿ, ೩ ಚಮಚ, ಕೊತ್ತಂಬರಿ ಸೊಪ್ಪು, ಸೋಂಪು ೨ ಚಮಚ, ಕಂದು ಬ್ರೆಡ್ ೬ ಸ್ಲೈಸ್, ಪುದೀನ, ಉಪ್ಪು.

ಮಾಡುವ ವಿಧಾನ : ಮಸಾಲೆಯ ಪುಡಿ, ಕೊತ್ತಂಬರಿ, ಪುದೀನ ಕಾಯಿತುರಿಯ ಜೊತೆ ರುಬ್ಬುಕೊಳ್ಳುವುದು. ಮೊಳಕೆಯ ಕಾಳುಗಳು, ತರಕಾರಿಗಳನ್ನು ಕುಕ್ಕರಿನಲ್ಲಿ ಬೇಯಿಸಿಕೊಳ್ಳುವುದು. ನಂತರ ಬಾಂಡಲೆಗೆ ೨ ಚಮಚ ಎಣ್ಣೆ ಹಾಕಿಕೊಂಡು, ಮೆಣಸಿನ ಪುಡಿ, ಬೆಂದ ತರಕಾರಿ ಎಲ್ಲವನ್ನೂ ಹಾಕಿ ಕುದಿಸುವುದು(ಸುಮಾರು ಎರಡು ನಿಮಿಷ). ಅನಾವನ್ನು ಬೇರೆ ಮಾಡಿಕೊಂಡು ಅದನ್ನು ಬಾಂಡಲೆಗೆ ಹಾಕಿ ಮೊತ್ತೊಮ್ಮೆ ಸಣ್ಣ ಉರಿಯಲ್ಲಿ ಕೆದಕುವುದು. ಆಮೇಲೆ ಬ್ರೆಡ್ ತುಂಡುಗಳನ್ನು ತುಪ್ಪದಲ್ಲಿ ಹುರಿದು ಪಲಾವ್ ಗೆ ಬೆರೆಸುವುದು.
ವಿ.ಸೂ. ಪಲಾವ್ ಎಲೆಗಳನ್ನು ರುಬ್ಬಿಕೊಳ್ಳುವುದು ಉತ್ತಮ. ಮಿಕ್ಸಿಗೆ ಹಾಕಿದರೆ ತುಂಬಾ ನುಣ್ಣಗೆ ಆಗುತ್ತದೆ. ಅಷ್ಟೊಂದು ನುಣ್ಣಗಾದರೆ ಚೆನ್ನಾಗಿರುವುದಿಲ್ಲ.
ಪಲಾವ್ ಗೆ ನಂಚಿಕೊಳ್ಳಲು ರಾಯತ :
೧) ಕಾಯಿ ತುರಿ + ಈರುಳ್ಳಿ + ಹಸಿರು ಮೆಣಸಿನಕಾಯಿ-ರುಬ್ಬಿಕೊಳ್ಳಬೇಕು, ಸೌತೇಕಾಯಿ ಹೆಚ್ಚಿ ಹಾಕಿ, ಉಪ್ಪು, ಕೊತ್ತಂಬರಿ, ಮೊಸರು ಹಾಕಬೇಕು.
೨) ಕಾಯಿ ತುರಿ + ಮೆಣಸು + ಈರುಳ್ಳಿ - ರುಬ್ಬಿಕೊಂಡು ಮೊಸರು, ಉಪ್ಪು, ಟೊಮೇಟೋ ಹಾಕಿ.
೩) ಈರುಳ್ಳಿಯ ಬದಲು ಮೂಲಂಗಿಯನ್ನು ಬಳಸಿ.

೧೬) ವಾಂಗೀಭಾತ್ : ಇದೂ ಸಹ ರುಚಿಗಾಗಿ ಮಾಡುವ ವಸ್ತುವೇ. ರುಚಿಯನ್ನು ಬಯಸುವುದು ತಪ್ಪಲ್ಲ. ಆದರೆ, ಯಾವಾಗಲೂ ಅದರ ದಾಸರಾಗಬಾರದಷ್ಟೆ. ಒಮ್ಮೊಮ್ಮೆ ತಿಂದರೆ ರುಚಿಯೂ ಹೆಚ್ಚು ತೊಂದರೆಯೂ ಕಡಿಮೆ. ಬೇಕಾಗುವ ಪದಾರ್ಥಗಳು : ಕೆಂಪಕ್ಕಿ ೨೫೦ ಗ್ರಾಂ, ಮೊಳಕೆಗಳು : ಗೋಧಿ, ಹೆಸರು, ಬಟಾಣಿ, ಕಡ್ಲೇಕಾಲು. ಬದನೇಕಾಯಿ ಅರ್ಧ ಕಿ.ಗ್ರಾಂ, ಉದ್ದಿನಬೇಳೆ ೧ ಚಮಚ, ಕಡ್ಲೇಬೇಳೆ ೧ ಚಮಚ, ಒಣಮೆಣಸಿನಕಾಯಿ ೧೦, ಕೊತ್ತಂಬರಿ ಬೀಜ ೧ ಚಮಚ, ಸಾಸುವೆ, ಲವಂಗ, ಚಕ್ಕೆ ೫-೬, ಕೊಬ್ಬರಿ ೧೦೦ ಗ್ರಾಂ, ಎಣ್ಣೆ ೧೫೦ ಗ್ರಾಂ.
ಮಾಡುವ ವಿಧಾನ : ಮಸಾಲೆ ಪದಾರ್ಥಗಳನ್ನು ಹುರಿದು ಪುಡಿ ಮಾಡಿಕೊಳ್ಳಿ. ಅನ್ನವನ್ನು ಉದುರು ಉದುರಾಗಿ ಮಾಡಿಟ್ಟುಕೊಳ್ಳಬೇಕು. ಕುಕ್ಕರಿನಲ್ಲಿ ಮೊಳಕೆಯ ಕಾಳುಗಳನ್ನು ಬೇಯಿಸಿಟ್ಟುಕೊಳ್ಳುವುದು. ಒಗ್ಗರಣೆಯಲ್ಲಿ ಬದನೇಕಾಯಿಯನ್ನು ಬೇಯಿಸಿಟ್ಟುಕೊಂಡು ಅದಕ್ಕೆ ಮಸಾಲೆ ಪುಡಿ, ಬೆಂದ ಮೊಳಕೆಯ ಕಾಳುಗಳು, ಅನ್ನ, ಹುಣಿಸೇಹುಳಿ, ಬೆಲ್ಲ, ಉಪ್ಪು ಹಾಕಿ ಕಲಸುವುದು.

ಬರೆದವರು : ಜಿ.ವಿ.ವಿ.ಶಾಸ್ತ್ರಿ
ಮನುಜಾ! ಏನು ನಿನ್ನ ಆಹಾರ ಪುಸ್ತಕದ ಕರ್ತೃ

ಸಂಗ್ರಹಿಸಿದವರು : ೧) ಸತ್ಯಪ್ರಕಾಶ್.ಹೆಚ್.ಕೆ.
೯೮೮೬೩ ೩೪೬೬೭
ಈಮೈಲ್ : ಎಸ್ಪಿ_೧೯೩೯ ಅಟ್ ಯಾಹೂ.ಕೊ.ಇನ್


೨) ಅರುಣ್. ಎಲ್.
೯೮೮೬೪ ೧೭೨೫೨
ಈಮೈಲ್ : ಪರಿಸರಪ್ರೇಮಿ ಅಟ್ ಯಾಹೂ.ಕಾಮ್
ಅರುಣ್.ಎಲ್ಲೆನ್ ಅಟ್ ಆರ್ ಹೆಚ್ ಎಮ್.ಕೊ.ಇನ್

ಸಮತೋಲನ ಆಹಾರ

ಸಮತೋಲನ ಆಹಾರ(ಬ್ಯಾಲನ್ಸಡ್ ಡಯಟ್)

ಇಂದು ಯಾರೇ ಡಾಕ್ಟರರ ಹತ್ತಿರ ಹೋದರೂ ಒಂದು ಪದ ಉಪಯೋಗಿಸುತ್ತಾರೆ. 'ನೀವು ಸಮತೋಲನ ಆಹಾರ ತೆಗೆದುಕೊಳ್ಳುತ್ತಿಲ'. ಯಾವುದೇ ಡಯಟೀಷಿಯನ್ ಬಳಿ ಹೋದರೂ ಇದೇ ಮಾತು.
ಈ ಸಮತೋಲನ ಆಹಾರವೆಂದರೇನು? ಆಹಾರದಲ್ಲಿ ಆರೂ ಘಟಕಗಳೂ ಇರಬೇಕು. ಅದೂ ಪ್ರಮಾಣಬದ್ಧವಾಗಿರಬೇಕು. ಒಂದೇ ಒಂದು ಘಟಕವನ್ನು ಹೊಟ್ಟೆಯ ತುಂಬಾ ತಿಂದರೂ ಪ್ರಯೋಜನವಿಲ್ಲ.

ಯಾವ ಯಾವ ಗುಂಪಿನ ಆಹಾರ ಎಷ್ಟೆಷ್ಟು?
ಒಂದು ದಿನದ ಒಬ್ಬನ ಆಹಾರ :
೧. ಏಕದಳ ಧಾನ್ಯಗಳು ೪೬೦ ಗ್ರಾಂ
೨. ಬೇಳೆಗಳು ೪೦ ಗ್ರಾಂ
೩. ಹಸಿ ತರಕಾರಿಗಳು ೪೦ ಗ್ರಾಂ
೪. ಇತರೆ ತರಕಾರಿಗಳು ೪೦ ಗ್ರಾಂ
೫. ಗೆಡ್ಡೆ, ಗೆಣಸುಗಳು ೫೦ ಗ್ರಾಂ
೬. ಹಣ್ಣುಗಳು ೩೦ ಗ್ರಾಂ
೭. ಹಾಲು ೧೫೦ ಗ್ರಾಂ
೮. ಕೊಬ್ಬು ೪೦ ಗ್ರಾಂ
೯. ಬೆಲ್ಲ ೩೦ ಗ್ರಾಂ

ಈ ಸಮತೋಲನ ಆಹಾರವೂ ಸಹ ಎಲ್ಲರಿಗೂ, ಯಾವಾಗಲೂ ಸಮತೋಲನವಾಗುವುದಿಲ್ಲ.

೧) ಮಕ್ಕಳ ಬೆಳೆಯುವ ವಯಸ್ಸಿನಲ್ಲಿ: ಬೆಳವಣಿಗೆಗಾಗಿ ಹೆಚ್ಚು ಪ್ರೊಟೀನ್ ಯುಕ್ತ ಆಹಾರ ಬೇಕಾಗುತ್ತದೆ. ಮೂಳೆಗಳ ಬೆಳವಣಿಗೆಗೆ ಹೆಚ್ಚು ಕ್ಯಾಲ್ಷಿಯ್ಂ ಮತ್ತು ರಂಜಕ, ವಿಟಮಿನ್ 'ಎ' ಕಣ್ಣುಗಳ ಆರೋಗ್ಯಕ್ಕಾಗಿ, ವಿಟಮಿನ್ 'ಸಿ' ಶರೀರದ ರಕ್ಷಣೆಗಾಗಿ, ಹಾಗೂ ವಿಟಮಿನ್ 'ಡಿ' ಬೆಳವಣಿಗೆಗಾಗಿ, ಈ ವಿಷಯಗಳನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಮಕ್ಕಳಿಗೆ ಆಹಾರ ಕೊಡಬೇಕಾಗುತ್ತದೆ.

೨. ಶ್ರಮ ಜೀವಿಗಳಿಗೆ : ಇವರಿಗೆ ಹೆಚ್ಚು ಕಾರ್ಬೋಹೈಡ್ರ್‍ಏಟ್ ಮತ್ತು ಕೊಬ್ಬಿರುವ ಆಹಾರ ಕೊಡಬೇಕು.

೩. ಬಸುರಿಯರಿಗೆ : ಹೆಚ್ಚು ಪ್ರೊಟೀನ್ ಯುಕ್ತ ಆಹಾರ ಬೇಕು. ಜತೆಗೆ ಕಬ್ಬಿಣ, ಕ್ಯಾಲ್ಷಿಯಂ,ಮತ್ತು ರಂಜಕ, ಅಲ್ಲದೆ ಎಲ್ಲಾ ವಿಟಮಿನ್ ಗಳೂ ಹೆಚ್ಚು ಹೆಚ್ಚು ಬೇಕು. ಬಾಣಂತಿಗೂ ಇಂತಹ ಆಹಾರದ ಅವಶ್ಯಕತೆ ಇದೆ.

೪. ಕಾಯಿಲೆಯಿಂದ ಗುಣಮುಖರಾಗುತ್ತಿರುವ ವ್ಯಕ್ತಿಗೆ : ಹೆಚ್ಚು ಪ್ರೊಟೀನ್ ಬೇಕು. ಹೆಚ್ಚು ವಿಟಮಿನ್, ಖನಿಜಗಳು ಅವಶ್ಯಕ. ಜತೆಗೆ ಸುಲಭವಾಗಿ ಜೀರ್ಣವಾಗುವ ಆಹಾರವಿರಬೇಕು.

೫. ವೃದ್ಧಾಪ್ಯದಲ್ಲಿ : ಕಾರ್ಬೋಹೈಡ್ರ್‍ಏಟ್, ಪ್ರೋಟೀನ್ ಗಳಿಗಿಂತ ಹೆಚ್ಚು ವಿಟಮಿನ್, ಲವಣಗಳು, ಕಿಣ್ವಗಳಿರುವ ಆಹಾರ ಮುಖ್ಯ. ಜತೆಗೆ ಸುಲಭವಾಗಿ ಜೀರ್ಣವಾಗುವಂತಿರುವುದು ಅವಶ್ಯಕ.

ಹೀಗೆ ಪ್ರತಿಯೊಬ್ಬರೂ ಅವರವರ ಅವಶ್ಯಕತೆಯನ್ನು ಅನುಸರಿಸಿ ಆಹಾರದ ಆರೂ ಘಟಕಗಳನ್ನು ತೆಗೆದುಕೊಳ್ಳಬೇಕು. ಅಲ್ಲದೆ ತರಕಾರಿಗಳನ್ನು ತಾಜಾ ಆಗಿ ಉಪಯೋಗಿಸಬೇಕು. ವೇಳೆ ಕಳೆದಂತೆ ಜೀವಸತ್ವಗಳು ನಾಶವಾಗುತ್ತವೆ. ಆಗತಾನೆ ಕಿತ್ತ ೧೦೦ ಗ್ರಾಂ ಆಲೂಗೆಡ್ಡೆಯಲ್ಲಿ ೩೦ ಮಿ.ಗ್ರಾಂ 'ಸಿ' ಜೀವಸತ್ವವಿದೆ. ಒಂದು ತಿಂಗಳು ಹಳತಾದರೆ ೨೦ ಮಿ.ಗ್ರಾಂ ಗೆ ಇಳಿಯುತ್ತದೆ. ಆರು ತಿಂಗಳು ಕಳೆದರೆ ೧೦ ಮಿ.ಗ್ರಾಂ.
ಸೊಪ್ಪು, ಹಸಿರು ತರಕಾರಿಗಳಲ್ಲಿ ಇದು ಇನ್ನು ಬೇಗ. ತರಕಾರಿಗಳನ್ನು ಹೆಚ್ಚು ಹೊತ್ತು ನೀರಿನಲ್ಲಿ ನೆನೆಸಿಡಬಾರದು. ನೀರಿನಲ್ಲಿ ಕರಗುವ ಜೀವಸತ್ವಗಳಾದ 'ಬಿ' ಮತ್ತು 'ಸಿ' ನೀರಿನಲ್ಲಿ ಕರಗಿಹೋಗುತ್ತವೆ. ತರಕಾರಿಗಳನ್ನು ಸಣ್ಣ, ಸಣ್ಣದಾಗಿ ಕತ್ತರಿಸುವುದರಿಂದ ೨೦ ರಿಂದ ೭೦ ಶತಾಂಶ ಜೀವಸತ್ವಗಳು ನಾಶವಾಗುತ್ತವೆ.

ತರಕಾರಿಗಳನ್ನು ಬೇಯಿಸಿದ ನೀರನ್ನು ಹೊರಕ್ಕೆ ಚೆಲ್ಲದೇ 'ಸೂಪ್'ನಂತೆ ಕುಡಿಯಬೇಕು. ಪದೇ,ಪದೇ ಬೇಯಿಸಿ ಉಪಯೋಗಿಸುವುದರಿಂದ ವಿಟಮಿನ್ ನಾಶ. ಅಕ್ಕಿಯನ್ನು ಹೆಚ್ಚು ಪಾಲೀಶ್ ಮಾಡಿದಷ್ಟೂ ಜೀವಸತ್ವಗಳ ನಾಶ.

ಪೋಷಕಾಂಶಗಳು : ಪಾಲೀಶ್ ಆಗದ ಅಕ್ಕಿ ಪಾಲೀಶ್ ಆದ ಅಕ್ಕಿ (೧೦೦ ಗ್ರಾಂ ನಲ್ಲಿ ಮಿ.ಗ್ರಾಂ ಮಿ.ಗ್ರಾಂ
ಕ್ಯಾಲ್ಸಿಯಂ ೧೦.೦೦ ೧೦.೦೦
ಕಬ್ಬಿಣ ೩.೨೦ ೩.೧೦
ಥಯಾಮಿನ್ ೦.೨೧ ೦.೦೬
ರಿಬೋಫ್ಲೇವಿನ್ ೦.೧೬ ೦.೦೬
ನಯಾಸಿನ್ ೩.೯೦ ೧.೯೦
ನಾರು ೦.೬೦ ೦.೨೦
ಥಯಾಮಿನ್, ನಯಾಸಿನ್ ಮುಂತಾದವು ಬಹಳಷ್ಟು ನಾಶವಾಗುತ್ತದೆ. ಗೋಧಿಯ ಹಿಟ್ಟಿನಲ್ಲಿ ಹೊಟ್ಟು ತೆಗೆಯುವುದರಿಂದ ಪೋಷಕಾಂಶಗಳು ನಾಶವಾಗುತ್ತವೆ.
ಪೋಷಕಾಂಶಗಳು ಗೋಧಿಯ ಹಿಟ್ಟು ಮೈದಾ ಹಿಟ್ಟು
(೧೦೦ ಗ್ರಾಂ ನಲ್ಲಿ) ಮಿ.ಗ್ರಾಂ ಮಿ. ಗ್ರಾಂ
ಕ್ಯಾಲ್ಸಿಯಂ ೪೧.೦೦ ೨೩.೦೦
ಕಬ್ಬಿಣ ೦.೪೯ ೦.೧೨
ರಂಜಕ ೩೫೫.೦೦ ೧೨೧.೦೦
ನಯಾಸಿನ್ ೪.೩೦ ೨.೪೦
ರಿಬೋಫ್ಲೇವಿನ್ ೦.೧೭ ೦.೦೭
ಥಯಾಮಿನ್ ೦.೪೯ ೦.೧೨
ನಾರಿನ ಅಂಶ ೧.೯೦ ೦.೩೦
ಕರಿಯುವುದು ಹಾಗೂ ಎಣ್ಣೆಯಲ್ಲಿ ಹುರಿಯುವುದು : ಇದರಿಂದ ೪೦% 'ಸಿ', ೭೦% 'ಇ' ಜೀವಸತ್ವಗಳು ನಾಶವಾಗುತ್ತವೆ. ಹೆಚ್ಚಿದ ಹಣ್ಣುಗಳು, ತುರಿದ ತರಕಾರಿಗಳನ್ನು ಹೆಚ್ಚು ವೇಳೆ ಗಾಳಿಯಲ್ಲಿ ಬಿಡಬಾರದು.

ಜೀರ್ಣಕ್ರಿಯೆ

ಗುರುಗಳು : ಬೆಳಗಿನ ತಿಂಡಿ ಏನು?

ಒಂದನೇ ವಿದ್ಯಾರ್ಥಿ : ಚಪಾತಿ, ಸಾಗು
ಎರಡನೇ ವಿದ್ಯಾರ್ಥಿ : ಪೂರಿ, ಪಲ್ಯ
ಮೂರನೇ ವಿದ್ಯಾರ್ಥಿ : ಇಡ್ಲಿ, ಸಾಂಬಾರ್
ನಾಲ್ಕನೇ ವಿದ್ಯಾರ್ಥಿ : ಹಣ್ಣುಗಳು
ಗುರುಗಳು : ಹೀಗೆ, ಬೇರೆ ಬೇರೆ ತಿಂಡಿಗಳನ್ನು ತಿಂದಿದ್ದೀರಿ. ಇವೆಲ್ಲಾ ಹೇಗೆ ರಕ್ತಗತವಾಗುತ್ತವೆ?
ವಿದ್ಯಾರ್ಥಿಗಳು (ಒಟ್ಟಿಗೆ): ನಮಗೆ ಗೊತ್ತಿಲ್ಲಾ ಸಾರ್, ನೀವೇ ತಿಳಿಸಿ.
ಗುರುಗಳು : ಜೀರ್ಣಕ್ರಿಯೆ ನಿಸರ್ಗದ ಒಂದು ಚಮತ್ಕಾರ. ನಾವು ತಿನ್ನುವ ಆಹಾರ ಬಾಯಿಯಿಂದ ಗುದದ್ವಾರದವರೆವಿಗೂ ಪಯಣಿಸುತ್ತದೆ. ಇದರ ಒಟ್ಟು ಉದ್ದ ಮೂವತ್ತಮೂರು ಅಡಿ. ಅನೇಕ ಅಂಗಗಳು ಈ ಕ್ರಿಯಯಲ್ಲಿ ಭಾಗವಹಿಸುತ್ತವೆ. ಆ ಅಂಗಗಳೇ ಅವುಗಳ ಕತೆಯನ್ನು ಹೇಳುತ್ತವೆ, ಕೇಳೋಣ.

ಬಾಯಿ : ಮೂಗು, ಆಹಾರದ ವಾಸನೆಯನ್ನು ಗ್ರಹಿಸುತ್ತದೆ. ಕಣ್ಣು ಬಣ್ಣವನ್ನು ನೋಡುತ್ತದೆ. ಆಗ ನನ್ನಲ್ಲಿ ನೀರು ದ್ರವಿಸಲು ಪ್ರಾರಂಭವಾಗುತ್ತದೆ. ಅದು ಬರಿಯ ನೀರಲ್ಲ, ಅದನ್ನು ಜೊಲ್ಲು ಎಂದು ಕರೆಯುತ್ತಾರೆ. ದಿನಕ್ಕೆ ಸುಮಾರು ಎರಡು ಲೀಟರಿನಷ್ಟು ಜೊಲ್ಲು ತಯಾರಾಗುತ್ತದೆ. ಜೀರ್ಣಕ್ರಿಯೆ ಹೊಟ್ಟೆಯಲ್ಲಿ ಪ್ರಾರಂಭವಾಗುವುದೆಂದು ಬಹಳ ಜನರ ನಂಬಿಕೆ. ಇಲ್ಲ, ಅದು ಪ್ರಾರಂಭವಾಗುವುದು ನನ್ನಿಂದ. ಜೀರ್ಣಕ್ರಿಯೆಯಲ್ಲಿ ಎರಡು ವಿಧ. ೧) ಯಾಂತ್ರಿಕ ಕ್ರಿಯೆ ೨) ರಾಸಾಯಿನಿಕ ಕ್ರಿಯೆ

ಯಾಂತ್ರಿಕ ಕ್ರಿಯೆಯು ಆಹಾರವನ್ನು ನುರಿಸಿ ನುಣ್ಣಗೆ ಮಾಡುವುದು. ಇದು ಜೀರ್ಣಕ್ರಿಯೆಯ ಮೊದಲ ಹಂತ. ಇದನ್ನು ನನ್ನಲ್ಲಿರುವ ಹಲ್ಲುಗಳು ಮಾಡುವುವು.

ಹಲ್ಲುಗಳು : ಮಕ್ಕಳೇ, ನಿಮಗೆ ನಮ್ಮ ಮೇಲಿರುವಷ್ಟು ಕೋಪ ಬಹುಶಃ ಯಾವ ಅಂಗದ ಮೇಲೂ ಇಲ್ಲವೆಂದು ಕಾಣುತ್ತದೆ. ನೀವು ಚಿಕ್ಕವರಾದಾಗಿನಿಂದಲೂ ಹಲ್ಲುಜ್ಜಿಕೊಳ್ಳುವುದು ಬೇಸರದ ಕೆಲಸ. ನೀವು ಉಪಾಧ್ಯಾಯರಿಂದ ಬೈಸಿಕೊಳ್ಳುವುದೂ ಸಹ ನಮ್ಮಿಂದಲೇ. "ಲೋ! ಏಕೋ ಹಲ್ಲು ಕಿಸಿಯುತ್ತಿ." ಒಟ್ಟಿನಲ್ಲಿ ನಮ್ಮ ಬಗ್ಗೆ ನಿಮಗೆ ಆಸಕ್ತಿ ಕಡಿಮೆ. ನಿಮಗೆ ನಾವು ಜ್ನಾಪಕ ಬರುವುದು ನೀವು ಸೀಬೇಕಾಯಿಯನ್ನು ನೋಡಿದಾಗ ಮಾತ್ರ. ಮುಂದೆ ಯುವಕ, ಯುವತಿಯರಾದ ಮೇಲೆ ನಮ್ಮ ಬಗ್ಗೆ ಕರುಣೆ ಬರುತ್ತದೆ. ಅಷ್ಟರಲ್ಲಿ ಅಚಾತುರ್ಯ ನಡೆದುಹೋಗಿರುತ್ತದೆ. ಹೃದಯ ಮುಂತಾದ ಅಂಗಗಳು ನಿಮ್ಮ ಸಹಾಯವನ್ನು ಹೆಚ್ಚು ಬಯಸುವುದಿಲ್ಲ. ಆದರೆ ನಾವು ಹಾಗಲ್ಲ. ನಮ್ಮ ಇರುವಿಕೆಗೆ ನಿಮ್ಮ ಸಹಾಯ ಅಗತ್ಯ. ನಿಮ್ಮ ಸಹಾಯಕ್ಕಾಗಿಯೇ ನಾವು ಇದ್ದೇವೆ. ನಾವು ಬಹಳ ಮಾನಧನರು. ನಮ್ಮನ್ನು ನಿರ್ಲಕ್ಷಿಸಿದರೆ ನಾವು ಬೇಗ ಜಾಗ ಖಾಲಿ ಮಾಡುತ್ತೇವೆ! ನೀವು ಇನ್ನೂ ಚಿಕ್ಕವರಿದ್ದಾಗ ಹಾಲುಹಲ್ಲುಗಳೆಂಬ ಇಪ್ಪತ್ತು ಹಲ್ಲುಗಳ ಒಂದು ಜೋಡಣೆಯಿತ್ತು. ಅದು ಬಿದ್ದು ಶಾಶ್ವತ ಹಲ್ಲುಗಳಾದ ನಾವು ಹುಟ್ಟಿದೆವು. ಕಡೆಯದಾಗಿ ಬರುವವು ಕಡೆಯ ಎರಡು ದವಡೆಯ ಹಲ್ಲುಗಳು. ಅವಕ್ಕೆ "ಬುದ್ಧಿವಂತ ಹಲ್ಲು' ಗಳೆಂದು ಹೆಸರು (ವಿಸ್ಡಮ್ ಟೀತ್). ಆ ವಯಸ್ಸಿಗೆ ನಿಮಗೆ ಬುದ್ಧಿ ಬಂದಿದೆ ಎಂದು ಅರ್ಥ. ನಿಮಗೆ ಬುದ್ಧಿ ಬಂದಿಲ್ಲದಿದ್ದರೆ ಅದು ನಮ್ಮ ತಪ್ಪಲ್ಲ! ಒಟ್ಟು ನಾವು ಮೂವತ್ತೆರಡು ಹಲ್ಲುಗಳು. ಕೆಳಗಿನ ಸಾಲಿನಲ್ಲಿ ಹದಿನಾರು, ಮೇಲಿನ ಸಾಲಿನಲ್ಲಿ ಹದಿನಾರು. ಬಾಚಿ ಹಲ್ಲುಗಳು, ಕೋರೆಹಲ್ಲು, ದವಡೆಹಲ್ಲುಗಳು, ಮುಂತಾಗಿ ನಮ್ಮ ನಮ್ಮ ಕೆಲಸಗಳನ್ನು ಅನುಸರಿಸಿ ನಮಗೆ ಹೆಸರುಗಳನ್ನು ಇಟ್ಟಿದ್ದಾರೆ. ಆಹಾರವನ್ನು ಹರಿಯಲು, ಕಡಿಯಲು, ಸಿಗಿಯಲು, ಅರೆಯಲು ಬೇರೆ ಬೇರೆ ಹಲ್ಲುಗಳೇ ಅವಶ್ಯ. ಕೋರೆಯ ಹಲ್ಲಿಗೆ 'ಕಣ್ಣು ಹಲ್ಲು' (ಐ ಟೀತ್) ಎಂದೂ ಕರೆಯುತ್ತಾರೆ. ಅದು ಕಣ್ಣಿನವರೆಗೂ ಹೋಗಿದೆಯೆಂದು ಹಿಂದಿನವರು ನಂಬಿದ್ದರು. ಅದು ತುಂಬಾ ಆಳಕ್ಕೆ ಇಳಿದಿದೆಯೆಂಬುದು ನಿಜವೇ. ನಾವು ಕ್ಯಾಲ್ಸಿಯಂ ಫಾಸ್ಫೇಟ್ ನಿಂದ ತಯಾರಾಗಿದ್ದೇವೆ. ಆದ್ದರಿಂದಲೇ ಕ್ಯಾಲಿಯಂ ಮತ್ತು ರಂಜಕಯುಕ್ತವಾದ ಆಹಾರವನ್ನು ನೀವು ಹೆಚ್ಚಿಗೆ ಸೇವಿಸಬೇಕು. ಅವುಗಳು ಯಾವುದರಲ್ಲಿರುತ್ತವೆನ್ನುವುದನ್ನು ಆಗಲೇ ಹೇಳಿಯಾಗಿದೆ. ನಮ್ಮ ಮೇಲಿರುವ ಮೊದಲನೆಯ ಪರೆ ಎನಾಮಲ್, ಅದರ ಹಿಂದಿರುವುದೇ ಡೆಂಟೈನ್. ಇದು ಪೂರ್ತಿ ಮೂಳೆಯಿಂದಲೇ ಆಗಿದೆ. ಈ ಡೆಂಟೈನ್ ನ ಹಿಂದೆ ಮೃದುವಾದ ಭಾಗವಿದೆ. ಅಲ್ಲಿ ನರಗಳು, ರಕ್ತನಾಳಗಳು ಎಲ್ಲವೂ ಇವೆ. ನೀವು ದಿನಕ್ಕೆ ಎರಡು ಸಲ ಬೇಕಾಬಿಟ್ಟಿಯಾಗಿ ಉಜ್ಜಿ ಬಹಳ ಶುಚಿಯಾಗಿಟ್ಟುಕೊಂಡಿರುವೆವು ಎಂದು ಭಾವಿಸಿದ್ದೀರಿ. ಬಾಯಿ, ಅಣುಗಳ ಅಕ್ಷಯಸಾಗರ. ಉಳಿದ ಆಹಾರದ ಕಣಗಳ ಮೇಲೆ ಬ್ಯಾಕ್ಟೀರಿಯಾಗಳ ಧಾಳಿಯಿಂದ ಒಂದು ಪೊರೆಯುಂಟಾಗುತ್ತದೆ. ಅದನ್ನು ಫ್ಲೇಕ್ ಎನ್ನುತ್ತಾರೆ. ಇದು ಕಣ್ಣಿಗೆ ಕಾಣದಷ್ಟು ಸೂಕ್ಷ್ಮವಾಗಿರುತ್ತದೆ. ಇದರಲ್ಲಿ ಆಹಾರದ ಕಣಗಳು ಕೊಳೆತು ಆಮ್ಲತೆಯುಂಟಾಗುತ್ತದೆ. ಈ ಆಮ್ಲ ಎನಾಮಲ್ ಅನ್ನು ಕರಗಿಸುತ್ತದೆ. ಇದು ಸಿಹಿ ಬಾಯಿಗೂ ಕಾರಣವಾಗುತ್ತದೆ. ಅಂದರೆ ತಿಂದ ಸಿಹಿ ಪದಾರ್ಥಗಳ ಕಣಗಳು ಬಾಯಿಯಲ್ಲಿ ಉಳಿದರೆ ಅದು ಬಾಯಿಯಲ್ಲಿಯ ಆಮ್ಲೀಯತೆಯನ್ನು ಹೆಚ್ಚಿಸುತ್ತದೆ. ಇದರಿಂದ ಬ್ಯಾಕ್ಟೀರಿಯಾಗಳಿಗೆ ಧಾಳಿ ಮಾಡಲು ಅನುಕೂಲವಾಗುತ್ತದೆ. ಕಣ್ಣಿಗೆ ಕಾಣದ ಫ್ಲೇಕ್(ಪ್ಲೇಕ್) ಜೊಲ್ಲಿನಲ್ಲಿರುವ ಲವಣಗಳನ್ನು ತೆಗೆದುಕೊಂಡು ಬಹಳ ಗಟ್ಟಿಯಾದ 'ಟಾರ್ ಟಾರ್' ಎಂಬ ವಸ್ತುವನ್ನು ತಯಾರಿಸಿ ಸಂದುಗಳಲ್ಲಿ ಕಟ್ಟುವಂತೆ ಮಾಡುತ್ತದೆ. ನೀವು ಮಧ್ಯವಯಸ್ಕರ ಹಲ್ಲಿನಲ್ಲಿ ಕರಿಯಬಣ್ಣದ ಈ ಟಾರ್ ಟಾರ್ ಕಟ್ಟಿರುವ ಹಲ್ಲುಗಳನ್ನು ನೋಡಿರಬಹುದು. ಇದು ನಮ್ಮ ಅಡಿಪಾಯವಾದ ವಸಡನ್ನು ನಮ್ಮಿಂದ ಬೇರ್ಪಡಿಸಿಬಿಡುತ್ತದೆ.

ನಾವು ನಿಮ್ಮ ಶರೀರವೆಂಬ ಮನೆಯ ಕಾಂಪೌಂಡಿನ ಗೇಟಿನಂತೆ. ನಿಮ್ಮ ಶರೀರದ ಆರೋಗ್ಯ, ನಿಮ್ಮ ಸೌಂದರ್ಯ ಎಲ್ಲವೂ ನಮ್ಮನ್ನು ಅವಲಂಬಿಸಿವೆ. ನಾವು 'ಉಪಯೋಗಿಸು, ಇಲ್ಲದಿದ್ದರೆ ಕಳೆದುಕೋ' (ಯೂಸ್ ಆರ್ ಲೂಸ್) ಎಂಬ ತತ್ವಕ್ಕೆ ಬದ್ಧರು. ನೀವು ನಮ್ಮನ್ನು ಉಪಯೋಗಿಸದಿದ್ದರೆ ಕಳೆದುಕೊಳ್ಳುತ್ತೀರಿ. ನಮ್ಮನ್ನು ಕಳೆದುಕೊಂಡರೆ ಗೇಟಿಲ್ಲದ ಮನೆಯಂತೆ, ಯಾವುದೇ ದನವಾದರೂ ನುಗ್ಗೀತು ಎಚ್ಚರಿಕೆ!

ಮಕ್ಕಳೇ! ಗ್ರ್‍ಐಂಡರ್ ನೋಡಿದ್ದೀರಾ ? ಅದು ಹೇಗೆ ಕೆಲಸ ಮಾಡುತ್ತದೆ. ಅರೆಯುತ್ತದೆ. ಹಿಟ್ಟಿಗೆ ಸ್ವಲ್ಪ ಸ್ವಲ್ಪ ನೀರು ಬಿದ್ದರೆ ಮಾತ್ರ ಚೆನ್ನಾಗಿ ನುರಿಸಬಲ್ಲದು. ಹಾಗೆಯೇ ಬಾಯಿಯಲ್ಲಿನ ಲಾಲಾಗ್ರ್‍ಅಂಥಿಗಳು ಸ್ವಲ್ಪಸ್ವಲ್ಪವೇ ಲಾಲಾರಸವನ್ನು ಸುರಿಸಿ ನಾವು ಆಹಾರವನ್ನು ನುರಿಸಲು ಸಹಾಯ ಮಾಡುವುವು. ಆಹಾರ ಜೀರ್ಣವಾಗಲು ಕಿಣ್ವಗಳು (ಎಂಜ಼ೈಮ್) ಬೇಕೇಬೇಕು. ಜೊಲ್ಲು ರಸದಲ್ಲಿನ ಕಿಣ್ವ ಟಯಲಿನ್. ಈ ಕಿಣ್ವವು ಪಿಷ್ಟಪದಾರ್ಥವನ್ನು ಜಂಟಿ ಸಕ್ಕರೆಯಾದ ಮಾಲ್ಟೋಸ್ ಆಗಿ ಪರಿವರ್ತಿಸುತ್ತದೆ. ಈ ಕ್ರಿಯೆಗೆ ಪ್ರತ್ಯಾಮ್ಲೀಯ ವಾತಾವರಣ ಬೇಕು. ಆಹಾರದಲ್ಲಿರುವ ಸಸಾರಜನಕ ಮತ್ತು ಮೇದಸ್ಸು ನನ್ನಿಂದ ಸಣ್ಣ ಸಣ್ಣ ಕಣಗಳಾಗಿ ಒಡೆಯಲ್ಪಡುತ್ತವೆ. ಆದರೆ ಅವುಗಳ ಜೀರ್ಣಕ್ರಿಯೆ ಬಾಯಿಯಲ್ಲಿ ಪ್ರಾರಂಭವಾಗುವುದಿಲ್ಲ. ಅದಕ್ಕೆ ಬೇಕಾದ ವಾತಾವರಣವಾಗಲಿ, ಕಿಣ್ವವಾಗಲಿ ನನ್ನಲ್ಲಿಲ್ಲ.

ಘನಾಹಾರ ದ್ರವರೂಪವನ್ನು ಪಡೆದು ನಿಧಾನವಾಗಿ ಅನ್ನನಾಳದ ಮುಖಾಂತರ ಜಠರಕ್ಕೆ ಒಯ್ಯಲ್ಪಡುತ್ತದೆ. ಈ ಕ್ರಿಯೆ ಒಮ್ಮೆಗೇ ಆಗುವುದಿಲ್ಲ. ಸ್ವಲ್ಪ, ಸ್ವಲ್ಪವೇ ನೂಕಲ್ಪಟ್ಟು ಜಠರವನ್ನು ಸೇರುತ್ತದೆ. ಮುಂದಿನದು ಜಠರದ ಕೆಲಸ.

ಜಠರ :
ಮನುಷ್ಯ ನನಗೆ ಕೊಟ್ಟಷ್ಟು ಪ್ರಾಮುಖ್ಯತೆಯನ್ನು ಬಹುಶಃ ಶರೀರದ ಯಾವ ಅಂಗಕ್ಕೂ ಕೊಟ್ಟಿಲ್ಲ. ಅದಕ್ಕೇ ಅನೇಕ ಗಾದೆಗಳು. "ಎಲ್ಲಾ ಮಾಡುವುದು ಹೊಟ್ಟೆಗಾಗಿ" "ಜಠರ-ದೇಹದ ಕಮ್ಮಟ". "ಜಠರ-ಹೋಟೆಲಿದ್ದಂತೆ-ಬರುವವರೂ ಹೋಗುವವರೂ ಸದಾ ಇರುತ್ತಾರೆ." ನನ್ನನ್ನು ಮೊದಲು ಸಾಮಾನ್ಯವಾಗಿ ಹೊಗಳುವವರೇ ಹೆಚ್ಚು. ಕಡೆಗೆ ಹೇಳುತ್ತಾರೆ, "ಅಯ್ಯೋ! ಹೊಟ್ಟೆ! ನಿನ್ನನ್ನು ನಂಬಿ ನಾ ಕೆಟ್ಟೆ." ಇವರನ್ನು ಕೆಡಿಸುವುದು ನನ್ನ ಉದ್ದೇಶ್ಯವಲ್ಲ. ನಿಜವಾಗಿ ಅವರೇ ನನ್ನನ್ನು ಕೆಡಿಸುತ್ತಾರೆ. ಹೊರಗೆ ಕಾಣುವ ಹೊಟ್ಟೆ ನಾನಲ್ಲ, ಅದರೊಳಗಿನ ಬೆಲೂನಿನಂತಹ ಒಂದು ಅಂಗ ನಾನು. ನನ್ನ ಶಕ್ತಿ ಸಾಮಾನ್ಯವಾಗಿ ೨ ಲೀಟರ್ ವಸ್ತು ಹಿಡಿಸುವಷ್ಟು. ನೀವು ಅದಕ್ಕಿಂತ ಜಾಸ್ತಿ ತುರುಕುತ್ತೀರಿ ಅನ್ನುವ ವಿಷಯ ಬೇರೆ. ನಾನು ಸ್ಥಿತಿಸ್ಥಾಪಕತೆಯಿರುವ ಮಾಂಸದ ಚೀಲ. ನನ್ನಲ್ಲಿ ಹಲ್ಲುಗಳಿಲ್ಲ. ಹಲ್ಲುಗಳನ್ನು ಉಪಯೋಗಿಸಿ ಆಹಾರವನ್ನು ನುರಿಸಿದ್ದರೆ ನನಗೆ ನೀವು ಉಪಕಾರ ಮಾಡಿದಂತಾಗುತ್ತದೆ. ಆಹಾರವನ್ನು ನಾನು ಕಡೆಯುತ್ತೇನೆ. ಅದರಿಂದ ಕೊಂಚ ನುರಿಸಿ ಆಹಾರವನ್ನು ದ್ರವರೂಪಕ್ಕೆ ತರಬಲ್ಲೆ. ನನ್ನ ಪದರದಲ್ಲಿರುವ ಅನೇಕ ಗ್ರಂಥಿಗಳು ಸುಮಾರು ೩ ಲೀಟರ್ ನಷ್ಟು ಹೈಡ್ರೋಕ್ಲೋರಿಕ್ ಆಮ್ಲವನ್ನು ಸುರಿಸುತ್ತವೆ. ನನ್ನಲ್ಲಿ ತಯಾರಾಗುವ ಕಿಣ್ವ ಪೆಪ್ಸಿನ್. ಇದು ಪ್ರೊಟೀನನ್ನು ಪಾಲಿಪೆಪ್ ಟೈಡ್ ಎಂಬ ರೂಪಕ್ಕೆ ಒಡೆಯುತ್ತದೆ. ಬಾಯಿಯಲ್ಲಿ ಪ್ರಾರಂಭವಾಗದಿದ್ದ ಸಸಾರಜನಕದ ಜೀರ್ಣಕ್ರಿಯೆ ಇಲ್ಲಿ ಪ್ರಾರಂಭವಾಗುವ ರೀತಿ ಇದು. ನನ್ನ ಮಾಂಸಖಂಡಗಳ ತರಂಗದಂತಹ ಕ್ರಿಯೆಯಿಂದ ಆಹಾರವು ನುಣ್ಣಗೆ ದೋಸೆಯ ಹಿಟ್ಟಿನಂತಾಗುತ್ತದೆ. ಆಹಾರ ೩-೪ ಗಂಟೆಗಳ ಕಾಲ ನನ್ನಲ್ಲಿ ಉಳಿಯುತ್ತದೆ. ಎಣ್ಣೆಯಲ್ಲಿ ಕರಿದ, ರುಚಿರುಚಿಯಾದ ಬೆಳಗಿನ ತಿಂಡಿ ಪೂರಿಯನ್ನು ಊಟದ ಹೊತ್ತಾದರೂ ನನ್ನಿಂದ ಅರಗಿಸಲು ಸಾಧ್ಯವಿಲ್ಲ. ನನಗೆ ತೊಂದರೆ ಕೊಡುವ ಮತ್ತೊಂದು ವಸ್ತು ಐಸ್ ಕ್ರೀಂ. ಅದು ನನ್ನ ಶಾಖವನ್ನು ಒಮ್ಮೆಗೆ ೯೯ಡಿಗ್ರಿ 'ಎಫ್' ನಿಂದ ೨೦ಡಿಗ್ರಿ 'ಎಫ್' ಗೆ ಇಳಿಸಿಬಿಡುತ್ತದೆ. ಇದರಿಂದ ನನ್ನ ಕೆಲಸ ತಣ್ಣಗಾಗುತ್ತದೆ, ಅಂದರೆ ನಿಂತು ಹೋಗುತ್ತದೆ. ಮಕ್ಕಳೇ, ಐಸ್ ಕ್ರೀಂ ತಿನ್ನುವ ಮುಂಚೆ ಕೊಂಚ ಯೋಚಿಸಿ!

ಹಸಿಯ ಮಾಂಸವನ್ನೇ ಬೇಕಾದರೂ ಕರಗಿಸುವ ನಾನು ಖಾಲಿಯಾಗಿದ್ದರೆ ನನ್ನನ್ನೇ ತಿಂದು ಬಿಡುವುದಿಲ್ಲವೇ? ಇದು ಬಹಳ ಜನರ ಆತಂಕ. ನನ್ನ ಪದರದಲ್ಲಿರುವ ಆಮ ನನ್ನನ್ನು ರಕ್ಷಿಸುತ್ತದೆ. "ನನಗೆ ಆಮಶಂಕೆಯಾದಾಗ ಹೊರಕ್ಕೆ ಹೋಗುತ್ತದಲ್ಲ, ಆ ಆಮವೇ?" ಹೌದು, ಅದೇ ಆಮ. ಆದರೆ ಆಮಶಂಕೆಯಲ್ಲಿ ಹೆಚ್ಚಾದ ಆಮ ಹೊರಕ್ಕೆ ಹೋಗುತ್ತದೆ. ನನ್ನಲ್ಲಿ ಉತ್ಪತ್ತಿಯಾಗುವ ಅಥವ ಬಂದು ಸೇರುವ ಕಿಣ್ವಗಳು, ಪೆಪ್ಸಿನ್, ರೆನಿನ್, ಮತ್ತು ಲಿಪೇಸ್.

ಮನುಜನ ಮುಖದಲ್ಲಾಗುವ ಬದಲಾವಣೆಗನುಗುಣವಾಗಿ ನನ್ನ ಬದಲಾವಣೆಯಾಗುತ್ತದೆ. ಮುಖದ ಬಣ್ಣ ಕೆಂಪಾದರೆ ನಾನು ಕೆಂಪಗಾಗುತ್ತೇನೆ. ಮುಖ ಮಂಕಾದರೆ ನಾನೂ ಮಂಕು. ಮನುಷ್ಯನ ಮನಸ್ಸಿನ ಒತ್ತಡ, ಖಿನ್ನತೆ ಎಲ್ಲವೂ ನನ್ನಲ್ಲಿ ಬದಲಾವಣೆಯನ್ನು ಉಂಟುಮಾಡುತ್ತವೆ. ಸಾಸುವೆ, ಉರಿಯುವಂತೆ ಮಾಡುತ್ತದೆ. ಅದಕ್ಕಿಂತ ಹೆಚ್ಚು ಮೆಣಸು ಉರಿಸುತ್ತದೆ. ಮೆಣಸಿನಕಾಯಿ ಉರಿ ಊತವನ್ನೇ ತರುತ್ತದೆ. ಕರಿದ ಮೆಣಸಿನಕಾಯಿ ಬಜ್ಜಿಯನ್ನು ತಿನ್ನುವಾಗ ನನ್ನ ಸ್ಥಿತಿಯನ್ನು ಜ್ನಾಪಿಸಿಕೋ. ಕಾಫಿ, ಟೀ, ಆಲ್ಕೋಹಾಲ್ ಎಲ್ಲವೂ ಆಮ್ಲತೆಯನ್ನು ಹೆಚ್ಚಿಸುತ್ತವೆ. ಇದೇ ಗುಂಪಿಗೆ ಔಷಧವೂ ಸೇರುತ್ತದೆ. ನನಗೆ ಗೌರವ ಕೊಟ್ಟು ತೊಂದರೆಯಿಲ್ಲದೇ ನೋಡಿಕೊಂಡರೆ ನಾನೂ ತೊಂದರೆ ಕೊಡದೆ ಸೇವೆ ಸಲ್ಲಿಸುತ್ತೇನೆ. ಮೊದಲು ನಾನು ಸಣ್ಣಗೆ ನೋವುಂಟುಮಾಡಿ ನನ್ನ ತೊಂದರೆಯನ್ನು ಹೇಳಿಕೊಳ್ಳುತ್ತೇನೆ. ಅದಕ್ಕೆ ಲಕ್ಷಕೊಡದೆ ಆ ನೋವನ್ನು ನಿರ್ಲಕ್ಷಿಸಿ, ನೋವುಶಮನ ಮಾತ್ರೆಯನ್ನು ನುಂಗಿ, ನನ್ನ ಶಕ್ತಿಗೆ ಮೀರಿ ಆಹಾರವನ್ನು ಸದಾ ತುರುಕುತ್ತಿದ್ದರೆ, ನಾನು ಬಿರುಕುಬಿಡಲು ಪ್ರಾರಂಭಿಸುತ್ತೇನೆ. ನೋವು ನಿತ್ಯದ ನಿಯಮವಾಗುತ್ತದೆ.

ಡಿಯೋಡಿನಂ :

ಆ ದೊಡ್ಡ ಜಠರದಿಂದ ಸಣ್ಣಕರುಳಿನ ಮಧ್ಯಭಾಗದಲ್ಲಿ ಸಿಕ್ಕಿ ನಜ್ಜುಗುಜ್ಜಾಗುತ್ತಿರುವ ಹತ್ತು ಅಂಗುಲ ಉದ್ದದ ಸಣ್ಣ ಅಂಗವೇ ನಾನು. ಜಠರದಲ್ಲಿ ದ್ರವರೂಪಕ್ಕೆ ಬಂದ ಆಹಾರ, ಅದಕ್ಕೆ ಚೈಮ್ ಎನ್ನುತ್ತಾರೆ, ಇದು ಪೈಲೋರಿಕ್ ಸ್ಪಿಂಕ್ ಸ್ಟರ್ ಮೂಲಕ ನನ್ನಲ್ಲಿಗೆ ಬರುತ್ತದೆ. ಅದಿಲ್ಲದಿದ್ದರೆ ಆ ದ್ರವದ ಜತೆಯಲ್ಲಿ ಆಮ್ಲವೂ ಸಹ ನುಗ್ಗಿಬಿಡುತ್ತಿತ್ತು. ಹಾಗಾಗಿದ್ದರೆ ನಾನು ಸತ್ತೇಹೋಗುತ್ತಿದ್ದೆ. ಆದ್ದರಿಂದ ನಿಧಾನವಾಗಿ ಆಹಾರವು ಮಾತ್ರ ನನ್ನಲ್ಲಿಗೆ ತಳ್ಳಲ್ಪಡುತ್ತದೆ. ನನ್ನಲ್ಲಿ ಮೇದೋಜೀರಕಗ್ರ್‍ಅಂಥಿಯಿಂದ ಬಂದ ಮೇದೋಜೀರಕ ರಸ, ಪಿತ್ತಕೋಶದಿಂದ ಬಂದ ಪಿತ್ತ ರಸ, ಇವೆಲ್ಲವೂ ಸೇರುತ್ತವೆ. ಬಾಯಿಯಲ್ಲಿ, ಜಠರದಲ್ಲಿ ಜೀರ್ಣವಾಗದೇ ಉಳಿದಿದ್ದ ಆಹಾರ ನನ್ನಲ್ಲಿ ಜೀರ್ಣವಾಗಲು ಪ್ರಾರಂಭವಾಗುವುದು. ನನ್ನಲ್ಲಿ ಪಚನಕ್ರಿಯೆ ಕ್ಷಾರಮಾಧ್ಯಮದಲ್ಲಿ ಮುಖ್ಯವಾಗಿ ಮೇದಸ್ಸಿನ ಜೀರ್ಣಕ್ರಿಯೆಯ ಪ್ರಾರಂಭ.

ಮೇದೋಜೀರಕಗ್ರ್‍ಅಂಥಿ :

ನಾನು ನಿನ್ನ ಮೇದೋಜೀರಕ ಗ್ರ್‍ಅಂಥಿ. ನನ್ನ ಬಣ್ಣ ಕಂದು ಕೆಂಪು(ಗ್ರ್‍ಏ ಪಿಂಕ್), ತೂಕ ೮೫ ಗ್ರಾಂ. ನಾನು ನಿನ್ನ ಹೊಟ್ಟೆಯ ಅಂತರಾಳದಲ್ಲಿದ್ದೇನೆ. ಜಠರದ ಕೆಳಗೆ ಡಿಯೋಡಿನಂ ಗೆ ಹೊಂದಿಕೊಂಡು, ಅನೇಕ ಅಂಗಗಳ ಮಧ್ಯೆ ಹುದುಗಿ ಹೋಗಿದ್ದೇನೆ. ನಾಯಿಯ ನಾಲಗೆಯಷ್ಟು, ಸುಮಾರು ೧೫ ಸೆಂ.ಮಿ. ಉದ್ದವಾಗಿದ್ದೇನೆ. ನನ್ನ ಇರುವಿಕೆಯ ಅರಿವು ನಿನಗಿಲ್ಲ. ನನ್ನ ಪ್ರಾಮುಖ್ಯತೆಯೂ ನಿನಗೆ ಗೊತ್ತಿಲ್ಲ. ಡಾಕ್ಟರ್ ನಿನಗೆ ಸಕ್ಕರೆ ಕಾಯಿಲೆಯಿದೆ ಎಂದು ಹೇಳಿದಾಗ ನೀನು ನನ್ನ ಬಗ್ಗೆ ಮಾಹಿತಿ ಸಂಗ್ರಹಣೆಗೆ ಪ್ರಯತ್ನಿಸುವಿಯೆಂದು ಕಾಣುತ್ತದೆ. ಹಾಗಾಗದಿರಲಿ ಎಂದು ನನ್ನ ಅಪೇಕ್ಷೆ. ಹಾಗಾಗದಿರಲು ನೀನು ನನ್ನ ಬಗ್ಗೆ ಮೊದಲೇ ತಿಳಿದುಕೊಳ್ಳುವುದು ಅವಶ್ಯ. ನಾನು ಸದಾ ಚಟುವಟಿಕೆಯಿಂದ ಕೂಡಿದ ಅಂಗ. ನಾನು ಅದನ್ನು ಕಡಿಮೆ ಮಾಡಿದರೆ ನಿನಗೆ ಸುಸ್ತು ಪ್ರಾರಂಭ. ನನ್ನಲ್ಲಿ ಎರಡು ವಿಧವಾದ ರಸಗಳು ಉತ್ಪತ್ತಿಯಾಗುತ್ತವೆ. ಮೊದಲನೆಯದು ಹಾರ್ಮೋನ್, ಎರಡನೆಯದು ಕಿಣ್ವ. ಸುಮಾರು ೯೦೦ ಗ್ರಾಂ ರಸಗಳು ನನ್ನಲ್ಲಿ ಉತ್ಪತ್ತಿಯಾಗುತ್ತವೆ. ೮೫ ಗ್ರಾಂ ಗ್ರ್‍ಅಂಥಿಯಿಂದ ೯೦೦ ಗ್ರಾಂ ರಸ! ನಿನಗೆ ಆಶ್ಚರ್ಯವಾಗುವುದಿಲ್ಲವೇ ? ಜಠರವನ್ನು ಬಿಟ್ಟ ಚೈಮ್ ಆಮ್ಲೀಯ ಗುಣ ಉಳ್ಳದ್ದು. ಡಿಯೋಡಿನಂ ಗೆ ಪ್ರತ್ಯಾಮ್ಲೀಯ ವಾತಾವರಣ ಬೇಕು. ಇದನ್ನು ಆಗಲೇ ತಿಳಿಸಿರಬೇಕು. ಆ ಪ್ರತ್ಯಾಮ್ಲೀಯ ವಾತವರಣವನ್ನು ಸೃಷ್ಟಿಸುವ ಕ್ರಿಯೆ ನನ್ನದು. ಮತ್ತೊಂದು ಮುಖ್ಯ ಕ್ರಿಯೆ ನಾನು ಸುರಿಸುವ ಕಿಣ್ವಗಳು. ಮೊದಲನೆಯದು ಟ್ರೈಪ್ಸಿನ್. ಇದು ಸಸಾರಜನಕವಸ್ತುಗಳನ್ನು ಅಮೈನೋಆಮ್ಲವಾಗಿ ಒಡೆಯುತ್ತದೆ. ಈ ಸ್ಥಿತಿಯಲ್ಲಿ ಮಾತ್ರ ರಕ್ತ ಸಸಾರಜನಕವನ್ನು ತನ್ನದಾಗಿಸಿಕೊಳ್ಳಬಲ್ಲದು. ಇದು ನಿನಗೆ ಆಗಲೇ ಗೊತ್ತಿದೆ. ಮತ್ತೊಂದು ಕಿಣ್ವ ಅಮೈಲೇಸ್, ಇದು ಪಿಷ್ಠವನ್ನು ಸಕ್ಕರೆಯನ್ನಾಗಿ(ಗ್ಲೂಕೋಸ್) ಪರಿವರ್ತಿಸುತ್ತದೆ. ಮೂರನೆಯದು ಹಾಗೂ ಬಹು ಮುಖ್ಯವಾದದ್ದು ಲಿಪೇಸ್. ಇದು ಮೇದಸ್ಸಿನ ಕಣಗಳನ್ನು ಫ್ಯಾಟಿ ಆಮ್ಲ ಮತ್ತು ಗ್ಲಿಸರೀನ್ ಆಗಿ ಒಡೆಯುತ್ತದೆ. ಹೀಗೆ ಮೂರು ರೀತಿಯ ಆಹಾರ ದ್ರವ್ಯಗಳನ್ನೂ ರಕ್ತಗತವಾಗುವ ಹಂತಕ್ಕೆ ತಂದು ಬಿಡುವುದು ನನ್ನ ಕೆಲಸ. ನಾಲಗೆಯ ಚಪಲಕ್ಕೆ ನೀನು ತಿಂದ ಅನೇಕ ಆಹಾರಗಳನ್ನು ರಕ್ತಗತ ಮಾಡಲು ಅನೇಕ ಅಂಗಗಳು ನಿನಗೆ ಅರಿವಿಲ್ಲದಂತೆ ಶ್ರಮಿಸುತ್ತಿವೆ. ಅಂತಹವುಗಳಲ್ಲಿ ನಾನೂ ಒಂದು.

ಮೇಲಿನ ಕೆಲಸಗಳ ಜೊತೆಗೆ ಅತಿ ಮುಖ್ಯವಾದ ಕೆಲಸವೊಂದಿದೆ. ಅದೇ ಇನ್ಸುಲಿನ್ ತಯಾರಿಕೆ. ಇದು ಒಂದು ಹಾರ್ಮೋನ್. ನಿನ್ನ ಶರೀರದಲ್ಲಿ ಕೋಟ್ಯಾಂತರ ಕೋಶಗಳಿವೆ. ಒಂದೊಂದೂ ಜೀವಕೋಶವೂ ಒಂದೊಂದು ರೈಲ್ವೆ ಎಂಜಿನ್ನಿನಂತೆ. ಇಂಜನ್ನಿನ ಚಾಲನೆಗೆ ಅದರಲ್ಲಿ ಕಲ್ಲಿದ್ದಲು ಉರಿಯಬೇಕು. ಒಂದು ಕಡೆ ಕಲ್ಲಿದ್ದಲಿದೆ. ಮತ್ತೊಂದು ಕಡೆ ಇಂಜಿನ್ನಿದೆ. ಇಂಜಿನ್ನು ತಾನೇ ಅದನ್ನು ತೆಗೆದುಕೊಳ್ಳಲಾರದು. ಮಧ್ಯೆ ಒಬ್ಬ ಕೋಲ್ಮನ್ ಬೇಕು. ಒಂದು ಕಡೆ ರಕ್ತದಲ್ಲಿ ಸಕ್ಕರೆ (ಗ್ಲೂಕೋಸ್) ಇದೆ. ಮತ್ತೊಂದೆಡೆ ಜೀವಕೋಶವಿದೆ. ಸಕ್ಕರೆ ಜೀವಕೋಶಕ್ಕೆ ತಲುಪಬೇಕು. ಜೀವಕೋಶ ತನ್ನಷ್ಟಕ್ಕೆ ತಾನೇ ತೆಗೆದುಕೊಳ್ಳಲಾರದು. ಒಬ್ಬ ಮಧ್ಯಸ್ಥಗಾರ (ಕೋಲ್ಮನ್ ರೀತಿ) ಬೇಕು. ಅದೇ ಇನ್ಸುಲಿನ್. ನನ್ನಲ್ಲಿ ಇನ್ಸುಲಿನ್ ತಯಾರಿಕೆ ಕಡಿಮೆಯಾದರೆ ಆಗ ರಕ್ತದಲ್ಲಿರುವ ಗ್ಲೂಕೋಸ್ ಜೀವಕೋಶವನ್ನು ಸೇರಲಾರದು. ಆ ಗ್ಲೂಕೋಸ್ ಶರೀರದಲ್ಲಿಯೇ ಉಳಿದರೆ ಶರೀರಕ್ಕೆ ಹಾನಿ. ಅದಕ್ಕಾಗಿ ಅದನ್ನು ಮೂತ್ರಜನಕಾಂಗಗಳು ಹೊರಕ್ಕೆ ಹಾಕಿಬಿಡುತ್ತವೆ. ಇದೇ ಸಕ್ಕರೆಯ ಖಾಯಿಲೆ. ಇನ್ನೂ ಹೆಚ್ಚಾದಲ್ಲಿ ರಕ್ತದಲ್ಲಿಯೇ ಉಳಿದುಬಿಡುತ್ತದೆ. ಇದರಿಂದ ಇನ್ನೂ ತೊಂದರೆ ಹೆಚ್ಚು.

ನನ್ನಲ್ಲಿ ಸಾಕಾಗುವಷ್ಟು ಇನ್ಸುಲಿನ್ ಇದೆ. ಆಗ ಏನಾಗುತ್ತದೆ ಕೊಂಚ ನೋಡುವ. ನಿನಗೆ ಅನ್ನ, ಚಪಾತಿ, ಹಿಟ್ಟು ಅಂದರೆ ಬಹಳ ಪ್ರೀತಿಯಲ್ಲವೇ? ನಿತ್ಯದ ನಿನ್ನ ಆಹಾರದಲ್ಲಿ ಇವಕ್ಕೇ ಮುಖ್ಯ ಪಾತ್ರ. ಅಕ್ಕಿಯೇ ಆಗಲಿ, ಗೋಧಿಯೇ ಆಗಲಿ, ರಾಗಿಯೇ ಆಗಲಿ ಕಡೆಗೆ ಗ್ಲೂಕೋಸ್ ಆಗಿಯೇ ರಕ್ತ ಸೇರಬೇಕು. ನೀನು ಎಷ್ಟು ಹೆಚ್ಚು ಈ ಗುಂಪಿನ ಆಹಾರ ಸೇವಿಸುವೆಯೋ ಅಷ್ಟು ಹೆಚ್ಚು ಗ್ಲೂಕೋಸ್ ರಕ್ತಕ್ಕೆ ಸೇರುತ್ತದೆ. ಅದನ್ನು ಜೀವಕೋಶದಲ್ಲಿ ಉರಿಸುವುದು ಇನ್ಸುಲಿನ್ ನ ಕೆಲಸ. ಎಲ್ಲವನ್ನೂ ಒಮ್ಮೆಯೇ ಉಪಯೋಗಿಸಿಬಿಡುವುದು ಬುದ್ಧಿವಂತಿಕೆಯೇ? ಮುಂದೆ ನಿನಗೆ ಅವಶ್ಯಕತೆ ಬಿದ್ದಾಗ ಬೇಕಾಗುತ್ತದೆ. ಅದಕ್ಕಾಗಿ ಆ ಹೆಚ್ಚಾದ ಗ್ಲೂಕೋಸನ್ನು ಗ್ಲೈಕೋಜಿನ್ ಮತ್ತು ಮೇದಸ್ಸಿನ ರೂಪಕ್ಕೆ ಪರಿವರ್ತಿಸಿ ಪಿತ್ತಕೋಶದಲ್ಲಿ ಶೇಖರಿಸುವ ಕೆಲಸವೂ ಸಹ ಇನ್ಸುಲಿನ್ನಿನದೇ. ನೀನು ಉಪವಾಸಮಾಡಿದಾಗ, ನಿನಗೆ ಅವಶ್ಯಕತೆಯುಂಟಾದಾಗ ಅದನ್ನು ಮತ್ತೆ ಗ್ಲೂಕೋಸ್ ಆಗಿ ಪರಿವರ್ತಿಸಿ ಕೊಡುವುದನ್ನೂ ಸಹ ಈ ಇನ್ಸುಲಿನ್ ನಿರ್ವಹಿಸುತ್ತದೆ. ಪಿತ್ತಕೋಶದಲ್ಲಿ ಸಂಗ್ರಹಿಸಿಡುವುದಕ್ಕಿಂತಲೂ ಹೆಚ್ಚು ಗ್ಲೂಕೋಸ್ ತಯಾರಾದರೆ ಅದನ್ನು ಮಾಂಸಖಂಡಗಳಲ್ಲಿ ಕೊಬ್ಬಿನ ರೂಪದಲ್ಲಿ ಶೇಖರಿಸಿಡುವುದೂ ಸಹ ಇನ್ಸುಲಿನ್. ಬರೀ ಪಿಷ್ಟವಷ್ಟೇ ಅಲ್ಲ, ನೀನು ತಿನ್ನುವ ಕೊಬ್ಬನ್ನು ಸಹ ಇದೇ ಕರಗಿಸಬೇಕನ್ನ. ನನ್ನ ಹೆಸರೇ ಸೂಚಿಸುವಂತೆ ಮೇದಸ್ಸನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುವ ಗ್ರಂಥಿಯಾಗಿರುವುದರಿಂದಲೇ ನಾನು ಮೇದೋಜೀರಕ ಗ್ರಂಥಿ. ಸಸಾರಜನಕದ ಜೀರ್ಣಕ್ರಿಯೆಯಲ್ಲಿಯೂ ಸಹ ಇನ್ಸುಲಿನ್ ನ ಪಾತ್ರವಿದೆ. ನಿನಗೆ ಇಷ್ಟೊಂದು ಉಪಯುಕ್ತವಾದ ಇನ್ಸುಲಿನ್ ತಯಾರಿಸುವ ಪುಟ್ಟ ಗ್ರಂಥಿ ನಾನೇ. ನನ್ನ ಬಗ್ಗೆ ಕೊಂಚ ಕರುಣೆಯನ್ನು ತೋರಿಸಲಾರೆಯಾ ? ಇಲ್ಲದಿದ್ದರೆ ಡಯಾಬಿಟಿಸ್ !

ಪಿತ್ತಕೋಶ :

'ನಾನು ನಿನ್ನ ಲಿವರ್' (ಪಿತ್ತಜನಕಾಂಗ)
'ನನಗೆ ಫೀವರ್ ಅಂದರೆ ಗೊತ್ತು ಆದರೆ ಈ ಲಿವರ್ ಅಂದರೇನೆಂದು ಗೊತ್ತೇ ಇಲ್ಲವೇ'!
'ಫೀವರ್ ಒಂದು ಕಾಯಿಲೆ, ನಾನು ನಿನ್ನ ಒಳಗಿರುವ ಒಂದು ಅಂಗ. ಮೊನ್ನೆ ನಿನಗೆ ವಾಂತಿ ಆಯ್ತಲ್ಲ ಎಂತಹ ಅನಾಹುತವಾಯ್ತು.'
'ಬರೀ ಕಹಿ, ಹಳದಿ ಹಸುರು ಮಿಶ್ರಿತ ನೀರು. ಒಂದೇ ಸಮನೆ ವಾಂತಿಯಾಯ್ತು.'
'ಅದನ್ನು ಪಿತ್ತರಸವೆನ್ನುತ್ತಾರೆ. ಅದನ್ನು ನಾನೇ ತಯಾರಿಸುತ್ತೇನೆ.'
'ಅಂತಹ, ಕೆಲಸಕ್ಕೆ ಬಾರದ, ವಾಂತಿಗೆ ಕಾರಣವಾದ ರಸವನ್ನು ಸುರಿಸುವುದೇ ನಿನ್ನ ಕೆಲಸವೇ?'

ಅಯ್ಯೋ! ಮೂರ್ಖ, ನನ್ನ ಬಗ್ಗೆ ನಿನ್ನ ತಿಳಿವಳಿಕೆ ಇಷ್ಟೊಂದು ಅಜ್ನಾನದಿಂದ ಕೂಡಿದೆಯಲ್ಲ ಎಂದು ದುಃಖವಾಗುತ್ತದೆ. ನಾನು ನಿನ್ನ ಶರೀರದ ರಾಸಾಯಿನಿಕ ಕಾರ್ಖಾನೆ. ನನ್ನಂತಹದೇ ಒಂದು ರಾಸಾಯಿನಿಕ ಕಾರ್ಖಾನೆಯನ್ನು ಹೊರಗಡೆ ತಯಾರಿಸಲು ಅನೇಕ ಎಕರೆ ಜಮೀನು ಬೇಕಾಗುತ್ತದೆ. ಬೇರೆ ಬೇರೆ ರೀತಿಯ ಒಂದು ಸಾವಿರ ಕೆಲಸಗಳನ್ನು ಮಾಡಲು ಬೇಕಾದ ಕಿಣ್ವಗಳು ನನ್ನಲ್ಲಿ ತಯಾರಾಗುತ್ತವೆ. ಗ್ರಂಥಿಗಳಲ್ಲೆಲ್ಲಾ ದೊಡ್ಡವನು ನಾನೇ. ನನ್ನ ತೂಕ ಸುಮಾರು ೨ ಕಿ.ಗ್ರಾಂ. ನಾನು ಜಠರದ ಬಲ ಮೇಲ್ಭಾಗವನ್ನೆಲ್ಲಾ ಆಕ್ರಮಿಸಿದ್ದೇನೆ. ನೋಟಕ್ಕೆ ಒಂದು ಟೋಪಿಯಂತೆ ಕಾಣುತ್ತೇನೆ. ನಿಸರ್ಗ, ಜೀರ್ಣಾಂಗಗಳಿಗೆ ಹಾಕಿದ ಟೋಪಿ! ''ಟೋಪಿ ಹಾಕುವುದು'-ಎಂದರೆ ಮೋಸ ಮಾಡುವುದೆಂದು ನೀನು ಅರ್ಥ ಮಾಡಿಕೊಳ್ಳುತ್ತೀಯೇ. ಇದು ಮನುಷ್ಯನ ಅನರ್ಥಕೋಶದಲ್ಲಿಯ ಅರ್ಥ! ನಮ್ಮ ಅರ್ಥದಲ್ಲಿ ರಕ್ಷಣೆಗಾಗಿ ಉಪಯೋಗಿಸುವುದು. ನಾನು ನಿನ್ನ ಶರೀರಕ್ಕಾಗಿ ಮಾಡುವ ಕೆಲಸವನ್ನು ನೋಡಿದರೆ ಯಾವ ರೀತಿ ಅರ್ಥ ಮಾಡುವುದು ಸರಿಯೆಂದು ನಿನಗೇ ತೋರುತ್ತದೆ. ನನ್ನ ಕೆಲಸವನ್ನು ನಿಲ್ಲಿಸಿದರೆ ಕೆಲವೇ ಕ್ಷಣಗಳಲ್ಲಿ ನಿನ್ನ ಸ್ಮಶಾನಯಾತ್ರೆಗೆ ತಯಾರಿ ನಡೆಸಬೇಕಾಗುತ್ತದೆ. ಆದರೆ ನಾನು ಅಷ್ಟು ಬೇಗ ನನ್ನ ಕೆಲಸವನ್ನು ಒಮ್ಮೆಗೇ ನಿಲ್ಲಿಸುವುದಿಲ್ಲ. ನನ್ನ ಜೀವಕಣಗಳಲ್ಲಿ ೮೫% ಹಾಳಾಗಿದ್ದರೂ ನಾನು ಕೆಲಸ ಮಾಡುತ್ತಲೇ ಇರುತ್ತೇನೆ. ಇದು ನಿನಗೆ ವರವೂ ಹೌದು, ಶಾಪವೂ ಹೌದು. ಹೇಗೆ ವರವೆಂದರೆ, ಮುಕ್ಕಾಲು ಭಾಗ ನಾನು ತೊಂದರೆಗೆ ಒಳಗಾಗಿದ್ದರೂ ನಿನಗೆ ತೊಂದರೆ ಕೊಡದೆ ಕೆಲಸವನ್ನು ತೂಗಿಸಿಕೊಂಡು ಹೋಗುತ್ತೇನೆ. ಶಾಪ ಹೇಗೆಂದರೆ, ನಿನಗೆ ನಾನು ಕಿರಿಕಿರಿ ಉಂಟುಮಾಡದುದರಿಂದ ನೀನು ಸುಮ್ಮನಿದ್ದುಬಿಡುತ್ತೀಯೆ. ಕಡೇ ಗಳಿಗೆಯಲ್ಲಿ ಕಷ್ಟಕ್ಕೆ ಸಿಲುಕಿಹಾಕಿಕೊಳ್ಳುತ್ತೀಯೆ. ೮೦% ನನ್ನನು ಕಿತ್ತೊಗೆದಿದ್ದರೂ ಸಹ ಮತ್ತೆ ಪೂರ್ಣ ಅಂಗವಾಗಿ ನಾನು ಬೆಳೆಯಬಲ್ಲೆ. ನನ್ನ ಕೆಲಸಗಳ ಬಗ್ಗೆ ಕೆಲವನ್ನು ಮಾತ್ರ ತಿಳಿಸುತ್ತೇನೆ.

ನೀನು ಆಟವಾಡಲು ಮಾಂಸಖಂಡಕ್ಕೆ ಶಕ್ತಿಯನ್ನು ಒದಗಿಸುವವನು ನಾನು. ರಾತ್ರಿಯ 'ಇರುಳುಗಣ್ಣು' ಬರದಂತೆ ತಡೆಯುವವನು ನಾನು. ನೀನು ಬೆರಳನ್ನು ಕೊಯ್ದುಕೊಂಡರೆ ರಕ್ತವನ್ನು ಹೆಪ್ಪುಗಟ್ಟುವಂತೆ ಮಾಡುವವನು ನಾನು. ಕಾಯಿಲೆ ಬರದಂತೆ ತಡೆಯುವ ರೋಗನಿರೋಧಕ ವಸ್ತು(ಆಂಟಿಬಾಡಿ) ವನ್ನು ತಯಾರಿಸುವವನು ನಾನು.

ಶರೀರದ ಕೆಲಸದಾಳುಗಳು ಜೀವಕೋಶಗಳು. ನನ್ನ ಜೀವಕೋಶಗಳನ್ನು ಬೇರೆಯ ಹೆಸರಿನಿಂದಲೇ ಕರೆಯುತ್ತಾರೆ-ಅವುಗಳಿಗೆ ಹೆಸರು ಹೆಪಟೊಸೈಟ್ ಗಳೆಂದು. ಇವು ಆಹಾರದ ಮೂರು ಘಟಕಗಳ ಜೀರ್ಣಕ್ರಿಯೆಯಲ್ಲಿ ಸಹಾಯ ಮಾಡುತ್ತವೆ. ಮೂರರಲ್ಲಿ ಮುಖ್ಯವಾದದ್ದು ಮೇದಸ್ಸಿನ ಜೀರ್ಣಕ್ರಿಯೆ.

ಮೇದಸ್ಸಿನ ಜೀರ್ಣಕ್ರಿಯೆ : ಇದೇ ನನ್ನ ಮುಖ್ಯ ಕೆಲಸ-ಪಿತ್ತರಸದ ಉತ್ಪತ್ತಿ. ಒಂದು ಸೆಕೆಂಡಿನಲ್ಲಿ ಹತ್ತು ಮಿಲಿಯನ್ ಕೆಂಪು ರಕ್ತಕಣಗಳು ಸಾಯುತ್ತವೆ. ಅದರಲ್ಲಿ ಸ್ವಲ್ಪ ಭಾಗವನ್ನು ಮತ್ತೆ ಹೊಚ್ಚಹೊಸ ಕೆಂಪುರಕ್ತಕಣಗಳನ್ನಾಗಿ ಪರಿವರ್ತಿಸಿಕೊಳ್ಳುತ್ತೇನೆ. ಉಳಿದುದನ್ನು ಪಿತ್ತರಸವನ್ನಾಗಿ ಮಾಡಿಕೊಳ್ಳುತ್ತೇನೆ. ಇನ್ನೂ ಹೆಚ್ಚಾದುದನ್ನು ಹೊರಕ್ಕೆ ಹಾಕುತ್ತೇನೆ. ಹಸಿರು ಮಿಶ್ರಿತ ಹಳದಿಯಾದ ಕಹಿಯಿಂದ ಕೂಡಿದ ಜುಗುಟಾದ ದ್ರವವೇ ಪಿತ್ತ ರಸ(ಬೈಲ್). ಇದು ಕೊಬ್ಬನ್ನು ಕರಗಿಸುತ್ತದೆ. ನನ್ನಲ್ಲಿ ತಯಾರಾದ ಈ ದ್ರವ, ಗಾಲ್ ಬ್ಲಾಡರ್‍ ನಲ್ಲಿ ಶೇಖರವಾಗುತ್ತದೆ. ಕೊಬ್ಬಿನ ಪದಾರ್ಥ ಡಿಯೋಡಿನಂ ಸೇರಿದ ತಕ್ಷಣ ಗಾಲ್ ಬ್ಲಾಡರ್ ನಿಂದ ಪಿತ್ತ ರಸ ಅಲ್ಲಿಗೆ ಸೇರುತ್ತದೆ. ಡಿಜರ್ಜೆಂಟ್ ಸೋಪು ಕೊಳೆಯನ್ನು ಹೇಗೆ ನೊರೆಯ ರೂಪಕ್ಕೆ ತರುತ್ತದೆಯೋ ಹಾಗೆ ಈ ಪಿತ್ತರಸವು ಕೊಬ್ಬನ್ನು ನೊರೆ ಬರಿಸಿ ಜೀರ್ಣಿಸಲು ಅನುಕೂಲವಾಗುವ ಫ್ಯಾಟಿ ಆಮ್ಲವಾಗಿ ಪರಿವರ್ತಿಸುತ್ತದೆ. ಒಮ್ಮೊಮ್ಮೆ ನನ್ನ ಈ ಪಿತ್ತರಸ ರಕ್ತಕ್ಕೆ ಸೇರಿದರೆ ಕಣ್ಣು ಮತ್ತು ಮೂತ್ರ ಹಳದಿಯಾಗಿ 'ಅರಿಶಿನ ಕಾಮಾಲೆ' ಎಂಬ ರೋಗ ಬರುತ್ತದೆ.

ಸಸಾರಜನಕದ ಜೀರ್ಣಕ್ರಿಯೆ : ಸಸಾರಜನಕ ವಸ್ತುಗಳು ಶರೀರದಲ್ಲಿ ಕಿಣ್ವಗಳ ಸಹಾಯದಿಂದ ಅಮೈನೋ ಆಮ್ಲಗಳಾಗಿ ಒಡೆಯಲ್ಪಡುತ್ತವೆ. ಇದು ರಕ್ತಕ್ಕೆ ಹಾಗೆಯೇ ಸೇರಿದರೆ ವಿಷವಾಗಿ ಪರಿವರ್ತನೆಯಾಗುತ್ತದೆ. ಇದನ್ನು ಮಾನವಶರೀರ ತನ್ನದಾಗಿಸಿಕೊಳ್ಳುವ ರೂಪಕ್ಕೆ ತರುವವನು ನಾನು. ನೀನು ಹೆಚ್ಚು ದುರಾಸೆಯಿಂದ ಹೆಚ್ಚು ಹೆಚ್ಚು ಸಸಾರಜನಕ ವಸ್ತುಗಳನ್ನು ತಿಂದಿದ್ದರೆ ಅದನ್ನು 'ಯೂರಿಯಾ' ಆಗಿ ಪರಿವರ್ತಿಸಿ ಮೂತ್ರಜನಕಾಂಗದ ಮೂಲಕ ಹೊರದೂಡುವವನು ನಾನು.

ಪಿಷ್ಠದ ಜೀರ್ಣಕ್ರಿಯೆ : ಪಿಷ್ಠವು ಗ್ಲೂಕೋಸ್ ಆಗಿ ರಕ್ತದಲ್ಲಿರುತ್ತದೆ. ಈ ಸಕ್ಕರೆಯನ್ನು ಗ್ಲೈಕೋಜಿನ್ ಎಂಬ ರೂಪಕ್ಕೆ ಪರಿವರ್ತಿಸಿ ನನ್ನಲ್ಲಿ ಅಡಗಿಸಿಟ್ಟುಕೊಂಡಿರುತ್ತೇನೆ. ಸುಮಾರು ೨೫೦ ಗ್ರಾಂ ಸಕ್ಕರೆ ಈ ರೀತಿ ಶೇಖರಿಸಲ್ಪಡುತ್ತದೆ. ಸಕ್ಕರೆ ರಾಜಕೀಯವನ್ನು ನಾನು ಮಾಡುವುದಿಲ್ಲ. ಅವಶ್ಯಕತೆಯಿದ್ದಾಗ ನಾನು ಈ ಗ್ಲೈಕೋಜಿನ್ನನ್ನು ಮತ್ತೆ ಗ್ಲೂಕೋಸ್ ಆಗಿ ಪರಿವರ್ತಿಸಿ ಶರೀರಕ್ಕೆ ಕೊಡುತ್ತೇನೆ. ಮುಖ್ಯವಾಗಿ ಮೆದುಳಿಗೆ ಸಕ್ಕರೆ ಸದಾ ಬೇಕೇಬೇಕು. ಕೆಲವೊಮ್ಮೆ ಉಪವಾಸಮಾಡುತ್ತೀಯೆ, ಮತ್ತೆ ಕೆಲವು ಸಲ ಕಾಯಿಲೆಯ ಕಾರಣದಿಂದ ಆಹಾರ ಸೇವಿಸಲು ಸಾಧ್ಯವಾಗುವುದಿಲ್ಲ. ಶರೀರ ಹಾಗೆಯೇ ಇರಬಲ್ಲದು. ಆದರೆ ಮೆದುಳಿಗೆ ಸಕ್ಕರೆ ಬೇಕೇಬೇಕು. ಅಂತಹ ಸನ್ನಿವೇಶದಲ್ಲಿ ನಾನು ಸಕ್ಕರೆಯನ್ನು ಮೆದುಳಿಗೆ ಒದಗಿಸುತ್ತೇನೆ.

ನಾನು ಅಡ್ರಿನಲ್ ಗ್ರಂಥಿಯ ಆರೋಗ್ಯವನ್ನು ಕಾಪಾಡುತ್ತೇನೆ. ಹಾಗೆಯೇ ಹೃದಯಕ್ಕೆ ಒಂದು ಸುರಕ್ಷಿತ ಕವಾಟದಂತೆ ವರ್ತಿಸುತ್ತೇನೆ. ನನ್ನಿಂದ ಹೃದಯಕ್ಕೆ ಹೆಪ್ಟಿಕ್ ರಕ್ತನಾಳದ ಮುಖಾಂತರ ನೇರ ಸಂಪರ್ಕ ಉಂಟು. ನೀನು ಕೋಪಗೊಂಡ ಸಂದರ್ಭದಲ್ಲಿ ರಕ್ತ ಜೋರಾಗಿ ಹೃದಯಕ್ಕೆ ನುಗ್ಗುತ್ತದೆ. ಅಂತಹ ಸನ್ನಿವೇಶದಲ್ಲಿ ಹೃದಯಾಘಾತವಾಗುವ ಸಂಭವ ಉಂಟು. ಆಗ ಸ್ಪಂಜಿನಂತೆ ನಾನೇ ರಕ್ತವನ್ನು ಹೀರಿಕೊಂಡು ನಿಧಾನವಾಗಿ ಅದನ್ನು ಹೃದಯಕ್ಕೆ ರವಾನಿಸುತ್ತೇನೆ. ಆಗ ಹೃದಯ ಸುಲಲಿತವಾಗಿ ಕೆಲಸ ಮಾಡಬಲ್ಲದು.

ನಾನು ಶರೀರದ ಒಂದು ದೊಡ್ಡ ವಿಷಾಪಹಾರಿ. ನಿಕೋಟಿನ್, ಕೆಫೀನ್, ತ್ಯಾನಿನ್ ಮುಂತಾದ ವಿಷಗಳನ್ನು ನೀನು ನುಂಗುವೆಯಲ್ಲ, ಅದು ಹಾಗೆಯೇ ರಕ್ತ ಸೇರಿದ್ದರೆ ನಿಮಿಷದಲ್ಲಿ ನೀನು ಇಲ್ಲವಾಗುತ್ತಿದ್ದೆ. ಆದರೆ ನನ್ನ ಮುಖಾಂತರ ಹೋಗುವಾಗ ನಾನು ಮೊದಲೇ ನುಂಗಿ ನೀರು ಕುಡಿದುಬಿಡುತ್ತೇನೆ. ಅದರಿಂದ ಹೃದಯ ಸುರಕ್ಷಿತ. ಅಲ್ಲದೆ ಶರೀರ ಎನ್ನುವ ಕಾರ್ಖಾನೆಯು ಪ್ರತಿಕ್ಷಣವೂ ವಿಷವಸ್ತುಗಳನ್ನು ಉಪವಸ್ತುಗಳನ್ನಾಗಿ ತಯಾರಿಸುತ್ತಲೇ ಇರುತ್ತದೆ. ಇದನ್ನು ಕೂಡಲೇ ಹೊರಕ್ಕೆ ಹಾಕಬೇಕು. ಇಲ್ಲದಿದ್ದರೆ ಜೀವಕ್ಕೇ ಅಪಾಯ. ಆ ವಿಷವಸ್ತುಗಳನ್ನು ತಕ್ಷಣವೇ ನಿವಾರಿಸಿಬಿಡುತ್ತೇನೆ. ನೀನು ಸೇವಿಸುವ ಆಲ್ಕೋಹಾಲ್ ರಕ್ತ ಸೇರುತ್ತದೆ. ನಾನು ಅದನ್ನು ನಿರುಪದ್ರವಿಯಾದ ಕಾರ್ಬನ್ ದೈ ಆಕ್ಸೈಡ್ ಮತ್ತು ನೀರನ್ನಾಗಿ ಒಎಯುತ್ತೇನೆ. ನೀನು ಮದ್ಯಪಾನಾಸಕ್ತನಾದರೆ ನನ್ನ ಶಕ್ತಿ ಮೀರಿ ದುಡಿದು ದುಡಿದು ನಿಷ್ಕ್ರ್‍ಇಯನಾಗುತ್ತೇನೆ. ಮುಂದಿನದು ನಿನ್ನ ಹಣೆಯ ಬರಹ. ನನ್ನ ಪುರಾಣ ಬೆಳೆಸಿದಷ್ಟೂ ಬೆಳೆಯುತ್ತದೆ.

ನೆನು ದಪ್ಪನಾದರೆ ನಾನೂ ದಪ್ಪವಾಗುತ್ತೇನೆ. ಒಳ್ಳೆಯ ಆಹಾರ, ವ್ಯಾಯಾಮದಿಂದ ನಾನು ಆರೋಗ್ಯವಾಗಿರುತ್ತೇನೆ. ನಾನು ಆರೋಗ್ಯವಾಗಿದ್ದರೆ ಮಾತ್ರ ನೀನು ಆರೋಗ್ಯವಾಗಿರಲು ಸಾಧ್ಯ. ನನ್ನ ಹೆಸರು ಲಿವರ್, ಅಂದರೆ ನಾನು ಶರೀರದ ಲೀವರ್(ಸನ್ನೆ), ನಾನು ಶರೀರದ ಆರೋಗ್ಯದ ಸಮತೋಲನೆಯ ಸಂಕೇತ. ಸನ್ನೆ ಸಮವಾಗಿದ್ದರೆ ಆರೋಗ್ಯ, ಏರುಪೇರಾದರೆ ಆರೋಗ್ಯ ಸೊನ್ನೆ.

ಸಣ್ಣ ಕರುಳು :
ನಾನು ನಿನ್ನ ಸಣ್ಣ ಕರುಳು. ಜಠರದಿಂದ ಕೆಳಗೆ ಹಾವಿನಂತೆ ಸುತ್ತಿಕೊಂಡು ಇಪ್ಪತ್ತನಾಲ್ಕು ಅಡಿ ಇದ್ದೇನೆ. ನೀನು ನನಗೆ ಆಹಾರ ಕೊಡುತ್ತೇನೆಂದು ಬೀಗುತ್ತೀಯೆ. ನಿಜವಾಗಿ ನಾನು ನಿನಗೆ ಆಹಾರ ಕೊಡುತ್ತಿದ್ದೇನೆ! ನೀನು ತಿಂದ ಆಹಾರ ಹಾಗೆಯೇ ರಕ್ತ ಸೇರಿದರೆ ನಿಮಿಷಾರ್ಧದಲ್ಲಿ ನಂಜಾಗಿ ಸಾಯುತ್ತೀಯೆ. ಆ ಆಹಾರವನ್ನು ರಕ್ತವಾಗುವಂತೆ ಮಾಡುವವ ನಾನು. ಆಹಾರ ರಕ್ತಕ್ಕೆ ಸೇರಿದ ನಂತರ ಶರೀರದ ಕೋಟ್ಯಾಂತರ ಜೀವಕೋಶಗಳಿಗೆ ಶಕ್ತಿ. ಬಾಯಿಯಿಂದ ಜೀರ್ಣಕ್ರಿಯೆ ಪ್ರಾರಂಭವಾದರೂ ಅದನ್ನು ಅಂತ್ಯಗೊಳಿಸುವವನು ನಾನು. ಆಹಾರದಲ್ಲಿನ ಕೊಬ್ಬನ್ನು ಫ್ಯಾಟಿ ಆಮ್ಲ ಮತ್ತು ಗ್ಲಿಸರಾಲ್ ಗಳಾಗಿ ಒಡೆಯುತ್ತೇನೆ. ಸಸಾರಜನಕ ವಸ್ತುಗಳನ್ನು ಅಮೈನೋ ಆಮ್ಲಗಳಾಗಿ ಬೇರ್ಪಡಿಸುತ್ತೇನೆ. ಪಿಷ್ಠವನ್ನು ಗ್ಲೂಕೋಸ್ ಆಗಿ ಪರಿವರ್ತಿಸುತ್ತೇನೆ. ನಾರು-ಬೇರುಗಳನ್ನು ಬಿಟ್ಟು ಉಳಿದ ಎಲ್ಲಾ ಆಹಾರಾಂಶಗಳನ್ನು ರಕ್ತಕ್ಕೆ ಸೇರಿಸುತ್ತೇನೆ. ನಾನು ಹೊರಕ್ಕೆ ನೂಕುವ ವಸ್ತುಗಳಲ್ಲಿ ಅರ್ಧದಷ್ಟು ಸತ್ತ ಬ್ಯಾಕ್ಟೀರಿಯಾಗಳೂ, ಮತ್ತರ್ಧ, ದಾರಿಯುದ್ದಕ್ಕೂ ನಾನು ಸ್ರವಿಸಿದ ಆಮ, ಜತೆಗೆ ನಾನು ಅರಗಿಸಿಕೊಳ್ಳಲಾರದ ವಸ್ತುಗಳು.

ಡಿಯೋಡಿನಂ ಬಿಟ್ಟನಂತರ ನನ್ನ ರಾಜ್ಯಭಾರ. ಡಿಯೋದಿನಂ ಮುಂದೆ ೮ ಅಡಿ ಉದ್ದದ ಜೆಜುನಂ. ಅದು ನಾಲ್ಕು ಸೆಂ.ಮಿ. ವ್ಯಾಸದಿಂದ ಕೂಡಿದೆ. ಅಲ್ಲಿಂದ ಮುಂದೆ ಹನ್ನೆರಡಡಿ, ಅದಕ್ಕಿಂತಲೂ ಕಿರಿದಾದ ಇಲಿಯಮ್, ನನ್ನಲ್ಲಿ ಮಿಣಿ ಜೀವಿಗಳು(ಬ್ಯಾಕ್ಟೀರಿಯಾ) ವೃದ್ಧಿಯಾಗಲಾರವು. ಕಾರಣ, ಜಠರದ ಆಮ್ಲ ಅವುಗಳನ್ನು ಕೊಂದಿರುತ್ತವೆ. ನೀನು ತೆಗೆದುಕೊಂಡ ಒಂದು ಲೋಟ ನೀರು ಹತ್ತು ನಿಮಿಷಗಳಲ್ಲಿ ನನ್ನಲ್ಲಿಗೆ ಬಂದಿರುತ್ತದೆ. ಆದರೆ ಘನಾಹಾರ ನಾಲ್ಕು ಘಂಟೆ ತೆಗೆದುಕೊಳ್ಳುತ್ತದೆ. ಮೇದೋಜೀರಕಗ್ರಂಥಿ ಪ್ರತ್ಯಾಮ್ಲೀಯ ರಸಗಳನ್ನು ಉತ್ಪತ್ತಿಮಾಡಿ ನನ್ನ ಮುಂಭಾಗಕ್ಕೆ ರವಾನಿಸುತ್ತದೆ. ಇದು ಸುಮಾರು ೧ ಲೀಟರಿನಷ್ಟಿರುತ್ತದೆ. ಆದ್ದರಿಂದ ಆಮ್ಲೀಯ ಗುಣದ ರಸ ತನ್ನ ಆಮ್ಲೀಯತೆಯನ್ನು ಕಡಿಮೆ ಮಾಡಿಕೊಂಡು ಪ್ರತ್ಯಾಮ್ಲೀಯ ಗುಣವನ್ನು ಹೊಂದಿರುತ್ತದೆ. ಆ ಕೆಲಸ ನಿಂತರೆ ಹುಣ್ಣು ಪ್ರಾರಂಭವಾಗುತ್ತದೆ. ಮುಕ್ಕಾಲು ಭಾಗ, ಹುಣ್ಣಿಗೆ ಡಿಯೋಡಿನಂ ಒಳ್ಳೆಯ ಫಲವತ್ತಾದ ಜಾಗ. ನನ್ನಲ್ಲಿ ತಯಾರಾಗುವ ಕಿಣ್ವಗಳು ಹಲವು. ಟ್ರಿಪ್ಸಿನ್, ಚೈಮೋಟ್ರಿಪ್ಸಿನ್, ಕಾರ್ಬಾಕ್ಸಿಪೆಪ್ ಟೈಡ್ಸ್, ಪ್ಯಾಂಕ್ರಿಯಾಟಿಕ್ ಲಿಪೇಸ್, ಪ್ಯಾಂಕ್ರಿಯಾಟಿಕ್ ಅಮೈಲೇಸ್.

ನನ್ನಲ್ಲಿ ೨ ಲೀ.ನಷ್ಟು ಲಾಲಾರಸ, ೩ ಲೀ.ನಷ್ಟು ಗ್ಯಾಸ್ಟ್ರಿಕ್ ರಸ, ಪಿತ್ತಜನಕಾಂಗದಿಂದ ೧ ಲೀ.ನಷ್ಟು ಪಿತ್ತರಸ, ಮತ್ತು ೨ ಲೀ.ನಷ್ಟು ನನ್ನ ಸ್ವಂತ ರಸಗಳು ಹೀಗೆ ಒಟ್ಟು ೮ ಲೀ.ನಷ್ಟು ರಸಗಳು ಸಂಗಮವಾಗುತ್ತವೆ.

ನನ್ನ ಒಳಭಾಗ ರೇಷ್ಮೆಯಂತೆ ನುಣುಪಾಗಿರುವಂತೆ ತೋರುತ್ತದೆ. ಆದರೆ ವಸ್ತುಸ್ಥಿತಿ ಹಾಗಿಲ್ಲ. ಕೈ ಬೆರಳಿನಂತಹ ವಿಲ್ಲೈ ಎಂಬ ಸೂಕ್ಷ್ಮ ಅಂಗಗಳಿಂದ ನನ್ನ ಒಳಭಾಗ ಆವೃತವಾಗಿದೆ. ಈ ವಿಲ್ಲೈಗಳು ಆಹಾರದಲ್ಲಿನ ಪಿಷ್ಠ, ಸಾರಜನಕ, ಕೊಬ್ಬು, ಜೀವಸತ್ವಗಳು, ಲವಣಗಳು ಮುಂತಾದವುಗಳನ್ನು ಹೀರಿ ರಕ್ತಕ್ಕೆ ಸೇರಿಸುವ ಕಾರ್ಯಮಾಡುತ್ತವೆ.

ನಾನು ಹೊಟ್ಟೆಯ ಗೋಡೆಗೆ ಬಲವಾಗಿ ಬಿಗಿಯಲ್ಪಟ್ಟಿಲ್ಲ. ಆದ್ದರಿಂದ ಎರಡು ರೀತಿಯ ಚಲನೆ ಸಾಧ್ಯ. ನನ್ನಲ್ಲಿಯ ಮಾಂಸಖಂಡಗಳು ಅಲೆಯ ರೂಪದ ಚಲನೆಯನ್ನು ಉಂಟುಮಾಡುತ್ತವೆ. ಮತ್ತೊಂದು ರೀತಿಯ ಮಾಂಸಖಂಡಗಳು ಜಿಗಿತವನ್ನು ಉಂಟುಮಾಡುತ್ತವೆ. ಇವೆರಡು ರೀತಿಯ ಚಲನೆಯಿಂದ ದ್ರವರೂಪದ ಆಹಾರ ಸ್ವಲ್ಪಸ್ವಲ್ಪವೇ ನಿಧಾನವಾಗಿ ಮುಂದಕ್ಕೆ ತಳ್ಳಲ್ಪಡುತ್ತದೆ. ಆಹಾರ, ನನ್ನಲ್ಲಿ ೩ ರಿಂದ ೮ ಗಂಟೆಗಳ ಕಾಲ ಉಳಿದು, ರಕ್ತಕ್ಕೆ ಸೇರಲು ಯೋಗ್ಯವಾದ ಅಂಶ ರಕ್ತಕ್ಕೆ ಸೇರಿ ಉಳಿದದ್ದು ಮುಂದಕ್ಕೆ ದೂಡಲ್ಪಡುತ್ತದೆ.

ನನ್ನ ಹೆಸರು ಸಣ್ಣಕರುಳೆಂದಿರಬಹುದು. ಆದರೆ ನಾನು ಮಡುವ ಕೆಲಸ ಸಣ್ಣದಲ್ಲ!

'ಹೆಂಗರುಳಿನವ' ಎಂದು ಗಂಡಸನ್ನು ಆಡಿಕೊಳ್ಳುತ್ತಾರೆ. ಅದರಥ ಇಷ್ಟೇ, ನಾನು ಭಾವನೆಗಳಿಗೆ ಬೇಗ ಸ್ಪಂದಿಸುತ್ತೇನೆ. ಹೆಂಗಸರಿಗೇ ಆಗಲಿ, ಗಂಡಸರಿಗೇ ಆಗಲಿ ಈ ಭಾವನೆಗಳ ತಾಕಲಾಟ ಅತಿಯಾದರೆ ನನಗೆ ಅನವಶ್ಯಕ ಶ್ರಮ. ಇದರಿಂದ ನನ್ನ ಆಯಸ್ಸು ಕಡಿಮೆಯಾಗುತ್ತದೆ.

ಆಹಾರಾಂಶವು ಹೀರಲ್ಪಟ್ಟು ಉಳಿದ ಭಾಗ, ದ್ರವರೂಪದಲ್ಲಿರುವುದು. ಅದನ್ನು ನಿಧಾನವಾಗಿ ದೊಡ್ಡ ಕರುಳಿಗೆ ನೂಕಿಬಿಡುತ್ತೇನೆ. ಮುಂದಿನದು ನನ್ನ ದೊಡ್ಡಣ್ಣನ ಕಾರ್‍ಯ.

ದೊಡ್ಡ ಕರುಳು :

ನಾನು ನಿನ್ನ ದೊಡ್ಡ ಕರುಳು. ಅಡ್ಡಕರುಳು, ಉದ್ದಕರುಳು, ನೆಟ್ಟಕರುಳು ಎಂದು ಮೂರು ಭಾಗವಾಗಿ ಒಟ್ಟು ಆರಡಿ ಇದ್ದೇನೆ. ನನ್ನ ತಮ್ಮ ಸಣ್ಣ ಕರುಳು ಆಹಾರಾಂಶವನ್ನು ಹೀರಿ ಉಳಿದ ದ್ರವದ ರೂಪವನ್ನು ನನಗೆ ತಳ್ಳುತ್ತಾನೆ. ನಾನು ನನ್ನ ಅಡ್ಡಕರುಳು ಮತ್ತು ಉದ್ದಕರುಳಿನಲ್ಲಿ ನೀರನ್ನು ಹೀರಿ ರಕ್ತಕ್ಕೆ ಕಳುಹಿಸುತ್ತೇನೆ. ಎ ನೀರನ್ನು ಹೀರಿ ರಕ್ತಕ್ಕೆ ಏಕೆ ಕಳುಹಿಸಬೇಕು? ಅದು ಬರೀ ನೀರಲ್ಲ, ಬಾಯಿಯಿಂದ ಪ್ರಾರಂಭವಾಗಿ ದಾರಿಯುದ್ದಕ್ಕೂ ಸೇರಿಸಿಕೊಂಡು ಬಂದ ಅತ್ಯಮೂಲ್ಯ ಜೀವರಸಗಳು ಅದರಲ್ಲಿದೆ. ಲವಣಗಳ ಅಗರವೇ ಅದಾಗಿದೆ. ಅದನ್ನು ರಕ್ತಕ್ಕೆ ಕಳುಹಿಸದಿದ್ದರೆ ಕೆಲವೇ ಗಂಟೆಗಳಲ್ಲಿ ಸಾವು ಬರಬಹುದು. ಈ ನೀರನ್ನು ಹೀರುವ ಕ್ರಿಯೆಗೆ ನನಗೇನೂ ಅವಸರವಿಲ್ಲ. ಹನ್ನೆರಡರಿಂದ ಇಪ್ಪತ್ತುನಾಲ್ಕು ಗಂಟೆಗಳನ್ನು ತೆಗೆದುಕೊಳ್ಳುತ್ತೇನೆ, ನಾನು ನೀರನ್ನು ಹೀರದೆ ಹಾಗೆಯೇ ಹೊರಕ್ಕೆ ನೂಕಿದ್ದರೆ ಏನಾಗುತ್ತಿತ್ತು ಎಂದು ಕೇಳಿದೆಯಲ್ಲವೇ? ಹಾಗೂ ಒಮ್ಮೊಮ್ಮೆ ಮಾಡುತ್ತೇನೆ. ನನಗೆ ಕಿರಿಕಿರಿಯಾದರೆ ಮಾತ್ರ. ನಾನು ಹಾಗೆ ಮಾಡಿದರೆ ತಕ್ಷಣ ದಾಕ್ಟರಲ್ಲಿಗೆ ಓಡುತ್ತೀಯೆ. ಅದೇ ಅತಿಸಾರ.

ನನ್ನ ತಮ್ಮನಿಗಿಂತ ನಾನು ಬಹಳ ಉದಾರಿ. ಅವನು ಯಾವುದೇ ರೀತಿಯ ಮಿಣಿಜೀವಿಗಳೂ(ಮೈಕ್ರೋಬ್ಸ್) ಬೆಳೆಯಲು ಅವಕಾಶ ಕೊಡುವುದಿಲ್ಲ. ಆದರೆ ನಾನು ಹಾಗಲ್ಲ. ಅವುಗಳ ಬಗ್ಗೆ ನನಗೆ ತುಂಬಾ ಅನುಕಂಪ! ಐವತ್ತಕ್ಕೂ ಹೆಚ್ಚು ಮಿಣಿಜೀವಿಗಳಿಗೆ ನಾನು ಆಶ್ರಯ ಕೊಡುತ್ತೇನೆ! ಜಂತು ಮುಂತಾದ ಹುಳುಗಳು ಬೆಳೆದರೆ ನಾನು ಅಡ್ಡಿಪಡಿಸುವುದಿಲ್ಲ!!

ಹೊಟ್ಟೆಯಲ್ಲಿ 'ಗುಡು' 'ಗುಡು' ಎಂದು ಶಬ್ದ ಮಾಡುವವನು ನಾನೇ. ಇದು ಬರೀ ವಾಯು. ನೀನು ಮಾತಾಡುವಾಗ ನುಂಗಿರುವ ಗಾಳಿ, ಜೀರ್ಣಕ್ರಿಯೆಯಲ್ಲಿ ಉತ್ಪತ್ತಿಯಾದ ವಾಯು ಎಲ್ಲವನ್ನೂ ಈ ರೂಪದಲ್ಲಿ ಹೊರಕ್ಕೆ ಹಾಕುತ್ತೇನೆ. ಜತೆಗೆ ನಾನು ಕೆಲವು ಗ್ಯಾಸ್ಗಳನ್ನು ತಯಾರಿಸುತ್ತೇನೆ. ಅವುಗಳಲ್ಲಿ ಮೀಥೇನ್ ಮತ್ತು ಹೈಡ್ರೋಜಿನ್ ಮುಖ್ಯವಾದವು. ಹೆಚ್ಚೂ ಕಡಿಮೆ ೧ ಲೀ. ಗ್ಯಾಸ್ ಹೊರಕ್ಕೆ ಹಾಕುತ್ತೇನೆ. ಇದು ಹೆಚ್ಚಾದಲ್ಲಿ ಹೊಟ್ತೆಯಲ್ಲಿ ನೋವು ಉಂಟಾಗುತ್ತದೆ. ನಿನ್ನ ಎಲ್ಲಾ ಒಳ ಅಂಗಗಳಂತೆ ನಿನ್ನ ಮಾನಸಿಕ ಸ್ಥಿತಿಯನ್ನು ನಾನೂ ಅನುಸರಿಸುತ್ತೇನೆ. ನಿನಗೆ ಕೋಪ ಬಂದರೆ ನನಗೆ ತಾಪ ಉಂಟಾಗುತ್ತದೆ. ಆಗ ನಿನಗೆ ಹಸಿವೆಯಾಗದಂತೆ ತಡೆದುಬಿಡುತ್ತೇನೆ. ನೀನು ಬುದ್ಧಿವಂತನಾದರೆ ಆಗ ಏನೂ ಆಹಾರ ತೆಗೆದುಕೊಳ್ಳಬಾರದು. ಅಂತೆಯೇ ನೆನ್ನು ತುಂಬಾ ಸುಸ್ತಾಗಿದ್ದಾಗ, ಚಿಂತೆಗೊಳಗಾಗಿದ್ದಾಗಲೂ ಇದೇ ನಿಯಮ. ನಿನ್ನ ತಲೆಗೂ ನನಗೂ ಸಂಬಂಧವಿದೆ. ನಿನ್ನ ತಲೆಯಲ್ಲಿ ನಡೆಯುವ ಯುದ್ಧಕ್ಕೆ ನಾನು ಬಲಿ, ತಲೆ ಉತ್ತರ ಹುಡುಕುವವರೆಗೂ ನನ್ನ ಸ್ವಂತ ಕೆಲಸ ನಿಧಾನವಾಗುತ್ತದೆ. ನರಗಳಲ್ಲಿನ ಒತ್ತಡ, ಔಷಧ, ಬ್ಯಾಕ್ಟೀರಿಯಾ ಇವೆಲ್ಲಾ ನಾನು ನೀರನ್ನು ಪೂರ್ಣವಾಗಿ ಹೀರದಂತೆ ಮಾಡುತ್ತವೆ. ಅದೇ ಭೇಧಿ. ಚಿಂತೆ, ನಾರು-ಬೇರಿಲ್ಲದ ಆಹಾರ, ನನ್ನ ಕೆಲಸಕ್ಕೆ ತಡೆ ಉಂಟುಮಾಡುತ್ತವೆ. ಅದರಿಂದ ಮಲ ಗಟ್ಟಿಯಾಗಿ ಕುರಿಯ ಹಿಕ್ಕೆಯಂತಾಗುತ್ತದೆ. ಇದೇ ಮಲಬದ್ಧತೆ.

ಈ ಮಲಬದ್ಧತೆಯದೇ ಒಂದು ದೊಡ್ಡ ಪುರಾಣ. ಮಲಬದ್ಧತೆಯಿರುವ ಅನೇಕರು ತಮಗೆ ಮಲಬದ್ಧತೆಯಿಲ್ಲವೆಂದು ತಿಳಿದಿದ್ದಾರೆ. ಮಲಬದ್ಧತೆಯಿರದ ಅನೇಕರು ತಮಗೆ ಮಲಬದ್ಧತೆಯಿದೆ ಎಂದು ಹೇಳುತ್ತಾರೆ. 'ಮಲಬದ್ಧತೆಯಾದರೆ ಏನೂ ತಲೆ ಬೀಳುವುದಿಲ್ಲ' ಎಂದು ಹೇಳುವುದು ಒಂದು ವರ್ಗ. ' ಎಲ್ಲಾ ಕಾಯಿಲೆಗಳಿಗೂ ಈ ಮಲಬದ್ಧತೆಯೇ ಮೂಲ' ಎನ್ನುವುದು ಇನ್ನೊಂದು ವರ್ಗ. ಸತ್ಯ ಇವೆರಡರ ಮಧ್ಯೆ ಇದೆ. ನಾನು ತುಂಬಾ ಸೂಕ್ಷ್ಮ. ನೀನು ಗಮನಿಸಿರಬಹುದು. ಬೇರೆಯ ಊರಿಗೆ ಹೋದರೆ ಮಲವಿಸರ್ಜನೆ ಮುಂದೂಡಲ್ಪಡುತ್ತದೆ. ಅದಕ್ಕೆಲ್ಲಾ ಹೆದರಬೇಡ. ನಾನು ಬಹಳ ಮೂಡಿ.. ಒಮ್ಮೊಮ್ಮೆ ಮಲವಿಸರ್ಜನೆಯನ್ನು ಮುಂದಕ್ಕೆ ಹಾಕಿಬಿಡುತ್ತೇನೆ. ಆದರೆ ಇದು ನಿತ್ಯದ ಕತೆಯಾದರೆ ಜಾಗ್ರತೆ ವಹಿಸಬೇಕು. ಮುಖ್ಯವಾಗಿ ಮಲಬದ್ಧತೆಯೆಂದರೇನೆಂದು ಅರ್ಥ ಮಾಡಿಕೋ. ದಿನಕ್ಕೊಮ್ಮೆ ಕಾಲಪ್ರವೃತ್ತಿಯಾದರೆ ಮಲಬದ್ಧತೆಯಿಲ್ಲವೆಂದು ಬಹಳ ಜನರ ಅಭಿಪ್ರಾಯ.

ದಿನಕ್ಕೆ ಊಟ ಮೂರು ಮತ್ತೊಂದು, ಮಲವಿಸಜನೆ ಸಾಕೆ ಒಂದೇ ಒಂದು?

ನೀನು, ಮೇಲೆ ಮೇಲೆ ತುರುಕುತ್ತಿರುವ ಆಹಾರವನ್ನು ದಾರಿಯಲ್ಲಿ ಜೀರ್ಣಮಾಡಲಾರದೆ ಕಡೆಗೆ ನನ್ನಲ್ಲಿಗೆ ತಳ್ಳಿಬಿಡುತ್ತಾರೆ. ( ಈಗ ಪ್ರೈಮರಿ ಸ್ಕೂಲಿನಿಂದ ಹುಡುಗರನ್ನು ಮುಂದು ಮುಂದಕ್ಕೆ ನೂಕುವಂತೆ!) ನಾನು ತಾನೇ ಏನು ಮಾಡಲಿ? ಮುಂದಕ್ಕೆ ತಳ್ಳಿಬಿಡುತ್ತೇನೆ. ನೀನು ಇದನ್ನೇ ಉತ್ತಮ ಮಲವಿಸರ್ಜನೆಯೆಂದುಕೊಳ್ಳುತ್ತೀಯೆ. ಈ ವಿಷಯದಲ್ಲಿ ಓಮ್ದು ಘಟನೆ ನೆನಪಿಗೆ ಬರುತ್ತದೆ. ಒಮ್ಮೆ, ಒಂದು ಟ್ರೈನ್ ವೇಳೆಗೆ ಸರಿಯಾಗಿ ನಿಲ್ದಾಣಕ್ಕೆ ಬಂತು. ಪ್ರಯಾಣಿಕರೆಲ್ಲಾ ಬಹಳ ಖುಷಿಯಾದರು. ಸ್ಟೇಷನ್ ಮಾಸ್ಟರ್ ಹೇಳಿದರು, 'ಅದು ನಿನ್ನೇ ಬರಬೇಕಾಗಿದ್ದ ಗಾಡಿ, ಇಂದಿನ ವೇಳೆಗೆ ಸರಿಯಾಗಿ ಬಂದಿದೆ. ಸರಿಯಾಗಿ ಇಪ್ಪತ್ತನಾಲ್ಕು ಗಂಟೆಗಳ ತಡ ಅಷ್ಟೆ!' ಹೀಗಾಗಿದೆ ಮಲವಿಸರ್ಜನೆಯ ಸ್ಥಿತಿ. ಆಹಾರದ ಪ್ರಯಾಣ ಇಪ್ಪತ್ತನಾಲ್ಕು ಗಂಟೆಯಲ್ಲಿ ಮುಗಿಯಬೇಕು. ಆದರೆ ನವನಾಗರೀಕತೆಯ ಪ್ರಭಾವದಿಂದ, ಅದರಲ್ಲೂ ವೇಳೆಯಿಲ್ಲವೆಂದು ಒದ್ದಾಡುವ ಐರೋಪ್ಯ ಜನಾಂಗವನ್ನು ಅವರ ಟಾಯ್ಲೆಟ್ಟಿನಲ್ಲಿ ಕಟ್ಟಿಹಾಕಿಬಿಡುತ್ತೇನೆ. ಅಲ್ಲಿ ವೇಳೆ ಅವರ ಅಧೀನವಲ್ಲ, ನನ್ನ ಅಧೀನ. ಕೆಲವರು ಕಾಫಿ, ಕೆಲವರು ಪೇಪರ್, ಕೆಲವರು ಸಿಗರೇಟ್, ಮತ್ತೆ ಕೆಲವರು ರೋಮಾಂಚಕರವಾದ ಕಾದಂಬರಿ ಎಲ್ಲಕ್ಕೂ ಮೊರೆಹೋಗುತ್ತಾರೆ! ಐವತ್ತರ ನಂತರ ಅಣೆಕರು ವಿರೇಚಕಗಳಿಗೆ ಶರಣಾಗುತ್ತಾರೆ. ಚಿಕ್ಕಪ್ರಾಯದಲ್ಲಿ ಹೇಗೋ ನಡೆಯುತ್ತದೆ. ನಿನಗೆ ವಯಸ್ಸಾದಂತೆ ನನಗೂ ವಯಸ್ಸಾಗುತ್ತದೆ. ಹೆಚ್ಚಿಗೆ ಆಹಾರ ಸೇವಿಸಿದರೆ ಅದರಲ್ಲೂ ಕರಿದ ಆಹಾರ, ಈರುಳ್ಳಿ, ಕೋಸು, ಹುರುಳೀಕಾಯಿ ಇತ್ಯಾದಿಗಳು ಹೆಚ್ಚು ವಾಯುವನ್ನು ಉಂಟುಮಾದಿ ತೊಂದರೆ ಕೊಡುತ್ತವೆ. ಮನಸ್ಸಿನಲ್ಲಿ ಉದ್ವೇಗಗಳನ್ನು ಉಂಟುಮಾಡಿಕೊಳ್ಳದೆ, ಹಣ್ಣುಗಳನ್ನೂ ತರಕಾರಿಗಳನ್ನೂ ಹೆಚ್ಚು ಸೇವಿಸಿದರೆ ನಾನು ಕಾರ್ಯವನ್ನು ಚೆನ್ನಾಗಿ ನಿರ್ವಹಿಸುತ್ತೇನೆ. ಆದಷ್ಟೂ ನೀರು ಕುಡಿಯುವುದು ಒಳ್ಳೆಯದು. ನನ್ನನ್ನು ನೀನು ಗೌರವದಿಂದ ನೋಡಿಕೊಂಡರೆ ನಾನು ನಿನಗೆ ತೊಂದರೆ ಕೊಡುವುದಿಲ್ಲ.

ಗುರುಗಳು : ಮಕ್ಕಳೇ ಹೀಗೆ ಬಾಯಿಯಿಂದ ಗುದದ್ವಾರದವರೆಗೂ ಆಹಾರದ ಪ್ರಯಾಣ. ಎಲ್ಲಾ ಅಂಗಗಳೂ ತಮ್ಮ ತಮ್ಮ ಕತೆಯನ್ನು ಹೇಳಿವೆ. ಅವುಗಳ ಕೆಲಸವನ್ನು ಸುಲಭ ಮಾಡಿಕೊಡುವುದೇ ನಿಮ್ಮ ಜವಾಬ್ದಾರಿ. ಹಾಗೆ ಆಹಾರ ಸೇವಿಸಬೇಕು. ಆಹಾರದಷ್ಟೇ ವ್ಯಾಯಾಮವೂ ಮುಖ್ಯ ಮಕ್ಕಳೇ. ವ್ಯಾಯಾಮವಿಲ್ಲದಿದ್ದರೆ ಆಹಾರ ರಕ್ತಗತವಾಗುವುದಿಲ್ಲ. ಆಟ, ಓಟ, ಯೋಗಾಸನ, ಈಜು ಇತ್ಯಾದಿಗಳೆಲ್ಲಾ ಬೇಕೇಬೇಕು.

ವಿದ್ಯಾರ್ಥಿಗಳು : ಈಗ ಆಹಾರ ಹೇಗೆ ಜೀರ್ಣವಾಗುವುದೆಂದು ತಿಳಿಯಿತು. ಅದನ್ನು ಅನುಸರಿಸಿ ಆಹಾರ ತೆಗೆದುಕೊಳ್ಳುತ್ತೇವೆ ಗುರುಗಳೇ!

ಬರೆದವರು : ಜಿ.ವಿ.ವಿ.ಶಾಸ್ತ್ರಿ
ತುಮಕೂರು
ಸಂಗ್ರಹಿಸಿದವರು : ಹೆಚ್.ಕೆ.ಸತ್ಯಪ್ರಕಾಶ್
೯೮೮೬೩ ೩೪೬೬೭
ಅರುಣ್. ಎಲ್.
೯೮೮೬೪ ೧೭೨೫೨
ಬೆಂಗಳೂರು

ಸೂರ್ಯ್ಅ ಬೇಯಿಸಿದ ಅಡುಗೆ

ಸೂರ್ಯ ಬೇಯಿಸಿದ ಅಡುಗೆ

ಹಣ್ಣು-ಹಂಪಲುಗಳು, ಗೆಡ್ಡೆಗೆಣಸುಗಳು, ಇದನ್ನು ಹಸಿಯ ಆಹಾರ, ಕಚ್ಚಾ ಆಹಾರ, ಕಚ್ಚಾ ನಿರಗ್ನಿ ಆಹಾರ, ಋಷಿಗಳ ಆಹಾರ ಎನ್ನುತ್ತಾರೆ. ಅದನ್ನು ಕಚ್ಚಾ ಎಂದು ಕರೆಯುವುದು ಸರಿಯಲ್ಲ, ಅದೂ ಸಹಾ ಬೇಯಿಸಿದ ಆಹಾರವೇ! ಮನುಷ್ಯನಿಂದಲ್ಲ, ಅಗ್ನಿಯಿಂದಲ್ಲ, ಸೂರ್ಯನಿಂದ.

ಸೂರ್ಯ ಬೇಯಿಸಿದ ಅಡುಗೆ ಅದರ ರುಚಿ ಅಡಿಗಡಿಗೆ, ಹಣ್ಣು-ಹಂಪಲೇ ನಮ್ಮ ಸೌಭಾಗ್ಯ! ಅದನರಿಯದೇ ನಾನಾದೆ ನಿರ್ಭಾಗ್ಯ, ಗೆಡ್ಡೆಗೆಣಸುಗಳು ಭೂಮಿಯಾ ಕೊಡುಗೆ, ಹಣ್ಣು ಹಂಪಲುಗಳು ಸೂರ್ಯನಾ ಕೊಡುಗೆ.

ಗೆಡ್ಡೆಗಳಲ್ಲಿ ಆಹಾರ ಸಂಗ್ರಹಿಸಿಡಲೂ ಸೂರ್ಯ ಬೇಕೇಬೇಕು. ಒಟ್ಟಿನಲ್ಲಿ ಸೂರ್ಯನೇ ನಮ್ಮ ಜೀವನಾಧಾರ. ಆ ಸೂರ್ಯಶಕ್ತಿಯನ್ನು ಜೀವಂತ ರೂಪದಲ್ಲಿ ಹಿಡಿದಿಡುವ ಹೆಚ್ಚು ಶಕ್ತಿಯಿರುವುದು ಹಣ್ಣುಗಳಿಗೆ ಮಾತ್ರ. ಅವು ಹಿಡಿದಿಟ್ಟ ಸೂರ್ಯಶಕ್ತಿಯನ್ನು ಶರೀರಕ್ಕೆ ಒದಗಿಸಬಲ್ಲವು, ಕಾಯಿಲೆ ಬರದಂತೆ ತಡೆಯಬಲ್ಲವು, ಬಂದ ಕಾಯಿಲೆಯನ್ನು ನೀಗಬಲ್ಲವು.

ಹಣ್ಣು ಮತ್ತು ತರಕಾರಿಗಳ ಜೀವಂತಿಕೆ ಬರುವುದು ಸೂರ್ಯನಿಂದಲೇ. ಬೆಳಕಿನ ಶಕ್ತಿ ಇವುಗಳಲ್ಲಿ ಅಡಗಿದೆ. ಆಹಾರ ಒಂದು ಕೂಡಿಟ್ಟ ಶಕ್ತಿ. ಇದನ್ನು ಅಳೆಯಲು ಉಪಯೋಗಿಸುವ ಅಳತೆ ಸೂರ್ಯಪ್ರಕಾಶ ಮೌಲ್ಯ. ಆಹಾರ ಎಷ್ಟು ತಾಜಾ ಇದ್ದರೆ ಅದರ ಸೂರ್ಯಪ್ರಕಾಶ ಮೌಲ್ಯ ಅಷ್ಟು ಹೆಚ್ಚು, ಇದನ್ನು ವಿವರಿಸಿದರು ಡಾ. ಬೆರ್ಚರ್ ಬೆನ್ನರ್. ಸೂರ್ಯಪ್ರಭೆಯನ್ನು ಉಂಡ ಆಹಾರಗಳು ಅದಿಲ್ಲದೆ ಬೆಳೆದ ಆಹಾರಕ್ಕಿಂತ ಹೆಚ್ಚು ರೋಗಪ್ರತಿಬಂದಕ ಗುಣವನ್ನು ಸಂಗ್ರಹಿಸುತ್ತವೆ. 'ಡಿ' ಅನ್ನಾಂಗವಿಲ್ಲದೆ 'ಸಿ' ಅನ್ನಾಂಗ ಶರೀರಕ್ಕೆ ಒದಗದು. ಟೊಮೇಟೋನಲ್ಲಿ 'ಸಿ' ಅನ್ನಾಂಗ ೧೦೦% ಹೆಚ್ಚಿಸುವುದು. ಟರ್ನಿಪ್ನಲ್ಲಿ ೮೦೦% ರಷ್ಟು ಹೆಚ್ಚುತ್ತದೆ. ಸೂರ್ಯನಿಗೆ ಎದುರಾದ ಹಣ್ಣಿನ ಭಾಗ ಹೆಚ್ಚು ಕೆಂಪಾಗಿದ್ದು ಹೆಚ್ಚು 'ಸಿ' ಅನ್ನಾಂಗವನ್ನು ಹೊಂದಿ ರುಚಿಯೂ ಹೆಚ್ಚಾಗಿರುತ್ತದೆ. ಅಲ್ಲದೆ ಕ್ಯಾರೋಟಿನ್, ಥಯಾಮಿನ್ ಇತ್ಯಾದಿ ಅನ್ನಾಂಗಗಳ ಪ್ರಮಾಣದ ಮೇಲೂ ಪ್ರಭಾವ ಬೀರುತ್ತದೆ.

ಬಹಳ ವರ್ಷಗಳ ಹಿಂದೆ ಇನ್ನೂ ಸೂರ್ಯನ ಬೆಳಕಿನ ಜೀವಸಂಬಂಧಿ ಕ್ರಿಯೆಯ ಅರಿವು ಇಲ್ಲದಿದ್ದಾಗ ಡಾ. ಬೆರ್ಚರ್ ಬೆನ್ನರ್ ಆಹಾರದಲ್ಲಿ ಸೂರ್ಯಮೌಲ್ಯವನ್ನು ಮುಂದಿಟ್ಟ. ಈಗ ಆಧುನಿಕ ವಿಜ್ನಾನವೂ ಅದನ್ನು ಒಪ್ಪಿದೆ. ಸೂರ್ಯ ಬೇಯಿಸಿದ ಆಹಾರಕ್ಕೂ ಬೆಂಕಿಯಲ್ಲಿ ಬೆಂದ ಆಹಾರಕ್ಕೂ ಇರುವ ವ್ಯತ್ಯಾಸ ಪ್ರಯೋಗಾಲಯದ ಪ್ರನಾಳಕ್ಕೆ ಅರ್ಥವಾಗದಿರಬಹುದು, ಆದರೆ ಜೀವಂತ ಜೀವಕೋಶಗಳಿಗೆ ಅರ್ಥವಾಗುತ್ತದೆ.

ಡಾ. ಜಿಯೋ (ಡಾ.ಜಿಯೋ.ಜೆ.ಡ್ರೆಸ್, ಎಮ್.ಡಿ.,ಚಿಕಾಗೋ) ರ ಪ್ರಕಾರ ಬೇಯಿಸುವಿಕೆ ಆಹಾರದಲ್ಲಿನ ಜೀವ ರಾಸಾಯಿನಿಕ ಕ್ರಿಯೆಯನ್ನು ವ್ಯತ್ಯಾಸಮಾಡುತ್ತದೆ. ಸೂರ್ಯಶಕ್ತಿ ಬಿಡುಗಡೆ ಹೊಂದುತ್ತದೆ. ಅದು ಬೇಯಿಸುವಾಗ ಬರುವ ವಾಸನೆಯ ರೂಪದಲ್ಲಿ ಹೊರಕ್ಕೆ ಹೋಗುತ್ತದೆ; ಜೀವಂತಿಕೆ ಹೊರದೂಡಲ್ಪಡುತ್ತದೆ; ಸಸಾರಜನಕ ಗಟ್ಟಿಯಾಗುತ್ತದೆ; ಪಿಷ್ಟ ಜೀರ್ಣವಾಗದೆ ರಕ್ತಕ್ಕೆ ಸೇರುತ್ತದೆ. ಸೊಪ್ಪುಗಳು ಬೇಯಿಸಲ್ಪಟ್ಟಾಗ ಅವು ಬಣ್ಣ ಕಳೆದುಕೊಳ್ಳುವುದೇ ಜೀವಶಕ್ತಿಯನ್ನು ಕಳೆದುಕೊಂಡ ಸಂಕೇತ. ನೈಸರ್ಗಿಕ ಆಹಾರದಲ್ಲಿನ ಬಣ್ಣ, ವಾಸನೆಯೆ ಬೇರೆ, ಬೇಯಿಸಿದ ಆಹಾರದ ಬಣ್ಣ, ವಾಸನೆಯೇ ಬೇರೆ. ಇದು ರಸನೇಂದ್ರಿಯವನ್ನು ಮೋಸಗೊಳಿಸಿ, ಜೀರ್ಣಾಂಗಗಳನ್ನು ಹಾಳುಮಾಡುತ್ತದೆ. ಶರೀರದಲ್ಲಿ ಕಫಪ್ರವೃತ್ತಿ ಹೆಚ್ಚುತ್ತದೆ. ಜೀರ್ಣಾಂಗಗಳ ಸವೆತದಿಂದ ವಾತಪ್ರವೃತ್ತಿಯೂ ಹೆಚ್ಚುತ್ತದೆ. ಡಾ. ಆರ್ನಾಲ್ಡ್ ಎಹರೇಟ್ ಎಂಬ ಅಮೇರಿಕಾದ ವೈದ್ಯರು, ಎಲ್ಲಾ ಪಿಷ್ಟ ಪದಾರ್ಥಗಳು ಕಫಕಾರಕವೆಂದು ತಮ್ಮ ಮ್ಯೂಕಸ್ ಲೆಸ್ ಡಯಟ್ ಎಂಬ ಪುಸ್ತಕದಲ್ಲಿ ಬರೆಯುತ್ತಾರೆ.

ಸಾಧಾರಣವಾಗಿ ಎಲ್ಲರೂ ಕಚ್ಚಾ ಆಹಾರದಿಂದಲೇ ಆರೋಗ್ಯವಂತರಾಗಿ ಜೀವಿಸಬಹುದು. ಬಹಳ ಜನ ಹಳೆಯ ರೋಗಿಗಳೂ ಸಹ ಎಲ್ಲಾ ವಿಧವಾದ ಔಷಧಿಯ ಪದ್ಧತಿಗಳನ್ನೂ ಪೂರೈಸಿ, ಕಡೆಗೆ ಹಸಿಯಾದ ಆಹಾರಕ್ಕೆ ಬಂದು, ತಮ್ಮ ಕಾಯಿಲೆಗಳನ್ನು ಸಂಪೂರ್ಣವಾಗಿಯೋ ಅಥವಾ ಬಹಳಷ್ಟು ಭಾಗವನ್ನೋ ಕಳೆದುಕೊಂಡಿರುತ್ತಾರೆ.

ಮನುಜನ ಆಹಾರವೆಂದೊಡನೆಯೇ ನಿಸರ್ಗ, ನೈಸರ್ಗಿಕ ಆಹಾರದೆಡೆಗೆ ಕೈತೋರಿಸುತ್ತದೆ. ಮೊದಲನೆಯ ವರ್ಗದ ಆಹಾರವೇ ಮನುಜನ ನಿಜವಾದ ಆಹಾರ. ಅದೇ ನಿರಗ್ನಿ ಆಹಾರ. ನಿಸರ್ಗದಿಂದ ನೇರವಾಗಿ ಬಂದದ್ದು. ಬರೀ ನೀರಿನಿಂದ ತೊಳೆದು ಉಪಯೋಗಿಸಬಹುದಾದದ್ದು. ಅದರ ಸಂಸ್ಕರಣ ಅಂದರೆ, ನೈಸರ್ಗಿಕವಾದ ಎರಡು ಅಥವ ಇನ್ನೂ ಹೆಚ್ಚನ್ನು ಮಿಶ್ರಣ ಮಾಡಿದ್ದು, ಮೊಳಕೆ ಬರಿಸಿದ್ದು, ರಸ ತೆಗೆದದ್ದು ಇತ್ಯಾದಿಗಳು ಮೊದಲ ವರ್ಗದಲ್ಲಿ ಕೆಳಹಂತದವು-ಇವುಗಳನ್ನು 'ನೈಸರ್ಗಿಕ ಮಿಶ್ರಣ' ವೆನ್ನಬಹುದು. ಮುಂದಿನ ಹಂತ ಅಗ್ನಿಯಿಂದ ಸಂಸ್ಕರಿಸಿದ್ದು. ಇದೇ ಮಧ್ಯಸ್ಥದಲ್ಲಿ ಮೊದಲ ಹಂತ. ಉದಾಹರಣೆಗೆ, ಅತಿ ಕಡಿಮೆ ಹುಳಿ, ಉಪ್ಪು, ಕಾರ, ಸಿಹಿಗಳ ಮಿಶ್ರಣ, ಹಬೆಯಲ್ಲಿ ಬೇಯಿಸಿಯಾಗಲಿ ತಿನ್ನಬಹುದು. ಕೊಂಚ ಉಪ್ಪು ಹಾಕಬಹುದು. ಬಹಳ ದಿವಸಗಳಿಂದ ಬೆಂಕಿಗೆ ಒಗ್ಗಿದ ಮನುಷ್ಯ ನಿರಗ್ನಿ ಆಹಾರಕ್ಕೆ ಬರುವ ಹಂತದಲ್ಲಿ ಈ ರೀತಿ ಬಳಸಬಹುದು. ಇದಕ್ಕಿಂತ ಹೆಚ್ಚು ಮಿಶ್ರಣ ಋಣಾತ್ಮಕತೆಯ ಕಡೆಗೆ ವಾಲಿದುದು. ಮುಂದಿನ ಅಸಹಜ ಆಹಾರಗಳೆಲ್ಲವೂ ಋಣಾತ್ಮಕ. ಆರೋಗ್ಯ ಬೇಕೆನ್ನುವವರು ಋಣಾತ್ಮಕ ಆಹಾರವನ್ನು ನಿಷೇಧಿಸಲೇಬೇಕು. ಇಲ್ಲದಿದ್ದರೆ ಆರೋಗ್ಯವನ್ನೇ ಬೆಲೆಯಾಗಿ ತೆರಬೇಕು. ನೈಸರ್ಗಿಕ ಆಹಾರ, ಸಹಜ ಆಹಾರ, ನಮ್ಮ ಗುರಿ. ಶರೀರ, ಜಡ ಭೌತಶಾಸ್ತ್ರದ ನಿಯಮಗಳಿಗೆ ಒಳಪಡುವುದಿಲ್ಲ. ಜೀವಂತ ದೇಹಕ್ಕೆ ಜೀವಂತವಾದ ಆಹಾರ ಬೇಕು. ಹಣ್ಣುಗಳನ್ನು ತಿಂದು ಬೀಜವನ್ನು ಬಿಟ್ಟುಬಿಡುತ್ತೇವೆ. ಅದು ಮತ್ತೆ ಮರವಾಗುವ ಸೃಷ್ಟಿಕ್ರಿಯೆಗೆ ತೊಡಗುತ್ತದೆ. ಅಂತಹ ಜೀವಂತ ಹಣ್ಣುಗಳು ನಮ್ಮ ಮುಖ್ಯ ಆಹಾರ. ಹಿಂದೆ ನಮ್ಮ ಋಷಿಗಳು ಆ ಆಹಾರದಲ್ಲಿಯೇ ಇದ್ದರು. ನಾವೂ ಮತ್ತೆ ಅಲ್ಲಿಗೇ ಹೋಗಬೇಕು. ಮಿಕ್ಕೆಲ್ಲವೂ ಅದಕ್ಕಿಂತ ಕೆಳದರ್ಜೆಯ ಆಹಾರಗಳು. ಒಮ್ಮೆಗೇ ಜಿಗಿಯಲು ಆಗದಿರುವುದರಿಂದ ಕೊಂಚ ನಿಧಾನವಾಗಿ ಪ್ರಯಾಣ ಮಾಡೋಣ. ಅದಕ್ಕೆ ಮಧ್ಯಸ್ಥ ಆಹಾರವನ್ನು ಮೆಟ್ಟಲಾಗಿ ಮಾಡಿಕೊಂಡು ಅಸಹಜತೆಯನ್ನು ಬಿಟ್ಟು ಸಹಜತೆಯ ಕಡೆಗೆ ನಮ್ಮ ಪಯಣ. ಸಧೃಡ ಶರೀರವಿಲ್ಲದೆ ಯಾವ ಸಾಧನೆಯೂ ಸಾಧ್ಯವಿಲ್ಲ.

ನೈಸರ್ಗಿಕ ಆಹಾರದಿಂದ ದೇಹ ಸಧೃಡ, ರೋಗಕೆ ಕಾರಣ ಬರೀ ಚಪಲವೋ ಮೂಢ !