ಶನಿವಾರ, ಜುಲೈ 14, 2007

ಮೈದಾ ಹಿಟ್ಟು - ಅತಿ ಅಪಾಯಕಾರಿ ಹಿಟ್ಟು(maida flour)

ನೀವು ಆಸಿಡಿಟಿಯನ್ನು ವಾಸಿಮಾಡಿಕೊಳ್ಳುವುದು ಹೇಗೆ ಎಂಬುದನ್ನು ಈಗ ಹೇಳುತ್ತಿದ್ದೇನೆ.
ಆಸಿಡಿಟಿ ಬರಲು ಕಾರಣ ಏನೆಂದರೆ ಯಾವಾಗಲೂ ಎಣ್ಣೆಯಲ್ಲಿ ಕರಿದ ಪದಾರ್ಥಗಳ ಸೇವನೆ, ಅತಿಯಾದ ಸಿಹಿತಿಂಡಿಗಳ ಸೇವನೆ, ಅತಿಯಾದ ಕಾಫೀ ಮತ್ತು ಟೀ ಕುಡಿಯುವಿಕೆ, ಅತಿಯಾದ ಧೂಮಪಾನ ಮಾಡುವಿಕೆ, ಮೈದಾ ಹಿಟ್ಟಿನಿಂದ ಮಾಡಿದ ಪದಾರ್ಥಗಳ ಅತಿಯಾಗಿ ತಿನ್ನುವುದು, ಪಾಲೀಶ್ ಮಾಡಿದ ಅಕ್ಕಿಯ ಅನ್ನವನ್ನು ಊಟಮಾಡುವುದು, ಸಕ್ಕರೆಯನ್ನು ಉಪಯೋಗಿಸುವುದು, ಇತ್ಯಾದಿ ಪದಾರ್ಥಗಳಿಂದ ಅಸಿಡಿಟಿ ಬರುವುದು. ಇದು ಎಲ್ಲಕ್ಕಿಂತಲೂ ಮಲಬದ್ಧತೆ ಮೂಲ ಕಾರಣ ಈ ರೋಗ ಬರಲು.
ನಮ್ಮ ಮತ್ತು ನಿಮ್ಮ ಮನೆಗಳಲ್ಲಿ ಚರಂಡಿ ಇದೆ ತಾನೇ? ಹಾಗೆಯೇ ನಮ್ಮ ಮತ್ತು ನಿಮ್ಮ ದೇಹದಲ್ಲೂ ಚರಂಡಿ ಇದೆ. ಮನೆಯ ಚರಂಡಿ ಶುದ್ಧವಾಗಿದ್ದರೆ ಯಾವುದೇ ಥರಹದ ದುರ್ವಾಸನೆ ಇರುವುದಿಲ್ಲಾ ತಾನೇ. ಮನೆಗಳ ಚರಂಡಿ ಚೊಕ್ಕಟವಾಗಿಟ್ಟುಕೊಳ್ಲಲು ನಮಗೆಲ್ಲಾ ಗೊತ್ತು. ಅಲ್ವೇ??? ಸಿಕ್ಕಿದ್ದೆಲ್ಲಾ ಮನೆಯ ಚರಂಡಿಯಲ್ಲಿ ಹಾಕುತ್ತಿದ್ದರೆ ಏನಾಗುತ್ತದೆ? ನೀವೇ ಯೋಚನೆ ಮಾಡಿನೋಡಿ. ಹಾಗೆಯೇ ನಮ್ಮ ದೇಹದ ಚರಂಡಿಯನ್ನು ನೋಡಿಕೊಳ್ಳಬೇಕಲ್ಲವೇ? ಅದೂ ಶುದ್ಧವಾಗಿರಬೇಕು ತಾನೇ? ಅದು ಶುದ್ಧವಾಗಿರಲು ಏನು ಮಾಡಬೇಕು? ಮನೆಯ ಚರಂಡಿಯನ್ನು ಶುದ್ಧಗೊಳಿಸಲು ಪರಕೆ ಅಥವಾ ಬ್ರಷ್ ಉಪಯೋಗಿಸುತ್ತೇವೆ, ಹೌದು ತಾನೇ? ಆದರೆ ನಮ್ಮ ಮತ್ತು ನಿಮ್ಮ ದೇಹದ ಚರಂಡಿಯನ್ನು ಪರಕೆ ಹಾಗೂ ಬ್ರಷ್ ಹಾಕಿ ಶುದ್ಧಗೊಳಿಸಲು ಆಗುತ್ತದೆಯೇ? ಯೋಚನೆ ಮಾಡಿನೋಡಿ. ಮೇಲೆ ಹೇಳಿದ ಮೈದಾ ಮತ್ತು ಇತರೆ ವಸ್ತುಗಳನ್ನು ತಿನ್ನುವುದರಿಂದ ನಮ್ಮ ದೇಹದ ಚರಂಡಿಯೊಳಗೆ ಒಂದು ತರಹದ ಪೇಸ್ಟ್ ತಯಾರಾಗಿ ಅಲ್ಲಲ್ಲೇ ಕಟ್ತಿಕೊಳ್ಳಲು ಪ್ರಾರಂಭವಾಗುತ್ತದೆ. ಇದು ಎಲ್ಲರ ೧೦ನೇ ವಯಸ್ಸಿನಿಂದ ಶುರುವಾಗುತ್ತದೆ. ನಮಗೆ ಅದು ಗೊತ್ತಾಗುವ ಹೊತ್ತಿಗೆ ಸುಮಾರು ವಯಸ್ಸಾಗಿರುತ್ತದೆ. ಆಗ ಪರದಾಡಿಕೊಂದು ಡಾಕ್ಟರ್ ಬಳಿ ಓಡಿಹೋಗುತ್ತೇವೆ. ವಾಸಿಯಾಗದೇ ಪರದಾಡುತ್ತೇವೆ. ಇದಕ್ಕೆ ಕಾರಣ ನಾವು ಸರಿಯಾದ ಆಹಾರಗಳನ್ನು ತಿನ್ನುತ್ತಿದ್ದರೆ ಈ ಅಸಿಡಿಟಿ ಅನ್ನುವ ಗೋಜೇ ಇರುವುದಿಲ್ಲ. ಈ ಅಸಿಡಿಟಿ ಇಲ್ಲದಿದ್ದರೆ ಯಾವ ರೋಗವೂ ಹತ್ತಿರ ಸುಳಿಯುವುದಿಲ್ಲ.
ಇದಕ್ಕೆ ಏನು ಮಾಡಬೇಕು?
ಮೈದಾ ಹಿಟ್ಟಿನ ವಿಷಯ ಏನೆಂದರೆ ಅದರಲ್ಲಿ ಚೆನ್ನಾಗಿರುವ ಪೇಸ್ಟನ್ನು ತಯಾರಿಸಬಹುದು. ಇದನ್ನು ವಾಲ್ ಪೇಪರ್ ನ್ನು ಅಂಟಿಸಲು ಉಪಯೋಗಿಸುತ್ತಾರೆ. ಅದು ಎಷ್ಟು ಕಷ್ಟಪಟ್ಟರೂ ಕೀಳಲು ಆಗುವುದಿಲ್ಲ. ಇದು ನಿಮಗೆ ಗೊತ್ತಾ? ಅದೇ ತರಹ ಮೈದಾ ಹಿಟ್ಟಿನಿಂದ ತಯಾರಿಸಿದ ಎಲ್ಲಾ ತಿಂಡಿಗಳು, ಇದರಿಂದ ತಯಾರಿಸಿದ ಸಿಹಿ ತಿಂಡಿಗಳು, ಇದರಿಂದ ತಯಾರಿಸಿದ ಬ್ರೆಡ್, ಬಿಸ್ಕತ್, ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ಮಾಡಲು ಕೆಲವುಸಲ ಮೈದಾವನ್ನು ಉಪಯೋಗಿಸುತ್ತಾರೆ.
ಈ ಮೈದಾ ಹಿಟ್ಟನ್ನು ತಿಂದವರು ಅತ್ಯಂತ ಮಲಬದ್ಧತೆಯಿಂದ ನರಳುತ್ತಾರೆ. ಆದ್ದರಿಂದ ಇನ್ನುಮೇಲೆ ಅತ್ಯಂತ ಪವಿತ್ರವಾದ ನಿಮ್ಮ ದೇಹವನ್ನು ಕಾಪಾಡಿಕೊಳ್ಳಿ. ಯಾವುದೇ ರೋಗಗಳು ಹತ್ತಿರ ಸುಳಿಯುವುದಿಲ್ಲ. ನಿಮ್ಮ ದೇಹವನ್ನು ಶುದ್ಧವಾಗಿಟ್ಟುಕೊಳ್ಳಿರಿ.
ಇದಕ್ಕೆ ನೀವುಗಳು ಹೊಟ್ಟು ಇರುವ ಪದಾರ್ಥಗಳನ್ನು ಸೇವನೆ ಮಾಡಬೇಕು. ಕೆಂಪು ಅಕ್ಕಿ ಅಂದರೆ ಪಾಲೀಶ್ ಮಾಡದ ಕೆಂಪು ಅಕ್ಕಿ ಅತ್ಯಂತ ಶ್ರೇಷ್ಠ. ಇದಕ್ಕೆ ಮುಂಡಗ ಅಕ್ಕಿ ಎಂತಲೂ, ಕಜ್ಜಾಯ ಅಕ್ಕಿ ಎಂತಲೂ ಕರೆಯುತ್ತಾರೆ. ಗೋಧಿಯನ್ನು ಹಿಟ್ಟುಮಾಡಿಸಿದಾಗ ಅದರ ಹೊಟ್ಟನ್ನು ತೆಗೆಯದೇ ಉಪಯೋಗಿಸಿ. ಅಂದರೆ ಒಂದರಿ ಆಡದೇ ಉಪಯೋಗಿಸಬೇಕು. ಎಲ್ಲಾ ಕಾಳು, ಬೇಳೆಗಳನ್ನು ಅದರ ಸಿಪ್ಪೆ ಸಮೇತವಾಗಿ ತಿನ್ನಿ. ಏಲಕ್ಕಿ ಬಾಳೆಹಣ್ಣನ್ನು ಸಿಪ್ಪೇಸಮೇತವಾಗಿ ತಿನ್ನಿ. ಮೊಳಕೆ ಬರಿಸಿದ ಕಾಳುಗಳನ್ನು ಉಪಯೋಗಿಸಿ. ಒಂದು ಪಕ್ಷ ನಿಮಗೆ ಕೆಂಪು ಅಕ್ಕಿ ಸಿಕ್ಕದೇ ಇದ್ದ ಪಕ್ಷದಲ್ಲಿ ಅಂಗಡಿಯಲ್ಲಿ "WHEAT BRAN" ಎಂಬ ಗೋಧಿಯ ಹೊಟ್ಟು ಸಿಕ್ಕುತ್ತದೆ. ಅದನ್ನು ನಿಮ್ಮ ಅಕ್ಕಿಯ ಊಟದಲ್ಲಿ ಉಪಯೋಗಿಸಿ. ಇಲ್ಲವಾದರೆ ಅದರ ಪಾಯಸವನ್ನು ಮಾಡಿ ಕುಡಿಯಿರಿ. ಸಕ್ಕರೆಯನ್ನು ನಿಮ್ಮ ನಿತ್ಯ ಜೀವನದಲ್ಲಿ ಉಪಯೋಗಿಸಬೇಡಿ. ಸಕ್ಕರೆ ಉಪಯೋಗಿಸುವುದರಿಂದ 146 ತರಹ ಖಾಯಿಲೆಗಳು ಬರುತ್ತವೆ. ಎಲ್ಲಾ ರೋಗಕ್ಕೂ ಮೂಲ ಕಾರಣ ಸಕ್ಕರೆ, ಮೈದಾ ಮತ್ತು ಪಾಲೀಶ್ ಮಾಡಿದ ಅಕ್ಕಿ. ನೆನಪಿರಲಿ.

3 ಕಾಮೆಂಟ್‌ಗಳು:

Parisarapremi ಹೇಳಿದರು...

ಸಕ್ಕರೆ ಅಷ್ಟೊಂದು ದ್ವೇಷಾರ್ಹವಲ್ಲ ಪಾಪ.. ಸಕ್ಕರೆಯ ಅಗತ್ಯವೂ ಇದೆ ಬದುಕಿಗೆ..

ಒಂದಷ್ಟು ಚಿತ್ರಗಳನ್ನು ಹಾಕಿ, ಅಂಕಣಗಳು ಇನ್ನೂ ಚೆನ್ನಾಗಿರುತ್ತವೆ..

Karunakar Balkur ಹೇಳಿದರು...

Nice

Karunakar Balkur ಹೇಳಿದರು...

Nice